LIVE NOW
Published : Mar 10, 2026, 06:55 AM ISTUpdated : Mar 10, 2026, 09:51 AM IST

India Latest News Live: ಭಾರತವನ್ನು ಬೈಯೋದು ಬಿಡಿ, ಅವರಿಂದ ಕಲಿಯಿರಿ! ಟೀಂ ಇಂಡಿಯಾ ಗೆಲುವನ್ನು ಕೊನೆಗೂ ಒಪ್ಪಿಕೊಂಡ ಪಾಕ್ ಮಾಜಿ ಕ್ರಿಕೆಟರ್ಸ್

ಸಾರಾಂಶ

ನವದೆಹಲಿ: ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಬ್ಯಾರೆಲ್‌ಗೆ 100 ಡಾಲರ್‌ಗಳನ್ನು ದಾಟಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಸದ್ಯಕ್ಕೆ ಹೆಚ್ಚಿಸುವುದಿಲ್ಲ ಎಂದು ಸರ್ಕಾರಿ ಮೂಲಗಳು ಸೋಮವಾರ ತಿಳಿಸಿವೆ.

‘ದೇಶಾದ್ಯಂತ ನಿರಂತರ ಇಂಧನ ಪೂರೈಕೆ ಮಾರ್ಗಗಳನ್ನು ನಿರ್ವಹಿಸಲು ಅಧಿಕಾರಿಗಳು ಪ್ರಯತ್ನಗಳನ್ನು ತೀವ್ರಗೊಳಿಸಿದ್ದಾರೆ. ಜಾಗತಿಕ ತೈಲ ಮಾರುಕಟ್ಟೆಗಳನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ, ಆದರೆ ಚಿಲ್ಲರೆ ಇಂಧನ ಬೆಲೆಗಳನ್ನು ಹೆಚ್ಚಿಸುವ ಯಾವುದೇ ತಕ್ಷಣದ ಯೋಜನೆ ಇಲ್ಲ’ ಎಂದು ಅವು ಹೇಳಿವೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರಸ್ತುತ ವೆಚ್ಚದ ಒತ್ತಡವನ್ನು ಸದ್ಯಕ್ಕೆ ನಿಭಾಯಿಸುವ ನಿರೀಕ್ಷೆಯಿದೆ. ಶುಕ್ರವಾರದಿಂದಲೇ ಜಾರಿಯಾಗುವಂತೆ ಸರ್ಕಾರ ಎಲ್‌ಪಿಜಿ ದರವನ್ನು 60 ರು. ಹೆಚ್ಚಿಸಿತ್ತು.

09:51 AM (IST) Mar 10

ಭಾರತವನ್ನು ಬೈಯೋದು ಬಿಡಿ, ಅವರಿಂದ ಕಲಿಯಿರಿ! ಟೀಂ ಇಂಡಿಯಾ ಗೆಲುವನ್ನು ಕೊನೆಗೂ ಒಪ್ಪಿಕೊಂಡ ಪಾಕ್ ಮಾಜಿ ಕ್ರಿಕೆಟರ್ಸ್

ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವನ್ನು ಜಾವೇದ್ ಮಿಯಾಂದಾದ್ ಮತ್ತು ಮೊಹಮ್ಮದ್ ವಸೀಮ್‌ರಂತಹ ಪಾಕಿಸ್ತಾನದ ಮಾಜಿ ಆಟಗಾರರು ಶ್ಲಾಘಿಸಿದ್ದು, ಭಾರತದಿಂದ ಪಾಠ ಕಲಿಯಬೇಕೆಂದು ಹೇಳಿದ್ದಾರೆ.  ಸೂಪರ್-8 ಹಂತದಲ್ಲೇ ಹೊರಬಿದ್ದ ಪಾಕ್ ಆಟಗಾರರಿಗೆ 50 ಲಕ್ಷ ದಂಡ ವಿಧಿಸಲಾಗಿದೆ.

Read Full Story

09:14 AM (IST) Mar 10

ಎಲ್ಲರೂ 'ಚಾಂಪಿಯನ್' ಜರ್ಸಿಯಲ್ಲಿ, ಸಂಜು ಸ್ಯಾಮ್ಸನ್ ಮಾತ್ರ ಹಳೆ ಟೀಶರ್ಟ್‌ನಲ್ಲಿ! ಯಾಕಿಂಗೆ ಮಾಡಿದ್ರು ಕೇರಳ ಕ್ರಿಕೆಟಿಗ?

ಟಿ20 ವಿಶ್ವಕಪ್ ಗೆದ್ದ ನಂತರ ಟೀಂ ಇಂಡಿಯಾದ ಆಟಗಾರರೆಲ್ಲರೂ 'ಚಾಂಪಿಯನ್ಸ್' ಜೆರ್ಸಿ ಧರಿಸಿದ್ದರು. ಆದರೆ, ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಸಂಜು ಸ್ಯಾಮ್ಸನ್ ಮಾತ್ರ ಹಳೆಯ ಜೆರ್ಸಿಯಲ್ಲೇ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
Read Full Story

08:46 AM (IST) Mar 10

ಟೀಂ ಇಂಡಿಯಾದ ‘ವಿಶ್ವಕಪ್’ ಗೆಲುವಿಗೆ ಹರ್ಷೋದ್ಗಾರ! ಐತಿಹಾಸಿಕ ಸಾಧನೆ ಕೊಂಡಾಡಿದ ದಿಗ್ಗಜರು

ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ, 3ನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಈ ಐತಿಹಾಸಿಕ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟ್ ದಿಗ್ಗಜರು ಹಾಗೂ ಸಿನಿಮಾ ತಾರೆಯರು ಸೇರಿದಂತೆ ದೇಶದಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
Read Full Story

08:29 AM (IST) Mar 10

ಯುದ್ಧದಿಂದ ಎಲ್‌ಪಿಜಿ ಅಭಾವ - ಶವಾಗಾರದಲ್ಲಿ LPG ಬದಲು ಎಲೆಕ್ಟ್ರಿಕ್‌ ಅಂತ್ಯಕ್ರಿಯೆ!

ಮಧ್ಯಪ್ರಾಚ್ಯ ಯುದ್ಧದಿಂದ ಎಲ್‌ಪಿಜಿ ಕೊರತೆಯ ಭೀತಿ ಎದುರಾಗಿದ್ದು, ಪುಣೆಯ ಶವಾಗಾರವು ಎಲೆಕ್ಟ್ರಿಕ್‌ ಅಂತ್ಯಸಂಸ್ಕಾರಕ್ಕೆ ಮೊರೆಹೋಗಿದೆ. ಈ ಸಂಘರ್ಷವು 'ಜಲಯುದ್ಧ'ವಾಗಿ ಮಾರ್ಪಟ್ಟಿದ್ದು, ಇರಾನ್-ಅಮೆರಿಕ ನೀರಿನ ಘಟಕಗಳ ಮೇಲೆ ದಾಳಿ ನಡೆಸಿವೆ.  ದುಬೈನಲ್ಲಿ ತೀವ್ರ ಆಹಾರದ ಕೊರತೆ ಉಂಟಾಗಿದೆ.

Read Full Story

08:17 AM (IST) Mar 10

ಇರಾನ್‌ ಮೇಲೆ ದಾಳಿಗೆ ದಿನಕ್ಕೆ ಅಮೆರಿಕ ₹8,000 ಕೋಟಿ ಖರ್ಚು! ಈವರೆಗೆ ದೊಡ್ಡಣ್ಣನಿಗಾದ ನಷ್ಟವೆಷ್ಟು?

ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಅಮೆರಿಕ ಪ್ರತಿದಿನ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದು, ಭಾರೀ ನಷ್ಟವನ್ನು ಅನುಭವಿಸುತ್ತಿದೆ. ಈ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಜಾಗತಿಕ ತೈಲ ಕೊರತೆಯನ್ನು ನಿಭಾಯಿಸಲು ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುವಂತೆ ಅಮೆರಿಕವೇ ಈಗ ಸೂಚನೆ ನೀಡಿದೆ.
Read Full Story

08:00 AM (IST) Mar 10

ತಿರುಪತಿಗೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ - ಬಕೆಟ್ ಪಾತ್ರೆಗಳಲ್ಲಿ ತುಂಬಿಕೊಂಡು ಹೋದ ಜನ

ತಿರುಪತಿಗೆ ತುಪ್ಪ ಸಾಗಿಸುತ್ತಿದ್ದ ಟ್ಯಾಂಕರ್ ಕಡಪಾದಲ್ಲಿ ಪಲ್ಟಿಯಾಗಿದ್ದು, ಸ್ಥಳೀಯರು ತುಪ್ಪವನ್ನು ಸಂಗ್ರಹಿಸಿದ್ದಾರೆ. 'ಕಲ್ಕಿ' ಚಿತ್ರಕ್ಕಾಗಿ ಕಮಲ್ ಹಾಸನ್ 150 ಕೋಟಿ ರೂ. ಸಂಭಾವನೆ ಪಡೆದಿದ್ದರೆ, ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿಜಯ್ ಅವರನ್ನು ಸಿಬಿಐ ಮತ್ತೆ ವಿಚಾರಣೆಗೆ ಕರೆದಿದೆ.
Read Full Story

07:29 AM (IST) Mar 10

ಇರಾನ್ ಇಸ್ರೇಲ್ ಯುದ್ಧದಿಂದ ಷೇರುಪೇಟೆಯಲ್ಲಿ ಮಹಾಪತನ - 10 ದಿನದಲ್ಲಿ 31 ಲಕ್ಷ ಕೋಟಿ ಸಂಪತ್ತು ನಾಶ

ಇರಾನ್ ಯುದ್ಧದ ಪರಿಣಾಮವಾಗಿ ಭಾರತೀಯ ಷೇರುಪೇಟೆ ಭಾರೀ ಕುಸಿತ ಕಂಡಿದ್ದು, ಹೂಡಿಕೆದಾರರು ಲಕ್ಷಾಂತರ ಕೋಟಿ ನಷ್ಟ ಅನುಭವಿಸಿದ್ದಾರೆ. ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠಕ್ಕೆ ಇಳಿದಿದೆ. ಒಂದೇ ದಿನ 53 ಪೈಸೆ ಕುಸಿದು 92.35 ರು.ಗೆ ಮುಕ್ತಾಯವಾಗಿದೆ. ಇದು ಇದುವರೆಗಿನ ಸಾರ್ವಕಾಲಿಕ ಕನಿಷ್ಠ.

Read Full Story

More Trending News