Asianet Suvarna News Asianet Suvarna News

ಉಡುಪಿ: ಸಾವರ್ಕರ್ ವೃತ್ತ ಬೇಡಿಕೆಗೆ ಸಿಗದ ಮನ್ನಣೆ: ಆಸ್ಕರ್ ಫರ್ನಾಂಡೀಸ್ ಹೆಸರಿಡಲು ನಿರ್ಧಾರ

ಕಳೆದ ಹಲವು ದಿನಗಳಿಂದ ಭಾರಿ ಸದ್ದು ಮಾಡಿದ್ದ ಸಾವರ್ಕರ್ ವಿವಾದ ನಿರ್ಣಾಯಕ ಘಟ್ಟ ತಲುಪಿತ್ತು. ಆದ್ರೆ, ಈಗ ಸಾವರ್ಕರ್ ಸಮರ ಮತ್ತೆ ಮುಂದುವರೆದಿದೆ.

ಉಡುಪಿ(ಸೆಪ್ಟೆಂಬರ್.20):  ವಿವಾದ ಹುಟ್ಟಿಸಿದ್ದ ಸಾವರ್ಕರ್ ಹೆಸರಿನ ಸರ್ಕಲ್ ನಿರ್ಮಾಣಕ್ಕೆ ಉಡುಪಿ ನಗರಸಭೆ ಸರ್ವ ಸದಸ್ಯರು ಸಮ್ಮತಿ ಸೂಚಿಸಿದ್ದರು. ಈ ಮೂಲಕ ಕಳೆದ ಹಲವು ದಿನಗಳಿಂದ ಭಾರಿ ಸದ್ದು ಮಾಡಿದ್ದ ಸಾವರ್ಕರ್ ವಿವಾದ ನಿರ್ಣಾಯಕ ಘಟ್ಟ ತಲುಪಿತ್ತು. ಆದ್ರೆ, ಈಗ ಸಾವರ್ಕರ್ ಸಮರ ಮತ್ತೆ ಮುಂದುವರೆದಿದೆ.

ಉಡುಪಿ: ಸಾವರ್ಕರ್‌ ಸರ್ಕಲ್ ನಿರ್ಮಾಣ, ನಗರಸಭೆಯಿಂದ ಮಹತ್ವದ ನಿರ್ಣಯ

ಹೌದು...ಉಡುಪಿಯಲ್ಲಿ ಮತ್ತೆ   ಸಾವರ್ಕರ್ ಹೆಸರಿನ ಸರ್ಕಲ್ ಭಾರಿ ವಿವಾದ ಹುಟ್ಟಿಸಿದೆ. ವೃತ್ತಕ್ಕೆ ಸಾವರ್ಕರ್ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ. ಇದರಿಂದ ಆಸ್ಕರ್ ಫರ್ನಾಂಡೀಸ್ ಹೆಸರು ಇಡಲು ನಿರ್ಧಾರವಾಗಿದೆ.