ನವದೆಹಲಿ: ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಬ್ಯಾರೆಲ್ಗೆ 100 ಡಾಲರ್ಗಳನ್ನು ದಾಟಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಸದ್ಯಕ್ಕೆ ಹೆಚ್ಚಿಸುವುದಿಲ್ಲ ಎಂದು ಸರ್ಕಾರಿ ಮೂಲಗಳು ಸೋಮವಾರ ತಿಳಿಸಿವೆ.
‘ದೇಶಾದ್ಯಂತ ನಿರಂತರ ಇಂಧನ ಪೂರೈಕೆ ಮಾರ್ಗಗಳನ್ನು ನಿರ್ವಹಿಸಲು ಅಧಿಕಾರಿಗಳು ಪ್ರಯತ್ನಗಳನ್ನು ತೀವ್ರಗೊಳಿಸಿದ್ದಾರೆ. ಜಾಗತಿಕ ತೈಲ ಮಾರುಕಟ್ಟೆಗಳನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ, ಆದರೆ ಚಿಲ್ಲರೆ ಇಂಧನ ಬೆಲೆಗಳನ್ನು ಹೆಚ್ಚಿಸುವ ಯಾವುದೇ ತಕ್ಷಣದ ಯೋಜನೆ ಇಲ್ಲ’ ಎಂದು ಅವು ಹೇಳಿವೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರಸ್ತುತ ವೆಚ್ಚದ ಒತ್ತಡವನ್ನು ಸದ್ಯಕ್ಕೆ ನಿಭಾಯಿಸುವ ನಿರೀಕ್ಷೆಯಿದೆ. ಶುಕ್ರವಾರದಿಂದಲೇ ಜಾರಿಯಾಗುವಂತೆ ಸರ್ಕಾರ ಎಲ್ಪಿಜಿ ದರವನ್ನು 60 ರು. ಹೆಚ್ಚಿಸಿತ್ತು.
09:55 PM (IST) Mar 10
ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದ ಉಂಟಾದ ಇಂಧನ ಬಿಕ್ಕಟ್ಟನ್ನು ಎದುರಿಸಲು ಬಾಂಗ್ಲಾದೇಶವು ಭಾರತದಿಂದ 50,000 ಮೆಟ್ರಿಕ್ ಟನ್ ಹೆಚ್ಚುವರಿ ಡೀಸೆಲ್ ಪೂರೈಕೆಗೆ ಅಧಿಕೃತವಾಗಿ ಮನವಿ ಮಾಡಿದೆ. ತೈಲ ಅಭಾವವನ್ನು ತಗ್ಗಿಸಲು ದೇಶಾದ್ಯಂತ ತುರ್ತು ಕ್ರಮಗಳನ್ನು ಜಾರಿಗೊಳಿಸಲಾಗಿದೆ.
09:52 PM (IST) Mar 10
Relationship Alerts In Kannada: ಹಬ್ಬಗಳು ಕಳೆದಂತೆಯೋ ಅಥವಾ ಗ್ರಹಗಳ ಚಲನೆ ಬದಲಾದಂತೆ ಸಂಬಂಧಗಳಲ್ಲಿ ಬದಲಾವಣೆ ಆಗುವುದು. 2026 ಯುಗಾದಿ ಬಳಿಕ ಕೆಲವು ರಾಶಿಗಳ ಸಂಬಂಧಗಳಲ್ಲಿ ಸಮಸ್ಯೆ ಆಗುವುದು ಎನ್ನಲಾಗಿದೆ. ಹಾಗಾದರೆ ಆ ರಾಶಿಗಳು ಯಾವುವು?
09:52 PM (IST) Mar 10
ಅಮೆರಿಕಾ-ಇಸ್ರೇಲ್ ನಡುವಿನ ಯುದ್ಧದ ಪರಿಣಾಮ ಕೇವಲ ಯುದ್ಧನಿರತ ದೇಶಗಳಿಗಷ್ಟೇ ಸೀಮಿತವಾಗಿಲ್ಲ. ಈ ಸಂಘರ್ಷದಿಂದಾಗಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಹಲವು ರಾಷ್ಟ್ರಗಳು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿವೆ. ಯಾವ ದೇಶದ ಸಮಸ್ಯೆ ಏನು ಇಲ್ಲಿದೆ ಡಿಟೇಲ್ ಸ್ಟೋರಿ…
09:30 PM (IST) Mar 10
6 Two Faced Zodiac Signs: ಕೆಲ ವ್ಯಕ್ತಿಗಳು ನೋಡಲು, ಮಾತನಾಡಲು ಚೆನ್ನಾಗಿ ಕಂಡರೂ ಕೂಡ, ರಿಯಲ್ ಆಗಿ ಹಾಗೆ ಇರೋದಿಲ್ಲ. ಅವರು ವರ್ತಿಸೋದು ಒಂದು, ಅವರ ಮನಸ್ಸಿನಲ್ಲಿ ಇರೋದು ಒಂದು. ಈಗ ಯಾವ ರಾಶಿಗಳು ಯಾವ ಗುಣವನ್ನು ಹೊಂದಿದ್ದಾರೆ ಎಂದು ನೋಡೋಣ
08:47 PM (IST) Mar 10
ಫುಡ್ ಪ್ರಾಡಕ್ಟ್ಸ್ ಯೂನಿಟ್ವೊಂದಕ್ಕೆ ಸಿಕ್ಕ ಅಡುಗೆ ಅನಿಲ ಸಿಲಿಂಡರ್ನಲ್ಲಿ ಗ್ಯಾಸ್ ಬದಲು ನೀರು ಪತ್ತೆಯಾಗಿದೆ. ಈ ಬಗ್ಗೆ ದೂರು ನೀಡಿದಾಗ, ಏಜೆನ್ಸಿಯವರು ಕೈಚೆಲ್ಲಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದಾರೆ.
08:09 PM (IST) Mar 10
ಎಂಜಿ ಮೋಟಾರ್ ತನ್ನ ಹೊಸ ಫುಲ್-ಸೈಜ್ ಎಸ್ಯುವಿ 'ಮೆಜೆಸ್ಟರ್' ಅನ್ನು ಭಾರತದಲ್ಲಿ ಪರಿಚಯಿಸಲು ಸಜ್ಜಾಗಿದೆ. ಕಂಪನಿಯು ವಿಶೇಷ '5-5-5' ಮಾಲೀಕತ್ವದ ಪ್ರೋಗ್ರಾಂ ಅನ್ನು ಘೋಷಿಸಿದ್ದು, ಇದು 5 ವರ್ಷಗಳ ವಾರಂಟಿ, ರೋಡ್ಸೈಡ್ ಅಸಿಸ್ಟೆನ್ಸ್ ಮತ್ತು ಉಚಿತ ಸರ್ವಿಸ್ ಲೇಬರ್ ಚಾರ್ಜ್ಗಳನ್ನು ಒಳಗೊಂಡಿದೆ.
08:04 PM (IST) Mar 10
ಖಮೇನಿ ಹತ್ಯೆ ಬಳಿಕ ಇಸ್ರೇಲ್ ದಾಳಿಯಲ್ಲಿ ನೂತನ ನಾಯಕ ಮಜ್ತೊಬಾಗೆ ಗಾಯ, ಇರಾನ್ ಟಿವಿ ವರದಿ, ಮತ್ತೆ ಆತಂಕ ಹೆಚ್ಚಾಗಿದೆ. ಇರಾನ್ ದೇಶದ ಟಿವಿಯ ವರದಿ ಇದೀಗ ಮತ್ತೆ ಕೋಲಾಹಲ ಸೃಷ್ಟಿಸಿದೆ. ಇಷ್ಟೇ ಅಲ್ಲ ಯುದ್ಧ ತೀವ್ರಗೊಳ್ಳೋ ಆತಂಕ ಎದುರಾಗಿದೆ.
07:47 PM (IST) Mar 10
ಪರ್ಷಿಯನ್ ಗಲ್ಫ್ನಲ್ಲಿರುವ 'ಖಾರ್ಗ್ ಐಸ್ಲೆಂಡ್' ಇರಾನ್ನ ಒಟ್ಟು ತೈಲ ರಫ್ತಿನ ಶೇಕಡಾ 90 ರಷ್ಟು ಭಾಗವನ್ನು ನಿರ್ವಹಿಸುವ ಪ್ರಮುಖ ಕೇಂದ್ರವಾಗಿದೆ. ಅಮೆರಿಕ ಈ ದ್ವೀಪವನ್ನು ವಶಪಡಿಸಿಕೊಳ್ಳಲು ಯೋಜಿಸುತ್ತಿದೆ ಎಂಬ ವರದಿಗಳಿವೆ.
07:40 PM (IST) Mar 10
ಮೆಹಂದಿಯಲ್ಲಿ ರಶ್ಮಿಕಾ ಮೀರಿಸಿದ್ರಾ ವಿಜಯ್ ದೇವರಕೊಂಡ? ಫೋಟೋಸ್ ಹಂಚಿಕೊಂಡ ನಟಿ, ಮದುವೆ ಬಳಿಕ ಇದೀಗ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮೆಹಂದಿಗೆ ಧರಿಸಿದ್ದ ಡ್ರೆಸ್ ಮತ್ತೆ ಭಾರಿ ಚರ್ಚೆಯಾಗುತ್ತಿದೆ.
07:34 PM (IST) Mar 10
ನಟಿ ನಮ್ರತಾ ಶಿರೋಡ್ಕರ್, ಮದುವೆಯ ನಂತರ ತಾನು ಮಹೇಶ್ ಬಾಬುಗೆ ಒಂದು ವಿಚಿತ್ರವಾದ ಷರತ್ತು ವಿಧಿಸಿದ್ದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಜೊತೆಗೆ, ತಾನು ನಟನೆಯನ್ನು ಯಾಕೆ ಬಿಟ್ಟೆ ಎಂಬುದರ ಹಿಂದಿನ ಕಾರಣವನ್ನೂ ಹೇಳಿದ್ದಾರೆ. ಆ ಕುತೂಹಲಕಾರಿ ವಿಷಯಗಳೇನು?
06:50 PM (IST) Mar 10
06:38 PM (IST) Mar 10
ಭಾರೀ ಸಂಕಷ್ಟದ ಬೆನ್ನಲ್ಲೇ ಇಂಡಿಗೋ ವಿಮಾನ ಸಿಇಒ ಪೀಟರ್ ಎಲ್ಬರ್ಸ್ ರಾಜೀನಾಮೆ ನೀಡಿದ್ದಾರೆ. ಡಿಸೆಂಬರ್ನಲ್ಲಿ ಇಂಡೋಗೋ ವಿಮಾನ ಸೇವೆ ವ್ಯತ್ಯಯದಿಂದ ಭಾರಿ ಟೀಕೆ ಎದುರಿಸಿದ್ದ ಸಿಇಒ ಇದೀಗ ರಿಸೈನ್ ಮಾಡಿದ್ದಾರೆ.
06:32 PM (IST) Mar 10
ನಟಿ ತಾಪ್ಸಿ ಪನ್ನು ಸಂದರ್ಶನವೊಂದರಲ್ಲಿ ತಮ್ಮ ಜೀವನಶೈಲಿ ಮತ್ತು ಹಣದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಹಣ ಉಳಿಸುವುದಕ್ಕಿಂತ ಜೀವನವನ್ನು ಪೂರ್ಣವಾಗಿ ಬದುಕುವುದು ತಮಗೆ ಇಷ್ಟ ಎಂದು ತಮಾಷೆಯಾಗಿ ಹೇಳಿದ್ದಾರೆ.
06:26 PM (IST) Mar 10
ಬಹ್ರೇನ್ನಲ್ಲಿ ಇಸ್ರೇಲ್ನ 'ಮೊಸಾದ್' ಪರ ಕೆಲಸ ಮಾಡುತ್ತಿದ್ದ ಭಾರತೀಯ ಗೂಢಚಾರನನ್ನು ಬಂಧಿಸಲಾಗಿದೆ ಎಂಬ ಸಾಮಾಜಿಕ ಜಾಲತಾಣದ ವದಂತಿಯನ್ನು ಭಾರತ ಸರ್ಕಾರ ನಿರಾಕರಿಸಿದೆ. ಕೇಂದ್ರ ವಾರ್ತಾ ಇಲಾಖೆಯ (PIB) ಫ್ಯಾಕ್ಟ್ ಚೆಕ್ ತಂಡವು ಈ ಸುದ್ದಿಯನ್ನು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ಸ್ಪಷ್ಟಪಡಿಸಿದೆ.
06:19 PM (IST) Mar 10
06:19 PM (IST) Mar 10
ಐಪಿಎಲ್ 2026ಕ್ಕೆ ಎದುರಾದ ವಿಘ್ನ, LPG ಗ್ಯಾಸ್ ಸಮಸ್ಯೆಯಿಂದ ಟೂರ್ನಿ ಆರಂಭವೇ ಅನುಮಾನ, ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನು ಮೂರು ವಾರ ಮಾತ್ರ ಬಾಕಿ. ಆದರೆ ಮದ್ಯಪ್ರಾಚ್ಯಗಳ ಯುದ್ಧ, ಅನಿಲ ಪೂರೈಕೆಯಲ್ಲಿನ ಕೊರತೆ ಐಪಿಎಲ್ಗೆ ತಟ್ಟಿದೆ.
06:13 PM (IST) Mar 10
ಇಸೈಜ್ಞಾನಿ ಇಳಯರಾಜ ಅವರು ಹೆಣ್ಣು ಧ್ವನಿಯಲ್ಲಿ ಹಾಡಿದ್ದ ಒಂದು ಹಾಡು, ಮುಂದೆ ಸಿನಿಮಾಗಾಗಿ ಕೆಲವು ಬದಲಾವಣೆಗಳೊಂದಿಗೆ ರಿಲೀಸ್ ಆಗಿ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಆ ಹಾಡಿನ ಕುರಿತಾದ ಇಂಟ್ರೆಸ್ಟಿಂಗ್ ಕಥೆ ಇಲ್ಲಿದೆ.
06:11 PM (IST) Mar 10
05:58 PM (IST) Mar 10
How to pay off home loan early with mutual funds ಸ್ವಂತ ಮನೆ ಪ್ರತಿಯೊಬ್ಬರ ಕನಸು. ಆದರೆ ಹೋಮ್ ಲೋನ್ ಭಾರವಿಲ್ಲದೆ, ಕಡಿಮೆ ಸಮಯದಲ್ಲಿ ಸಾಲ ತೀರಿಸುವುದು ಹೇಗೆ? ಮ್ಯೂಚುವಲ್ ಫಂಡ್ ಬಳಸಿ ಲಕ್ಷಾಂತರ ರೂಪಾಯಿ ಬಡ್ಡಿ ಉಳಿಸುವ ಉಪಾಯ ಇಲ್ಲಿದೆ.
05:51 PM (IST) Mar 10
ಶೀತಲಾಷ್ಟಮಿಯು ಬೇಸಿಗೆಯ ಕಾಯಿಲೆಗಳನ್ನು ತಡೆಯಲು ಶೀತಲಾ ದೇವಿಯನ್ನು ಪೂಜಿಸುವ ಹಬ್ಬವಾಗಿದೆ. ಈ ದಿನ ದೇವಿಗೆ ತಂಗಳನ್ನವನ್ನು ನೈವೇದ್ಯ ಮಾಡಿ, ಅದನ್ನೇ ಪ್ರಸಾದವಾಗಿ ಸೇವಿಸುವ ವಿಶಿಷ್ಟ ಸಂಪ್ರದಾಯವಿದೆ. ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿರುವ ಈ ಪೂಜೆಯು ಕರುಳಿನ ಆರೋಗ್ಯ ಸೇರಿದಂತೆ ಹಲವು ಪ್ರಯೋಜನ ಹೊಂದಿದೆ.
05:34 PM (IST) Mar 10
ತಮಿಳಿನ 'ಗೋಟ್', 'ಸಿಂಗಾಪುರ್ ಸಲೂನ್' ಚಿತ್ರಗಳ ನಾಯಕಿ ಮೀನಾಕ್ಷಿ ಚೌಧರಿ, ತನ್ನ ಗಂಡ ಹೇಗಿರಬೇಕು ಎಂಬುದರ ಬಗ್ಗೆ ಕೆಲವು ಕಂಡೀಷನ್ಗಳನ್ನು ಹಾಕಿದ್ದಾರೆ. ಈ ವಿಚಾರ ಈಗ ಸಖತ್ ವೈರಲ್ ಆಗಿದೆ.
05:08 PM (IST) Mar 10
2023ರ ಬ್ಲಾಕ್ಬಸ್ಟರ್ 'ಜೈಲರ್' ಚಿತ್ರದ ಸೀಕ್ವೆಲ್ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ವರದಿಗಳ ಪ್ರಕಾರ, ಸೂಪರ್ಸ್ಟಾರ್ ರಜನಿಕಾಂತ್ ಅವರ 'ಜೈಲರ್ 2' ಚಿತ್ರದಲ್ಲಿ ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
05:00 PM (IST) Mar 10
ಕೆಟ್ಟ ಕಮೆಂಟ್ ಹಾಕಿ ಕೆಟ್ಟ, ಬಾಡಿಗೆದಾರ ಬೇರೊಬ್ಬಳ ಜೊತೆಗಿರುವ ವಿಡಿಯೋವನ್ನು ಆತನ ಪತ್ನಿಗೆ ಕಳಿಸಿದ ಮಾಲಕಿ, ಪರಿಣಾಮ ಸಂಸಾರ ಮುರಿದು ಬಿದ್ದಿದೆ. ಇತ್ತ ಈತ ಕೋರ್ಟ್ ಮೆಟ್ಟಿಲೇರಿ ಹೋರಾಟ ಶುರುಮಾಡಿದ್ದಾನೆ. ಇವೆಲ್ಲವೂ ಒಂದು ಕಮೆಂಟ್ನಿಂದ.
04:42 PM (IST) Mar 10
ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ರಿಲೀಸ್ಗೂ ಮುನ್ನವೇ ಹೊಸ ದಾಖಲೆ ಬರೆದಿದೆ. ಚಿತ್ರದ ಪೇಯ್ಡ್ ಪ್ರೀಮಿಯರ್ನ 2 ಲಕ್ಷ ಟಿಕೆಟ್ಗಳು ಈಗಾಗಲೇ ಮಾರಾಟವಾಗಿದ್ದು, ಬರೋಬ್ಬರಿ 18 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
04:33 PM (IST) Mar 10
04:29 PM (IST) Mar 10
ಬಿಹಾರ: ಭಾರತದ ಪ್ರತಿಭಾನ್ವಿತ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇತ್ತೀಚೆಗೆ ಹಲವು ವಿಚಾರಗಳಲ್ಲಿ ಸುದ್ದಿಯಲ್ಲಿದ್ದರು. ಆದರೆ ಇದೀಗ ವೈಭವ್ ಸೂರ್ಯವಂಶಿ ಸೋದರ ಮಾವ ಐಪಿಎಸ್ ಎಕ್ಸಾಂ ಪಾಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
04:00 PM (IST) Mar 10
03:59 PM (IST) Mar 10
ಆತಿಫ್ಗಾಗಿ ಮತಾಂತರಗೊಂಡ ಮಿಸ್ ಇಂಡಿಯಾ ವಿನ್ನರ್ ಸಯಾಲಿ ಕಿರುಕುಳ ತಡೆಯಲಾರದೆ ಘರ್ ವಾಪ್ಸಿ, ಪೋಷಕರ ಇಚ್ಚೆಗೆ ವಿರದ್ಧವಾಗಿ ಮದುವೆಯಾದ ಸಯಾಲಿ ಸರ್ವೆಗೆ ಪತ್ನಿ ಆಸೀಫ್ ಇನ್ನಿಲ್ಲದ ಕಿರುಕುಳ ನೀಡಿದ್ದಾನೆ.
03:46 PM (IST) Mar 10
ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಪತ್ನಿ ದೇವಿಶಾ ಜತೆ ಸೂರ್ಯಕುಮಾರ್ ಯಾದವ್ ಐಕಾನಿಕ್ ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ.
03:39 PM (IST) Mar 10
ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆ, ಹಾರ್ಮುಜ್ ಜಲಸಂಧಿ ಮೂಲಕ ಸಾಗಲು ಇರಾನ್ ಹೊಸ ಷರತ್ತುಗಳನ್ನು ವಿಧಿಸಿದೆ. ಇಸ್ರೇಲ್ ಮತ್ತು ಅಮೆರಿಕದ ರಾಯಭಾರಿಗಳನ್ನು ತೆಗೆದುಹಾಕಿದರೆ ಮಾತ್ರ ಹಡಗುಗಳಿಗೆ ಅನುಮತಿ ನೀಡುವುದಾಗಿ ಹೇಳಿದ್ದು, ದಾಳಿ ಮುಂದುವರಿದರೆ ತೈಲ ರಫ್ತು ತಡೆಯುವುದಾಗಿ ಐಆರ್ಜಿಸಿ ಬೆದರಿಸಿದೆ.
03:09 PM (IST) Mar 10
ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ತಂಡಕ್ಕೆ ಬಿಸಿಸಿಐ 131 ಕೋಟಿ ರೂಪಾಯಿಗಳ ಬೃಹತ್ ಬಹುಮಾನವನ್ನು ಘೋಷಿಸಿದೆ. ಐಸಿಸಿ ನೀಡಿದ ಬಹುಮಾನಕ್ಕಿಂತ ಸುಮಾರು ಐದು ಪಟ್ಟು ಹೆಚ್ಚಿರುವ ಈ ಮೊತ್ತವನ್ನು ಆಟಗಾರರು, ಕೋಚ್ಗಳು ಮತ್ತು ಸಹಾಯಕ ಸಿಬ್ಬಂದಿಗೆ ಹಂಚಲಾಗುವುದು.
03:05 PM (IST) Mar 10
3 ಬಾರಿ ವಿಷ ಹಾಕಿ ಪತ್ನಿ ಕೊಲ್ಲಲು ಯತ್ನಿಸಿದ ಗಂಡ, 4ನೇ ಬಾರಿ ಪ್ಲಾನ್ ಬದಲಿಸಿದಾಗ ಏನಾಯ್ತು?, ಮೂರು ವಿಫಲ ಪ್ರಯತ್ನಗಳ ಬಳಿಕ 4ನೇ ಪ್ರಯತ್ನ ಯಾವುದೇ ಕಾರಣಕ್ಕೂ ವಿಫಲವಾಗಬಾರದು ಎಂದು 1 ಲಕ್ಷ ರೂಪಾಯಿ ಖರ್ಚು ಮಾಡಿದ್ದ.
02:59 PM (IST) Mar 10
ಸ್ವಂತ ಉದ್ಯೋಗ ಶುರು ಮಾಡಲು ಬಯಸುವ ಯುವಕರು ಮತ್ತು ಗೃಹಿಣಿಯರಿಗಾಗಿ 'ವ್ಯಾಲ್ಯೂ ಆಡೆಡ್ ರೆಡಿ-ಮಿಕ್ಸ್ ಉತ್ಪನ್ನಗಳ' ಬಗ್ಗೆ ಎರಡು ದಿನಗಳ ತರಬೇತಿ ಆಯೋಜಿಸಲಾಗಿದೆ. ಈ ತರಬೇತಿಯಿಂದ ತಿಂಗಳಿಗೆ ₹40,000 ಗಳಿಸುವ ಉತ್ತಮ ಅವಕಾಶವಿದೆ.
02:08 PM (IST) Mar 10
IRCTCಯ ಊಟಿ ಮತ್ತು ಕುನ್ನೂರ್ಗೆ 5 ದಿನಗಳ ಹೊಸ ಬಜೆಟ್ ಸ್ನೇಹಿ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಈ ಪ್ಯಾಕೇಜ್ನಲ್ಲಿ ರೈಲು ಪ್ರಯಾಣ, ವಸತಿ, ಮತ್ತು ದೊಡ್ಡಬೆಟ್ಟ, ಮುದುಮಲೈ, ಸಿಮ್ಸ್ ಪಾರ್ಕ್ನಂತಹ ಪ್ರಮುಖ ಸ್ಥಳಗಳ ಭೇಟಿ ಸೇರಿದೆ
01:54 PM (IST) Mar 10
01:37 PM (IST) Mar 10
01:36 PM (IST) Mar 10
01:35 PM (IST) Mar 10
01:23 PM (IST) Mar 10
ಶಾಲೆ ಹೋಗುತ್ತಿದ್ದಾಗ ಒಲಿದಿತ್ತು ಐಪಿಎಲ್ ಅದೃಷ್ಠ, ಸಂಜು ಸ್ಯಾಮ್ಸನ್ ಮೊದಲ ಸಂದರ್ಶನ ಈಗ ವೈರಲ್, ಬಾಲಕ ಸಂಜು ಸ್ಯಾಮ್ಸನ್ ಐಪಿಎಲ್ ಹರಾಜಿನ ಬಳಿಕ ಏಷ್ಯಾನೆಟ್ ನ್ಯೂಸ್ಗೆ ನೀಡಿದ ಮೊದಲ ಸಂದರ್ಶನ ಇದೀಗ ಭಾರಿ ಸದ್ದು ಮಾಡುತ್ತಿದೆ.
12:55 PM (IST) Mar 10
Iran-Israel conflict: ಗಲ್ಫ್ ಯುದ್ಧದ ಬಿಸಿ ಭಾರತೀಯರಿಗೂ ತಟ್ಟಿದೆ. ಕಮರ್ಶಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹಾಗಾದ್ರೆ ನಮ್ಮ ಮುಂದಿರುವ ಆಯ್ಕೆಗಳೇನು? ಜನ ಏನ್ಮಾಡ್ಬೇಕು? ಸರ್ಕಾರ ಏನ್ಮಾಡ್ಬೇಕು? ಕೊರೋನಾ ಸ್ಥಿತಿ ಮತ್ತೆ ಮುಂದುವರಿಯುವ ಸಾಧ್ಯತೆ ಇದೆಯಾ? ಜನರ ಓಡಾಟ ಕಡಿಮೆ ಮಾಡಲು ಸರಕಾರ ಹಾಗೂ ಸಾರ್ವಜನಿಕರು ಜಂಟಿಯಾಗಿ ಏನು ಮಾಡಬಹುದು? ಇಲ್ಲಿವೆ ಕೆಲವು ಟಿಪ್ಸ್