Asianet Suvarna News Asianet Suvarna News

ಯಶ್ ಚಿತ್ರದಿಂದ ಕಂಪ್ಲೀಟ್ ಆಗಿ ಹೊರ ಬಂದ ಮಫ್ತಿ ಡೈರೆಕ್ಟರ್ ನರ್ತನ್!

ಯಶ್ ನರ್ತನ್.. ಈ ಕಾಂಬೋ ಒಂದಾಗಿ ಮತ್ತೊಂದು ಇತಿಹಾಸ ಸೃಷ್ಟಿಸುತ್ತಾರೆ ಅಂತ ಎಲ್ಲರೂ ಊಹಿಸಿದ್ರು. ಅದರಂತೆ ನರ್ತನ್ ಕಳೆದ ಮೂರು ವರ್ಷದಿಂದ ರಾಕಿಗಾಗಿ ಹಲವು ಕಥೆಗಳನ್ನ ಬರೆದಿದ್ರು. ಕೆಜಿಎಫ್ 2 ಹವಾ ಮುಗೀತು ಇನ್ನೇನು ನರ್ತನ್ ಯಶ್ ಮಹಾ ಕಾಂಬಿನೇಷನ್ ಸಿನಿಮಾ ಅನೌನ್ಸ್ ಮಾಡೋ ದಿನ ಬಂದೇ ಬಿಡ್ತು ಅನ್ನುವಷ್ಟರಲ್ಲಿ ಆ ದಿನ ಮರೆಯಾಗಿದೆ.

ಯಶ್ ನರ್ತನ್.. ಈ ಕಾಂಬೋ ಒಂದಾಗಿ ಮತ್ತೊಂದು ಇತಿಹಾಸ ಸೃಷ್ಟಿಸುತ್ತಾರೆ ಅಂತ ಎಲ್ಲರೂ ಊಹಿಸಿದ್ರು. ಅದರಂತೆ ನರ್ತನ್ ಕಳೆದ ಮೂರು ವರ್ಷದಿಂದ ರಾಕಿಗಾಗಿ ಹಲವು ಕಥೆಗಳನ್ನ ಬರೆದಿದ್ರು. ಕೆಜಿಎಫ್ 2 ಹವಾ ಮುಗೀತು ಇನ್ನೇನು ನರ್ತನ್ ಯಶ್ ಮಹಾ ಕಾಂಬಿನೇಷನ್ ಸಿನಿಮಾ ಅನೌನ್ಸ್ ಮಾಡೋ ದಿನ ಬಂದೇ ಬಿಡ್ತು ಅನ್ನುವಷ್ಟರಲ್ಲಿ ಆ ದಿನ ಮರೆಯಾಗಿದೆ. ಯಾಕಂದ್ರೆ ಯಶ್ ಮುಂದಿನ ಸಿನಿಮಾಗೆ ನರ್ತನ್ ಆಕ್ಷನ್ ಕಟ್ ಹೇಳೋದಿಲ್ಲಾ ಅನ್ನೋ ವಿಚಾರ ಈಗ ಪಕ್ಕಾ ಆಗಿದೆ. ಕೆಜಿಎಫ್ ಫೈಯರ್ ಬ್ರ್ಯಾಂಡ್ ಯಶ್ ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್‌ಗೆ ಸ್ಟೋರಿ ರೆಡಿ ಮಾಡುವಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೂಮ್ ಹಾಕಿಕೊಟ್ಟಿದ್ದಾರೆ ಅಂತ ಗಾಂಧಿನಗರದಲ್ಲಿ ಸುದ್ದಿ ಇತ್ತು. ಅದು ನಿಜ ಕೂಡ. ಯಶ್‌ಗೆ ಆಕ್ಷನ್ ಕಟ್ ಹೇಳಲು ನರ್ತನ್ 3 ಕಥೆಗಳನ್ನ ಸಿದ್ಧಪಡಿಸಿದ್ರು. ಆದ್ರೆ ರಾಕಿಯ ಎಕ್ಸ್ಪಟೇಷನ್ ರೀಚ್ ಮಾಡೋಕೆ ನಿರ್ದೇಶಕ ನರ್ತನ್ರಿಂದ ಸಾಧ್ಯ ಆಗಿಲ್ಲ. 

ಹೀಗಾಗಿ ರಾಕಿಂಗ್ ಸ್ಟಾರ್ ನರ್ತನ್‌ಗೆ ಮುಂದೆ ನೋಡೋಣ ಅಂತ ಹೇಳಿದ್ದಾರೆ. ಇದ್ರಿಂದ ನರ್ತನ್ ಯಶ್‌ಗೆ ಆಕ್ಷನ್ ಕಟ್ ಹೇಳೋ ಕನಸು ಭಗ್ನವಾಗಿದ್ದು, ರಾಕಿಯ 19ನೇ ಪ್ರಾಜೆಕ್ಟ್ನಿಂದ ನರ್ತನ್ ಕಂಪ್ಲೀಟ್ ಆಗಿ ಹೊರ ಬಂದಿದ್ದಾರೆ. ಯಶ್ ನರ್ತನ್ ಕಾಂಬಿನೇಷನ್ ಸಿನಿಮಾಗೆ ಬಂಡವಾಳ ಹೂಡಿಕೆ ಬಂದಿದ್ದು ಕೆವಿಎನ್ ಪ್ರೊಡಕ್ಷನ್. ಆದ್ರೆ ನರ್ತನ್ ಯಶ್ ಚಿತ್ರದಿಂದ ಹೊರ ಬಂದಿದ್ರಿಂದ ಕೆವಿಎನ್ ನಿರ್ಮಾಣ ಸಂಸ್ಥೆ ಮೌನಕ್ಕೆ ಶರಣಾಗಿತ್ತು. ಭಟ್ ನಿರ್ದೇಶಕ ನರ್ತನ್ ಈಗ ಬಾಲಿವುಡ್ ಟಾಪ್ ಹೀರೋ ಒಬ್ಬರಿಗೆ ಆಕ್ಷನ್ ಕಟ್ ಹೇಳೋದಕ್ಕೆ ಕಥೆ ಒಪ್ಪಿಸಿದ್ದು, ಆ ಸಿನಿಮಾಗೂ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡಲಿದೆ ಅನ್ನೋ ವಿಚಾರ ಬಹಿರಂಗ ಆಗಿದೆ. ಅಲ್ಲಿಗೆ ಯಶ್ ನರ್ತನ್ ಕಾಂಬಿನೇಷನ್ ಸಿನಿಮಾ ಸಧ್ಯಕ್ಕಂತು ಬರೋದಿಲ್ಲ ಅನ್ನೋದು ಪಕ್ಕಾ ಆಗಿದೆ. ಯಶ್ ಸಿನಿಮಾ ಅನೌನ್ಸ್ ಸದ್ಯಕ್ಕಂತೂ ಇಲ್ಲ. ಆದ್ರೆ ರಾಕಿಗೆ ಡೈರೆಕ್ಷನ್ ಮಾಡೋ ಡೈರೆಕ್ಟರ್ ಲೀಸ್ಟ್‌ನಿಂದ ನರ್ತನ್ ಹೊರ ಬಿದ್ದಾಗಿದೆ. ಇನ್ನು ಉಳಿದಿರೋದು ಕಾಲಿವುಡ್ ಡೈರೆಕ್ಟರ್ ಎಸ್. ಶಂಕರ್. ಒಂದು ಸುತ್ತಿನ ಮಾತುಕಥೆ ಮಾಡಿರೋ ನಿರ್ದೇಶಕ ಶಂಕರ್ ಯಶ್‌ಗೆ ಕಥೆ ಹೇಳಬೇಕಿದೆ. ಇದರ ಮಧ್ಯೆ ರಾಕಿ ಬೇರೆ ಡೈರೆಕ್ಟರ್ಗಳ ಹುಡುಕಾಟದಲ್ಲೂ ಇದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories