Published : Mar 20, 2026, 07:13 AM ISTUpdated : Mar 20, 2026, 11:01 PM IST

India Latest News Live: Breaking - ರೇಮಂಡ್‌ ಗ್ರೂಪ್‌ ಮಾಲೀಕ ಗೌತಮ್‌ ಸಿಂಘಾನಿಯಾ ಇದ್ದ ಬೋಟ್‌ ಮಾಲ್ಡೀವ್ಸ್‌ನಲ್ಲಿ ಮುಳುಗಡೆ!

ಸಾರಾಂಶ

ಇರಾನ್ ಇಸ್ರೇಲ್ ನಡುವಿನ ಯುದ್ದ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಲೈವ್ ಮೂಲಕ ಪ್ರತ್ಯಕ್ಷಗೊಂಡ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಸಾವಿನ ಊಹಾಪೋಹಳಿಗೆ ತೆರೆ ಎಳೆದಿದ್ದಾರೆ. ಇಷ್ಟೇ ಅಲ್ಲ ಯುದ್ಧ ಮುಂದುವರಿಸುವ ಕುರಿತು ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಜನರ ಊಹೆಗೂ ಮೀರಿದ ವೇಗದಲ್ಲಿ ಯುದ್ಧ ಅಂತ್ಯಗೊಳ್ಳಲಿದೆ ಎಂದಿದ್ದಾರೆ. ಅಮೆರಿಕ ಜೊತೆ ಇಸ್ರೇಲ್ ನಡೆಸುತ್ತಿರುವ ಜಂಟಿ ಕಾರ್ಯಾಚರಣೆ 20 ದಿನಕ್ಕೆ ಕಾಲಿಟ್ಟಿದೆ. ಇದರ ಬೆನ್ನಲ್ಲೇ ಯುದ್ದ ಅಂತ್ಯಗೊಳಿಸುವ ಸೂಚನೆ ನೀಡಿದ್ದಾರೆ. ಭಾರತದಲ್ಲಿ ಯುದ್ಧದಿಂದ ಗ್ಯಾಸ್, ಇಂಧನ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿದೆ. ಜೊತೆಗೆ ಪಂಚ ರಾಜ್ಯ ಚುನಾವಣೆ ಸೇರಿದಂತೆ ದೇಶ ವಿದೇಶಗಳ ಲೈವ್ ಅಪ್‌ಡೇಟ್ ಇಲ್ಲಿದೆ.

Gautam Singhania

11:01 PM (IST) Mar 20

Breaking - ರೇಮಂಡ್‌ ಗ್ರೂಪ್‌ ಮಾಲೀಕ ಗೌತಮ್‌ ಸಿಂಘಾನಿಯಾ ಇದ್ದ ಬೋಟ್‌ ಮಾಲ್ಡೀವ್ಸ್‌ನಲ್ಲಿ ಮುಳುಗಡೆ!

ಮಾಲ್ಡೀವ್ಸ್ ಬಳಿ ನಡೆದ ಸ್ಪೀಡ್ ಬೋಟ್ ಅಪಘಾತದಲ್ಲಿ ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ದುರಂತದಲ್ಲಿ ಇಬ್ಬರು ಭಾರತೀಯರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ತೀವ್ರವಾಗಿ ನಡೆಯುತ್ತಿದೆ.
Read Full Story

10:52 PM (IST) Mar 20

'ಬುರ್ಖಾ ಧರಿಸಿದ್ದೆ, ಆದ್ರೂ ನನ್ನ ನೋಡಿಕೊಂಡೇ ಹಸ್ತಮೈಥುನ..' ರೈಲ್ವೆ ನಿಲ್ದಾಣದ 'ಅಸಹ್ಯ' ವಿಡಿಯೋ ಮಾಡಿದ ಯುವತಿ!

ಕೇರಳದ ರೈಲ್ವೇ ನಿಲ್ದಾಣದಲ್ಲಿ ಬುರ್ಖಾ ಧರಿಸಿದ್ದ ಯಾಸ್ಮಿನ್ ಎಂಬ ಯುವತಿಯ ಮುಂದೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಘಟನೆಯನ್ನು ಧೈರ್ಯವಾಗಿ ಚಿತ್ರೀಕರಿಸಿದ ಯುವತಿ, 'ದೌರ್ಜನ್ಯಕ್ಕೆ ಬಟ್ಟೆಯೇ ಕಾರಣ' ಎನ್ನುವವರಿಗೆ ಉತ್ತರ ನೀಡಲು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

Read Full Story

10:46 PM (IST) Mar 20

ಕೊಲ್ಲಿ ದೇಶಗಳ ಬಿಕ್ಕಟ್ಟು - ಹೈದರಾಬಾದ್ ನಲ್ಲಿ ರಿಯಲ್ ಎಸ್ಟೇಟ್ ಜಂಪ್‌, ಮನೆ, ಫ್ಲಾಟ್‌ ಖರೀದಿ ದುಬಾರಿ!

ಜಾಗತಿಕ ಹಡಗು ಬಿಕ್ಕಟ್ಟಿನಿಂದಾಗಿ ಹೈದರಾಬಾದ್‌ನಲ್ಲಿ ನಿರ್ಮಾಣ ಸಾಮಗ್ರಿಗಳ ಪೂರೈಕೆ ವಿಳಂಬವಾಗಿದ್ದು, ಸಾಗಣೆ ವೆಚ್ಚ ಹೆಚ್ಚಾಗಿದೆ. ಉಕ್ಕು ಮತ್ತು ಅಲ್ಯೂಮಿನಿಯಂನಂತಹ ವಸ್ತುಗಳ ಬೆಲೆ ಏರಿಕೆಯಿಂದಾಗಿ ನಿರ್ಮಾಣ ವೆಚ್ಚ ದುಬಾರಿಯಾಗಿದ್ದು, ಇದು ಫ್ಲಾಟ್‌ಗಳ ಬೆಲೆ ಏರಿಕೆಗೆ ಕಾರಣವಾಗುವ ಸಾಧ್ಯತೆಯಿದೆ.
Read Full Story

10:30 PM (IST) Mar 20

Balakrishna - ಸಿಂಹ ನಗೋದಾ? ಹುಚ್ಚು ಬಿಟ್ರೆ! ತಂದೆ ಎನ್‌ಟಿಆರ್ ಜೊತೆಗಿನ ಸಿನಿಮಾ ಬಗ್ಗೆಯೇ ಬಾಲಯ್ಯ ಕಾಮಿಡಿ

ನಂದಮೂರಿ ಬಾಲಕೃಷ್ಣ ಅವರು 'ಸಿಂಹ' ಹೆಸರಿನಲ್ಲಿ ಹಲವು ಸಿನಿಮಾ ಮಾಡಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಹಿಟ್ ಆಗಿವೆ. ಆದರೆ, ತಮ್ಮ ತಂದೆ ಎನ್‌ಟಿಆರ್ ಜೊತೆ ನಟಿಸಿದ್ದ ಒಂದು ಸಿನಿಮಾ ಮಾತ್ರ ಫ್ಲಾಪ್ ಆಗಿತ್ತು. ಈಗ ಅದೇ ಸಿನಿಮಾ ಬಗ್ಗೆ ಬಾಲಯ್ಯ ತಮಾಷೆ ಮಾಡಿದ್ದಾರೆ.

Read Full Story

10:27 PM (IST) Mar 20

ನಿಗೂಢ ಸೌರಮಂಡಲ - ವಜ್ರದ ಮಳೆಯಿಂದ ಹಿಡಿದು ನೀರಿನಲ್ಲಿ ತೇಲುವ ಗ್ರಹದವರೆಗೆ 10 ಅಚ್ಚರಿಯ ಸಂಗತಿಗಳು!

ಸೌರಮಂಡಲವು ಪಠ್ಯಪುಸ್ತಕಗಳಲ್ಲಿ ವಿವರಿಸುವುದಕ್ಕಿಂತ ಹೆಚ್ಚು ವಿಚಿತ್ರ ಮತ್ತು ಕ್ರಿಯಾತ್ಮಕವಾಗಿದೆ. ಶುಕ್ರ ಗ್ರಹದ ಅತಿಯಾದ ತಾಪಮಾನ, ನೆಪ್ಚೂನ್‌ನಲ್ಲಿ ವಜ್ರದ ಮಳೆ, ಮತ್ತು ಸೂರ್ಯನು ಸೌರಮಂಡಲದ ಬಹುತೇಕ ದ್ರವ್ಯರಾಶಿಯನ್ನು ಹೊಂದಿರುವುದು ಸೇರಿದಂತೆ ಹಲವು ನಂಬಲಾಗದ ರಹಸ್ಯ ಇಲ್ಲಿದೆ.

Read Full Story

09:21 PM (IST) Mar 20

ಓರಲ್ ಸೆ*ಕ್ಸ್‌ನಿಂದ ಬರುತ್ತಂತೆ ಬಾಯಿ ಕ್ಯಾನ್ಸರ್; ತಡೆಗಟ್ಟಲು ಬಂದಿದೆ ನಾಲಿಗೆಗೆ ಹಾಕುವಂಥ ಕಾಂಡೋಮ್‌!

ಓರಲ್ ಸೆ*ಕ್ಸ್ ಮೂಲಕ ಹರಡುವ ಹ್ಯೂಮನ್ ಪ್ಯಾಪಿಲೋಮಾ ವೈರಸ್ (HPV) ಬಾಯಿ ಮತ್ತು ಗಂಟಲಿನ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಇತ್ತೀಚಿನ ಅಧ್ಯಯನಗಳು ದೃಢಪಡಿಸಿವೆ. ಈ ಅಪಾಯವನ್ನು ತಗ್ಗಿಸಲು, ಆರೋಗ್ಯ ತಜ್ಞರು ಕಾಂಡೋಮ್ ಮತ್ತು 'ಡೆಂಟಲ್ ಡ್ಯಾಮ್'ಗಳಂತಹ ಸುರಕ್ಷತಾ ಕ್ರಮಗಳನ್ನು ಬಳಸಲು ಶಿಫಾರಸು ಮಾಡಿದ್ದಾರೆ. 

Read Full Story

08:47 PM (IST) Mar 20

ಭೀಕರ ರಸ್ತೆ ಅಪಘಾತ - ಗರ್ಭಿಣಿ, ಹಸುಗೂಸು ಸೇರಿ ಎಂಟು ಮಂದಿ ದುರ್ಮರಣ! ನಿಯಂತ್ರಣ ತಪ್ಪಿ ನುಗ್ಗಿದ ಬಸ್

ತಮಿಳುನಾಡಿನ ಸೇಲಂ-ಕೊಯಮತ್ತೂರು ಹೆದ್ದಾರಿಯಲ್ಲಿ ಸರ್ಕಾರಿ ಬಸ್‌ನ ಬ್ರೇಕ್ ಫೇಲ್ ಆದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಗರ್ಭಿಣಿ ಮತ್ತು 11 ತಿಂಗಳ ಹಸುಗೂಸು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Read Full Story

08:41 PM (IST) Mar 20

ರೀಲ್ಸ್​ ಹುಚ್ಚಿನ ಪರಮಾವಧಿ - ಪಿಜ್ಜಾ ಬಾಯ್​ಗೆ ಟಿಪ್ಸ್​ ಎಂದು ಅಂಗಾಂಗ ತೋರಿ ಯುವತಿಯರ ವಿಡಿಯೋ

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಹುಚ್ಚಿಗೆ ಬಿದ್ದ ಯುವತಿಯರು ಪಿಜ್ಜಾ ಡೆಲಿವರಿ ಹುಡುಗನಿಗೆ ಪ್ರಾಂಕ್ ಮಾಡಿದ್ದಾರೆ. ಟಿಪ್ಸ್ ಕೊಡುವ ನೆಪದಲ್ಲಿ ತಮ್ಮ ಅಂಗಾಂಗ ಪ್ರದರ್ಶನ ಮಾಡಿದ್ದು, ಈ ವಿಡಿಯೋ ವೈರಲ್ ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಆದರೂ, ಈ ಮೂಲಕ ಹೆಚ್ಚು ವೀಕ್ಷಣೆ ಪಡೆದು ತಮ್ಮ ಉದ್ದೇಶವನ್ನು ಯುವತಿಯರು ಸಾಧಿಸಿದ್ದಾರೆ.
Read Full Story

08:39 PM (IST) Mar 20

Sobhita Dhulipala - ಆ ಎಲ್ಲಾ ಗಾಸಿಪ್‌ಗಳಿಗೆ ಫೋಟೋ ಮೂಲಕವೇ ಫುಲ್ ಕ್ಲಾರಿಟಿ ಕೊಟ್ಟ ಶೋಭಿತಾ!

ತಮ್ಮ ಬಗ್ಗೆ ಹಬ್ಬಿದ್ದ ಗಾಸಿಪ್‌ಗಳಿಗೆ ನಟಿ ಶೋಭಿತಾ ಧೂಳಿಪಾಲ ಬ್ರೇಕ್ ಹಾಕಿದ್ದಾರೆ. ಗದ್ದರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಶೋಭಿತಾ ಬಗ್ಗೆ ಹಬ್ಬಿದ್ದ ಆ ವದಂತಿಗಳು ಯಾವುವು? ಇಲ್ಲಿದೆ ಪೂರ್ತಿ ವಿವರ.

Read Full Story

08:24 PM (IST) Mar 20

'ನ್ಯಾಟೋ ನಾಯಕರು ಹೇಡಿಗಳು..' ಇರಾನ್‌ ವಿರುದ್ಧ ಸಹಾಯಕ್ಕೆ ಬರದ ಆಪ್ತರ ವಿರುದ್ಧ ಟ್ರಂಪ್‌ ರಣಾಕ್ರೋಶ!

ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸುರಕ್ಷತೆಗೆ ಸಹಾಯ ಮಾಡದ ನ್ಯಾಟೋ ರಾಷ್ಟ್ರಗಳ ವಿರುದ್ಧ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾಗತಿಕ ತೈಲ ಬೆಲೆ ಏರಿಕೆಗೆ ಮಿತ್ರರಾಷ್ಟ್ರಗಳ ನಿರಾಸಕ್ತಿಯೇ ಕಾರಣ ಎಂದು ದೂಷಣೆ ಮಾಡಿದ್ದಾರೆ.

Read Full Story

08:15 PM (IST) Mar 20

40 ಕೋಟಿ ಠೇವಣಿ, 20 ಕೋಟಿ ವಿಥ್ ಡ್ರಾ, 50 ಆಸ್ತಿ - ತೆಲಂಗಾಣ, ಆಂಧ್ರದಾದ್ಯಂತ ಡಾ.ನಮ್ರತಾ ಸರೊಗಸಿ ದಂಧೆ ಪತ್ತೆ!

ಅಕ್ರಮ ಬಾಡಿಗೆ ತಾಯ್ತನ ಮತ್ತು ಶಿಶು ಮಾರಾಟ ಜಾಲದ ಕುರಿತು ಜಾರಿ ನಿರ್ದೇಶನಾಲಯ (ED) ನಡೆಸಿದ ತನಿಖೆಯಲ್ಲಿ ಭಾರಿ ಹಣಕಾಸು ಅವ್ಯವಹಾರಗಳು ಬೆಳಕಿಗೆ ಬಂದಿವೆ. ಡಾ. ಪಚಿಪಾಲ ನಮೃತಾ ನೇತೃತ್ವದ ಈ ಜಾಲದಲ್ಲಿ ₹40 ಕೋಟಿ ನಗದು ಠೇವಣಿ ಪತ್ತೆಯಾಗಿದ್ದು, ₹29.7 ಕೋಟಿ ಮೌಲ್ಯದ 50ಕ್ಕೂ ಹೆಚ್ಚು ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.  

Read Full Story

08:06 PM (IST) Mar 20

ಮದ್ವೆ ದಿನ ನಟಿಗೆ ಪತಿ ಯಾರೆಂದೇ ಮರೆತೋಯ್ತು - ಸಹ ನಟನಿಗೆ ತುತ್ತು ತಿನ್ನಿಸೋದಾ? Video Viral

ಮರಾಠಿ ನಟಿಯೊಬ್ಬರು ತಮ್ಮ ಮದುವೆಯ ಊಟದ ಸಮಯದಲ್ಲಿ, ತಮ್ಮ ಪತಿಗೆ ಊಟ ತಿನ್ನಿಸುವ ಬದಲು ಪಕ್ಕದಲ್ಲಿದ್ದ ಸಹನಟನಿಗೆ ತಿನ್ನಿಸಲು ಹೋಗಿದ್ದಾರೆ. ಈ ಎಡವಟ್ಟಿನಿಂದ ಪತಿಗೆ ಕೋಪ ಬಂದಿದ್ದು, ಈ ಫನ್ನಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

08:02 PM (IST) Mar 20

ಭವಿಷ್ಯದಲ್ಲಿ ತಂದೆ-ತಾಯಿ ಎರಡೂ ಆಗಲಿರುವ ಸಂಜಯ್‌ ಬಂಗಾರ್‌ ಪುತ್ರಿ ಅನಾಯಾ ಬಂಗಾರ್‌!

ಸಂಜಯ್ ಬಂಗಾರ್ ಅವರ ಪುತ್ರಿ ಅನಾಯಾ ಬಂಗಾರ್, ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಭವಿಷ್ಯದಲ್ಲಿ ತಾಯಿಯಾಗುವ ಕನಸನ್ನು ನನಸಾಗಿಸಲು, ಅವರು ಶಸ್ತ್ರಚಿಕಿತ್ಸೆಗೂ ಮುನ್ನ ತಮ್ಮ ವೀರ್ಯವನ್ನು ಶೇಖರಿಸಿಟ್ಟಿದ್ದು, ಬಾಡಿಗೆ ತಾಯ್ತನದ ಮೂಲಕ ಜೈವಿಕ ಮಗುವನ್ನು ಪಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

Read Full Story

07:40 PM (IST) Mar 20

20 ವರ್ಷಗಳ ನಂತರ ತೆರೆ ಮೇಲೆ ಮೋಡಿ ಮಾಡ್ತಾರಾ ಸೂರ್ಯ-ತ್ರಿಷಾ ಜೋಡಿ - ಯಾವುದು ಆ ಸಿನಿಮಾ?

ನಟ ಸೂರ್ಯ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಕರುಪ್ಪು' ರಿಲೀಸ್ ದಿನಾಂಕ ಘೋಷಣೆಯಾಗಿದೆ. ಆರ್.ಜೆ. ಬಾಲಾಜಿ ನಿರ್ದೇಶನದ ಈ ಚಿತ್ರ ಮೇ 14 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.

Read Full Story

07:33 PM (IST) Mar 20

ಏರ್ ಇಂಡಿಯಾ ಎಡವಟ್ಟು - 7 ಗಂಟೆ ಜರ್ನಿ ಬಳಿಕ ವಾಪಸ್ ಬಂದ 300 ಪ್ರಯಾಣಿಕರಿದ್ದ ವಿಮಾನ - ಆದ ನಷ್ಟವೆಷ್ಟು?

ಏರ್ ಇಂಡಿಯಾದ ಅವಾಂತರವೊಂದು ತಡವಾಗಿ ಬೆಳಕಿಗೆ ಬಂದಿದೆ. 300 ಜನರಿದ್ದ ವಿಮಾನವನ್ನು ತಪ್ಪಾಗಿ ಕೆನಡಾಗೆ ಕಳುಹಿಸಿದ್ದರಿಂದ ಆ ವಿಮಾನವೂ 7 ಗಂಟೆಗಳ ಕಾಲ ನಿರಂತರ ಪ್ರಯಾಣ ಮಾಡಿ ಚೀನಾ ಮೂಲಕ ವಾಪಸ್ ಬಂದಿದ್ದು, ಇದರಿಂದ ಏರ್ ಇಂಡಿಯಾಗೆ ಭಾರಿ ನಷ್ಟ ಉಂಟಾಗಿದೆ.

Read Full Story

07:03 PM (IST) Mar 20

ಮಧುಮೇಹಿಗಳಿಗೆ ಇನ್ನು ಚಿಂತೆಯೇ ಇಲ್ಲ, ಜಗತ್ತಿನ ಅತ್ಯಂತ ಪ್ರಖ್ಯಾತ ಡಯಾಬಿಟಿಸ್‌ ಡ್ರಗ್‌ ಬೆಲೆಯಲ್ಲಿ ಭಾರತದಲ್ಲಿ ಭಾರೀ ಇಳಿಕೆ!

ಭಾರತದಲ್ಲಿ 'ಸೆಮಾಗ್ಲುಟೈಡ್' ಔಷಧದ ಪೇಟೆಂಟ್ ಮುಕ್ತಾಯಗೊಂಡಿದ್ದರಿಂದ ಅದರ ಬೆಲೆ ಶೇ. 50-70ರಷ್ಟು ಕುಸಿದಿದೆ. ಮಧುಮೇಹ, ತೂಕ ಇಳಿಕೆ, ಮತ್ತು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಈ ಔಷಧವನ್ನು ಹಲವು ಭಾರತೀಯ ಕಂಪನಿಗಳು ಮಾರುಕಟ್ಟೆಗೆ ತರುತ್ತಿವೆ, ಆದರೆ ವೈದ್ಯರ ಸಲಹೆ ಇಲ್ಲದೆ ಬಳಸುವುದು ಅಪಾಯಕಾರಿ.
Read Full Story

06:52 PM (IST) Mar 20

ಇ-ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್‌ನಲ್ಲಿ ಅನಿರೀಕ್ಷಿತ ಬೆಳವಣಿಗೆ, ಮುಖ್ಯ ಹಣಕಾಸು ಅಧಿಕಾರಿ ಶ್ರೀರಾಮ್ ರಾಜೀನಾಮೆ!

ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ನ ಗ್ರೂಪ್ ಸಿಎಫ್‌ಒ ಶ್ರೀರಾಮ್ ವೆಂಕಟರಾಮನ್ ತಮ್ಮ ಹುದ್ದೆಯಿಂದ ಕೆಳಗಿಳಿಯುತ್ತಿದ್ದಾರೆ. ಕಂಪನಿಯ ಐಪಿಒ ಯೋಜನೆಗಳ ನಡುವೆ ಈ ಮಹತ್ವದ ಬದಲಾವಣೆ ನಡೆದಿದ್ದು, ರವಿ ಅಯ್ಯರ್ ಅವರು ಮಧ್ಯಂತರವಾಗಿ ಹಣಕಾಸು ವಿಭಾಗವನ್ನು ನೋಡಿಕೊಳ್ಳಲಿದ್ದಾರೆ.
Read Full Story

06:19 PM (IST) Mar 20

ಅಧಿಕಪ್ರಸಂಗಿ ಅಮೆರಿಕಾದ ಮೇಲೆ ಐರೋಪ್ಯ ರಾಷ್ಟ್ರಗಳ ಸಿಟ್ಟು - USಗೆ ಶಸ್ತ್ರಾಸ್ತ್ರ ರಫ್ತಿಗೆ ಅನುಮೋದನೆ ನಿರಾಕರಿಸಿದ ಸ್ವಿಟ್ಜರ್ಲೆಂಡ್

ಅಮೆರಿಕಾ ಇಸ್ರೇಲ್ ನಡುವಣ ಯುದ್ಧ ಸತತ 21ನೇ ದಿನವೂ ಮುಂದುವರೆದಿದೆ. ತನಗೆ ಸಂಬಂಧವಿಲ್ಲದಿದ್ದರೂ ಇರಾನ್ ಮೇಲೆ ಯುದ್ಧಕ್ಕಿಳಿದು ಇಡೀ ಪ್ರಪಂಚದ ಆರ್ಥಿಕತೆಯನ್ನೇ ಬುಡಮೇಲಾಗುವಂತೆ ಮಾಡಿದ ಅಮೆರಿಕಾದ ಈ ವರ್ತನೆ ವಿರುದ್ಧ ಈಗ ಪಾಶ್ಚಿಮಾತ್ಯ ರಾಷ್ಟ್ರಗಳು ಕೂಡ ಸಿಟ್ಟಾಗಿವೆ.

Read Full Story

06:07 PM (IST) Mar 20

ಬಿಸಿಸಿಐ ಮೇಲೆ ವರ್ಣಭೇದ ನೀತಿ ಆರೋಪ ಮಾಡಿ ಹಠಾತ್‌ ನಿವೃತ್ತಿ ಹೇಳಿದ ಪ್ರಖ್ಯಾತ ಕ್ರಿಕೆಟ್‌ ವಿಶ್ಲೇಷಕ!

ಭಾರತದ ಮಾಜಿ ಲೆಗ್ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು 23 ವರ್ಷಗಳ ಕಾಮೆಂಟರಿ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ನಿರ್ಗಮನದ ವೇಳೆ, ಅವರು ಬಿಸಿಸಿಐ ಕಾಮೆಂಟರಿ ಪ್ಯಾನಲ್‌ನಲ್ಲಿ ತಮಗಾದ ವರ್ಣಭೇದ ಮತ್ತು ವ್ಯವಸ್ಥಿತ ಪಕ್ಷಪಾತದ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 

Read Full Story

06:01 PM (IST) Mar 20

Pawan Kalyan House - ಪವನ್ ಮನೆ ಬೆಲೆ ಎಷ್ಟು? ಹೈದರಾಬಾದ್ ಬಂಗಲೆ, ಫಾರ್ಮ್‌ಹೌಸ್ ವಿಶೇಷತೆಗಳೇನು?

ಪವರ್ ಸ್ಟಾರ್ ಪವನ್ ಕಲ್ಯಾಣ್ ಹೈದರಾಬಾದ್‌ನ ಜೂಬ್ಲಿ ಹಿಲ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ಇದು ದೇಶದ ಅತ್ಯಂತ ದುಬಾರಿ ಸೆಲೆಬ್ರಿಟಿ ಏರಿಯಾಗಳಲ್ಲಿ ಒಂದು. ಸುಮಾರು 6,300 ಚದರ ಅಡಿ ವಿಸ್ತೀರ್ಣದ ಈ ಬಂಗಲೆಯನ್ನು ಅವರು ಎಷ್ಟು ಕೋಟಿಗೆ ಖರೀದಿಸಿದ್ದಾರೆ ಗೊತ್ತಾ?

Read Full Story

05:57 PM (IST) Mar 20

ಭಾರತದಲ್ಲಿ ಕ್ರಿಮಿನಲ್ ಮತ್ತು ರಕ್ಷಣಾ ಕ್ಷೇತ್ರದ ಅಗ್ರಗಣ್ಯ ವಕೀಲರಿಗೆ ದಿನಕ್ಕೆ 50 ಲಕ್ಷದವರೆಗೆ ಶುಲ್ಕ!

ಭಾರತದ ಉನ್ನತ ಮಟ್ಟದ ಕ್ರಿಮಿನಲ್ ಮತ್ತು ರಕ್ಷಣಾ ವಕೀಲರು ದಿನಕ್ಕೆ ₹30-50 ಲಕ್ಷದವರೆಗೆ ಶುಲ್ಕ ವಿಧಿಸಬಹುದು, ಮತ್ತು ಕೆಲವರು ವಾರ್ಷಿಕವಾಗಿ ₹100-200 ಕೋಟಿ ಗಳಿಸುತ್ತಾರೆ. ಈ ಗಣನೀಯ ಆದಾಯವು ದಶಕಗಳ ಅನುಭವ, ಖ್ಯಾತಿ, ಮತ್ತು ಸುಪ್ರೀಂ ಕೋರ್ಟ್‌ನಂತಹ ಉನ್ನತ ನ್ಯಾಯಾಲಯಗಳಲ್ಲಿನ ಪರಿಣತಿಯ ಫಲವಾಗಿದ್ದು, ಇದು ಕಾನೂನು ವೃತ್ತಿಯ ಅಗ್ರ 1% ವೃತ್ತಿಪರರಿಗೆ ಮಾತ್ರ ಸೀಮಿತವಾಗಿದೆ.
Read Full Story

05:48 PM (IST) Mar 20

ಬಯಲಾಯ್ತು ಕಾಂಡೋಮ್​ ಗುಟ್ಟು! ಘಮಘಮಕ್ಕೆ ಬೆಂಗಳೂರು, ನವರಾತ್ರಿಯಲ್ಲಿ ಗುಜರಾತ್ ಟಾಪ್​ 1

ಪ್ರಾಚೀನ ಈಜಿಪ್ಟ್‌ನಿಂದ ಆಧುನಿಕ ಕಾಲದವರೆಗೆ ಕಾಂಡೋಮ್‌ನ ಇತಿಹಾಸವನ್ನು ವಿವರಿಸುತ್ತಾ, ಭಾರತದಲ್ಲಿ ಬೆಂಗಳೂರು ಅತಿ ಹೆಚ್ಚು ಕಾಂಡೋಮ್ ಬಳಸುವ ನಗರವಾಗಿದೆ ಎಂದು ಈ ಲೇಖನ ಹೇಳುತ್ತದೆ. ಆದರೆ, ನವರಾತ್ರಿ ಹಬ್ಬದ ಸಮಯದಲ್ಲಿ ಗುಜರಾತ್‌ನಲ್ಲಿ, ವಿಶೇಷವಾಗಿ ಗರ್ಭಾ ನೃತ್ಯದ ಕಾರಣದಿಂದ, ಕಾಂಡೋಮ್ ಮಾರಾಟವು ಅಗ್ರಸ್ಥಾನಕ್ಕೇರುವ ಅಚ್ಚರಿಯ ಸಂಗತಿಯನ್ನು ಇದು ಬಹಿರಂಗಪಡಿಸುತ್ತದೆ.
Read Full Story

05:43 PM (IST) Mar 20

ಒಂದು ಜಾಹೀರಾತಿಗೆ ಕೋಟಿ ಕೋಟಿ ಪಡೆಯುವ ಮಹೇಶ್ ಬಾಬು ಮೊದಲ ಸಂಭಾವನೆ ಕೇಳಿದ್ರೆ ಬೆರಗಾಗ್ತೀರಾ!

ಸೂಪರ್ ಸ್ಟಾರ್ ಮಹೇಶ್ ಬಾಬು ಸದ್ಯ ಒಂದು ಸಿನಿಮಾಗೆ 100 ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಜಾಹೀರಾತುಗಳಿಗೂ ಕೋಟಿ ಕೋಟಿ ಚಾರ್ಜ್ ಮಾಡುವ ಮಹೇಶ್ ಬಾಬು ಅವರ ಮೊದಲ ಸಂಬಳ ಎಷ್ಟಿತ್ತು ಗೊತ್ತಾ?

Read Full Story

05:17 PM (IST) Mar 20

'ನಮ್ಮದು ತಟಸ್ಥ ನೀತಿ..' ಅಮೆರಿಕ ಫೈಟರ್‌ ಜೆಟ್‌ಗೆ ಲ್ಯಾಂಡಿಂಗ್‌ ಪರ್ಮಿಷನ್‌ ನಿರಾಕರಿಸಿದ ಶ್ರೀಲಂಕಾ!

ಅಮೆರಿಕಾ-ಇರಾನ್ ಸಂಘರ್ಷದ ನಡುವೆ, ಶ್ರೀಲಂಕಾ ತನ್ನ ತಟಸ್ಥ ನೀತಿಯನ್ನು ಪ್ರದರ್ಶಿಸಿದೆ. ತನ್ನ ನೆಲದಲ್ಲಿ ಯುದ್ಧ ವಿಮಾನಗಳನ್ನು ಇಳಿಸಲು ಅಮೆರಿಕಾ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದು, ಇತ್ತೀಚೆಗೆ ಇರಾನ್ ಹಡಗಿನ ಮೇಲಿನ ದಾಳಿಯ ನಂತರವೂ ಮಾನವೀಯ ನೆರವು ನೀಡಿ ಜಗತ್ತಿನ ಗಮನ ಸೆಳೆದಿದೆ.

Read Full Story

05:07 PM (IST) Mar 20

ಸಂಜು ಸ್ಯಾಮ್ಸನ್ ಬದಲಿಗೆ ರಾಜಸ್ಥಾನ ರಾಯಲ್ಸ್ ತೆಕ್ಕೆ ಸೇರಿದ್ದ ಸ್ಟಾರ್ ಆಲ್ರೌಂಡರ್ ಐಪಿಎಲ್ ಟೂರ್ನಿಯಿಂದಲೇ ಔಟ್!

ಐಪಿಎಲ್ 18ನೇ ಸೀಸನ್ ಆರಂಭಕ್ಕೂ ಮುನ್ನ, ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ಸೊಂಟದ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ನಿಂದ ತಂಡಕ್ಕೆ ಬಂದಿದ್ದ ಕರನ್ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

Read Full Story

04:55 PM (IST) Mar 20

Pawan Kalyan Movies - ಪವನ್ 'ಬೇಡ' ಅಂದ ಸಿನಿಮಾಗಳಿಂದ ಮಹೇಶ್, ರವಿತೇಜ ಸ್ಟಾರ್ ಆದ್ರು! ಆ ಚಿತ್ರಗಳಿವು

ನಿರ್ದೇಶಕ ಪೂರಿ ಜಗನ್ನಾಥ್ ಹೇಳಿದ ಮೂರು ಇಂಡಸ್ಟ್ರಿ ಹಿಟ್ ಕಥೆಗಳನ್ನು ಪವರ್ ಸ್ಟಾರ್ ಪವನ್ ಕಲ್ಯಾಣ್ ಯಾಕೆ ಒಪ್ಪಿಕೊಳ್ಳಲಿಲ್ಲ? ಆ ಸಿನಿಮಾಗಳನ್ನು ಮಾಡಿದ ಸ್ಟಾರ್‌ಗಳು ಯಾರು? ಇಲ್ಲಿದೆ ವಿವರ.

Read Full Story

04:53 PM (IST) Mar 20

Zomato ಪ್ರಿಯರಿಗೆ ಶಾಕ್ - ಪ್ಲಾಟ್‌ಫಾರ್ಮ್ ಶುಲ್ಕ ಶೇ. 19ರಷ್ಟು ಏರಿಕೆ; ಇಂದಿನಿಂದ ಒಂದು ಆರ್ಡರ್‌ಗೆ ಈಗ ಎಷ್ಟು ಹಣ?

ಜೊಮಾಟೋ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು ಶೇ. 19ರಷ್ಟು ಹೆಚ್ಚಿಸಿದ್ದು, ಪ್ರತಿ ಆರ್ಡರ್‌ಗೆ ಈಗ ₹14.90 ಪಾವತಿಸಬೇಕು. ಈ ಬೆಲೆ ಏರಿಕೆಗೆ ಹೆಚ್ಚುತ್ತಿರುವ ಕಾರ್ಯನಿರ್ವಹಣಾ ವೆಚ್ಚಗಳು ಮತ್ತು ಕಚ್ಚಾ ತೈಲ ಬೆಲೆ ಏರಿಕೆಯೇ ಪ್ರಮುಖ ಕಾರಣವೆಂದು ಹೇಳಲಾಗಿದೆ. 

Read Full Story

04:48 PM (IST) Mar 20

ನಿಮ್ಮ ಕಷ್ಟ ಕೇಳೋರು ಯಾರೂ ಇಲ್ವಾ? ಹಾಗಿದ್ರೆ ಭಾರತದ ಈ ಬೀಚ್‌ಗೆ ಹೋಗಿ - ಇಲ್ಲಿ ನಿಮ್ ಕಷ್ಟಕ್ಕೆ ಕಿವಿಯಾಗುವವರಿದ್ದಾರೆ

ಇಲ್ಲಿವರೆಗೆ ಬಾಡಿಗೆ ಗಂಡ ಬಾಡಿಗೆ ಹೆಂಡತಿ ಬಾಡಿಗೆ ಸ್ನೇಹಿತ ಎಂಬೆಲ್ಲಾ ಉದ್ಯಮಗಳಿರುವುದರ ಬಗ್ಗೆ ವರದಿಯಾಗಿದ್ದವು. ಆದರೆ ಈಗ ನಮ್ಮ ಭಾರತದಲ್ಲಿ ನಿಮ್ಮ ಕಷ್ಟ ಕೇಳುವ ಉದ್ಯಮವೊಂದನ್ನು ವ್ಯಕ್ತಿಯೊಬ್ಬರು ಸ್ಥಾಪಿಸಿದ್ದು, ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Read Full Story

04:31 PM (IST) Mar 20

Vijay Trisha Controversy - ವಿಜಯ್-ತ್ರಿಶಾ ವಿವಾದದ ಹಿಂದೆ ಕೋಟಿ ಕೋಟಿ ಹಣದ ಆಟ? ಸತ್ಯಾಂಶವೇನು?

ನಟ ವಿಜಯ್ ಮತ್ತು ತ್ರಿಶಾ ವಿವಾದದ ಬಗ್ಗೆ ಮಾತನಾಡಿದ್ದಕ್ಕೇ ಯೂಟ್ಯೂಬರ್‌ಗಳಿಗೆ ಈವರೆಗೆ 100 ಕೋಟಿಗೂ ಹೆಚ್ಚು ಹಣ ಕೈ ಬದಲಾಗಿದೆ ಎಂದು ಕಾಲಿವುಡ್ ಅಂಗಳದಲ್ಲಿ ದೊಡ್ಡ ಸುದ್ದಿಯಾಗುತ್ತಿದೆ.

Read Full Story

04:27 PM (IST) Mar 20

Breaking - ಡೀಸೆಲ್‌ ಬೆಲೆ 22 ರೂಪಾಯಿ ಏರಿಕೆ ಮಾಡಿದ ಇಂಡಿಯನ್‌ ಆಯಿಲ್‌!

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಇಂಡಸ್ಟ್ರಿಯಲ್‌ ಡೀಸೆಲ್ ಬೆಲೆಯನ್ನು ಶೇ. 25ಕ್ಕಿಂತ ಹೆಚ್ಚು ಹೆಚ್ಚಿಸಿದೆ. ಈ ಕ್ರಮವು ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್‌ನಂತಹ ಕೈಗಾರಿಕೆಗಳ ಇನ್‌ಪುಟ್ ವೆಚ್ಚವನ್ನು ಹೆಚ್ಚಿಸಿ, ಉತ್ಪನ್ನಗಳನ್ನು ದುಬಾರಿಯಾಗಿಸುವ ಸಾಧ್ಯತೆಯಿದೆ. 

Read Full Story

04:10 PM (IST) Mar 20

ಬ್ರ್ಯಾಂಚ್‌ ಬ್ಯಾಂಕಿಂಗ್‌ ಚೀಫ್‌ ಸೇರಿದಂತೆ ಮೂವರನ್ನು ವಜಾ ಮಾಡಿದ ಎಚ್‌ಡಿಎಫ್‌ಸಿ ಬ್ಯಾಂಕ್‌!

ಕ್ರೆಡಿಟ್ ಸ್ಯೂಸ್ ಎಟಿ-1 ಬಾಂಡ್‌ಗಳ ಮಾರಾಟದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ HDFC ಬ್ಯಾಂಕ್ ತನ್ನ 3 ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಿದೆ. ಎನ್‌ಆರ್‌ಐ ಗ್ರಾಹಕರಿಗೆ ಶಾಶ್ವತ ಬಾಂಡ್‌ಗಳನ್ನು 'ಫಿಕ್ಸೆಡ್ ಮೆಚ್ಯೂರಿಟಿ' ಎಂದು ಸುಳ್ಳು ಹೇಳಿ ಮಾರಾಟ ಮಾಡಿರುವ ಆರೋಪ ಅವರ ಮೇಲಿದೆ.

Read Full Story

03:53 PM (IST) Mar 20

ಹಾರ್ಮುಜ್‌ ಜಲಸಂಧಿಯಲ್ಲಿ ಟೋಲ್‌ ಜಾರಿಗೆ ತಂದ ಇರಾನ್‌, ಒಂದು ಹಡಗು ದಾಟಲು 18 ಕೋಟಿ ರೂಪಾಯಿ ಶುಲ್ಕ!

ಮಧ್ಯಪ್ರಾಚ್ಯ ಯುದ್ಧದ ನಡುವೆ, ಇರಾನ್‌ ಹಾರ್ಮುಜ್‌ ಜಲಸಂಧಿಯಲ್ಲಿ ಖಾಸಗಿ ತೈಲ ಟ್ಯಾಂಕರ್‌ಗಳ ಸುರಕ್ಷಿತ ಸಾಗಣೆಗೆ 18 ಕೋಟಿ ರೂ. ಟೋಲ್‌ ವ್ಯವಸ್ಥೆ ಜಾರಿಗೆ ತಂದಿದೆ ಎಂದು ವರದಿಯಾಗಿದೆ. ಭಾರತ ಸೇರಿದಂತೆ ಹಲವು ದೇಶಗಳು ತಮ್ಮ ಹಡಗುಗಳ ಸುರಕ್ಷತೆಗಾಗಿ ಇರಾನ್‌ನೊಂದಿಗೆ ಮಾತುಕತೆ ನಡೆಸುತ್ತಿವೆ. 

Read Full Story

03:19 PM (IST) Mar 20

ಚಿನ್ನದ ಹೂಡಿಕೆಗೆ ಚಿನ್ನದ ಬಿಸ್ಕತ್ ಖರೀದಿಸುವುದು ಲಾಭದಾಯಕವಾ? ಅಥವಾ ಆಭರಣ ಖರೀದಿ ಬೆಸ್ಟಾ?

ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಇಂತಹ ಸಮಯದಲ್ಲಿ ಚಿನ್ನವನ್ನು ಆಭರಣ ರೂಪದಲ್ಲಿ ಖರೀದಿಸಬೇಕೇ ಅಥವಾ ಬಿಸ್ಕತ್ ರೂಪದಲ್ಲಿ ಖರೀದಿಸಬೇಕೇ ಎಂಬ ಗೊಂದಲ ಹಲವರಲ್ಲಿದೆ. ಹೂಡಿಕೆಯ ದೃಷ್ಟಿಯಿಂದ ಯಾವುದು ಉತ್ತಮ ಆಯ್ಕೆ? ಇಲ್ಲಿದೆ ಮಾಹಿತಿ.
Read Full Story

02:28 PM (IST) Mar 20

ಭಾರತ ಪಾಕಿಸ್ತಾನ ಎಲ್ಒಸಿ ಬಳಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪಿಸಿದ ಭಾರತೀಯ ಸೇನೆ

ಭಾರತ-ಪಾಕ್ ಗಡಿ ನಿಯಂತ್ರಣ ರೇಖೆಯ ಬಳಿ ಭಾರತೀಯ ಸೇನೆಯು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸ್ಥಾಪಿಸಿದೆ. ಪೂಂಚ್ ಸೆಕ್ಟರ್‌ನಲ್ಲಿ ಸ್ಥಾಪಿಸಲಾದ ಈ ಪ್ರತಿಮೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Read Full Story

01:53 PM (IST) Mar 20

ದಂಪತಿ ಒಟ್ಟಿಗೇ ಇರೋ ಫೋಟೋ ಸ್ಟೇಟಸ್​ಗೆ ಹಾಕಿದಾಗಲೆಲ್ಲಾ ನಿಮಗೂ ಹೀಗಾಗ್ತಿದ್ಯಾ? ಏಕಿದು, ಪರಿಹಾರವೇನು

ಸೋಶಿಯಲ್ ಮೀಡಿಯಾದಲ್ಲಿ ದಂಪತಿ, ತಮ್ಮ ಫೋಟೋಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಮನಶಾಸ್ತ್ರಜ್ಞರ ಪ್ರಕಾರ ಇದು ಅಭದ್ರತೆಯ ಸಂಕೇತವಾಗಿದ್ದು, ಜ್ಯೋತಿಷ್ಯದ ಪ್ರಕಾರ ಇಂತಹ ಸಾರ್ವಜನಿಕ ಪ್ರದರ್ಶನವು ಶುಕ್ರನ ಶಕ್ತಿಯನ್ನು ಕುಗ್ಗಿಸಿ, ಸಂಬಂಧದಲ್ಲಿ ಬಿರುಕು ಮೂಡಿಸಬಹುದು.

Read Full Story

01:31 PM (IST) Mar 20

Rama Duwaji - ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ಪತ್ನಿಯ ಹಳೆ ಪೋಸ್ಟ್‌ಗಳು ವೈರಲ್, ಭಾರಿ ವಿವಾದ!

ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ದಾನಿ ಅವರ ಪತ್ನಿ ರಾಮಾ ದುವಾಜಿ ಅವರು ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರೆನ್ನಲಾದ ಪೋಸ್ಟ್‌ಗಳು ಈಗ ಮತ್ತೆ ವೈರಲ್ ಆಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿವೆ.

Read Full Story

01:19 PM (IST) Mar 20

ಗಂಭೀರ ಗಾಯ ಅನುಮಾನದ ನಡುವೆ ಮೊಜ್ತಬಾ ಖಮೇನಿ ವಿಡಿಯೋ ರಿಲೀಸ್, ಭುಗಿಲೆದ್ದ ಆತಂಕ

ಗಂಭೀರ ಗಾಯ ಅನುಮಾನದ ನಡುವೆ ಮೊಜ್ತಬಾ ಖಮೇನಿ ವಿಡಿಯೋ ರಿಲೀಸ್, ಭುಗಿಲೆದ್ದ ಆತಂಕ, ದಾಳಿಯಲ್ಲಿ ಮೊಜ್ತಬಾ ಖಮೇನಿ ಬದುಕುಳಿದಿರುವುದೇ ಅನುಮಾನ ಎಂದು ಹೇಳಲಾಗಿತ್ತು. ಆದರೆ ಇದೀಗ ವಿಡಿಯೋ ಮೂಲಕ ಸ್ಪಷ್ಟ ಸಂದೇಶ ನೀಡಿದೆ.

 

Read Full Story

01:04 PM (IST) Mar 20

ಇದು ಪ್ಲಾಸ್ಟಿಕ್​ ಕವರ್​ ಜಾಹೀರಾತು ಕಣ್ರೀ- ಮಾಡೆಲ್​ಗಳ ಕ್ಯಾಟ್​ವಾಕ್​ - ಒಂದರ ಬೆಲೆ ಕೇವಲ 1.67 ಲಕ್ಷ ರೂ

ಸೋಷಿಯಲ್ ಮೀಡಿಯಾದಲ್ಲಿ ಚೀನಿ ಮಾಡೆಲ್‌ಗಳು ಪ್ಲಾಸ್ಟಿಕ್ ಕವರ್ ಹಿಡಿದು ಕ್ಯಾಟ್‌ವಾಕ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಪ್ಲಾಸ್ಟಿಕ್ ಕವರ್‌ನ ಬೆಲೆ 1.67 ಲಕ್ಷ ರೂಪಾಯಿ ಆಗಿದ್ದು, ಇದು ಪ್ಲಾಸ್ಟಿಕ್ ಬ್ಯಾನ್ ಮತ್ತು ಅದರ ಹಾವಳಿಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

12:41 PM (IST) Mar 20

IPL ಟೂರ್ನಿಗೂ ಮುನ್ನ ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟ ಕ್ಯಾಪ್ಟನ್ ರಜತ್ ಪಾಟೀದಾರ್!

19ನೇ ಐಪಿಎಲ್ ಸೀಸನ್‌ಗೂ ಮುನ್ನ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಅಪ್ಪನಾದ ಸಿಹಿ ಸುದ್ದಿ ನೀಡಿದ್ದಾರೆ. ಅವರು ಮತ್ತು ಅವರ ಪತ್ನಿ ಗುಂಜನ್ ಪಾಟೀದಾರ್ ಗಂಡು ಮಗುವನ್ನು ಸ್ವಾಗತಿಸಿದ್ದು, ಕಳೆದ ಸೀಸನ್ ಗೆದ್ದಿರುವ ಆರ್‌ಸಿಬಿ ಈ ಬಾರಿಯೂ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.

Read Full Story

12:40 PM (IST) Mar 20

ATMನಿಂದ 10 ಸಾವಿರ ತೆಗೆಯಲು ಹೋಗಿ 3 ಲಕ್ಷ ರೂ ಪಡೆದ ಗ್ರಾಹಕ, ದಿಕ್ಕು ತೋಚದೆ ಕುಳಿತ ಬ್ಯಾಂಕ್

ATMನಿಂದ 10 ಸಾವಿರ ತೆಗೆಯಲು ಹೋಗಿ 3 ಲಕ್ಷ ರೂ ಪಡೆದ ಗ್ರಾಹಕ, ದಿಕ್ಕು ತೋಚದೆ ಕುಳಿತ ಬ್ಯಾಂಕ್, ಎಟಿಎಂ ಮೂಲಕ ನಡೆದ ಅತೀ ದೊಡ್ಡ ಮಿಸ್ಟೇಕ್ ಇದು. ಇತ್ತ ಬ್ಯಾಂಕ್ ಏನೂ ಮಾಡಲು ಸಾಧ್ಯವಾಗದೇ ತಲೆ ಮೇಲೆ ಕೈಹೊತ್ತು ಕುಳಿತಿದೆ.

 

Read Full Story

More Trending News