Asianet Suvarna News Asianet Suvarna News

ಕೋಟಿ ಕೋಟಿ ಕೊಟ್ಟರು ಆ ಜಾಹೀರಾತು ಬೇಡ; ಅಭಿಮಾನಿಗಳಿಗಾಗಿ ಕೋಟಿ ತಿರಸ್ಕರಿಸಿದ ಸ್ಟಾರ್ಸ್

ಸಿನಿಮಾ ಸ್ಟಾರ್ ಗಳು ಕೇವಲ ಆಕ್ಟಿಂಗ್ ನಿಂದ ಮಾತ್ರವಲ್ಲ ಬೇರೆ ಬೇರೆ ರೀತಿಯಲ್ಲೂ ದುಡಿಯುತ್ತಾರೆ. ಕೋಟಿ ಕೋಟಿ ಗಳಿಸುತ್ತಾರೆ. ಅದ್ರಲ್ಲಿ ಜಾಹೀರಾತು ಕೂಡ ಒಂದು. ಸಾಕಷ್ಟು ಬ್ರ್ಯಾಂಡ್ ಗಳ ಜಾಹೀರಾತುಗಳಿಂದ ಕೋಟಿ ಕೋಟಿ ಸಂಪಾದನೆ ಮಾಡ್ತಾರೆ. 

ಸಿನಿಮಾ ಸ್ಟಾರ್ ಗಳು ಕೇವಲ ಆಕ್ಟಿಂಗ್ ನಿಂದ ಮಾತ್ರವಲ್ಲ ಬೇರೆ ಬೇರೆ ರೀತಿಯಲ್ಲೂ ದುಡಿಯುತ್ತಾರೆ. ಕೋಟಿ ಕೋಟಿ ಗಳಿಸುತ್ತಾರೆ.  ಅದ್ರಲ್ಲಿ ಜಾಹೀರಾತು ಕೂಡ ಒಂದು. ಸಾಕಷ್ಟು ಬ್ರ್ಯಾಂಡ್ ಗಳ ಜಾಹೀರಾತುಗಳಿಂದ ಕೋಟಿ ಕೋಟಿ ಸಂಪಾದನೆ ಮಾಡ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಕೋಟ್ಯಂತರ ರೂಪಾಯಿ ಕೊಡೋ ಜಾಹೀರಾತನ್ನು ತಿರಸ್ಕಾರ ಮಾಡ್ತಿದ್ದಾರೆ ಸ್ಟಾರ್ ನಟರು. ಅದಕ್ಕೆ ಕಾರಣ ಸ್ಟಾರ್ ಡಮ್ ಡಲ್ ಆಗೋ ಭೀತಿ. ಹಾಗೂ ಅಭಿಮಾನಿಗಳ ಮೇಲಿರೋ ಕಾಳಜಿ. ಕೆಜಿಎಫ್ ಸಿನಿಮಾ ರಿಲೀಸ್ ಆಗಿ ಸಕ್ಸಸ್ ಕಂಡ ನಂತ್ರ ಯಶ್ ಅವ್ರನ್ನ ಸಾಲು ಸಾಲು ಆಡ್ ಕಂಪನಿಗಳು ಬೆಂಬೆಡದೆ ಕಾಡುತ್ತಿವೆಯಂತೆ. ಅದ್ರಲ್ಲಿ ಪಾನ್ ಮಸಾಲ ಸಂಸ್ಥೆ ಕೂಡ ಒಂದು. ಆದ್ರೆ ಯಶ್ ಎಷ್ಟೇ ಕೋಟಿ ಕೊಟ್ಟರು ನಾನು ಪಾನ್ ಮಸಾಲಾ ಆ್ಯಡ್ ಮಾಡಲ್ಲ ಅಂದಿದ್ದಾರೆ. ಇನ್ನು ನಟ ಅಲ್ಲು ಅರ್ಜುನ್ ಅವ್ರಿಗೂ ಪಾನ್ ಮಸಾಲಾ ಜಾಹೀರಾತಿನ ಆಫರ್ ಬಂದಿತ್ತಂತೆ. ಸಾಮಾನ್ಯವಾಗಿ ಅಲ್ಲು ಅರ್ಜುನ್ ಜಾಹೀರಾತು ಒಂದಕ್ಕೆ 7.5 ಕೋಟಿ ಚಾರ್ಜ್ ಮಾಡುತ್ತಾರೆ. ಆದ್ರೆ ಪಾನ್ ಮಸಾಲಾ ಸಂಸ್ಥೆ 10 ಕೋಟಿ ಆಫರ್ ಮಾಡಿತ್ತಂತೆ ಆದ್ರೆ ಸ್ಟೈಲಿಷ್ ಸ್ಟಾರ್ ಅದನ್ನ ರಿಜೆಕ್ಟ್ ಮಾಡಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವ್ರಿಗೂ ಈ ರೀತಿಯ ಆ್ಯಡ್ ಆಫರ್ ಗಳು ಆಗಾಗ ಬರ್ತಾನೆ ಇತ್ತಂತೆ. ಆದ್ರೆ ಪುನೀತ್ ವ್ಯಸನಕ್ಕೆ ಸಂಬಂಧಿಸಿದಂತಹ ಜಾಹೀರಾತಿನಲ್ಲಿ ಆಕ್ಟ್ ಮಾಡೋದಿಲ್ಲ ಅಂತ ಫಿಕ್ಸ್ ಆಗಿದ್ರು. ಅದನ್ನ ಬಿಟ್ಟು ಸರ್ಕಾರದಿಂದ ಅಪ್ರೋಚ್ ಆಗುವ ಎಲ್ಲಾ ಜಾಹೀರಾತಿನಲ್ಲಿ ಅಪ್ಪು ಅಭಿನಯಿಸ್ತಿದ್ರು ವಿಶೇಷ ಅಂದ್ರೆ ಸರ್ಕಾರದ ಯಾವುದೇ ಜಾಹೀರಾತಿಗೂ ಅಪ್ಪು ಹಣ ಪಡೆಯುತ್ತಿರಲಿಲ್ಲ. ಕನ್ನಡದಲ್ಲಿ ಅತೀ ಹೆಚ್ಚು ಜಾಹೀರಾತಿನಲ್ಲಿ ಕಾಣಿಸಿಕೊಳ್ಳೊ ಏಕೈಕ್ ನಟ ಕಿಚ್ಚ ಸುದೀಪ್. ಹೌದು ಕಿಚ್ಚನ ಕೈನಲ್ಲಿ ಸಾಲು ಸಾಲು ಜಾಹೀರಾತುಗಳಿವೆ. ಎಷ್ಟೆ ಆಫರ್ ಬಂದ್ರು ಕಿಚ್ಚ ಜಾಹೀರಾತಿಗಾಗಿ ಒಂದಿಷ್ಟು ರಿಸ್ಟ್ರಿಕ್ಷನ್ ಹಾಕಿಕೊಂಡಿದ್ದಾರೆ. 
 

Video Top Stories