LIVE NOW
Published : Jul 16, 2026, 07:21 AM ISTUpdated : Jul 16, 2026, 11:14 PM IST

India Latest News Live: Breaking - NEET-UG 2026 ಫಲಿತಾಂಶ ಪ್ರಕಟಿಸಿದ NTA, 11.21 ಲಕ್ಷ ವಿದ್ಯಾರ್ಥಿಗಳ ಅರ್ಹತೆ

ಸಾರಾಂಶ

ನವದೆಹಲಿ: ಜು.20ರಿಂದ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೆ ಸ್ಮಾರ್ಟ್‌ ವಾಚ್, ಸ್ಮಾರ್ಟ್‌ ಕನ್ನಡಕ ಅಥವಾ ಪೆನ್‌ ಕ್ಯಾಮರಾಗಳನ್ನು ಧರಿಸಿ ಬರದಂತೆ ಸಂಸದರಿಗೆ ಲೋಕಸಭೆ ಬುಧವಾರ ಸೂಚನೆ ನೀಡಿದೆ.

‘ಇಂಥ ಸಾಧನಗಳು ಇತರ ಸದಸ್ಯರ ಗೌಪ್ಯತೆಗೆ ಧಕ್ಕೆ ತರಬಹುದು ಅಥವಾ ಭದ್ರತಾ ಕಳವಳಗಳನ್ನು ಹುಟ್ಟುಹಾಕಬಹುದು. ಹೀಗಾಗಿ ಸಂಸತ್ ಆವರಣದ ಯಾವುದೇ ಭಾಗದಲ್ಲಿ ಸದಸ್ಯರ ಭದ್ರತೆ, ವಿಶೇಷಾಧಿಕಾರಗಳು ಮತ್ತು ಗೌಪ್ಯತೆಗೆ ಧಕ್ಕೆ ತರುವ ರೀತಿಯಲ್ಲಿ ಅಂತಹ ಸಾಧನಗಳನ್ನು ಬಳಸಬೇಡಿ’ ಎಂದು ಲೋಕಸಭೆಯ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದೆ.

11:14 PM (IST) Jul 16

Breaking - NEET-UG 2026 ಫಲಿತಾಂಶ ಪ್ರಕಟಿಸಿದ NTA, 11.21 ಲಕ್ಷ ವಿದ್ಯಾರ್ಥಿಗಳ ಅರ್ಹತೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಜೂನ್ 21ರಂದು ನಡೆಸಿದ ರೀ-ನೀಟ್ ಯುಜಿ 2026 ಮರುಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, 11.21 ಲಕ್ಷ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಈ ಮರುಪರೀಕ್ಷೆ ನಡೆದಿತ್ತು.

Read Full Story

10:17 PM (IST) Jul 16

ಸಿನಿಮಾದಲ್ಲಿ ಕುಳ್ಳಗಿರುವ ಹೀರೋಗಳು ಎತ್ತರವಾಗಿ ಕಾಣೋದು ಹೇಗೆ? ಈ ರಹಸ್ಯ ಗೊತ್ತಾ?

ಎಲ್ಲಾ ಸ್ಟಾರ್ ನಟರ ಹೈಟ್ ಒಂದೇ ರೀತಿ ಇರಲ್ಲ. ಕೆಲವರು ಎತ್ತರ ಇದ್ರೆ, ಇನ್ನು ಕೆಲವರು ಸ್ವಲ್ಪ ಕುಳ್ಳಗಿರುತ್ತಾರೆ. ಹಾಗಾದ್ರೆ ಸಿನಿಮಾಗಳಲ್ಲಿ ಇವರ ಎತ್ತರವನ್ನು ಹೇಗೆ ಮ್ಯಾನೇಜ್ ಮಾಡ್ತಾರೆ ಗೊತ್ತಾ? ಕುಳ್ಳಗಿರುವ ನಟರನ್ನು ಸ್ವಲ್ಪ ಎತ್ತರವಾಗಿ ತೋರಿಸಲು ಏನು ಬಳಸುತ್ತಾರೆ?

Read Full Story

10:01 PM (IST) Jul 16

'ಹೊಸ E20 ಕಾರು ನೀಡಿ, ಇಲ್ಲವೇ 21 ಲಕ್ಷ ವಾಪಾಸ್‌ ಮಾಡಿ..' ಗ್ರಾಹಕ ಕೋರ್ಟ್‌ ತೀರ್ಪಿಗೆ ಮಾರುತಿ ಸುಜುಕಿ ಕಂಗಾಲು!

ಹೊಸ ಮಾರುತಿ ಗ್ರಾಂಡ್ ವಿಟಾರಾ ಕಾರು ಇ-20 ಇಂಧನದಿಂದ ಪದೇ ಪದೇ ಕೈಕೊಟ್ಟ ಕಾರಣ, ಗ್ರಾಹಕನಿಗೆ ಹೊಸ ಕಾರು ನೀಡಿ ಅಥವಾ ₹20.50 ಲಕ್ಷ ಹಣವನ್ನು ಮರಳಿಸುವಂತೆ ರಾಯ್‌ಪುರ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.

Read Full Story

08:47 PM (IST) Jul 16

150 ಅಡಿಯಿಂದ ಜಿಗಿತ, 30 ನಿಮಿಷ ನೇತಾಟ - 'ರಾವಣ್' ಶೂಟಿಂಗ್‌ನ ಭಯಾನಕ ಸತ್ಯ ಬಿಚ್ಚಿಟ್ಟ ಐಶ್ವರ್ಯಾ ರೈ ಡ್ಯೂಪ್!

2010ರಲ್ಲಿ ತೆರೆಕಂಡ ಐಶ್ವರ್ಯಾ ರೈ ಬಚ್ಚನ್ ಅವರ 'ರಾವಣ್' ಸಿನಿಮಾ ಇವತ್ತಿಗೂ ಅದರ ಅದ್ಭುತ ದೃಶ್ಯಗಳು ಮತ್ತು ಅಪಾಯಕಾರಿ ಆಕ್ಷನ್ ಸೀಕ್ವೆನ್ಸ್‌ಗಳಿಂದ ನೆನಪಲ್ಲಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಒಂದು ಸ್ಟಂಟ್ ಇತ್ತು.

Read Full Story

08:33 PM (IST) Jul 16

ವಾಲ್‌ ರೆಕಾರ್ಡ್‌ ಬ್ರೇಕ್‌ ಮಾಡಿ ಇಂಗ್ಲೆಂಡ್‌ ನೆಲದಲ್ಲಿ ಹೊಸ ಇತಿಹಾಸ ರಚಿಸಿದ ವಿರಾಟ್‌ ಕೊಹ್ಲಿ

ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮುರಿದು ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

Read Full Story

08:17 PM (IST) Jul 16

15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಸ್ಟಾರ್ ಜೋಡಿ - ಮಗಳಿಗಾಗಿ ಒಂದಾಗಿಯೇ ಇರ್ತಾರಂತೆ!

Adinath Urmila Separation: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಆದಿನಾಥ್ ಕೊಠಾರೆ ಮತ್ತು ಅವರ ಪತ್ನಿ, ನಟಿ ಊರ್ಮಿಳಾ ಕಾನಿಟ್ಕರ್ ತಮ್ಮ 15 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ.

Read Full Story

08:07 PM (IST) Jul 16

2ನೇ ಕ್ಲಾಸ್‌ ಹಿಂದೂ ಮಗುವಿಗೆ ಇಸ್ಲಾಮಿಕ್ 'ಕಲ್ಮಾ' ಹೋಮ್‌ವರ್ಕ್; ಶಾಲೆಯ ವಿರುದ್ಧ ಭುಗಿಲೆದ್ದ ಆಕ್ರೋಶ!

ಹೈದರಾಬಾದ್‌ನ ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿಗೆ ಇಸ್ಲಾಮಿಕ್ ಪ್ರಾರ್ಥನೆಯನ್ನು ಹೋಮ್‌ವರ್ಕ್ ಆಗಿ ನೀಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ನಾಯಕಿ ಮಾಧವಿ ಲತಾ, ಇದು ಧಾರ್ಮಿಕ ಹೇರಿಕೆ ಎಂದು ಆರೋಪಿಸಿದ್ದಾರೆ.

Read Full Story

07:58 PM (IST) Jul 16

'ಶೌಚಾಲಯ ಬಳಸಬಹುದಾ' ಕೇಳಿದ್ದೇ ತಪ್ಪಾಯ್ತು - ಗಿಗ್​ ವರ್ಕ್​ರ್​ಗೆ 5 ದಿನ ಕೆಲಸ ಸಿಗದಂತೆ ಮಾಡಿದ ಆ 'ಶ್ರೀಮಂತ'

ಮೂರು ಗಂಟೆಗಳ ಕಾಲ ಕೆಲಸ ಮಾಡಿದ ನಂತರ ಶೌಚಾಲಯ ಬಳಸಲು ಕೇಳಿದ ಗಿಗ್ ವರ್ಕರ್‌ಗೆ ಗ್ರಾಹಕರೊಬ್ಬರು ಅನುಮತಿ ನಿರಾಕರಿಸಿದ್ದಾರೆ. ಇದೇ ಕಾರಣಕ್ಕೆ ಕಳಪೆ ರೇಟಿಂಗ್ ನೀಡಿ, ಆಕೆಗೆ ಐದು ದಿನಗಳ ಕಾಲ ಕೆಲಸ ಸಿಗದಂತೆ ಮಾಡಿದ್ದಾರೆ. ಈ ಅಮಾನವೀಯ ಘಟನೆಯ ವಿಡಿಯೋ ವೈರಲ್ ಆಗಿದ್ದು, ಗಿಗ್ ವರ್ಕರ್‌ಗಳ ಸ್ಥಿತಿಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
Read Full Story

07:37 PM (IST) Jul 16

ರೈಲು ಲೇಟಾದ್ರೆ ನಿಮ್ಮ ಹಣ ವಾಪಸ್​ - ಎಷ್ಟು ವಿಳಂಬ, ದುಡ್ಡು ಪಡೆಯೋದು ಹೇಗೆ? ಫುಲ್​ ಡಿಟೇಲ್ಸ್​ ಇಲ್ಲಿದೆ

ನಿಮ್ಮ ರೈಲು  ವಿಳಂಬವಾದರೆ, ನೀವು ಪ್ರಯಾಣಿಸದಿರಲು ನಿರ್ಧರಿಸಿದಲ್ಲಿ ಪೂರ್ಣ ಟಿಕೆಟ್ ಮರುಪಾವತಿ ಪಡೆಯಬಹುದು. ಇದಕ್ಕಾಗಿ, ಆನ್‌ಲೈನ್ ಟಿಕೆಟ್‌ಗಳಿಗೆ TDR ಸಲ್ಲಿಸುವುದು ಮತ್ತು ಕೌಂಟರ್ ಟಿಕೆಟ್‌ಗಳನ್ನು ನಿಲ್ದಾಣದಲ್ಲಿ ರದ್ದುಗೊಳಿಸುವುದು ಸೇರಿದಂತೆ ಸರಿಯಾದ ಕಾರ್ಯವಿಧಾನ ಅನುಸರಣೆ ಕಡ್ಡಾಯವಾಗಿದೆ.

Read Full Story

07:24 PM (IST) Jul 16

ಗಗನಯಾನಕ್ಕೆ ಸಿದ್ಧತೆ ಮಾಡುವಾಗಲೇ ಇಸ್ರೋದಲ್ಲಿ ಬಿಕ್ಕಟ್ಟು; ಬಾಹ್ಯಾಕಾಶ ಸಂಸ್ಥೆ ತೊರೆದ 100ಕ್ಕೂ ಅಧಿಕ ವಿಜ್ಞಾನಿಗಳು!

ಗಗನಯಾನದಂತಹ ರಾಷ್ಟ್ರೀಯ ಯೋಜನೆಗಳಲ್ಲಿ ತೊಡಗಿದ್ದ ನೂರಕ್ಕೂ ಹೆಚ್ಚು ಅನುಭವಿ ವಿಜ್ಞಾನಿಗಳು ಇಸ್ರೋವನ್ನು ತೊರೆದಿದ್ದಾರೆ. ಈ ಸಾಮೂಹಿಕ ನಿರ್ಗಮನದಿಂದ ಉಂಟಾಗಬಹುದಾದ ಹಿನ್ನಡೆಯನ್ನು ತಡೆಯಲು, ಕೇಂದ್ರ ಬಾಹ್ಯಾಕಾಶ ಇಲಾಖೆಯು ವಿಜ್ಞಾನಿಗಳ ರಾಜೀನಾಮೆ ಮತ್ತು ಸ್ವಯಂ ನಿವೃತ್ತಿ ನಿಯಮಗಳನ್ನು ಕಠಿಣಗೊಳಿಸಿದೆ.

Read Full Story

07:24 PM (IST) Jul 16

ಹೆಗಲು ಶಸ್ತ್ರಚಿಕಿತ್ಸೆ ಯಶಸ್ವಿ - ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಪವನ್ ಕಲ್ಯಾಣ್, ಪತ್ನಿ ಭಾವುಕ ಪೋಸ್ಟ್

ಪವನ್ ಕಲ್ಯಾಣ್ ಅವರ ಬಲ ಹೆಗಲಿಗೆ ಮುಂಬೈನಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ಇದೀಗ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರ ಪತ್ನಿ ಅನ್ನಾ ಕೊನಿಡಾಲ, ವೈದ್ಯರ 'ಅಸಾಧಾರಣ ಆರೈಕೆ' ಮತ್ತು ವೃತ್ತಿಪರತೆಗೆ ಮನದುಂಬಿ ಕೃತಜ್ಞತೆ ಸಲ್ಲಿಸಿದ್ದಾರೆ.

Read Full Story

06:49 PM (IST) Jul 16

ಅಕ್ರಮ ಒತ್ತುವರಿಗೆ ಬುಲ್ಡೋಜರ್ ಕ್ರಮ ಸರಿ ಎಂದ ಸುಪ್ರೀಂ ಕೋರ್ಟ್, ಸರ್ಕಾರ ನಡೆ ಕುರಿತು ಮಹತ್ವದ ಆದೇಶ

ಭೂ ಒತ್ತುವರಿ, ಅಕ್ರಮ ಕಟ್ಟಡ ನಿರ್ಮಾಣ, ಭ್ರಷ್ಟಾಚಾರ ಮೂಲಕ ನಿಯಮ ಉಲ್ಲಂಘಿಸುವ ವಿರುದ್ಧ ಬುಲ್ಡೋಜರ್ ಕ್ರಮ ಎಂದು ಸುಪ್ರೀಂ ಕೋರ್ಟ್ ಸರ್ಕಾರದ ನಿರ್ಧಾರ ಅನಿವಾರ್ಯ ಎಂದಿದೆ. ಇದೇ ವೇಳೆ ಜಾಮೀಯಾ ಉಲೇಮಾ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ನಿರಾಕರಿಸಿದೆ.

Read Full Story

06:38 PM (IST) Jul 16

ಲಂಡನ್‌ನಲ್ಲಿ 'ರಾಗಿಣಿ' ಅವತಾರ ತಾಳಿದ ನಟಿ ತಮನ್ನಾ - ಭಯದ ಹೊಸ ಅಧ್ಯಾಯ ಶುರು

ನಟಿ ತಮನ್ನಾ ಭಾಟಿಯಾ ಅವರು 'ರಾಗಿಣಿ 3' ಹಾರರ್ ಸಿನಿಮಾದ ಶೂಟಿಂಗ್ ಶುರು ಮಾಡಿದ್ದಾರೆ. ಲಂಡನ್‌ನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಬಾಲಾಜಿ ಮೋಷನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಶಶಾಂಕ ಘೋಶ್ ನಿರ್ದೇಶಿಸುತ್ತಿದ್ದಾರೆ.

Read Full Story

06:37 PM (IST) Jul 16

2027ರ ಏಕದಿನ ವಿಶ್ವಕಪ್‌ನಿಂದ ಈ ಸ್ಟಾರ್ ಆಟಗಾರ ಔಟ್?; ಬದಲಿ ಆಟಗಾರನ ಹುಡುಕಾಟದಲ್ಲಿ ಟೀಮ್ ಇಂಡಿಯಾ!

2027ರ ಏಕದಿನ ವಿಶ್ವಕಪ್‌ಗೆ ಟೀಮ್ ಇಂಡಿಯಾ ಸಿದ್ಧತೆ ನಡೆಸುತ್ತಿದ್ದು, ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾದ ಪರಿಸ್ಥಿತಿಗಳಿಗೆ ತಕ್ಕಂತೆ ವೇಗದ ಬೌಲಿಂಗ್ ಆಲ್‌ರೌಂಡರ್‌ಗಳಿಗೆ ಮ್ಯಾನೇಜ್‌ಮೆಂಟ್ ಆದ್ಯತೆ ನೀಡಲಿದೆ.

Read Full Story

06:22 PM (IST) Jul 16

ಸೆಟ್‌ನಲ್ಲೇ ಕಣ್ಣೀರಿಟ್ಟ ಕತ್ರಿನಾ ಕೈಫ್ - ಸಲ್ಮಾನ್ ಖಾನ್ ನೀಡಿದ ಧೈರ್ಯ ಹೇಗೆ ಬದುಕು ಬದಲಿಸಿತು?

ಬಾಲಿವುಡ್‌ನ ಟಾಪ್ ನಟಿಯಾಗುವ ಮುನ್ನ ಕತ್ರಿನಾ ಕೈಫ್ ತಮ್ಮ ಮೊದಲ ಪ್ರಮುಖ ಸಿನಿಮಾ 'ಸಾಯಾ'ದಿಂದ ಹೊರಬಿದ್ದಾಗ ದೊಡ್ಡ ಆಘಾತ ಎದುರಿಸಿದ್ದರು. ಆ ನೋವಿನ ನಂತರ ಸಲ್ಮಾನ್ ಖಾನ್ ನೀಡಿದ ಧೈರ್ಯ ಮತ್ತು ಸ್ಪೂರ್ತಿದಾಯಕ ಕಮ್‌ಬ್ಯಾಕ್ ಕಥೆ ಇಲ್ಲಿದೆ.

Read Full Story

06:20 PM (IST) Jul 16

ವಿಶ್ವದ ಅತಿ ಉದ್ದನೆ ನಾಯಿ - ರಾತ್ರೋರಾತ್ರಿ ವರ್ಲ್ಡ್​ ಫೇಮಸ್ಸಾದ 'ಆಸ್ಕರ್'ನ ರೋಚಕ ಸ್ಟೋರಿ ಇಲ್ಲಿದೆ

ಕ್ಯಾಲಿಫೋರ್ನಿಯಾದ ಆಸ್ಕರ್ ವೈಲ್ಡ್ ಎಂಬ ಡ್ಯಾಷ್‌ಹಂಡ್ ನಾಯಿ ತನ್ನ ಅಸಾಧಾರಣ ಎತ್ತರದಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತನ್ನ ಫೋಟೋಗಳಿಂದ ರಾತ್ರೋರಾತ್ರಿ ಜಗದ್ವಿಖ್ಯಾತಿ ಪಡೆದ ಈ ನಾಯಿ, 'ಅತಿ ಎತ್ತರದ ಡ್ಯಾಷ್‌ಹಂಡ್' ಪ್ರಶಸ್ತಿಯನ್ನೂ ಗೆದ್ದುಕೊಂಡಿದೆ.
Read Full Story

06:20 PM (IST) Jul 16

ಪಂಢರಪುರ ವಿಠ್ಠಲನಿಗೆ ಭಾರೀ ಮೌಲ್ಯದ ಚಿನ್ನದ ಪಾದುಕೆ ಕಾಣಿಕೆ ನೀಡಿದ ಅನಾಮಧೇಯ ಭಕ್ತ!

ಪಂಢರಪುರದ ಶ್ರೀ ವಿಠ್ಠಲನ ಪಾದಗಳ ಸವೆತವನ್ನು ತಡೆಯಲು, ಅನಾಮಧೇಯ ಭಕ್ತರೊಬ್ಬರು ಅರ್ಧ ಕೆಜಿ ತೂಕದ ಚಿನ್ನದ ಪಾದುಕೆಗಳನ್ನು ದಾನ ಮಾಡಿದ್ದಾರೆ. ತಮ್ಮ ಹೆಸರನ್ನು ಗೌಪ್ಯವಾಗಿಡಲು ಕೋರಿರುವ ಈ ಭಕ್ತರ ಕಾಣಿಕೆಯನ್ನು, ವಿಶೇಷ ಹಬ್ಬಗಳಂದು ದೇವರ ಪಾದಗಳಿಗೆ ತೊಡಿಸಲು ಮಂದಿರ ಸಮಿತಿ ನಿರ್ಧರಿಸಿದೆ.
Read Full Story

06:09 PM (IST) Jul 16

ಮದ್ವೆಗಾಗಿ ಮ್ಯಾಟ್ರಿಮೊನಿ ಸೈಟ್ಸ್​ ಓಪನ್​ ಮಾಡುವಿರಾ? ಮುಂದಿನ ಬಲಿಪಶು ನೀವೇ ಆಗ್ಬೋದು ಹುಷಾರ್​- ಸರ್ಕಾರದ ಎಚ್ಚರಿಕೆ

ಆನ್‌ಲೈನ್ ವೈವಾಹಿಕ ಸೈಟ್‌ಗಳಲ್ಲಿ ಸೈಬರ್ ಅಪರಾಧಿಗಳು ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಿ, ಮದುವೆಯ ಭರವಸೆ ನೀಡಿ ಹಣ ವಂಚಿಸುತ್ತಿದ್ದಾರೆ. ಈ ವಂಚನೆಯ ಕಾರ್ಯವಿಧಾನ, ಇತ್ತೀಚಿನ ಪ್ರಕರಣಗಳು ಮತ್ತು ವಂಚಕರನ್ನು ಗುರುತಿಸುವ ಪ್ರಮುಖ ಚಿಹ್ನೆಗಳ ಬಗ್ಗೆ ಈ ಲೇಖನವು ಎಚ್ಚರಿಸುತ್ತದೆ.
Read Full Story

06:02 PM (IST) Jul 16

'ಜನ ನಾಯಗನ್'ಗಾಗಿ ದಾರಿ ಬಿಟ್ಟ ಎರಡು ಸಿನಿಮಾಗಳು - ದಳಪತಿ ವಿಜಯ್ ಕ್ರೇಜ್‌ಗೆ ತಲೆಬಾಗಿದ ನಿರ್ಮಾಪಕರು

ದಳಪತಿ ವಿಜಯ್ ಅವರ 'ಜನ ನಾಯಗನ್' ಸಿನಿಮಾ ಜುಲೈ 23 ರಂದು ಥಿಯೇಟರ್‌ಗಳಿಗೆ ಬರ್ತಿದೆ. ಈ ದೊಡ್ಡ ಸಿನಿಮಾದ ಜೊತೆ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ಬೇಡ ಅಂತ ಎರಡು ಸಿನಿಮಾಗಳ ನಿರ್ಮಾಪಕರು ರಿಲೀಸ್ ಡೇಟ್ ಮುಂದಕ್ಕೆ ಹಾಕಿದ್ದಾರೆ.

Read Full Story

05:53 PM (IST) Jul 16

ಬೆಂಗಳೂರು ಸ್ಟಾರ್ಟ್‌ಅಪ್‌ Ather Energy ಕಂಪನಿಯಲ್ಲಿ 200 ಕೋಟಿ ಹೂಡಿಕೆ ಮಾಡಲಿರುವ ಭಾರತ ಸರ್ಕಾರ

ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಏಥರ್ ಎನರ್ಜಿ, 1,200 ಕೋಟಿ ರೂಪಾಯಿಗಳ ಬಂಡವಾಳ ಕ್ರೋಡೀಕರಣ ಮಾಡುತ್ತಿದೆ. ಇದರಲ್ಲಿ ಭಾರತ ಸರ್ಕಾರವು 'ಇಂಡಿಯಾ-ಜಪಾನ್ ಫಂಡ್' ಮೂಲಕ 200 ಕೋಟಿ ರೂ. ಹೂಡಿಕೆ ಮಾಡಲಿದೆ.

Read Full Story

05:37 PM (IST) Jul 16

ಜಾಗತಿಕ ಕಡಲ ವಲಯಕ್ಕೆ ಟಾಟಾ ಗ್ರೂಪ್ ಲಗ್ಗೆ - ಕೇರಳದಲ್ಲಿ 1 ಬಿಲಿಯನ್ ವೆಚ್ಚದಲ್ಲಿ ಹಡಗು ನಿರ್ಮಾಣ ಕೇಂದ್ರ ಸ್ಥಾಪನೆ

ಟಾಟಾ ಗ್ರೂಪ್, ಕೇರಳದಲ್ಲಿ ₹10,000 ಕೋಟಿ ಹೂಡಿಕೆಯೊಂದಿಗೆ ವಾಣಿಜ್ಯ ಹಡಗು ನಿರ್ಮಾಣ ಕ್ಷೇತ್ರಕ್ಕೆ ಪ್ರವೇಶಿಸಲು ಸಜ್ಜಾಗಿದೆ. ರಾಜ್ಯದ 'ಮಿಷನ್ ಸಮುದ್ರ' ಯೋಜನೆಯ ಭಾಗವಾಗಿರುವ ಈ ಹೂಡಿಕೆಯು, ಜಾಗತಿಕ ಹಡಗು ನಿರ್ಮಾಣ ಮಾರುಕಟ್ಟೆಯಲ್ಲಿ ಚೀನಾ, ಜಪಾನ್‌ನಂತಹ ದೇಶಗಳಿಗೆ ಭಾರತವು ಪ್ರಬಲ ಪೈಪೋಟಿ ನೀಡಲು ಮುನ್ನುಡಿ ಬರೆಯಲಿದೆ.
Read Full Story

05:32 PM (IST) Jul 16

ಕುಡಿವ ನೀರೆಂದು ತಿಳಿದು ಆ್ಯಸಿಡ್​ ಬಾಟಲಿ ಕೊಟ್ಟ ಅಂಗಡಿಯವ! ಕುಡಿದ ಯುವತಿ ಸ್ಥಿತಿ ಏನಾಯ್ತು ನೋಡಿ

ಉತ್ತರ ಪ್ರದೇಶದ ಹಾಪುರದಲ್ಲಿ, ಆಭರಣ ಅಂಗಡಿಗೆ ಬಂದ ಯುವತಿಯೊಬ್ಬಳು ನೀರೆಂದು ತಿಳಿದು ಆ್ಯಸಿಡ್ ಕುಡಿದಿದ್ದಾಳೆ. ಪಕ್ಕದ ಅಂಗಡಿಯವನು ತಪ್ಪಾಗಿ ನೀಡಿದ ಬಾಟಲಿಯಿಂದ ಈ ದುರ್ಘಟನೆ ಸಂಭವಿಸಿದ್ದು, ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

04:54 PM (IST) Jul 16

ದುಬಾರಿ ಹೋಟೆಲ್​ ಬಿಡಿ, ಕಡಿಮೆ ದರದಲ್ಲಿ ಮೆಟ್ರೋದಲ್ಲೇ ಪಾರ್ಟಿ, ಶೂಟಿಂಗ್​ ಮಾಡಿ- ಸಕತ್​ ಆಫರ್​ ನೀಡಿದ ಸರ್ಕಾರ

ಮಧ್ಯಪ್ರದೇಶ ಮೆಟ್ರೋ ರೈಲು ಕಾರ್ಪೊರೇಷನ್ 'ಸೆಲೆಬ್ರೇಷನ್ ಆನ್ ವೀಲ್ಸ್' ಎಂಬ ಹೊಸ ನೀತಿಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ಸಾರ್ವಜನಿಕರು ಹುಟ್ಟುಹಬ್ಬ, ಪ್ರೀ-ವೆಡ್ಡಿಂಗ್ ಶೂಟ್ ಮತ್ತು ಇತರೆ ಕಾರ್ಯಕ್ರಮಗಳಿಗಾಗಿ ಮೆಟ್ರೋ ಕೋಚ್‌ಗಳನ್ನು ನಿಗದಿತ ಶುಲ್ಕ ಪಾವತಿಸಿ ಬಾಡಿಗೆಗೆ ಪಡೆಯಬಹುದು.
Read Full Story

04:29 PM (IST) Jul 16

ಗೋಲ್ಡನ್ ಬೂಟ್ ರೇಸ್‌ - ಇಂಗ್ಲೆಂಡ್ ಎದುರು ಸೆಮೀಸ್‌ನಲ್ಲಿ ಗೋಲ್ ಹೊಡೀದಿದ್ರೂ, ಎಂಬಾಪೆ ಹಿಂದಿಕ್ಕಿ ಮೆಸ್ಸಿ ನಂ.1!

ಬೆಂಗಳೂರು: 2026ರ ಫಿಫಾ ವಿಶ್ವಕಪ್ ಟೂರ್ನಿಯು ನಿರ್ಣಾಯಕ ಘಟ್ಟ ತಲುಪಿದ್ದು, ಇದೀಗ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಹಾಗೂ ಸ್ಪೇನ್ ಮುಖಾಮುಖಿಯಾಗಲಿವೆ. ಇದರ ನಡುವೆ ಗೋಲ್ಡನ್ ಬೂಟ್ ರೇಸ್‌ನಲ್ಲಿ ಎಂಬಾಪೆ ಹಿಂದಿಕ್ಕಿ ಮೆಸ್ಸಿ ನಂ.1 ಸ್ಥಾನಕ್ಕೇರಿದ್ದಾರೆ.

Read Full Story

03:41 PM (IST) Jul 16

ವಿಶ್ವದಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಕಳ್ಳತನ ಆಗಿದ್ದು ಚಿನ್ನವೂ ಅಲ್ಲ, ವಜ್ರವೂ ಅಲ್ಲ; ಏನದು?

Stolen food products: ಬಂಗಾರ, ವಜ್ರದಂತಹ ಬೆಲೆಬಾಳುವ ವಸ್ತುಗಳಿಗಿಂತಲೂ ಹೆಚ್ಚಾಗಿ ಜಗತ್ತಿನಲ್ಲಿ ಒಂದು ಆಹಾರ ಪದಾರ್ಥ ಕಳ್ಳತನವಾಗುತ್ತಿದೆ. ಕಳ್ಳರು ಅತಿ ಹೆಚ್ಚು ಕದಿಯುತ್ತಿರುವ ಆ ವಸ್ತು ಯಾವುದು? ಅದುವೇ ಚೀಸ್. ಎಷ್ಟು ಪ್ರಮಾಣದಲ್ಲಿ ಚೀಸ್ ಕಳ್ಳತನವಾಗುತ್ತಿದೆ ಗೊತ್ತಾ? ಇದರ ಹಿಂದಿನ ಕಾರಣವೇನು?

Read Full Story

03:24 PM (IST) Jul 16

ಮೂರೇ ತಿಂಗಳಿಗೆ ಶಾಕ್ ಕೊಟ್ಟ ನಟಿ ಕೋಯಲ್, ದಿಢೀರ್ ರಾಜೀನಾಮೆ ನೀಡಿ ಹೊರಬಂದಿದ್ದೇಕೆ?

ನಟಿ ಕೋಯಲ್ ಮಲಿಕ್ ದಿಢೀರ್ ಶಾಕ್ ನೀಡಿದ್ದಾರೆ. ರಾಜ್ಯಸಭೆಗೆ ನೇಮಕಗೊಂಡ ಮೂರೇ ತಿಂಗಳಿಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಅಷ್ಟಕ್ಕೂ ನಟಿ ಕೋಯಲ್ ಮಲಿಕ್ ದಿಢೀರ್ ನಿರ್ಧಾರಕ್ಕೆ ಕಾರಣವೇನು?

Read Full Story

03:11 PM (IST) Jul 16

ಭಾರತೀಯ ಸೇನೆ ನೇಮಕಾತಿ 2026 - 350 ತಾಂತ್ರಿಕ ಹುದ್ದೆಗಳಿಗೆ ಇಂಜಿನಿಯರ್‌ಗಳಿಗೆ ಬಂಪರ್ ಅವಕಾಶ

ಭಾರತೀಯ ಸೇನೆಯು 350 ಶಾರ್ಟ್ ಸರ್ವಿಸ್ ಎಂಟ್ರಿ (ತಾಂತ್ರಿಕ) ಪುರುಷ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಇಂಜಿನಿಯರಿಂಗ್ ಪದವಿ (BE/B.Tech) ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ ಮತ್ತು ಆಯ್ಕೆಯಾದವರಿಗೆ ಆಕರ್ಷಕ ವೇತನ ಶ್ರೇಣಿ ಇರುತ್ತದೆ.
Read Full Story

03:08 PM (IST) Jul 16

Evil Eye Removal - ದೃಷ್ಟಿ ತೆಗೆಯಲು ಮೆಣಸು, ಉಪ್ಪು ಸುಡೋದು ಯಾಕೆ? ಇದರ ಹಿಂದಿದೆ ಬಲವಾದ ಕಾರಣ!

Drishti Dosha Removal: ದೃಷ್ಟಿ ತೆಗೆಯಲು ಉಪ್ಪು ಮತ್ತು ಮೆಣಸಿನಕಾಯಿ ಬಳಸುವ ಪದ್ಧತಿ ಕೇವಲ ಮೂಢನಂಬಿಕೆಯಲ್ಲ ಎಂದು ಹಲವರು ನಂಬುತ್ತಾರೆ. ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ಆಚರಣೆಯ ಹಿಂದೆ ಅಚ್ಚರಿಯ ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ.

Read Full Story

02:37 PM (IST) Jul 16

ಆಮಿರ್ ಖಾನ್ ಮೂರನೇ ಮದುವೆಗೆ ಮಾಜಿ ಪತ್ನಿಯರು ಗೈರಾಗಿದ್ದೇಕೆ - ಇಂಟರೆಸ್ಟಿಂಗ್ ವಿಚಾರ ರಿವೀಲ್!

ಆಮಿರ್ ಖಾನ್ ಮೂರನೇ ಮದುವೆ ಆಗಿದ್ದಾರೆ. ಈ ಮದುವೆಗೆ ಅವರ ಇಬ್ಬರು ಮಾಜಿ ಪತ್ನಿಯರು ಗೈರಾಗಿರೋದು ದೊಡ್ಡ ಚರ್ಚೆ ಆಗಿತ್ತು. ಇದೀಗ ಅವರ ಆಪ್ತ ಕಿರಣ್ ರಾವ್ ಮತ್ತು ರೀನಾ ಇಬ್ಬರು ಯಾಕೆ ಮದುವೆಗೆ ಬಂದಿಲ್ಲ ಎಂಬ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.

Read Full Story

01:33 PM (IST) Jul 16

ಇಂಗ್ಲೆಂಡ್ ಎದುರಿನ ಎರಡನೇ ಪಂದ್ಯಕ್ಕೆ ಗಿಲ್ ಅಲಭ್ಯರಾದ್ರೆ ಟೀಂ ಇಂಡಿಯಾ ನಾಯಕರಾಗೋದು ಯಾರು? ಇಲ್ಲಿದೆ ಇನ್‌ಸೈಡ್ ಸ್ಟೋರಿ

ಕಾರ್ಡಿಫ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಶುಭ್‌ಮನ್ ಗಿಲ್ ಲಭ್ಯತೆ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಒಂದು ವೇಳೆ ಗಿಲ್ ಅಲಭ್ಯರಾದರೇ, ಇಂದಿನ ಪಂದ್ಯಕ್ಕೆ ನಾಯಕರಾಗೋದು ಯಾರು?

Read Full Story

01:08 PM (IST) Jul 16

ಒಂದು ಪ್ಲೇಟ್ ಪಾನಿಪುರಿ ಬೆಲೆ 830 ರೂಪಾಯಿ.. ಆಸೆಯಿಂದ ಬಂದವ್ರಿಗೆ ಕಾದಿತ್ತು ಶಾಕ್..!

ಒಂದು ಪ್ಲೇಟ್ ಪಾನಿಪುರಿಗೆ 830 ರೂಪಾಯಿ. ಒಂದು ಪಾವ್ ಭಾಜಿಗೆ 1270 ರೂಪಾಯಿ. ತವರು ಮನೆಯ ನೆಚ್ಚಿನ ಸ್ನ್ಯಾಕ್ ಸವಿಯಲು ಬಂದಿದ್ದ NRIಗಳಿಗೆ ಆಘಾತ ತಂದ ಕತೆ ಇದು!

Read Full Story

12:52 PM (IST) Jul 16

ಬ್ಯಾಗ್‌ ಜಿಪ್‌ ರಿಪೇರಿ ಮಾಡೋ ಗಂಗಾವತಿ ಹುಡುಗನ 1 ದಿನದ ಎಷ್ಟು ಸಂಪಾದನೆ ಎಷ್ಟು? ಇದೇ ಬ್ಯುಸಿನೆಸ್‌ ತಾಕತ್ತು!

Bag Zip Repairer: ಬ್ಯಾಗ್‌ ಜಿಪ್‌ ರಿಪೇರಿ ಮಾಡುವವರು ಹೀಗೆ ಒಂದಿಷ್ಟು ವಸ್ತುಗಳ ರಿಪೇರಿ ಮಾಡುವವರು ದಿನಕ್ಕೆ ಎಷ್ಟು ಹಣ ಸಂಪಾದನೆ ಮಾಡ್ತಾರೆ ಎಂದು ಅನೇಕರು ಅಂದುಕೊಳ್ಳಬಹುದು, ಇದೆಲ್ಲ ಸಣ್ಣ ಉದ್ಯೋಗ ಎನಿಸಬಹುದು. ಗಂಗಾವತಿ ಹುಡುಗನೊಬ್ಬ ಬ್ಯಾಗ್‌ ಜಿಪ್‌ ಹಾಕಿ ಎಷ್ಟು ಹಣ ಗಳಿಸ್ತಾನೆ ಗೊತ್ತಾ?

Read Full Story

12:47 PM (IST) Jul 16

ಬಂಗಾರ ಪ್ರಿಯರಿಗೆ ಗುಡ್​​ನ್ಯೂಸ್​​ - ಬೆಲೆಯಲ್ಲಿ ಇಳಿತ- ಚಿನ್ನ, ಬೆಳ್ಳಿ ದರ ಇಂದು ಎಷ್ಟಿದೆ

ಬುಧವಾರ ಏರಿಕೆಯಾಗಿದ್ದ ಚಿನ್ನದ ಬೆಲೆ ಗುರುವಾರ ಕೊಂಚ ಇಳಿಕೆಯಾಗಿದ್ದು, ಖರೀದಿದಾರರಿಗೆ ನೆಮ್ಮದಿ ತಂದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 280 ರೂ. ಇಳಿಕೆಯಾಗಿದ್ದರೆ, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
Read Full Story

12:35 PM (IST) Jul 16

ಇಂದಿನಿಂದ ಪುರಿ ಜಗನ್ನಾಥ ಉತ್ಸವ ಯಾತ್ರೆ ಆರಂಭ, ರಥ ಎಳೆಯುವ ನಿಯಮವೇನು? ಆಧ್ಯಾತ್ಮಿಕ ಮಹತ್ವ

ಧಾರ್ಮಿಕವಾಗಿ ಅತ್ಯಂತ ಮಹತ್ವದ ಹಾಗೂ ಐತಿಹಾಸಿ ಹಿನ್ನಲೆಯುಳ್ಳ ಪುರಿ ಜಗನ್ನಾಥ ರಥ ಯಾತ್ರೆ ಇಂದಿನಿಂತ ಆರಂಭಗೊಂಡಿದೆ. ರಥ ಯಾತ್ರೆ ಎಳೆಯಲು ಕೆಲ ನಿಯಮಗಳಿವೆ, ಭಾರತವೇ ಪಾಲ್ಗೊಳ್ಳುವ ಈ ರಥಯಾತ್ರೆ ವಿಶೇಷತೆ ಏನು?

Read Full Story

12:28 PM (IST) Jul 16

ರೈಲ್ವೇ ಇಲಾಖೆಯಲ್ಲಿ ಉದ್ಯೋಗಾವಕಾಶ; ಡಿಗ್ರಿ ಪಾಸಾಗಿದ್ರೆ ಸಾಕು, ಇವತ್ತೇ ಅರ್ಜಿ ಸಲ್ಲಿಸಿ..!

ಕೇಂದ್ರ ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ರೈಲ್ವೇ ನೇಮಕಾತಿ ಮಂಡಳಿಯು (RRB) ದೇಶಾದ್ಯಂತ ಖಾಲಿ ಇರುವ 119 ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಯಾವುದೇ ವಿಷಯದಲ್ಲಿ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
Read Full Story

12:13 PM (IST) Jul 16

3 Idiots Movie ಮಾಡಿ ಕೋಟಿ ಗಳಿಸಲು Sonam Wangchuk ಕಥೆ ಬೇಕಿತ್ತು; ಹಸಿವಿನಿಂದ ಸಾಯ್ತಿದ್ರೂ ನೋಡದ Aamir Khan

Sonam Wangchuk Hunger Strike Reason: ಶಿಕ್ಷಣ ತಜ್ಞ ಮತ್ತು ಪರಿಸರ ಹೋರಾಟಗಾರ ಸೋನಂ ವಾಂಗ್‌ಚುಕ್ ಕಥೆ ಇಟ್ಟುಕೊಂಡು 3 Idiots ಸಿನಿಮಾ ಮಾಡಿ ಹಣ ಮಾಡಿದರು, ಆದರೆ ಇವರ ಉಪವಾಸ ಸತ್ಯಾಗ್ರಹದ ಬಗ್ಗೆ ಯಾರೂ ಕೂಡ ಮಾತನಾಡಿಲ್ಲ. ಯಾಕೆ?

Read Full Story

12:01 PM (IST) Jul 16

ಸಾರ್ವಕಾಲಿಕ ಶ್ರೇಷ್ಠ ಭಾರತ ಏಕದಿನ ತಂಡವನ್ನು ಆಯ್ಕೆ ಮಾಡಿದ ರಾಬಿನ್ ಉತ್ತಪ್ಪ! ಇಬ್ಬರು ಪ್ರಮುಖ ಆಟಗಾರರಿಗೆ ಇಲ್ಲ ಸ್ಥಾನ

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಸಾರ್ವಕಾಲಿಕ ಶ್ರೇಷ್ಠ ಭಾರತ ಏಕದಿನ ಕ್ರಿಕೆಟ್‌ ತಂಡವನ್ನು ಆಯ್ಕೆ ಮಾಡಿದ್ದಾರೆ. ಆದರೆ ಉತ್ತಪ್ಪ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹಾಗೂ ಮಾರಕ ವೇಗಿ ಮೊಹಮ್ಮದ್ ಶಮಿಯನ್ನು ಕೈಬಿಟ್ಟಿದ್ದು ಚರ್ಚೆಗೆ ಗ್ರಾಸವಾಗಿದೆ.

Read Full Story

11:53 AM (IST) Jul 16

ಭಾರತದಲ್ಲಿ ಬಾಗಿಲು ಮುಚ್ಚುತ್ತಿದೆ ಒನ್‌ಪ್ಲಸ್ ಫೋನ್, ಇನ್ಮುಂದೆ ಖರೀದಿಗೆ ಸಿಗಲ್ಲ ಈ ಚೈನೀಸ್ ಫೋನ್

ಒನ್‌ಪ್ಲಸ್ ಭಾರತದಲ್ಲಿ ಪ್ರೀಮಿಯಂ ಫೋನ್ ಮೂಲಕ ಭಾರಿ ಸಂಚಲನ ಸೃಷ್ಟಿಸಿದೆ. ಚೀನಾ ಫೋನ್‌ಗಳ ಪೈಕಿ ಅತ್ಯುತ್ತಮ ಎಂದೇ ಗುರುತಿಸಿಕೊಂಡಿರುವ ಒನ್‌ಪ್ಲಸ್ ಇದೀಗ ಭಾರತಕ್ಕೆ ಗುಡ್ ಬೈ ಹೇಳುತ್ತಿದೆ. ದಿಢೀರ್ ನಿರ್ಧಾರಕ್ಕೆ ಕಾರಣವೇನು?

Read Full Story

11:43 AM (IST) Jul 16

ಮುಕೇಶ್ ಅಂಬಾನಿ ಮನೆ 'ಆಂಟಿಲಿಯಾ' ಈಗ ಮಾರಾಟ ಮಾಡಿದ್ರೆ ಬೆಲೆ ಎಷ್ಟು? ಮಾರುಕಟ್ಟೆ ದರ

ಭಾರತದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ 'ಆಂಟಿಲಿಯಾ' ಮನೆ 2010ರಲ್ಲಿ ಸುಮಾರು 15,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಆದರೆ, ಇಂದಿನ ಮಾರುಕಟ್ಟೆ ದರದಲ್ಲಿ ಇದೇ ಮನೆಯನ್ನು ಮತ್ತೆ ಕಟ್ಟಲು ಎಷ್ಟು ಹಣ ಬೇಕಾಗಬಹುದು ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

Read Full Story

11:08 AM (IST) Jul 16

ರೋಹಿತ್-ಸಚಿನ್‌ಗಿಂತ ಮುಂದೆ ಕೊಹ್ಲಿ, ದ್ರಾವಿಡ್ ನಂಬರ್ 1; ಇಂಗ್ಲೆಂಡ್‌ನಲ್ಲಿ ಹೆಚ್ಚು ರನ್ ಗಳಿಸಿದ ಟಾಪ್-10 ಆಟಗಾರರು

ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರನಾಗಲು ಕೊಹ್ಲಿಗೆ ಕೆಲವೇ ರನ್‌ಗಳ ಅವಶ್ಯಕತೆಯಿದೆ. ಟಾಪ್ 10 ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯನ್ನು ಒದಗಿಸುತ್ತದೆ.

Read Full Story

More Trending News