ಇರಾನ್ ಇಸ್ರೇಲ್ ನಡುವಿನ ಯುದ್ದ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಲೈವ್ ಮೂಲಕ ಪ್ರತ್ಯಕ್ಷಗೊಂಡ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಸಾವಿನ ಊಹಾಪೋಹಳಿಗೆ ತೆರೆ ಎಳೆದಿದ್ದಾರೆ. ಇಷ್ಟೇ ಅಲ್ಲ ಯುದ್ಧ ಮುಂದುವರಿಸುವ ಕುರಿತು ಮಹತ್ವದ ಅಪ್ಡೇಟ್ ನೀಡಿದ್ದಾರೆ. ಜನರ ಊಹೆಗೂ ಮೀರಿದ ವೇಗದಲ್ಲಿ ಯುದ್ಧ ಅಂತ್ಯಗೊಳ್ಳಲಿದೆ ಎಂದಿದ್ದಾರೆ. ಅಮೆರಿಕ ಜೊತೆ ಇಸ್ರೇಲ್ ನಡೆಸುತ್ತಿರುವ ಜಂಟಿ ಕಾರ್ಯಾಚರಣೆ 20 ದಿನಕ್ಕೆ ಕಾಲಿಟ್ಟಿದೆ. ಇದರ ಬೆನ್ನಲ್ಲೇ ಯುದ್ದ ಅಂತ್ಯಗೊಳಿಸುವ ಸೂಚನೆ ನೀಡಿದ್ದಾರೆ. ಭಾರತದಲ್ಲಿ ಯುದ್ಧದಿಂದ ಗ್ಯಾಸ್, ಇಂಧನ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿದೆ. ಜೊತೆಗೆ ಪಂಚ ರಾಜ್ಯ ಚುನಾವಣೆ ಸೇರಿದಂತೆ ದೇಶ ವಿದೇಶಗಳ ಲೈವ್ ಅಪ್ಡೇಟ್ ಇಲ್ಲಿದೆ.

10:15 AM (IST) Mar 20
13ನೇ ಮಹಡಿಯಿಂದ ಜಿಗಿದು ಜ್ಯೋತಿಷಿ ದುರಂತ ಸಾವು, ಮನೆಯ ಬೆಡ್ ಮೇಲೆ ತಾಯಿ ಶವ ಪತ್ತೆಯಾಗಿದ್ದಾರೆ. ತಾಯಿ ಮೃತಪಟ್ಟು 2 ರಿಂದ 3 ದಿನದ ಬಳಿಕ ಜ್ಯೋತಿಷಿ ದುರಂತ ಅಂತ್ಯಕಂಡಿದ್ದಾರೆ. ಜ್ಯೋತಿಷಿ ಇಡೀ ಕುಟುಂಬವೇ ನಿರ್ನಾಮಗೊಂಡಿದೆ.
09:39 AM (IST) Mar 20
forest demolition Using silent cutter: ಇಲ್ಲೊಂದು ಕಡೆ 10 ಸಾವಿರಕ್ಕೂ ಅಧಿಕ ಮರಗಳನ್ನು ರಾತ್ರೋರಾತ್ರಿ ಕಾಡಿದು ಸಾಗಣೆ ಮಾಡಲಾಗಿದ್ದು, ಈ ಬಗ್ಗೆ ದೂರು ನೀಡಿದ ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್ನನ್ನೇ ಇಲಾಖೆ ಅಮಾನತು ಮಾಡಿದಂತಹ ಘಟನೆ ನಡೆದಿದೆ.
09:28 AM (IST) Mar 20
ಧರುಂಧರ್ 2 ಸಿನಿಮಾ ತೆರೆ ಮೇಲೆ ಮೋದಿ ಮೋಡಿ, ಬಾಲಿವುಡ್ನಲ್ಲಿ ಪ್ರಧಾನಿ ಸಂಚಲನ ಮೂಡಿಸಿದ್ದಾರೆ. ಧುರಂಧರ್ 2 ಸಿನಿಮಾದಲ್ಲಿ ಮೋದಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳ ಸಂಭ್ರಮ ಜೋರಾಗಿದೆ.
08:45 AM (IST) Mar 20
ಲೈವ್ ನೀಡುತ್ತಿದ್ದಂತೆ ಪತ್ರಕರ್ತನ ಪಕ್ಕದಲ್ಲೇ ಇಸ್ರೇಲ್ ಮಿಸೈಲ್ ದಾಳಿ, ಜಸ್ಟ್ ಮಿಸ್ ವಿಡಿಯೋ ಸೆರೆ, ಇರಾನ್, ಲೆಬೆನಾನ್ ಸೇರದಂತೆ ಕೆಲೆವಡೆ ಇಸ್ರೇಲ್ ಸತತ ದಾಳಿ ನಡೆಸುತ್ತಿದೆ. ಈ ವೇಳೆ ಪತ್ರಕರ್ತ ಜಸ್ಟ್ ಮಿಸ್ ಆದ ಘಟನೆ ನಡೆದಿದೆ.
08:45 AM (IST) Mar 20
ಇರಾನ್ ಹಾಗೂ ಇಸ್ರೇಲ್ ಅಮೆರಿಕಾ ನಡುವಣ ಯುದ್ಧದಿಂದಾಗಿ ದೇಶದೆಲ್ಲೆಡೆ ಅಡುಗೆ ಅನಿಲ ಎಲ್ಪಿಜಿ ಸಮಸ್ಯೆ ಎದುರಾಗಿದೆ. ಹೀಗಿರುವಾಗ ಟೆಕ್ಕಿಯೊಬ್ಬರು ಗ್ಯಾಸ್ ಇಲ್ಲದೇ ಅಡುಗೆ ಮಾಡುವುದಕ್ಕೆ ಹೊಸ ಉಪಾಯ ಮಾಡಿದ್ದು,ಈ ವಿನೂತನ ಪ್ರಯೋಗದ ವೀಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ.
08:23 AM (IST) Mar 20
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭವಿಷ್ಯದ ನಾಯಕನಾಗಿ ಸಂಜು ಸ್ಯಾಮ್ಸನ್ ಹೆಸರು ಚರ್ಚೆಯಲ್ಲಿದೆ. ಆದರೆ ಮಾಜಿ ಆಟಗಾರ ಮೊಹಮ್ಮದ್ ಕೈಫ್, ಸಂಜುಗೆ ತಕ್ಷಣವೇ ನಾಯಕತ್ವ ನೀಡುವುದು ದೊಡ್ಡ ಪ್ರಮಾದವಾಗಲಿದೆ ಎಂದು ಎಚ್ಚರಿಸಿದ್ದಾರೆ. ತಂಡದ ಸಂಸ್ಕೃತಿಗೆ ಹೊಂದಿಕೊಳ್ಳಲು ಸಂಜುಗೆ ಸಮಯ ನೀಡಬೇಕು ಎಂದಿದ್ದಾರೆ
07:35 AM (IST) Mar 20
ಇರಾನ್ ಸರ್ಕಾರವು 19 ವರ್ಷದ ಕುಸ್ತಿ ಚಾಂಪಿಯನ್ ಸಲೇಹ್ ಮೊಹಮ್ಮದಿ ಸೇರಿದಂತೆ ಮೂವರು ಯುವ ಪ್ರತಿಭಟನಾಕಾರರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದೆ. ಚಿತ್ರಹಿಂಸೆ ನೀಡಿ ಪಡೆದ ತಪ್ಪೊಪ್ಪಿಗೆ ಪಡೆದು ಬಳಿಕ ಈ ಮರಣದಂಡನೆ ವಿಧಿಸಲಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಆರೋಪಿಸಿವೆ.
07:34 AM (IST) Mar 20
ಐಪಿಎಲ್ ಆರಂಭಕ್ಕೂ ಮುನ್ನ, ವೇಗಿ ನೇಥನ್ ಎಲ್ಲಿಸ್ ಗಾಯಗೊಂಡು ಹೊರಬಿದ್ದಿರುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತ ನೀಡಿದೆ. ಇದೇ ವೇಳೆ, ರಾಜಸ್ಥಾನ ರಾಯಲ್ಸ್ನಿಂದ ದೊಡ್ಡ ಟ್ರೇಡ್ ಡೀಲ್ ಮೂಲಕ ಬಂದಿರುವ ಸಂಜು ಸ್ಯಾಮ್ಸನ್ ತಂಡ ಸೇರಿಕೊಂಡಿದ್ದು, ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಿದ್ದಾರೆ.
07:13 AM (IST) Mar 20
ಬೆಂಜಮಿನ್ ನೇತನ್ಯಾಹು ಯುದ್ಧ ಯಾವಾಗ ಅಂತ್ಯಗೊಳ್ಳಲಿದೆ ಅನ್ನೋ ದಿನಾಂಕ ಬಹಿರಂಗಪಡಿಸಿಲ್ಲ. ಆದರೆ ಅವಶ್ಯಕತೆ ಇದ್ದರೆ ಮಾತ್ರ ಮುಂದುವರಿಯಲಿದೆ. ಸದ್ಯ ಇರಾನ್ ಸರ್ಕಾರವನ್ನು ಯಾರು ನಡೆಸುತ್ತಿದ್ದಾರೆ ಅನ್ನೋದು ಸ್ಪಷ್ಟವಿಲ್ಲ. ಇರಾನ್ ಯುರೇನಿಯಂ ಹಾಗೂ ಬ್ಯಾಲಿಸ್ಟಿಕ್ ಮಿಸೈಲ್ ಮುಂದುವರಿಸುವ ಸಾಮರ್ಥ್ಯ ಹೊಂದಿಲ್ಲ ಎಂದಿದ್ದಾರೆ.