LIVE NOW
Published : Sep 01, 2026, 05:25 AM ISTUpdated : Sep 01, 2026, 06:14 AM IST

India Latest News Live: ಬ್ಯಾಂಕ್ ಆಫ್ ಬರೋಡಾ ನೇಮಕಾತಿ - ಸ್ಥಳೀಯ ಭಾಷೆ ಬಲ್ಲ 2482 ಅಧಿಕಾರಿಗಳ ನೇಮಕಾತಿಗೆ ಅರ್ಜಿ

ಸಾರಾಂಶ

ಹಲ್ದ್ವಾನಿ(ಉತ್ತರಾಖಂಡ): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದ ಸ್ಥಳವನ್ನು ‘ಶುದ್ಧೀಕರಣ’ ಮಾಡಿದ್ದರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರಿಗೆ ಇದೇ ಪ್ರಕರಣ ಈಗ ತಿರುಗುಬಾಣವಾಗಿ ಪರಿಣಮಿಸಿದೆ. ಶುದ್ಧೀಕರಣ ನಡೆಸಿದವರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಪಟ್ಟು ಹಿಡಿದಿದ್ದ ರಾಹುಲ್ ವಿರುದ್ಧವೇ ಉತ್ತರಾಖಂಡ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ರಾಹುಲ್ ಅವರು ಈ ಧಾರ್ಮಿಕ ವಿಧಿಗೆ ಜಾತಿಯ ಬಣ್ಣ ಬಳಿದು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಮತ್ತು ಪೂಜೆ ಮಾಡಿದವರನ್ನು ‘ಅಸ್ಪೃಶ್ಯತೆ ಆಚರಿಸುವವರು’ ಎಂದು ಬಿಂಬಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

06:14 AM (IST) Sep 01

ಬ್ಯಾಂಕ್ ಆಫ್ ಬರೋಡಾ ನೇಮಕಾತಿ - ಸ್ಥಳೀಯ ಭಾಷೆ ಬಲ್ಲ 2482 ಅಧಿಕಾರಿಗಳ ನೇಮಕಾತಿಗೆ ಅರ್ಜಿ

ಬ್ಯಾಂಕ್ ಆಫ್ ಬರೋಡಾವು ಸ್ಥಳೀಯ ಭಾಷೆ ಬಲ್ಲ 2,482 ಅಧಿಕಾರಿಗಳನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ. ಈ ನಿರ್ಧಾರವು ಬ್ಯಾಂಕ್‌ಗಳಲ್ಲಿ ಪರಭಾಷಿಕ ಸಿಬ್ಬಂದಿ ವಿರುದ್ಧದ ಹೋರಾಟದ ಹಿನ್ನೆಲೆಯಲ್ಲಿ ಬಂದಿದ್ದು, ನೇಮಕಗೊಂಡವರು 12 ವರ್ಷಗಳ ಕಾಲ ಅದೇ ರಾಜ್ಯದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ.
Read Full Story

More Trending News