Published : Aug 18, 2026, 05:32 AM ISTUpdated : Aug 18, 2026, 10:54 PM IST

India Latest News Live: ಲತಾ ಮಂಗೇಶ್ಕರ್‌ ಧ್ವನಿಯ 'ವಂದೇ ಮಾತರಂ' ಪ್ರಸಾರ - ಆಯೋಜಕರ ತಪ್ಪಿಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಎಚ್ಚರಿಕೆ!

ಸಾರಾಂಶ

ನವದೆಹಲಿ: ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದ ಬಳಿಕ ಕಾಂಗ್ರೆಸ್‌- ಬಿಜೆಪಿ ನಡುವೆ ಶುರುವಾಗಿದ್ದ ‘ಬೌದ್ಧಿಕ ನಕ್ಸಲ್’ ತಿಕ್ಕಾಟ ಮತ್ತಷ್ಟು ತೀವ್ರಗೊಂಡಿದೆ. ‘ನಾನು ಬೌದ್ಧಿಕ ನಕ್ಸಲ್‌ ಆಗಲು ಹೆಮ್ಮೆ ಪಡುತ್ತೇನೆ’ನೆಂಬ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಹೇಳಿಕೆಗೆ ಬಿಜೆಪಿ ತೀವ್ರ ಕಿಡಿಕಾರಿದೆ.

2006ರಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್‌ ಅವರು ಮಾವೋವಾದಿಗಳ ಸಮಸ್ಯೆ ದೇಶ ಎದುರಿಸುತ್ತಿರುವ ಏಕೈಕ ಅತಿದೊಡ್ಡ ಆಂತರಿಕ ಭದ್ರತಾ ಸವಾಲು ಎಂದಿದ್ದರು. ಆದರೆ, ಈಗ ಚಿದಂಬರಂ ನಾನು ಬೌದ್ಧಿಕ ನಕ್ಸಲ್‌ ಆಗಲು ಹೆಮ್ಮೆ ಪಡುತ್ತೇನೆ ಎಂದಿದ್ದಾರೆ. ಇದಕ್ಕಾಗಿ ಕಾಂಗ್ರೆಸ್‌ ಪಕ್ಷವು ಮಾಜಿ ಪ್ರಧಾನಿ ಕುಟುಂಬದ ಕ್ಷಮೆ ಯಾಚಿಸಬೇಕು ಎಂದು ಸಚಿವ ಕಿರಣ್‌ ರಿಜಿಜು ಆಗ್ರಹಿಸಿದರು.

ತ್ರಿವೇದಿ ತಿರುಗೇಟು:

ಈ ನಡುವೆ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಅವರು, ಕಾಂಗ್ರೆಸ್‌ ಪಕ್ಷ ‘ಮುಸ್ಲಿಂ ಲೀಗ್‌ ಮಾವೋವಾದಿ ಕಾಂಗ್ರೆಸ್‌’ ಎಂಬುದಾಗಿ ಅವರ ಪಕ್ಷದವರೇ ಬಯಲು ಮಾಡಿದ್ದರು. ಇದೀಗ ತಮ್ಮದು ‘ಬೌದ್ಧಿಕ ನಕ್ಸಲ್‌ ಕಾಂಗ್ರೆಸ್‌’ ಎಂದು ಹೇಳಿಕೊಳ್ಳುತ್ತಿದ್ದಾರೆ’ಎಂದು ವ್ಯಂಗ್ಯವಾಡಿದರು.

10:54 PM (IST) Aug 18

ಲತಾ ಮಂಗೇಶ್ಕರ್‌ ಧ್ವನಿಯ 'ವಂದೇ ಮಾತರಂ' ಪ್ರಸಾರ - ಆಯೋಜಕರ ತಪ್ಪಿಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಎಚ್ಚರಿಕೆ!

ಠಾಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 'ವಂದೇ ಮಾತರಂ'ನ ಅನಧಿಕೃತ ಆವೃತ್ತಿ ಪ್ರಸಾರವಾಗಿದ್ದು, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವೇದಿಕೆಯಲ್ಲೇ ಆಯೋಜಕರಿಗೆ ಎಚ್ಚರಿಕೆ ನೀಡಿದ್ದಾರೆ.

Read Full Story

10:40 PM (IST) Aug 18

ಆಟೋಮೊಬೈಲ್ ಇತಿಹಾಸದಲ್ಲೇ ಮಹಾ ದಾಖಲೆ - 382 ಕೋಟಿ ರೂ.ಗೆ ಮಾರಾಟವಾಯ್ತು ಫೆರಾರಿಯ ಮೊದಲ ಇವಿ ಕಾರು!

ಫೆರಾರಿಯ ಚೊಚ್ಚಲ ಎಲೆಕ್ಟ್ರಿಕ್ ಕಾರು 'ಫೆರಾರಿ ಲ್ಯೂಸ್ ಚಾಸಿಸ್ ಒ' ದಾಖಲೆಯ 382 ಕೋಟಿ ರೂಪಾಯಿಗೆ ಹರಾಜಾಗಿದೆ, ಇದು ವಿಶ್ವದ ಅತ್ಯಂತ ದುಬಾರಿ ಇವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರನ್ನು ಅಮೆರಿಕದ ಉದ್ಯಮಿ ಹರ್ಬರ್ಟ್ ವರ್ಥೈಮ್ ಖರೀದಿಸಿದ್ದಾರೆ.

Read Full Story

10:31 PM (IST) Aug 18

"ಗಂಡಸರಿಲ್ಲದೆ ನಿಮಗಿದು ಸಾಧ್ಯವಿಲ್ಲ" ಎಂದವರಿಗೆ ದಿಟ್ಟ ಉತ್ತರ, ಮೈನಸ್ ಡಿಗ್ರಿ ಚಳಿ 2 ಧ್ರುವ ದಾಟಿದ ಮೊದಲ ಮಹಿಳೆ ಕಥೆ!

ಸಾಮಾನ್ಯ ಶಾಲಾ ಶಿಕ್ಷಕಿಯಾಗಿದ್ದ ಆನ್ ಬ್ಯಾನ್‌ಕ್ರಾಫ್ಟ್, ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ತಲುಪಿದ ವಿಶ್ವದ ಮೊದಲ ಮಹಿಳೆಯಾಗಿ ಇತಿಹಾಸ ನಿರ್ಮಿಸಿದರು. ಹಿಮದ ಮೇಲೆ ಎದುರಾದ ಮಾರಣಾಂತಿಕ ಸವಾಲುಗಳನ್ನು ಮೆಟ್ಟಿ, ಮಹಿಳೆಯರ ಸಾಮರ್ಥ್ಯವನ್ನು ಜಗತ್ತಿಗೆ ಸಾರಿದ ಅವರ ಸ್ಪೂರ್ತಿದಾಯಕ ಸಾಹಸಗಾಥೆ ಇದು.
Read Full Story

09:34 PM (IST) Aug 18

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದ ಜಡೇಜಾ.. 84 ಬಾರಿ ಮಿಸ್ಟೇಕ್ಸ್‌..!

2021 ರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ನೋ-ಬಾಲ್ (84) ಎಸೆದ ಸ್ಪಿನ್ನರ್ ಎಂಬ ಬೇಡದ ದಾಖಲೆ ರವೀಂದ್ರ ಜಡೇಜಾ ಹೆಸರಿಗೆ ಸೇರಿದೆ. ಈ ನಡುವೆ ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ 3 ವಿಕೆಟ್ ಪಡೆಯುವ ಮೂಲಕ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದ್ದಾರೆ.

Read Full Story

08:12 PM (IST) Aug 18

'ತೀವ್ರ ಮುಟ್ಟಿನ ನೋವಿದೆ..ಆಫೀಸ್‌ಗೆ ಬರಲ್ಲ..' GenZ ಯುವತಿಯ ನೇರ ಇಮೇಲ್ ಶೇರ್ ಮಾಡಿ ಮೆಚ್ಚಿದ ಸಿಇಒ!

ಗುರುಗ್ರಾಂನಲ್ಲಿ, ಜೆನ್ ಜಿ ಉದ್ಯೋಗಿಯೊಬ್ಬರು ತೀವ್ರ ಮುಟ್ಟಿನ ನೋವಿನ ಕಾರಣ ನೀಡಿ ತಮ್ಮ ಸಿಇಒಗೆ ರಜೆ ಕೋರಿ ಇಮೇಲ್ ಮಾಡಿದ್ದಾರೆ. ಈ ಇಮೇಲ್ ಅನ್ನು ಸಿಇಒ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Read Full Story

07:46 PM (IST) Aug 18

ಆಸ್ಟ್ರೇಲಿಯಾದಲ್ಲಿ 5 ನಿಮಿಷ ಸ್ನಾನ ಮಾಡಿದ್ದಕ್ಕೆ ಭಾರತೀಯ ಯುವತಿಗೆ ₹1.30 ಲಕ್ಷ ದಂಡ! ಸಂಬಳ ಅದಕ್ಕೇ ಹೋಯ್ತು!

ಆಸ್ಟ್ರೇಲಿಯಾದಲ್ಲಿ ವಾಸಿಸುವ ಭಾರತೀಯ ಮಹಿಳೆಯೊಬ್ಬರು, ಸ್ನಾನದ ಕೋಣೆಯ ಬಿಸಿನೀರಿನ ಹಬೆಯಿಂದ ಫೈರ್ ಅಲಾರಾಂ ಆನ್ ಆದ ಕಾರಣಕ್ಕೆ ಸುಮಾರು ₹1.30 ಲಕ್ಷ ದಂಡ ಪಾವತಿಸಿದ್ದಾರೆ. ಎಕ್ಸಾಸ್ಟ್ ಫ್ಯಾನ್ ಆನ್ ಮಾಡದೆ ಕೇವಲ ಐದು ನಿಮಿಷ ಸ್ನಾನ ಮಾಡಿದ್ದೇ ಈ ಘಟನೆಗೆ ಕಾರಣವಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
Read Full Story

07:18 PM (IST) Aug 18

ಸೇನೆಯ ಕನಸು ಕಂಡಿದ್ದ 21ರ ಹುಡುಗ ಇಂಡಿಯನ್‌ ಮಿಲಿಟರಿ ಅಕಾಡೆಮಿಯ ತರಬೇತಿ ವೇಳೆಯಲ್ಲೇ ಕುಸಿದು ಬಿದ್ದು ಸಾವು!

ಡೆಹ್ರಾಡೂನ್‌ನ 'ಇಂಡಿಯನ್ ಮಿಲಿಟರಿ ಅಕಾಡೆಮಿ'ಯಲ್ಲಿ ತರಬೇತಿ ಪಡೆಯುತ್ತಿದ್ದ 21 ವರ್ಷದ ಕೆಡೆಟ್‌ ನಿಶಾಂತ್‌ ಧನ್‌ಕರ್‌, ಜಂಗಲ್ ಕ್ಯಾಂಪ್ ತರಬೇತಿ ವೇಳೆ ಕುಸಿದುಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

Read Full Story

07:06 PM (IST) Aug 18

ಕ್ಯಾರೆಟ್​ನಲ್ಲಿ ಸಿಕ್ಕಿತು ವಜ್ರದ ಉಂಗುರ! ಸಿನಿಮಾ ಸ್ಟೋರಿ ಮೀರಿಸೋ ರೋಚಕ ನೈಜ ಘಟನೆ

ಕೆನಡಾದಲ್ಲಿ 12 ವರ್ಷಗಳ ಹಿಂದೆ ತೋಟದಲ್ಲಿ ಕಳೆದುಹೋಗಿದ್ದ ವಜ್ರದ ಉಂಗುರವೊಂದು, ಮನೆಯಲ್ಲಿ ಬೆಳೆದ ಕ್ಯಾರೆಟ್​ನಲ್ಲಿ ಸಿಕ್ಕಿದೆ. ಸೊಸೆಗೆ ಸಿಕ್ಕ ಈ ಉಂಗುರವನ್ನು ನೋಡಿ ಅತ್ತೆ ಭಾವುಕರಾಗಿದ್ದು, ಈ ರೋಚಕ ಘಟನೆ ಎಲ್ಲರ ಗಮನ ಸೆಳೆದಿದೆ.
Read Full Story

07:03 PM (IST) Aug 18

ಹವಾಯಿಯ ಮೌನಾ ಕಿಯಾ ಕಾಡಿಗೆ ಶಾಪವಾದ ಯುರೋಪಿಯನ್ ಕುರಿಗಳು, ಪಲಿಲಾ ಹಕ್ಕಿಯ ಮೌನರೋಧನೆ, ಇದು ಕಾಡು ನಾಶದ ರಿಯಲ್ ಕಥೆ!

1700ರ ದಶಕದಲ್ಲಿ ಹವಾಯಿಯ ಮೌನಾ ಕಿಯಾ ಪರ್ವತಕ್ಕೆ ಯುರೋಪಿಯನ್ನರು ತಂದ ಕುರಿಗಳು, ಅಲ್ಲಿನ ಅಪರೂಪದ 'ಮಾಮನೆ' ಕಾಡನ್ನು ನಾಶಮಾಡಿದವು. ಈ ಪರಿಸರ ನಾಶದಿಂದ ಅಳಿವಿನಂಚಿನಲ್ಲಿರುವ 'ಪಲಿಲಾ' ಪಕ್ಷಿ ಸಂಕುಲಕ್ಕೆ ಅಪಾಯ ಎದುರಾಗಿದ್ದು, ದಶಕಗಳ ಸಂರಕ್ಷಣಾ ಪ್ರಯತ್ನಗಳ ನಂತರವೂ ಕಾಡು ತನ್ನ ಮೂಲ ವೈಭವವನ್ನು ಮರಳಿ ಪಡೆದಿಲ್ಲ.
Read Full Story

06:52 PM (IST) Aug 18

ಗಣೇಶೋತ್ಸವಕ್ಕೆ ದಾಖಲೆಯ ₹508 ಕೋಟಿ ವಿಮೆ - ಕಳೆದ ವರ್ಷಕ್ಕಿಂತ 34 ಕೋಟಿ ಹೆಚ್ಚು!

ದೇಶದ ಅತ್ಯಂತ ಶ್ರೀಮಂತ ಗಣೇಶ ಮಂಡಳಿಯಾದ ಮುಂಬೈನ 'ಜಿಎಸ್‍ಬಿ ಸೇವಾ ಮಂಡಳ' ಈ ಬಾರಿಯ ಗಣೇಶೋತ್ಸವಕ್ಕಾಗಿ ₹508 ಕೋಟಿ ಮೊತ್ತದ ದಾಖಲೆಯ ವಿಮೆ ಪಡೆಯಲು ಮುಂದಾಗಿದೆ. ಚಿನ್ನ ಮತ್ತು ಬೆಳ್ಳಿಯ ದರ ಏರಿಕೆಯಿಂದಾಗಿ ವಿಮಾ ಮೊತ್ತ ಹೆಚ್ಚಾಗಿದೆ.

Read Full Story

06:18 PM (IST) Aug 18

ಇಮ್ರಾನ್ ಖಾನ್ ತೀವ್ರ ಅನಾರೋಗ್ಯ, ಜೈಲಿನಿಂದ ತತ್‌ಕ್ಷಣ ಆಸ್ಪತ್ರೆಗೆ ಸೇರಿಸಲು ಸುಪ್ರೀಂ ಖಡಕ್ ಆದೇಶ!

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಜೈಲಿನಲ್ಲಿ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಅವರನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಲು ಆದೇಶಿಸಿದೆ. ಈ ಬೆಳವಣಿಗೆಯು ಪಾಕಿಸ್ತಾನದ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ಸರ್ಕಾರದ ವಿರುದ್ಧ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story

06:13 PM (IST) Aug 18

ಜಮೀನು, ಚಿನ್ನಾಭರಣ, ನಗದು ಎಲ್ಲಾ ಸೇರಿ 100 ಕೋಟಿ ಆಸ್ತಿ ಸರ್ಕಾರಕ್ಕೆ ಬರೆದು ಕೊಟ್ಟ ಡಾಕ್ಟರ್​

ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯ ವೈದ್ಯ ಡಾ. ರಾಜೇಂದ್ರ ಕನ್ವರ್ ಅವರು ತಮ್ಮ ಸುಮಾರು 100 ಕೋಟಿ ರೂ. ಮೌಲ್ಯದ ಸಂಪೂರ್ಣ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ದಾನ ಮಾಡಿದ್ದಾರೆ. ತಮ್ಮ ದಿವಂಗತ ಪತ್ನಿಯೊಂದಿಗೆ ಸೇರಿ ಸಂಪಾದಿಸಿದ ಈ ಆಸ್ತಿಯನ್ನು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಬಳಸಬೇಕೆಂದು ಅವರು ಬಯಸಿದ್ದು, ತಮ್ಮ ದೇಹವನ್ನೂ ವೈದ್ಯಕೀಯ ಸಂಶೋಧನೆಗೆ ದಾನ ಮಾಡಲು ನಿರ್ಧರಿಸಿದ್ದಾರೆ.
Read Full Story

05:52 PM (IST) Aug 18

ತಾಳಗುಪ್ಪ-ಬೆಂಗಳೂರು ಎಕ್ಸ್​ಪ್ರೆಸ್​ ಸೇರಿ ಕೆಲ ರೈಲು ಸಂಚಾರದಲ್ಲಿ ವ್ಯತ್ಯಯ- ಕೆಲವು ರದ್ದು; ಡಿಟೇಲ್ಸ್​ ಇಲ್ಲಿದೆ

ಮಲ್ಲಸಂದ್ರ ಮತ್ತು ಗುಬ್ಬಿ ನಡುವಿನ ಕಾಮಗಾರಿಯಿಂದಾಗಿ, ಆಗಸ್ಟ್ 19 ರಿಂದ 26 ರವರೆಗೆ ತಾಳಗುಪ್ಪ-ಬೆಂಗಳೂರು ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಇನ್ನು ಕೆಲವು ರೈಲುಗಳ ಸೇವೆಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.

Read Full Story

05:37 PM (IST) Aug 18

ರಾಜಸ್ಥಾನ ರಾಯಲ್ಸ್‌ಗೆ ಯಶಸ್ವಿ ಜೈಸ್ವಾಲ್ ಗುಡ್ ಬೈ? ಹಾರ್ದಿಕ್ ಪಾಂಡ್ಯ ಜೊತೆ ಬಿಗ್ ಟ್ರೇಡ್ ಡೀಲ್ ನಿಜಾನಾ?

ಐಪಿಎಲ್ 2027ಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ರಾಜಸ್ಥಾನ ರಾಯಲ್ಸ್ ತೊರೆಯುವ ಸಾಧ್ಯತೆಗಳಿದ್ದು, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಜೊತೆಗಿನ ಟ್ರೇಡ್ ಮಾತುಕತೆಗಳು ನಡೆಯುತ್ತಿವೆ. ಜೈಸ್ವಾಲ್ ಅವರ ನಡವಳಿಕೆ ಮತ್ತು ತಂಡದಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಅದ್ಭುತ ಪ್ರದರ್ಶನ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.
Read Full Story

05:08 PM (IST) Aug 18

ಡಾಕ್ಟರ್‌ಗಳಿಗೂ ದೋಸೆ ತಿನ್ನೋದು ಹೇಗೆ ಅಂತ ಹೇಳಿಕೊಟ್ಟ ವ್ಯಕ್ತಿ - ಫೋರ್ಕ್ ಬೇಡ, ಕೈಯೇ ಮೇಲು ಅಂದ್ರು ನೆಟ್ಟಿಗರು!

ದೋಸೆಯನ್ನು ಫೋರ್ಕ್ ಮತ್ತು ಚಮಚ ಬಳಸಿ ತಿನ್ನುವ ಶಿಷ್ಟಾಚಾರದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪಾಶ್ಚಿಮಾತ್ಯ ಅನುಕರಣೆಗೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಭಾರತೀಯ ಆಹಾರವನ್ನು ಕೈಯಿಂದ ತಿನ್ನುವುದರ ಮಹತ್ವ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
Read Full Story

05:02 PM (IST) Aug 18

Snake Repellent Plants - ಅಂಗಳದಲ್ಲಿ ಈ ಗಿಡಗಳನ್ನು ನೆಡಿ, ಮಳೆಗಾಲದಲ್ಲಿ ಹಾವುಗಳು ಮನೆಯ ಹತ್ತಿರಕ್ಕೂ ಸುಳಿಯಲ್ಲ!

ಮಳೆಗಾಲದಲ್ಲಿ ಹಾವುಗಳು ತಮ್ಮ ಬಿಲಗಳಿಂದ ಹೊರಬಂದು ಒಣ ಜಾಗಗಳನ್ನು ಹುಡುಕಿಕೊಂಡು ಮನೆಗಳತ್ತ ಬರುತ್ತವೆ. ಆದರೆ, ಮನೆಯ ಅಂಗಳದಲ್ಲಿ ಅಥವಾ ಹಿತ್ತಲಲ್ಲಿ ಕೆಲವು ವಿಶೇಷ ಗಿಡಗಳನ್ನು ಬೆಳೆಸುವುದರಿಂದ ಹಾವುಗಳು ಬರದಂತೆ ತಡೆಯಬಹುದು.

Read Full Story

04:56 PM (IST) Aug 18

16 ವರ್ಷ, 275 ಕೆಜಿ! ಸ್ಪೆಷಲ್ ಸರ್ಜರಿ ಮಾಡಿ ಬಾಲಕನಿಗೆ ಮರುಜೀವ ಕೊಟ್ಟ ದೆಹಲಿ ವೈದ್ಯರು

ದೆಹಲಿಯ ಸಿರ್ ಗಂಗಾರಾಮ್ ಆಸ್ಪತ್ರೆಯ ವೈದ್ಯರು ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯೊಂದನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಬರೋಬ್ಬರಿ 275 ಕೆಜಿ ತೂಕವಿದ್ದ 16 ವರ್ಷದ ಬಾಲಕನಿಗೆ 'ಬಾರಿಯಾಟ್ರಿಕ್ ಸರ್ಜರಿ' ಮಾಡುವ ಮೂಲಕ ಆತನ ಜೀವನದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

Read Full Story

04:27 PM (IST) Aug 18

ತಾಯಿಯ ಆರೈಕೆಗೆ ಭಾರತಕ್ಕೆ ಬಂದಿದ್ದೇ ತಪ್ಪಾಯ್ತಾ? 27 ವರ್ಷಗಳಿಂದ ಅಮೆರಿಕದಲ್ಲಿದ್ದ ಭಾರತೀಯ ಅಜ್ಜಿಯ ಬಂಧನ!

ಅಮೆರಿಕದಲ್ಲಿ 27 ವರ್ಷಗಳಿಂದ ಕಾನೂನುಬದ್ಧವಾಗಿ ವಾಸಿಸುತ್ತಿದ್ದ ಭಾರತೀಯ ಮೂಲದ ಗ್ರೀನ್ ಕಾರ್ಡ್‌ದಾರರಾದ ವೆಂಕಟ ನರಸಮಾಂಬ ವಾಸಮಸೆಟ್ಟಿ ಅವರನ್ನು, ಗಡೀಪಾರು ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದ್ದರೂ ಸಹ ICE ಅಧಿಕಾರಿಗಳು ಬಂಧಿಸಿದ್ದಾರೆ. ಈ ಅನಿರೀಕ್ಷಿತ ಬಂಧನವನ್ನು ವಿರೋಧಿಸಿರುವ ಅವರ ಕುಟುಂಬ, ತೀವ್ರ ಮಧುಮೇಹದಿಂದ ಬಳಲುತ್ತಿರುವ ಅವರ ತಕ್ಷಣದ ಬಿಡುಗಡೆಗಾಗಿ ಕಾನೂನು ಹೋರಾಟ ನಡೆಸುತ್ತಿದೆ.
Read Full Story

04:12 PM (IST) Aug 18

ಕಠಿಣ ಗುರಿ ಬೆನ್ನತ್ತಿರುವ ಶ್ರೀಲಂಕಾಗೆ ಬಿಗ್ ಶಾಕ್; ಮೊದಲ ಟೆಸ್ಟ್‌ ಮಧ್ಯದಲ್ಲೇ ಸ್ಟಾರ್ ಆಟಗಾರ ಔಟ್! ಹೊಸ ಆಟಗಾರನ ಎಂಟ್ರಿ

ಭಾರತ ವಿರುದ್ಧದ ಗಾಲೆ ಟೆಸ್ಟ್‌ನಲ್ಲಿ ಫೀಲ್ಡಿಂಗ್ ವೇಳೆ ಗಂಭೀರವಾಗಿ ಗಾಯಗೊಂಡ ಶ್ರೀಲಂಕಾದ ಅನುಭವಿ ಆಟಗಾರ ದಿನೇಶ್ ಚಂಡಿಮಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಪಂದ್ಯದಿಂದ ಹೊರಗುಳಿದಿದ್ದಾರೆ. ಈ ಪಂದ್ಯದಲ್ಲಿ ಭಾರತವು ಶ್ರೀಲಂಕಾಕ್ಕೆ ಗೆಲ್ಲಲು 372 ರನ್‌ಗಳ ಬೃಹತ್ ಗುರಿ ನೀಡಿದ್ದು, ಚಂಡಿಮಾಲ್ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
Read Full Story

03:51 PM (IST) Aug 18

ದಿವಾಳಿಯಾದ ಸ್ಪಿರಿಟ್ ಏರ್‌ಲೈನ್ಸ್ ಆಂತರಿಕ ಡೇಟಾ ಗೂಗಲ್ ಪಾಲು - AI ತರಬೇತಿಗೆ 10 ಮಿಲಿಯನ್ ಡಾಲರ್ ಡೀಲ್!

ದಿವಾಳಿಯಾದ ಅಮೆರಿಕದ ಸ್ಪಿರಿಟ್ ಏರ್‌ಲೈನ್ಸ್‌ನ ಆಂತರಿಕ ವ್ಯವಹಾರ ಡೇಟಾ ಮತ್ತು ತಂತ್ರಜ್ಞಾನ ಸ್ವತ್ತುಗಳನ್ನು ಗೂಗಲ್ $10 ಮಿಲಿಯನ್‌ಗೆ ಯಶಸ್ವಿಯಾಗಿ ಖರೀದಿಸಿದೆ. ತನ್ನ ಕೃತಕ ಬುದ್ಧಿಮತ್ತೆ (AI) ಮಾದರಿಗಳ ತರಬೇತಿಗಾಗಿ ಈ ಡೇಟಾವನ್ನು ಬಳಸಿಕೊಳ್ಳಲಿದ್ದು, ಪ್ರಯಾಣಿಕರ ವೈಯಕ್ತಿಕ ಗುರುತಿನ ಮಾಹಿತಿಯನ್ನು ಈ ಒಪ್ಪಂದದಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ.
Read Full Story

03:21 PM (IST) Aug 18

ರಾಹುಲ್ ಔಟ್ ಎಂದು ತೀರ್ಪು, ಪಡಿಕ್ಕಲ್ ಹೇಳಿದ ಒಂದೇ ಮಾತಿನಿಂದ ಬದಲಾಯ್ತು ನಿರ್ಧಾರ! ಹೆಲ್ಮೆಟ್‌ಗೆ ಮುತ್ತಿಟ್ಟು ಸಂಭ್ರಮಿಸಿದ ಕೆಎಲ್

ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂಪೈರ್ ಎಲ್‌ಬಿಡಬ್ಲ್ಯೂ ಔಟ್ ನೀಡಿದಾಗ ಕೆ.ಎಲ್. ರಾಹುಲ್ ಪೆವಿಲಿಯನ್‌ಗೆ ಹೆಜ್ಜೆ ಹಾಕುತ್ತಿದ್ದರು. ಆದರೆ, ನಾನ್-ಸ್ಟ್ರೈಕರ್‌ನಲ್ಲಿದ್ದ ದೇವದತ್ ಪಡಿಕ್ಕಲ್ ಅವರ ಒತ್ತಾಯದ ಮೇರೆಗೆ ಡಿಆರ್‌ಎಸ್ ತೆಗೆದುಕೊಂಡಾಗ, ರಾಹುಲ್ ನಾಟೌಟ್ ಎಂದು ಸಾಬೀತಾಯಿತು. ಈ ಚಾಣಾಕ್ಷತನದಿಂದ ವಿಕೆಟ್ ಉಳಿದ ಖುಷಿಯಲ್ಲಿ ರಾಹುಲ್, ಪಡಿಕ್ಕಲ್ ಹೆಲ್ಮೆಟ್‌ಗೆ ಮುತ್ತಿಕ್ಕಿ ಸಂಭ್ರಮಿಸಿದರು.
Read Full Story

03:15 PM (IST) Aug 18

ಕೀಟನಾಶಕದ ವಿರುದ್ಧ ನಿರೋಧಕ ಶಕ್ತಿ ಬೆಳೆಸಿಕೊಳ್ತಿರುವ ಡೆಂಗ್ಯೂ ಸೊಳ್ಳೆಗಳು, ದೆಹಲಿ ವಿವಿ ಅಧ್ಯಯನದ ಆತಂಕಕಾರಿ ಸತ್ಯ!

ದೆಹಲಿ ವಿಶ್ವವಿದ್ಯಾಲಯದ ಇತ್ತೀಚಿನ ಅಧ್ಯಯನವು, ಡೆಂಗ್ಯೂ ಹರಡುವ 'ಈಡಿಸ್ ಈಜಿಪ್ಟಿ' ಸೊಳ್ಳೆಗಳು 'ಆಲ್ಫಾ-ಸೈಪರ್ಮೆಥ್ರಿನ್' ಕೀಟನಾಶಕದ ವಿರುದ್ಧ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಿವೆ ಎಂದು ಬಹಿರಂಗಪಡಿಸಿದೆ. ಸೊಳ್ಳೆಗಳಲ್ಲಿನ 'ಬೀಟಾ-ಎಸ್ಟರೇಸ್' ನಂತಹ ಕಿಣ್ವಗಳು ಈ ನಿರೋಧಕ ಶಕ್ತಿಗೆ ಕಾರಣವಾಗಿದ್ದು, ಇದು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಸವಾಲನ್ನು ಒಡ್ಡಿದೆ.
Read Full Story

02:21 PM (IST) Aug 18

ಕಿಂಗ್ ಕೊಹ್ಲಿಯನ್ನೇ ಬ್ರೈನ್‌ವಾಷ್ ಮಾಡಿದ್ದ ಈ ನಾಲ್ವರು ಕ್ರಿಕೆಟಿಗರು! ಈತನ ಕಾಲಿಗೆ ಬೀಳಲು ಹೋದ ವಿರಾಟ್! ವಿಡಿಯೋ ವೈರಲ್

ಟೀಂ ಇಂಡಿಯಾಗೆ ಹೊಸದಾಗಿ ಬಂದಿದ್ದ ವಿರಾಟ್ ಕೊಹ್ಲಿಗೆ, ಯುವರಾಜ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ಪ್ರಾಂಕ್ ಮಾಡಿದ್ದರು. ತಂಡದ ಸಂಪ್ರದಾಯದಂತೆ ಸಚಿನ್ ತೆಂಡೂಲ್ಕರ್ ಅವರ ಕಾಲಿಗೆ ಬೀಳಬೇಕೆಂದು ಹೇಳಿದ್ದರು. ಆದರೆ, ಸಚಿನ್ ಅವರೇ ಇದು ತಮಾಷೆ ಎಂದು ಹೇಳಿದಾಗ ಕೊಹ್ಲಿಗೆ ಸತ್ಯ ತಿಳಿದಿತ್ತು.
Read Full Story

01:30 PM (IST) Aug 18

ಉಗ್ರ ಕಸಬ್​ನ ಕೊನೆಯ ಆಸೆ ಆ ಎರಡು ಟೊಮ್ಯಾಟೋ! ಅವನ ಜೊತೆಯೇ ಮಣ್ಣಾಯಿತು ಆ ವಿಚಿತ್ರ ರಹಸ್ಯ

2008ರ ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್‌ನನ್ನು 2012ರಲ್ಲಿ ಗಲ್ಲಿಗೇರಿಸಲಾಯಿತು. ಗಲ್ಲುಶಿಕ್ಷೆಗೂ ಮುನ್ನ ಆತ ತನ್ನ ಕೊನೆಯ ಆಸೆಯಾಗಿ ಟೊಮ್ಯಾಟೋ ತಿನ್ನಲು ಕೇಳಿದ್ದ. ಆದರೆ ಆತ ಟೊಮ್ಯಾಟೋವನ್ನೇ ಏಕೆ ಕೇಳಿದ ಎಂಬ ರಹಸ್ಯ ಮಾತ್ರ ಅವನ ಸಾವಿನೊಂದಿಗೆ ನಿಗೂಢವಾಗಿಯೇ ಉಳಿದಿದೆ.
Read Full Story

01:27 PM (IST) Aug 18

e-KYC Deadline - ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಗುಡ್‌ನ್ಯೂಸ್‌ ಕೊಟ್ಟ ಕೇಂದ್ರ ಸರ್ಕಾರ; ಈಗಲಾದರೂ ಎಚ್ಚೆತ್ತುಕೊಳ್ಳಿ!

LPG ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಅಡುಗೆ ಅನಿಲ e-KYC ಪೂರ್ತಿ ಮಾಡಲು ಈ ಹಿಂದೆ ನಿಗದಿ ಮಾಡಿದ್ದ ದಿನಾಂಕವನ್ನು ಆಗಸ್ಟ್ 23ರ ವರೆಗೂ ವಿಸ್ತರಣೆ ಮಾಡಿದೆ. ಆ ಮೂಲಕ ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದೆ.

Read Full Story

12:42 PM (IST) Aug 18

ಚಾಲಕನ ಮೇಲೆ 99 ವರ್ಷ 11 ತಿಂಗಳವರೆಗೆ ನಿಷೇಧ ಹೇರಿದ Rapido; ಪ್ರಯಾಣಿಕರ ಜೊತೆ ಜಗಳ

ಪ್ರಯಾಣಿಕರ ಜಾತಿ ನಿಂದನೆಗೆ ಆಕ್ಷೇಪ ವ್ಯಕ್ತಪಡಿಸಿದ ರಾಪಿಡೋ ಚಾಲಕ ಅಂಕಿತ್ ಕುಮಾರ್ ಅವರನ್ನು ಸಂಸ್ಥೆಯು ಸುಮಾರು 100 ವರ್ಷಗಳ ಕಾಲ ನಿಷೇಧಿಸಿದೆ. ತನ್ನ ಸ್ಪಷ್ಟನೆ ಪಡೆಯದೆ ಏಕಪಕ್ಷೀಯವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಚಾಲಕ ಆರೋಪಿಸಿದ್ದಾರೆ.

Read Full Story

12:36 PM (IST) Aug 18

ನಾರ್ಸಿಸಿಸ್ಟ್ ನಡವಳಿಕೆ ಅಂದ್ರೆ ಏನು? ಪುನೀತ್ ರಾಜ್‌ಕುಮಾರ್ ಜತೆ ವಿಭಿನ್ನ ಪಾತ್ರದಲ್ಲಿ ನಟಿಸಿದ್ದ ಈ ನಟಿ ಬ್ರೇಕ್‌ಅಪ್ ಮಾಡಿಕೊಂಡಿದ್ದೇಕೆ?

ಪುನೀತ್ ರಾಜ್‌ಕುಮಾರ್ ಜತೆ ನಟಸಾರ್ವಭೌಮ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ತಮ್ಮ ಬಾಯ್‌ಫ್ರೆಂಡ್ ಬಾಯ್‌ಫ್ರೆಂಡ್ ಒಬ್ಬ 'ನಾರ್ಸಿಸಿಸ್ಟ್' ಆಗಿದ್ದ, ಅದಕ್ಕೇ ಬ್ರೇಕಪ್ ಮಾಡಿಕೊಂಡೆ ಎಂದಿದ್ದರು.

Read Full Story

12:11 PM (IST) Aug 18

ಅಬಾರ್ಷನ್ ಮಾತ್ರೆ ಪರಿಣಾಮ ತಡೆಯಲು ಗೂಗಲ್ ಸರ್ಚ್, ತ್ವಿಷಾ ಶರ್ಮಾ ಅಂತಿಮ ಕ್ಷಣ ಬಹಿರಂಗ

ಅಬಾರ್ಷನ್ ಮಾತ್ರೆ ಪರಿಣಾಮ ತಡೆಯಲು ಏನು ಮಾಡಬೇಕು ಎಂದು ಗೂಗಲ್ ಮೂಲಕ ಸರ್ಚ್ ಮಾಡಿದ ತ್ವಿಷಾ ಶರ್ಮಾ ಕೊನೆಯ ಗಳಿಗೆಯಲ್ಲಿ ಕರೆಯೊಂದನ್ನು ಮಾಡಿದ್ದಾರೆ. ಪೋಷಕರ ಕರೆ ಮಾಡಿ ತ್ವಿಷಾ ಹೇಳಿದ್ದೇನು?

Read Full Story

12:08 PM (IST) Aug 18

Eating Momos - ಪೋಷಕರೇ ಹುಷಾರ್, ಮೊಮೊಸ್ ತಿಂದು ಇಬ್ಬರು ಶಾಲಾ ವಿದ್ಯಾರ್ಥಿಗಳ ಸಾವು

ಖಾಸಗಿ ವಸತಿ ಶಾಲೆಯ 8 ಮತ್ತು 12 ವರ್ಷದ ಇಬ್ಬರು ವಿದ್ಯಾರ್ಥಿಗಳು ಮೊಮೊಸ್ ತಿಂದ ನಂತರ ಸಾವನ್ನಪ್ಪಿದ್ದಾರೆ. ಚಟ್ನಿಯೊಂದಿಗೆ ಮೊಮೊಸ್ ಸೇವಿಸಿದ ಕೆಲವೇ ಗಂಟೆಗಳಲ್ಲಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದು, ಆಹಾರ ವಿಷಪ್ರಾಶನದಿಂದ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

Read Full Story

11:08 AM (IST) Aug 18

ರಾಮನಗರದಲ್ಲಿ ಗ್ರಾಮಕ್ಕೆ ನುಗ್ಗಿ ಕುದುರೆ ಹೊಯ್ತೊಯ್ದ ಹುಲಿ, ಜನರ ಕಣ್ಣಮುಂದೆ ನಡೆಯಿತು ಘಟನೆ

ಬೆಳಗ್ಗೆ ಜನರು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿರುವ ನಡುವೆ ಗ್ರಾಮಕ್ಕೆ ನುಗ್ಗಿದ ಹುಲಿ, ಕುದುರೆಯನ್ನೇ ಹೊತ್ತೊಯ್ದ ಘಟನೆ ನಡೆದಿದೆ. ಜನರು ಚೀರಾಡಿದರೂ ಹುಲಿ ದೈತ್ಯ ಕುದುರೆಯನ್ನೇ ಕಾಡಿಗೆ ಎಳೆದೊಯ್ದ ಘಟನೆ ಮೊಬೈಲ್‌ನಲ್ಲಿ ಸೆರೆಯಾಗಿದೆ.

Read Full Story

10:29 AM (IST) Aug 18

ಮಾಜಿ ಪ್ರೇಯಸಿ ರೇ*ಪ್ ಮಾಡಿ ಕೊಲ್ಲಲು ಚಾಟ್‌ಜಿಪಿಟಿ ಬಳಿ ಐಡಿಯಾ ಕೇಳಿದ ಬಾಯ್‌ಫ್ರೆಂಡ್! ಆಮೇಲೆ ಆಗಿದ್ದೇನು?

ಮಾಜಿ ಪ್ರೇಯಸಿಯ ಮೇಲೆ ಅ*ತ್ಯಾ*ಚಾ*ರ ಮತ್ತು ಕೊಲೆ ಮಾಡಲು ಚಾಟ್‌ಜಿಪಿಟಿಯಲ್ಲಿ ಐಡಿಯಾ ಕೇಳಿದ ಫ್ಲೋರಿಡಾದ ಯುವಕನನ್ನು OpenAI ಕಂಪನಿಯೇ ಪೊಲೀಸರಿಗೆ ಹಿಡಿದುಕೊಟ್ಟಿದೆ. ಈ ಸಂಭಾಷಣೆಯ ಅಪಾಯವನ್ನು ಅರಿತ ಕಂಪನಿ ಎಫ್‌ಬಿಐಗೆ ಮಾಹಿತಿ ನೀಡಿದ್ದರಿಂದ, ಆರೋಪಿಯನ್ನು ಬಂಧಿಸಿ ಎಂಟು ವರ್ಷಗಳ ಪ್ರೊಬೇಷನ್ ಶಿಕ್ಷೆ ವಿಧಿಸಲಾಗಿದೆ.

Read Full Story

09:18 AM (IST) Aug 18

ಬ್ರಹ್ಮೋಸ್‌ ಹಾರಿಸಿ ತೃಪ್ತಿ ಆಗಿದ್ರೆ ದಾಳಿ ನಿಲ್ಸಿ - ಭಾರತದ ಮುಂದೆ ಅಂಗಲಾಚಿದ್ದ ಪಾಕ್‌

'ಆಪರೇಷನ್‌ ಸಿಂದೂರ' ಕಾರ್ಯಾಚರಣೆಯ ವೇಳೆ ಭಾರತದ ಬ್ರಹ್ಮೋಸ್‌ ಕ್ಷಿಪಣಿ ದಾಳಿಗೆ ತತ್ತರಿಸಿದ ಪಾಕಿಸ್ತಾನ, ದಾಳಿ ನಿಲ್ಲಿಸುವಂತೆ ಅಂಗಲಾಚಿದೆ. ಭಾರತದ ದಾಳಿಯಿಂದಾದ ಹಾನಿಗೆ ತೃಪ್ತರಾಗಿದ್ದರೆ ಕದನವಿರಾಮ ಘೋಷಿಸಿ ಎಂದು ಪಾಕ್‌ನ ಡಿಜಿಎಂಒ ಹಾಟ್‌ಲೈನ್‌ನಲ್ಲಿ ಮನವಿ ಮಾಡಿಕೊಂಡಿದ್ದರು ಎಂಬ ವಿಷಯ ಸಾಕ್ಷ್ಯಚಿತ್ರವೊಂದರಿಂದ ಬಹಿರಂಗವಾಗಿದೆ.
Read Full Story

09:15 AM (IST) Aug 18

ವಿಶ್ವ ನಂ.1 ಶಿ ಯುಖಿಗೆ ಶಾಕ್ ಕೊಟ್ಟ ಕನ್ನಡಿಗ ಆಯುಷ್ ಶೆಟ್ಟಿ - BWF ವಿಶ್ವ ಚಾಂಪಿಯನ್‌ಶಿಪ್ 2ನೇ ಸುತ್ತಿಗೆ ಎಂಟ್ರಿ

ಕರ್ನಾಟಕದ ಯುವ ಆಟಗಾರ ಆಯುಷ್ ಶೆಟ್ಟಿ, ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವದ ನಂ.1 ಆಟಗಾರ ಶಿ ಯುಖಿ ಅವರನ್ನು ಸೋಲಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಇದರೊಂದಿಗೆ ಪಿ.ವಿ. ಸಿಂಧು ಮತ್ತು ಇತರ ಭಾರತೀಯ ಡಬಲ್ಸ್ ಜೋಡಿಗಳು ಸಹ ತಮ್ಮ ಮೊದಲ ಸುತ್ತಿನ ಪಂದ್ಯಗಳಲ್ಲಿ ಜಯ ಸಾಧಿಸಿವೆ.
Read Full Story

08:49 AM (IST) Aug 18

ಗಾಲೆ ಟೆಸ್ಟ್‌ನಲ್ಲಿ ಭಾರತದ ದರ್ಬಾರ್ - ಲಂಕಾ 284ಕ್ಕೆ ಆಲೌಟ್, ಟೀಂ ಇಂಡಿಯಾಗೆ 178 ರನ್‌ಗಳ ಭರ್ಜರಿ ಲೀಡ್

ಗಾಲೆ ಟೆಸ್ಟ್‌ನಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 462 ರನ್ ಗಳಿಸಿ ಶ್ರೀಲಂಕಾ ವಿರುದ್ಧ ಬೃಹತ್ ಮುನ್ನಡೆ ಸಾಧಿಸಿದೆ. ಸೋನಲ್ ದಿನುಶಾ ಅವರ ಶತಕದ ಹೊರತಾಗಿಯೂ, ಮಾನವ್ ಸುತಾರ್ (4 ವಿಕೆಟ್) ಮತ್ತು ರವೀಂದ್ರ ಜಡೇಜಾ (3 ವಿಕೆಟ್) ಅವರ ಮಾರಕ ಬೌಲಿಂಗ್‌ಗೆ ಲಂಕಾ 284 ರನ್‌ಗಳಿಗೆ ಕುಸಿದು 178 ರನ್‌ಗಳ ಹಿನ್ನಡೆಯಲ್ಲಿದೆ.
Read Full Story

08:34 AM (IST) Aug 18

Latte Factor - ದಿನಕ್ಕೆ ₹100ರ ಲೆಕ್ಕ, ಕೋಟಿ ಗಳಿಕೆ ಪಕ್ಕಾ; ಕೋಟ್ಯಧಿಪತಿಯಾಗೋ ಟಿಪ್ಸ್

ದಿನನಿತ್ಯದ ಸಣ್ಣಪುಟ್ಟ ಖರ್ಚುಗಳಾದ 'ಲ್ಯಾಟೆ ಫ್ಯಾಕ್ಟರ್' ನಮ್ಮ ಗಮನಕ್ಕೆ ಬಾರದೆ ದೊಡ್ಡ ಮೊತ್ತವನ್ನು ಕಸಿದುಕೊಳ್ಳುತ್ತದೆ. ದಿನಕ್ಕೆ ₹100 ಉಳಿಸಿ ಅದನ್ನು ಶಿಸ್ತುಬದ್ಧವಾಗಿ ಹೂಡಿಕೆ ಮಾಡಿದರೆ, ದೀರ್ಘಾವಧಿಯಲ್ಲಿ ಚಕ್ರಬಡ್ಡಿಯ ಶಕ್ತಿಯಿಂದ ಕೋಟ್ಯಂತರ ರೂಪಾಯಿ ಸಂಪತ್ತನ್ನು ಸೃಷ್ಟಿಸಬಹುದು.
Read Full Story

07:06 AM (IST) Aug 18

ಚಿಕಿತ್ಸೆ ಸಿಗದೆ ಗರ್ಭಿಣಿ ಪತ್ನಿ ಸಾವು - ಗ್ರಾಮಕ್ಕೆ ರಸ್ತೆ ನಿರ್ಮಿಸಿದ ಪತಿ

ರಸ್ತೆ ಇಲ್ಲದ ಕಾರಣ ಚಿಕಿತ್ಸೆ ಸಿಗದೆ ಗರ್ಭಿಣಿ ಪತ್ನಿ ಮೃತಪಟ್ಟಿದ್ದರಿಂದ ನೊಂದ ಪತಿ ತುಳಸಿರಾಮ್ ಗೆಡಮ್, ಗ್ರಾಮಸ್ಥರ ನೆರವಿನಿಂದ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತನ್ನ ಪತ್ನಿಗಾದ ದುರ್ಗತಿ ಬೇರೆಯವರಿಗೆ ಬರಬಾರದೆಂಬ ಉದ್ದೇಶದಿಂದ ಅವರು ಈ ಕಾರ್ಯಕ್ಕೆ ಕೈಹಾಕಿದ್ದಾರೆ.

Read Full Story

05:58 AM (IST) Aug 18

ಬಿಜೆಪಿಗೆ 65 ಪದಾಧಿಕಾರಿಗಳ ಹೊಸ ರಾಷ್ಟ್ರೀಯ ತಂಡ ಪ್ರಕಟಿಸಿದ ಅಧ್ಯಕ್ಷ ನಿತಿನ್‌ ನವೀನ್‌

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌ ಅವರು 65 ಪದಾಧಿಕಾರಿಗಳ ಹೊಸ ರಾಷ್ಟ್ರೀಯ ತಂಡವನ್ನು ಪ್ರಕಟಿಸಿದ್ದಾರೆ. 2029ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ರಚಿಸಲಾದ ಈ ತಂಡದಲ್ಲಿ 51 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದ್ದು, ತೇಜಸ್ವಿ ಸೂರ್ಯ, ಅಮಿತ್ ಮಾಳವೀಯರಂತಹವರನ್ನು ಕೈಬಿಟ್ಟು ಸ್ಮೃತಿ ಇರಾನಿ, ರಾಮ್‌ಮಾಧವ್‌ಗೆ ಮಹತ್ವದ ಸ್ಥಾನ ನೀಡಲಾಗಿದೆ.
Read Full Story

More Trending News