Asianet Suvarna News Asianet Suvarna News

ದಸರಾಗೆ ಪ್ಯಾನ್ ಇಂಡಿಯಾ ಸ್ಟಾರ್ಸ್ ಬಿಗ್ ನ್ಯೂಸ್? ಯಶ್-ಕಿಚ್ಚನ ಮೇಲೆ ಅಭಿಮಾನಿಗಳ ಕಣ್ಣು!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್ ಮೇಲೆ ಈಗ ಎಲ್ಲರ ಕಣ್ಣು. ಯಶ್-ಕಿಚ್ಚ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಗೆದ್ದಿದ್ದಾರೆ. ಈ ಬಿಗ್ ಸ್ಟಾರ್ಸ್ ಹೊಸ ಸಿನಿಮಾ ಅನೌನ್ಸ್ ಯಾವಾಗ ಅನ್ನೋ ಕೌತುಕ ಹೆಚ್ಚಿದೆ. ಇದಕ್ಕೆ ಉತ್ತರ ಹುಡುಕುತ್ತಾ ಹೋದ್ರೆ ಗಾಂಧಿನಗರದಲ್ಲಿ ನಯಾ ಆನ್ಸರ್ ಒಂದು ಸಿಕ್ಕಿದೆ. 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್ ಮೇಲೆ ಈಗ ಎಲ್ಲರ ಕಣ್ಣು. ಯಶ್-ಕಿಚ್ಚ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಗೆದ್ದಿದ್ದಾರೆ. ಈ ಬಿಗ್ ಸ್ಟಾರ್ಸ್ ಹೊಸ ಸಿನಿಮಾ ಅನೌನ್ಸ್ ಯಾವಾಗ ಅನ್ನೋ ಕೌತುಕ ಹೆಚ್ಚಿದೆ. ಇದಕ್ಕೆ ಉತ್ತರ ಹುಡುಕುತ್ತಾ ಹೋದ್ರೆ ಗಾಂಧಿನಗರದಲ್ಲಿ ನಯಾ ಆನ್ಸರ್ ಒಂದು ಸಿಕ್ಕಿದೆ. ನೀವೇನ್ ಹೆಚ್ಚು ದಿನ ಕಾಯ್ಬೇಡಿ ಈ ಭಾರಿಯ ದಸರಾ ಹಬ್ಬದಲ್ಲಿ ನೋಡಿ ಈ ಇಬ್ಬರು ಸ್ಟಾರ್ಸ್‌ನಲ್ಲಿ ಒಬ್ರಂತು ಹೊಸ ಸಿನಿಮಾ ಅನೌನ್ಸ್ ಮಾಡೇ ಮಾಡುತ್ತಾರೆ ಅನ್ನೋ ಉತ್ತರ ಹೊರ ಬಂದಿದೆ. ಕಿಚ್ಚ ಸುದೀಪ್‌ಗೆ ಡೈರೆಕ್ಷನ್ ಮಾಡೋಕೆ ತಮಿಳು ನಿರ್ದೇಶಕ ವೆಂಕಟ್ ಪ್ರಭು ಅಪ್ಲಿಕೇಷನ್ ಹಾಕಿದ್ದಾರೆ. ಮತ್ತೊಂದ್ ಕಡೆ ನಂದ ಕಿಶೋರ್ ಹೊಸ ಕಥೆ ರೆಡಿ ಮಾಡಿ ಸುದೀಪ್‌ಗೆ ತನ್ನ ರೆಸ್ಯೂಮ್ ಕೊಟ್ಟಿದ್ದಾರೆ. ಇದರ ಜೊತೆ ಮೊನ್ನೆ ಮೊನ್ನೆ ತಾನೆ ಕಬಾಲಿ ಸಿನಿಮಾದ ನಿರ್ಮಾಪಕ ಕಲೈ ಪುಲಿ ಸುದೀಪ್ರನ್ನ ಭೇಟಿ ಮಾಡಿ ಹೋಗಿದ್ದಾರೆ. ಈ ಮೂರು ಜನರಲ್ಲಿ ಕಿಚ್ಚ ಯಾರನ್ನ ಫೈನಲ್ ಮಾಡಿದ್ದಾರೆ ಅನ್ನೋ ಸೀಕ್ರೆಟ್ ದಸರಾಗೆ ರಿವೀಲ್ ಆಗೋ ಸಾಧ್ಯತೆ ಇದೆ. ಅತ್ತ ತಮಿಳು ನಿರ್ದೇಶಕ ಶಂಕರ್ ಯಶ್ ಜೊತೆ ಮಾತುಕಥೆ ಮಾಡಿದ್ದು, ರಾಕಿಂಗ್ ಸ್ಟಾರ್ ತನ್ನ 19ನೇ ಸಿನಿಮಾ ಸುದ್ದಿಯನ್ನ ದಸರಾದಂದೇ ಕೊಡ್ತಾರಾ ಅಂತ ಫ್ಯಾನ್ಸ್ ಕಾಯುತ್ತಿದ್ದಾರೆ. ಹೀಗಾಗಿ ಸ್ಯಾಂಡಲ್‌ವುಡ್‌ನ ಈ ಇಬ್ಬರು ಪ್ಯಾನ್ ಇಂಡಿಯಾ ಸ್ಟಾರ್‌ಗಳ ಮೇಲೆ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories