ತಿರುಚಿರಾಪಳ್ಳಿ: ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಹಲವು ಬಾರಿ ಸೂಟ್ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ತಮಿಳುನಾಡು ಸಿಎಂ ವಿಜಯ್, ಅದರ ಕಾರಣವನ್ನು ಬಹಿರಂಗಪಡಿಸಿದ್ದಾರೆ. ನಾನು ಎಲ್ಲವನ್ನೂ ಕಪ್ಪು ಬಿಳುಪಾಗಿ (ಅಕ್ರಮ ಹಾಗೂ ಸಕ್ರಮ) ನೋಡುವುದರ ಸಂಕೇತವಿದು ಎಂದಿದ್ದಾರೆ.
ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿ ಸಾರ್ವಜನಿಕರ ಎದುರು ತಮ್ಮ ಕ್ಷೇತ್ರವಾದ ತಿರುಚಿರಾಪಳ್ಳಿಯಲ್ಲಿ ಮಾತನಾಡಿದ ಅವರು, ‘ನನ್ನ ಸೂಟ್ ಬಣ್ಣ ಯಾವಾಗಲೂ ಕಪ್ಪು ಮತ್ತು ಬಿಳಿ ಆಗಿರುತ್ತದೆ. ಕಾರಣ ನಾನು ಎಲ್ಲವನ್ನು ಈ ಎರಡು ಬಣ್ಣಗಳಲ್ಲಷ್ಟೇ ನೋಡುತ್ತೇನೆ. ಅದರ ನಡುವಿನ ಯಾವ ಬಣ್ಣವನ್ನೂ ಧರಿಸುವುದಿಲ್ಲ ಹಾಗೂ ನೋಡುವುದಿಲ್ಲ’ ಎಂದಿದ್ದಾರೆ.
ಇದೇ ವೇಳೆ ಚೊಚ್ಚಲ ಚುನಾವಣೆಯಲ್ಲಿ ತಮ್ಮ ಕೈಹಿಡಿದು ಅಧಿಕಾರಕ್ಕೇರಿಸಿದ ಮತದಾರರಿಗೆ ಧನ್ಯವಾದವನ್ನು ಅರ್ಪಿಸಿದ ವಿಜಯ್, ‘ಇಷ್ಟು ವರ್ಷ ನಿಮಗೆ ಮೋಸ ಮಾಡಿದ ಇಬ್ಬರನ್ನು (ಡಿಎಂಕೆ ಮತ್ತು ಅಣ್ಣಾಡಿಎಂಕೆ) ನಿರ್ಲಕ್ಷಿಸಿ ನನ್ನನ್ನು ಬೆಂಬಲಿಸಿದ್ದಕ್ಕೆ ಶಿರಬಾಗಿ ವಂದಿಸುತ್ತೇನೆ’ ಎಂದರು. ಜತೆಗೆ, ‘ನನ್ನ ಆಡಳಿತವನ್ನು ನೀವೆಲ್ಲಾ ಮೆಚ್ಚುತ್ತೀರಿ ಹಾಗೂ ಮುಂದೆಯೂ ಬೆಂಬಲಿಸುತ್ತೀರಿ ಎಂಬ ನಂಬಿಕೆಯಿದೆ’ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.
09:26 PM (IST) Jun 02
ಈಗಿನ ಕಾಲದಲ್ಲಿ ಟೂರಿಗೆ ಹೋದರೆ ಅಲ್ಲಿ ಒಂದು ರೀಲ್ಸ್ ಮಾಡೋದು ಕಾಮನ್ ಆಗಿದೆ. ಅದರಲ್ಲೂ ಡ್ಯಾನ್ಸ್ ರೀಲ್ಸ್ ಮಾಡೋದು ಈಗಿನ ಟ್ರೆಂಡ್. ಆದರೆ, ಇಂಥಾ ರೀಲ್ಸ್ಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗೋದೇ ಹೆಚ್ಚು.
08:43 PM (IST) Jun 02
08:36 PM (IST) Jun 02
ತಮಿಳುನಾಡು ಅಂದ್ರೆ ಅಲ್ಲಿ ಸಿನಿಮಾ ರಾಜಕೀಯದ ಹೆಬ್ಬಾಗಿಲು ಎನ್ನಬಹುದು. ಬೆಳ್ಳಿಪರದೆಯ ಮೇಲೆ ಮಿಂಚಿದವರು ಕೋಟೆ ಕಟ್ಟಿ ಆಳೋದು ಅಲ್ಲಿನ ಹಳೆಯ ಸಂಪ್ರದಾಯ. ದಳಪತಿ ವಿಜಯ್ ಸಿಎಂ ಆಗಿ ದೊಡ್ಡ ಸಂಚಲನ ಮೂಡಿಸಿದ ಬೆನ್ನಲ್ಲೇ ಈಗ ಮತ್ತೊಬ್ಬ ಸ್ಟಾರ್ ನಟನ ಹೆಸರು ಕೇಳಿಬರುತ್ತಿದೆ.
08:30 PM (IST) Jun 02
ಯೋಗಾತ್ಸವ ಕಾರ್ಯಕ್ರಮದಲ್ಲಿ ನಟ ವಿದ್ಯುತ್ ಜಮ್ವಾಲ್ ಸಂಸ್ಕೃತದಲ್ಲಿ ಮಾತನಾಡಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಯೋಗದ ಮಹತ್ವದ ಬಗ್ಗೆ ಮಾತನಾಡುತ್ತಾ, ನಿರರ್ಗಳವಾಗಿ ಸಂಸ್ಕೃತದಲ್ಲಿ ಭಾಷಣ ಮಾಡಿದ್ದು, ಸಭಿಕರಿಂದ ಭಾರಿ ಚಪ್ಪಾಳೆ ಗಿಟ್ಟಿಸಿಕೊಂಡಿದೆ.
08:11 PM (IST) Jun 02
07:58 PM (IST) Jun 02
ಐಪಿಎಲ್ 2026ರ ಅವಧಿಯಲ್ಲಿ ಆನ್ಲೈನ್ ಫುಡ್ ಡೆಲಿವರಿ ಮತ್ತು ರೆಸ್ಟೋರೆಂಟ್ ಬುಕಿಂಗ್ಗಳು ಸಾರ್ವಕಾಲಿಕ ದಾಖಲೆ ಬರೆದಿವೆ. ಸ್ವಿಗ್ಗಿ ವರದಿ ಪ್ರಕಾರ, ಫುಡ್ ಆರ್ಡರ್ಗಳು ಶೇ. 32.31ರಷ್ಟು ಮತ್ತು ಡೈನ್ಔಟ್ ಬುಕಿಂಗ್ಗಳು ಶೇ. 41ರಷ್ಟು ಹೆಚ್ಚಾಗಿದ್ದು, ಬೆಂಗಳೂರು, ಮುಂಬೈ, ಹೈದರಾಬಾದ್ ನಗರಗಳು ಮುಂಚೂಣಿಯಲ್ಲಿದ್ದವು.
07:51 PM (IST) Jun 02
ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ರೈತರಿಗೆ ನೀಡಿದ್ದ ಸಾಲದಲ್ಲಿ 2 ಲಕ್ಷ ರೂಪಾಯಿ ಮನ್ನಾ ಮಾಡಲು ಮಹಾ ಸರ್ಕಾರ ಆದೇಶ ನೀಡಿದೆ. ಈ ಆದೇಶ ಹೊರಬೀಳುತ್ತಿದ್ದಂತೆ ರೈತರ ನಿಟ್ಟುಸಿರು ಬಿಟ್ಟಿದ್ದಾರೆ. ಪರಿಣಾಮ 56 ಲಕ್ಷ ರೈತರಿಗೆ ಅನುಕೂಲವಾಗಲಿದೆ.
07:13 PM (IST) Jun 02
07:04 PM (IST) Jun 02
2025-26ನೇ ಸಾಲಿನ ಇಪಿಎಫ್ ಬಡ್ಡಿ ದರವನ್ನು ಶೇ. 8.25ಕ್ಕೆ ನಿಗದಿಪಡಿಸಲಾಗಿದ್ದರೂ, ಹಣ ಇನ್ನೂ ಚಂದಾದಾರರ ಖಾತೆಗೆ ಜಮೆಯಾಗಿಲ್ಲ. ಈ ವಿಳಂಬಕ್ಕೆ ಕಾರಣವೇನು, ಇದರಿಂದ ನೌಕರರಿಗೆ ಆರ್ಥಿಕ ನಷ್ಟವಾಗುವುದೇ ಮತ್ತು ಬಡ್ಡಿ ಹಣ ಯಾವಾಗ ಜಮೆಯಾಗಬಹುದು ಎನ್ನುವ ವಿವರ ಇಲ್ಲಿದೆ.
07:01 PM (IST) Jun 02
ನಾಸಿಕ್ ಗುರು ಅರೆಸ್ಟ್ ಬಳಿಕ ನೂರಾರು ವಿಡಿಯೋ ಪತ್ತೆಯಾಗಿತ್ತು. ಇದೀಗ 29ರ ಹರೆಯದ ಐಟಿಟಿ ಪದವೀಧರ ಧಾರ್ಮಿಕ ಗುರು ಅನ್ನೋ ಹೆಸರಿನಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಪತ್ತೆಯಾಗಿದೆ. ಗುರು ಅರೆಸ್ಟ್ ಆಗಿದ್ದು, 12 ವಿಡಿಯೋಗಳು ಪತ್ತೆಯಾಗಿದೆ.
06:57 PM (IST) Jun 02
ನಟ ರಾಮ್ ಚರಣ್ ತಮ್ಮ ಮುಂಬರುವ 'ಪೆದ್ದಿ' ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ವೇಳೆ ಪತ್ನಿ ಉಪಾಸನಾ ಬಗ್ಗೆ ತಮಾಷೆಯಾಗಿ ಮಾತನಾಡಿದ್ದು, ಈ ಸಿನಿಮಾ ಮದುವೆಗೂ ಮುನ್ನ ಬಂದಿದ್ದರೆ, ಇನ್ನಷ್ಟು ಒಳ್ಳೆ ಸಂಬಂಧ ಬರುತ್ತಿತ್ತು ಎಂದಿದ್ದಾರೆ.
06:34 PM (IST) Jun 02
ಕಿರುತೆರೆ ನಟಿಯರಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ತೆಲುಗು ಪ್ರೇಕ್ಷಕರು ಟಿವಿ ಸೀರಿಯಲ್ಗಳನ್ನು ಬಹಳ ಇಷ್ಟಪಡುತ್ತಾರೆ. ಧಾರಾವಾಹಿಗಳಲ್ಲಿ ನಟಿಸುವ ಸುಂದರ ಮತ್ತು ಆಕರ್ಷಕ ನಟಿಯರ ಪಟ್ಟಿ ಇಲ್ಲಿದೆ.
06:24 PM (IST) Jun 02
ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಹೈಕಮಾಂಡ್ ಜೊತೆಗಿನ ಭಿನ್ನಾಭಿಪ್ರಾಯದಿಂದ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮದೇ ಆದ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವ ಮೂಲಕ 'ದ್ರಾವಿಡ ಮಾದರಿ'ಗೆ ಪರ್ಯಾಯವನ್ನು ಒದಗಿಸಲು ಸಜ್ಜಾಗಿದ್ದಾರೆ.
06:21 PM (IST) Jun 02
ಸಿಬಿಎಸ್ಇಯ 'ಆನ್-ಸ್ಕ್ರೀನ್ ಮಾರ್ಕಿಂಗ್' (OSM) ಪೋರ್ಟಲ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಂಡಳಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ವರ್ಗಾವಣೆ ಮಾಡಿದೆ. ಟೆಂಡರ್ ಪ್ರಕ್ರಿಯೆ ಮತ್ತು ತಾಂತ್ರಿಕ ವೈಫಲ್ಯಗಳ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.
06:02 PM (IST) Jun 02
ಟ್ರೈನ್ ಪ್ರಯಾಣದ ವೇಳೆ ಪ್ರಯಾಣಿಕರೊಬ್ಬರು ಖರೀದಿಸಿದ ಒಂದು ಕೇಕ್ ಪ್ಯಾಕೆಟ್ ಬೆಲೆ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. 35 ರೂಪಾಯಿ MRP ಇದ್ದ ಕೇಕ್ಗೆ ವ್ಯಾಪಾರಿಯೊಬ್ಬ..
05:48 PM (IST) Jun 02
ಅಮೆರಿಕ-ಇರಾನ್ ಸಂಘರ್ಷದಿಂದ ಉಂಟಾದ ಆರ್ಥಿಕ ಒತ್ತಡವನ್ನು ಎದುರಿಸಲು ಆರ್ಬಿಐ ತನ್ನ ಚಿನ್ನದ ನಿಧಿಯ ಒಂದು ಭಾಗವನ್ನು ಮಾರಾಟ ಮಾಡಿದೆ. ಇಂಧನ ವೆಚ್ಚ ಮತ್ತು ದುರ್ಬಲಗೊಳ್ಳುತ್ತಿರುವ ರೂಪಾಯಿ ಮೌಲ್ಯದಂತಹ ಬಾಹ್ಯ ಆಘಾತಗಳಿಂದ ವಿದೇಶಿ ವಿನಿಮಯ ಮೀಸಲನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
05:26 PM (IST) Jun 02
ಮಹೀಂದ್ರಾ ಆಂಡ್ ಮಹೀಂದ್ರಾ ಕಂಪನಿಯು ಮೇ ತಿಂಗಳಲ್ಲಿ ಒಟ್ಟು ವಾಹನ ಮಾರಾಟದಲ್ಲಿ ಶೇಕಡಾ 20 ರಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. ಎಸ್ಯುವಿ ವಿಭಾಗದಲ್ಲಿ 58 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದ್ದು, ವಾಣಿಜ್ಯ ಮತ್ತು ತ್ರಿಚಕ್ರ ವಾಹನಗಳ ವಿಭಾಗದಲ್ಲೂ ಗಣನೀಯ ಪ್ರಗತಿ ಸಾಧಿಸಿದೆ.
04:53 PM (IST) Jun 02
Snake Droppings: ಹಾವಿನ ಬಗ್ಗೆ ಮಾತನಾಡುತ್ತೇವೆ, ಆದರೆ ಹಾವಿನ ಮಲದ ಬಗ್ಗೆ ನಿರ್ಲಕ್ಷ್ಯ ಮಾಡುತ್ತೇವೆ. ನೀವೂ ಊಹಿಸೋಕೂ ಆಗದ ಜಾಗದಲ್ಲಿ ಮಲ ಇರುತ್ತದೆ. ಆ ಮಲ ಸಿಕ್ಕಾಪಟ್ಟೆ ಡೇಂಜರ್. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
04:35 PM (IST) Jun 02
ಶಾಹಿದ್ ಕಪೂರ್-ಕಿಯಾರಾ ಅಡ್ವಾಣಿ ನಟನೆಯ 'ಕಬೀರ್ ಸಿಂಗ್' ಸಿನಿಮಾದ ಬೈಕ್ ಕಿಸ್ಸಿಂಗ್ ಸೀನ್ ನೆನಪಿದೆಯಾ? ಆ ಸೀನ್ ಶೂಟ್ ಮಾಡಿದ್ದು ಹೇಗೆ ಅಂತ ಒಂದು ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಅಸಲಿಗೆ ಆ ಕಿಸ್ ನಿಜವಾಗಿತ್ತಾ? ನಕಲಿಯಾ? ಇಲ್ಲಿದೆ ನೋಡಿ ಅಸಲಿ ಕಥೆ.
04:16 PM (IST) Jun 02
ಲಂಡನ್: 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯವಾಗಿದೆ. ಈ ಟೂರ್ನಿಯಲ್ಲಿ ಹೆಚ್ಚು ಗಮನ ಸೆಳೆದಿದ್ದು, ಬಿಹಾರ ಮೂಲದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ. ಈ ಆಟಗಾರನ ಬಗ್ಗೆ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅಚ್ಚರಿ ಭವಿಷ್ಯ ನುಡಿದಿದ್ದಾರೆ.
04:15 PM (IST) Jun 02
ನಟಿ ಸುಶ್ಮಿತಾ ಸೇನ್ ಮತ್ತು ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಅವರ ಸಂಬಂಧದ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಇವರಿಬ್ಬರ ಸಂಬಂಧ ಮುರಿದುಬಿದ್ದು ಬಹಳ ದಿನಗಳೇ ಕಳೆದಿದೆ. ಅಷ್ಟಕ್ಕೂ 50 ವರ್ಷದ..
03:32 PM (IST) Jun 02
ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಯಶಸ್ವಿಯಾಗಿ ಮುಕ್ತಾಯವಾಗಿದೆ. ಈ ಟೂರ್ನಿಯು ಬ್ಯಾಟರ್ಗಳ ಆರ್ಭಟಕ್ಕೆ ಸಾಕ್ಷಿಯಾಯಿತು. ಇದರ ಜತೆಗೆ ಹಲವು ದಾಖಲೆಗಳು ನಿರ್ಮಾಣವಾದವು. ಬನ್ನಿ ನಾವಿಂದು ಐಪಿಎಲ್ನಲ್ಲಿ ಅತಿದೊಡ್ಡ ಸಿಕ್ಸರ್ ಬಾರಿಸಿದ ಟಾಪ್-5 ಬ್ಯಾಟರ್ಗಳು ಯಾರು ನೋಡೋಣ.
03:30 PM (IST) Jun 02
ಸಿನಿಮಾದಲ್ಲಿ ಕಿಸ್ ಮಾಡೋ ದೃಶ್ಯ ಕಾಣಿಸುವುದು. ಹಾಗಿದ್ರೆ ಕಲಾವಿದರು ಕಿಸ್ ಮಾಡ್ತಾರಾ ಎಂದು ಅನೇಕರು ಅಂದುಕೊಳ್ತಾರೆ. ಆದರೆ ಇದರ ಹಿಂದಿನ ಕಥೆ ಏನು? ಈಗ ಕಾಲ ಬದಲಾಗಿದ್ದು, ಎಲ್ಲವೂ ರಿಯಲ್ ಎನ್ನೋ ಥರ ತೋರಿಸ್ತಾರೆ.
03:12 PM (IST) Jun 02
Virat Kohli Anushka Sharma visit Premanand Ji Maharaj: ವೃಂದಾವನದ ಶ್ರೀ ಹಿತ ರಾಧಾ ಕೇಳಿ ಕುಂಜ ಆಶ್ರಮದ ಪ್ರಸಿದ್ಧ ಸಂತ, ಆಧ್ಯಾತ್ಮಿಕ ಗುರು ಶ್ರೀ ಪ್ರೇಮಾನಂದ್ ಮಹಾರಾಜ್ ಅವರು ಯಾವುದೇ ತಂತ್ರ-ಮಂತ್ರ ಅಥವಾ ಮ್ಯಾಜಿಕ್ ಮಾಡೋದಿಲ್ಲ, ಮುಂದೆ ಆಗೋದನ್ನು ಕೂಡ ಹೇಳೋದಿಲ್ಲ. ಅವರು ಜೀವಂತ ಪವಾಡ.
02:54 PM (IST) Jun 02
02:36 PM (IST) Jun 02
ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ವಿರಾಟ್ ಕೊಹ್ಲಿ, ಆರ್ಸಿಬಿ ತಂಡವು ಎರಡನೇ ಬಾರಿಗೆ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೀಗ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಜೆರ್ಸಿಯಲ್ಲಿ ಕಣಕ್ಕಿಳಿಯೋದು ಯಾವಾಗ ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ.
02:31 PM (IST) Jun 02
01:28 PM (IST) Jun 02
ಕೇಂದ್ರ ರೈಲ್ವೆಯು ಮುಂಬರುವ ಮುಂಗಾರು ಋತುವಿಗಾಗಿ ಕೊಂಕಣ ರೈಲ್ವೆ ಮಾರ್ಗದ 40 ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಜೂನ್ 15 ರಿಂದ ಅ.20 ರವರೆಗೆ ಜಾರಿಯಲ್ಲಿರುವ ಈ ಹೊಸ ವೇಳಾಪಟ್ಟಿಯ ಪ್ರಕಾರ, ವಂದೇ ಭಾರತ್ ಮತ್ತು ತೇಜಸ್ ಎಕ್ಸ್ಪ್ರೆಸ್ನಂತಹ ಪ್ರಮುಖ ರೈಲುಗಳ ಸಂಚಾರದ ದಿನ ಕಡಿತಗೊಳಿಸಲಾಗಿದೆ.
01:08 PM (IST) Jun 02
10:37 AM (IST) Jun 02
ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗುವುದರೊಂದಿಗೆ ಯಶಸ್ವಿಯಾಗಿ ಮುಕ್ತಾವಾಗಿದೆ. ಇದರ ಬೆನ್ನಲ್ಲೇ ಕ್ರಿಕೆಟ್ ವೆಬ್ಸೈಟ್ ESPNCricinfo ಈ ಸೀಸನ್ ಸರ್ವಶ್ರೇಷ್ಠ ತಂಡವನ್ನು ಪ್ರಕಟಿಸಿದೆ.
10:05 AM (IST) Jun 02
ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಡುವೆ, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಪ್ರಧಾನಿ ಮೋದಿ ಮತ್ತು ವ್ಯವಸ್ಥೆಯ ಮೇಲೆ ತಮಗೆ ನಂಬಿಕೆ ಇದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದು ರಾಜಕೀಯ ವಿಷಯವಲ್ಲ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಎಂದಿದ್ದಾರೆ.
10:00 AM (IST) Jun 02
ಟಿಸಿಎಸ್ ಮತ್ತು ಇನ್ಫೋಸಿಸ್ ಕಂಪನಿಗಳ 2025-26ರ ವಾರ್ಷಿಕ ವರದಿಯ ಪ್ರಕಾರ, ಸಿಇಒಗಳ ಸಂಬಳದಲ್ಲಿ ದೊಡ್ಡ ವ್ಯತ್ಯಾಸವಿದೆ. ಟಿಸಿಎಸ್ಗಿಂತ ಇನ್ಫೋಸಿಸ್ ವಹಿವಾಟು ಕಡಿಮೆ ಇದ್ದರೂ, ಸಿಇಒ ಸಂಬಳದಲ್ಲಿ ಈ ಅಂತರ ಕಂಡುಬಂದಿದೆ.
09:39 AM (IST) Jun 02
09:26 AM (IST) Jun 02
07:52 AM (IST) Jun 02
ಆನ್ಲೈನ್ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಸ್ಥಾಪಿಸಿ ಸಂಚಲನ ಮೂಡಿಸಿದ್ದ ಅಮೆರಿಕ ವಾಸಿ ಅಭಿಜಿತ್ ದೀಪ್ಕೆ, ಇದೀಗ ಭಾರತಕ್ಕೆ ಆಗಮಿಸುತ್ತಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಅವರು ಪ್ರತಿಭಟನೆ.
07:48 AM (IST) Jun 02
07:26 AM (IST) Jun 02