Viral Prank: ನಾಗಿಣಿ 2 ನಟಿ ನಮ್ರತಾ ಗೌಡ ಕಾಲಿಗೆ ಪೆಟ್ಟು, ಸ್ಥಿತಿ ಗಂಭೀರ
ನಾಗಿಣಿ 2 ನಟ ನಿನಾದ್ಗೆ ಪ್ರಾಂಕ್ ಮಾಡಿದ ನಟಿ ನಮ್ರತಾ..ಯೂಟ್ಯೂಬ್ನಲ್ಲಿ ವಿಡಿಯೋ ವೈರಲ್...
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2 ಧಾರಾವಾಹಿ ಆರಂಭದಿಂದಲ್ಲೂ ಟಿಆರ್ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿದೆ. ವಿಭಿನ್ನ ಮತ್ತು ರೋಚಕ ತಿರುವುಗಳನ್ನು ನೀಡುವ ಮೂಲಕ ಧಾರಾವಾಹಿ ವೀಕ್ಷಕರ ಗಮನ ಸೆಳೆಯುತ್ತಿದೆ. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಮ್ರತಾ ಗೌಡ ಮತ್ತು ನಿನಾದ್ ಜೋಡಿ ಎಲ್ಲರ ಫೇವರೆಟ್ ಕೂಡ ಹೌದು. ಆದರೆ ಕೆಲವು ವೈಯಕ್ತಿಕ ಕಾರಣಗಳಿಂದ ನಿನಾದ್ ಧಾರಾವಾಹಿಯಿಂದ ಹೊರ ನಡೆಯುತ್ತಿದ್ದಾರೆ. ಲಾಸ್ಟ್ ಮೂರ್ನಾಲ್ಕು ಮುಖ್ಯವಾದ ಎಪಿಸೋಡ್ನ ಚಿತ್ರೀಕರಣ ಮುಗಿಸಿದ ನಂತರ ತಂಡಕ್ಕೆ ಗುಡ್ ಬೈ ಹೇಳಲಿದ್ದಾರೆ. ಈ ಕೊನೆಯ ಎಪಿಸೋಡ್ ಚಿತ್ರೀಕರಣದ ವೇಳೆ ನಿನಾದ್ ಮೇಲೊಂದು ಪ್ರಾಂಕ್ ಪ್ರಯೋಗ ಮಾಡಿದ್ದಾರೆ.
ಹೌದು! ನಾಗಿಣಿ ಅವತಾರದಲ್ಲಿ ಕಾಣಿಸಿಕೊಳ್ಳುವ ನಮ್ರತಾ ಗೌಡ ಕೆಲವು ದಿನಗಳ ಹಿಂದೆ ಯೂಟ್ಯೂಬ್ ಲೋಕಕ್ಕೆ ಕಾಲಿಟ್ಟರು. ಮೊದಲ ದಿನದಿಂದಲ್ಲೂ ಎಲ್ಲರೂ ನಿನಾದ್ ಮೇಲೆ ಪ್ರಾಂಕ್ ಪ್ರಯೋಗ ಮಾಡಿ ಎಂದು ಕಾಮೆಂಟ್ ಮಾಡುತ್ತಿದ್ದರಂತೆ, ಹೀಗಾಗಿ ನಮ್ರತಾ ಇಡೀ ಟೀಂದ ಜೊತೆ ಸೇರಿಕೊಂಡು ಒಂದು ಗಿಮಿಕ್ ಮಾಡಿದ್ದಾರೆ.
ಹೊಸ ಮನೆ ಖರೀದಿಸಿದ ನಾಗಿಣಿ 2 ಧಾರಾವಾಹಿ ನಟಿ ನಮ್ರತಾ ಗೌಡ!
ಪ್ರತಿಯೊಬ್ಬರು ಚಿತ್ರೀಕರಣ ಮಾಡುತ್ತಿರಿ ಇಲ್ಲವಾದರೆ ಊಟ ಮಾಡುತ್ತಿರಿ ನಾನು ಬಾಗಿಲು ತೆಗೆದು ಕೆಳಗೆ ಬೀಳುವೆ ಆಗ ನನ್ನ ಕಾಲುಗಳಿಂದ ರಕ್ತ ಬರುತ್ತದೆ ನಿನಾದ್ ರಿಯಾಕ್ಷನ್ ನೋಡೋಣ ಎಂದು ನಮ್ರತಾ ಎಲ್ಲರಿಗೂ ಹೇಳುತ್ತಾರೆ. ಕಾಲಿಗೆ ನಿಜವಾಗಲ್ಲೂ ಪೆಟ್ಟು ಬಿದ್ದಿದೆ ಎನ್ನುವ ರೀತಿಯಲ್ಲಿ ಇರಬೇಕೆಂದು ಸೀರಿಯಲ್ನಲ್ಲಿ ಬಳಸುವ ಫೇಕ್ ರಕ್ತದಿಂದ ಗಾಯ ಮಾಡಿಕೊಳ್ಳುತ್ತಾರೆ. ಮೇಕಪ್ ಆರ್ಟಿಸ್ಟ್ ಕೈ ಚಳಕದಿಂದ ಗಾಯ ನೋಡಲು ರಿಯಲ್ ಆಗಿ ಕಾಣಿಸುತ್ತಿತ್ತು.
ನಮ್ರತಾ ಜೋರಾಗಿ ಕೂಗಿ ಕೆಳಗಿ ಬೀಳುತ್ತಿದ್ದಂತೆ ನಿನಾದ್ ರೂಮ್ಗೆ ಓಡಿ ಬರುತ್ತಾರೆ. ತುಂಬಾನೇ ಕಾಮ್ ಆಂಡ್ ಕಂಪೋಸ್ ಆಗಿ ಸಂದರ್ಭವನ್ನು ಹ್ಯಾಂಡಲ್ ಮಾಡುತ್ತಾರೆ. ಏನೆಲ್ಲಾ ಆಯ್ತು ಗಾಯ ಆಗಿದಕ್ಕೆ ಏನು ಮಾಡಬೇಕು ಎಂದು ಹೇಳುತ್ತಾ ಮುಂದಿನ ಪ್ಲ್ಯಾನ್ ಮಾಡುತ್ತಾರೆ. ರಕ್ತ ಸುರಿಯುತ್ತಿರುವುದಕ್ಕೆ ಪೇಪರ್ ಬಳಸಿಕೊಂಡು ರಕ್ತ ತಡೆಯುತ್ತಾರೆ. ಇಡೀ ತಂಡ ಆಸ್ಪತ್ರೆಗೆ ಹೋಗೋಣ ಅಂದ್ದರೂ ಬೇಡ ಬೇಡ ಮೊದಲು ಇಲ್ಲಿ ಸಣ್ಣ ಪುಟ್ಟ ಟ್ರೀಮೆಂಟ್ ಕೊಟ್ಟ ನಂತರ ನಾವು ಅಲ್ಲಿಗೆ ಹೋಗೋಣ ಎಂದು ಹೇಳುತ್ತಾರೆ.
ನಾನು ಪ್ರೀತಿಯಲ್ಲಿ ಬಿದ್ದಿದ್ದೀನಿ; ಮದುವೆ ಪ್ಲ್ಯಾನ್ ಹಂಚಿಕೊಂಡ ಕಿರುತೆರೆ ನಟಿ ನಮ್ರತಾ ಗೌಡ!
ಈ ದೃಶ್ಯವನ್ನು ಚಿತ್ರೀಕರಣ ಮಾಡಲು ಆ ರೂಮ್ನಲ್ಲಿ ನಮ್ರತಾ ಮೂರ್ನಾಲ್ಕು ಕಡೆ ತಮ್ಮ ಫೋನ್ ಇರಿಸಿದ್ದರು. ಇದೆಲ್ಲಾ ಗೊತ್ತಿರದ ನಿನಾದ್ ಕ್ಯಾಮೆರಾ ಇರುವ ಕಡೆಗೆ ಬೆನ್ನು ಮಾಡಿಕೊಂಡು ನಿಂತಿದ್ದಾರೆ, ಹೀಗಾಗಿ ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿರುವ ಕೆಲವೊಂದು ದೃಶ್ಯಗಳನ್ನು ಈ ವಿಡಿಯೋದಲ್ಲಿ ಸೇರಿಸಲಾಗಿದೆ. ಪ್ರಾಂಕ್ ಎಂದು ತಿಳಿಯುತ್ತಿದ್ದಂತೆ ನಿನಾದ್ ಫೂಲ್ ಆಗುತ್ತಾರೆ.
ನಾಗಿಣಿ-2 ಧಾರಾವಾಹಿಯಿಂದ ಹೊರಬಂದ ನಿನಾದ್:
ನಟ ನಿನಾದ್ ನಾಗಿಣಿ-2 ಧಾರಾವಾಹಿಯಲ್ಲಿ ತ್ರಿಶೂಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತ್ರಿಶೂಲ್ ಪಾತ್ರ ಈಗಾಗಲೇ ಕನ್ನಡ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದಿದೆ. ನಿನಾದ್ ಈ ಪಾತ್ರಕ್ಕೆ ಜೀವ ತುಂಬಿದ್ದರು. ಆದರೀಗ ನಿನಾದ್ ಹೊರಬಂದಿದ್ದಾರೆ ಎನ್ನಲಾಗಿದೆ. ನಿನಾದ್ ಧಾರಾವಾಹಿಯಿಂದ ಹೊರಬಂದಿರುವ ಕಾರಣ ಇನ್ನು ರಿವೀಲ್ ಆಗಿಲ್ಲ. ನಿನಾದ್ ಜಾಗಕ್ಕೆ ಮತ್ತೋರ್ವ ಖ್ಯಾತ ನಟ ಎಂಟ್ರಿ ಕೊಟ್ಟಿದ್ದಾರೆ. ಹೌದು, ಇನ್ಮುಂದೆ ನಿನಾದ್ ಬದಲಿಗೆ ನಟ ದೀಪಕ್ ಮಹದೇವ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.