Asianet Suvarna News Asianet Suvarna News

ಮೊಟ್ಟೆ ಕರಿಯಿಂದಾದ್ರೂ ಹುಟ್ಟುತ್ತಾ ಪ್ರೀತಿ? ವೆಜ್​-ನಾನ್​ವೆಜ್​ ಮದ್ವೆಯಾದ್ರೆ ಹೀಗೇ ಆಗೋದು ಎಂದ ಫ್ಯಾನ್ಸ್​!

ಮೊಟ್ಟೆ, ಮಾಂಸ ಪ್ರಿಯ ಪತಿಗೆ ಸಸ್ಯಾಹಾರಿ ಹೆಂಡತಿ ಮೊಟ್ಟೆಯ ಕರಿ ಮಾಡಿಕೊಟ್ಟಿದ್ದಾಳೆ. ಅಮೃತಧಾರೆ ಸೀರಿಯಲ್​ ಪ್ರೇಮಿಗಳು ಏನೆಲ್ಲಾ ಹೇಳಿದ್ದಾರೆ ನೋಡಿ...
 

vegetarian Bhoomika makes egg curry to non veditarian Gowtham in Amrutadhare serial suc
Author
First Published Jan 31, 2024, 12:46 PM IST

ಗಂಡ ಗೌತಮ್​ ಏನು ತಿಂದರೂ ಅರಗಿಸಿಕೊಳ್ಳಬಲ್ಲ. ಅದರಲ್ಲಿಲಯೂ ಮಾಂಸಾಹಾರ ಎಂದರೆ ಪಂಚಪ್ರಾಣ. ಅದೇ ಪತ್ನಿ ಭೂಮಿಕಾ ಅಪ್ಪಟ ಸಸ್ಯಾಹಾರಿ. ಮೀನು, ಚಿಕನ್​, ಮಟನ್​ ಮಾಂಸ ದೂರದ ಮಾತು... ಮೊಟ್ಟೆಯನ್ನೂ ತಿನ್ನದಾಕೆ.  ಹಾವು-ಮುಂಗುಸಿಯಂತಿದ್ದ ಇಬ್ಬರೂ ಒಲ್ಲದ ಮನಸ್ಸಿನಿಂದಲೇ ಅನಿವಾರ್ಯವಾಗಿ ಮದ್ವೆಯಾಗಿದ್ದಾಗಿದೆ.  ಗೌತಮ್​ನ ಚಿನ್ನದಂಥ ಮನಸ್ಸಿಗೆ ಭೂಮಿಕಾ ಮನಸೋತಿದ್ದಾಳೆ. ಆತನ ಮೇಲೆ ಲವ್​ ಶುರುವಾಗಿದೆ. ಆದರೆ ಗೌತಮ್​ಗೋ ಲವ್​-ಗಿವ್​ ಹೇಳಿಬರುವಂಥದ್ದಲ್ಲ. ಪತ್ನಿಯ ಪ್ರೀತಿ ಆತನಿಗೆ ಅರ್ಥವೇ ಆಗ್ತಿಲ್ಲ. ಅದನ್ನು ಹೇಗೆ ಹೇಳೋದು ಅಂತ ಭೂಮಿಕಾಗೂ ಗೊತ್ತಾಗ್ತಿಲ್ಲ. ಇದೇ ಕಾರಣಕ್ಕೆ ಪತಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಇನ್ನಿಲ್ಲದ ಸರ್ಕಸ್​ ಮಾಡುತ್ತಿದ್ದಾಳೆ. ನೇರಾನೇರ ಪ್ರೀತಿ ಹೇಳಿಕೊಳ್ಳಲು ಆಗದೇ ಚಡಪಡಿಸುತ್ತಿದ್ದಾಳೆ.

ಇದೀಗ ಮನೆಯಲ್ಲಿ ಎಲ್ಲರೂ ಹೊರಗೆ ಹೋಗಿದ್ದಾರೆ. ಮನೆಯಲ್ಲಿ ಇರೋದು ಗೌತಮ್​  ಮತ್ತು ಭೂಮಿಕಾ ಮಾತ್ರ. ಗೌತಮ್​ಗೆ ಮೊಟ್ಟೆ-ಮಾಂಸ ಎಲ್ಲವೂ ಇಷ್ಟ ಎನ್ನುವುದನ್ನು ತಿಳಿದ ಭೂಮಿಕಾ ಈಗ ಮೊಟ್ಟೆಯ ಕರಿ ಮಾಡಿಕೊಡಲು ಮುಂದಾಗಿದ್ದಾಳೆ. ಮೊಟ್ಟೆಯನ್ನು ಕೈಯಲ್ಲಿ ಹಿಡಿದುಕೊಂಡು, ನೀನು ಮರಿಯಾಗ್ತಿಯಾ ಅಂತ ಗೊತ್ತು ಆದರೂ ಗೌತಮ್​ಗಾಗಿ ಕರಿ ಮಾಡ್ತಿದ್ದೇನೆ ಎನ್ನುತ್ತಲೇ ಮೊಟ್ಟೆಯಿಂದ ಕರಿ ಮಾಡಿಕೊಟ್ಟಿದ್ದಾಳೆ. ಗಂಡ ಗೌತಮ್​ಗೆ ಸರ್​ಪ್ರೈಸ್​ ನೀಡಲು ಆತನ ಕಣ್ಣುಮುಚ್ಚಿ ಮನೆಯಾಚೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಬಗೆಬಗೆ ಭಕ್ಷ್ಯಗಳನ್ನು ಮಾಡಲಾಗಿದೆ. ಇದನ್ನು ಯಾರು ಮಾಡಿದ್ದು ಎಂದು ಕೇಳಿದಾಗ, ಹೀಗಾದರೂ ಗಂಡನಿಗೆ ತನ್ನ ಪ್ರೀತಿಯ ಬಗ್ಗೆ ಅರಿವಾಗುತ್ತದೆ ಎಂದುಕೊಂಡು ಎಲ್ಲವನ್ನೂ ತಾನೇ ಮಾಡಿದ್ದು ಎಂದಿದ್ದಾಳೆ. ಆದರೆ ಗೌತಮ್​ಗೆ ಅರ್ಥ ಆಗ್ಬೇಕಲ್ಲಾ? ಬಡಿಸಲು ಯಾರನ್ನಾದರೂ ಕರಿ ಎಂದಿದ್ದಾನೆ.  ಆದರೆ ಇಬ್ಬರ ಮಧ್ಯೆ ಯಾರೂ ಬೇಡ ಎಂದುಕೊಂಡೇ ಹೀಗೆಲ್ಲಾ ಅರೇಂಜ್​ ಮಾಡಿರುವ ಭೂಮಿಕಾ ತಾನೇ ಬಡಿಸಿದ್ದಾಳೆ. 

ಡ್ರೋನ್​ ಪ್ರತಾಪ್​ಗೆ ಹುಷಾರು ತಪ್ಪಿದ್ದೇಕೆ? ಬಿಗ್​ಬಾಸ್​ ಮನೆಯಲ್ಲಿ ಹೇಳಿದ್ದೇನು, ಈಗ ಹೇಳ್ತಿರೋದೇನು?

ಅಂದಹಾಗೆ ಇದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್​ ಎಂದು ಬೇರೆ ಹೇಳಬೇಕಾಗಿಲ್ಲ. ಮಧ್ಯ ವಯಸ್ಕರು ಮದ್ವೆಯಾದರೆ ಅದೂ ಒಲ್ಲದ ಮನಸ್ಸಿನಿಂದ ಮದುವೆಯಾದರೆ ಏನೆಲ್ಲಾ ಆಗಬಹುದು ಎನ್ನುವುದನ್ನು ತುಂಬಾ ಸೂಕ್ಷ್ಮವಾಗಿ, ಪ್ರೇಕ್ಷಕರ ಮನಸ್ಸು ತಟ್ಟುವಂತೆ, ಅವರನ್ನು ಸದಾ ಹಿಡಿದಿಟ್ಟುಕೊಳ್ಳುವಂತೆ ರೂಪಿಸಲಾಗಿದೆ ಈ ಸೀರಿಯಲ್​. 

ಇದರಲ್ಲಿ ಭೂಮಿಕಾ ಗಂಡನಿಗಾಗಿ ಮೊಟ್ಟೆ ಕರಿ ತಯಾರಿಸಿರುವ ಬಗ್ಗೆ ಸಕತ್​ ಕಮೆಂಟ್​ಗಳು ಬರುತ್ತಿವೆ. ಕೆಲವರು ಅಪ್ಪಟ ಸಸ್ಯಾಹಾರಿಯಾಗಿರುವ, ಮೊಟ್ಟೆಯನ್ನೂ ತಿನ್ನದ ಭೂಮಿಕಾ ಹೇಗೆ ಮೊಟ್ಟೆಯ ಕರಿ ಮಾಡುವುದನ್ನು ಹೇಗೆ ಕಲಿತಳು ಎಂದು ಕೆಲವರು ಪ್ರಶ್ನಿಸುತ್ತಿದ್ದರೆ,  ಸೀರಿಯಲ್​ನಲ್ಲಿ ಎಲ್ಲವೂ ಸಾಧ್ಯ ಎನ್ನುತ್ತಿದ್ದಾರೆ ಇನ್ನು ಕೆಲವರು. ಈ ಮುಂಚಿನ ಕಂತಿನಲ್ಲಿ ಕೂಡ ಮನೆಯ ಕರೆಂಟ್​ ಹೋದ ಸಂದರ್ಭದಲ್ಲಿ ಕತ್ತಲೆಗೆ ಹೆದರುವ ಗೌತಮ್​, ಭೂಮಿಕಾಳನ್ನು ಸಮೀಪ ಕರೆಯುವ ದೃಶ್ಯವಿತ್ತು. ಈ ದೃಶ್ಯವನ್ನು ಹಲವರು ಟ್ರೋಲ್​  ಮಾಡಿದ್ದರು. ಮಿಲೇನಿಯರ್ ಮನೆಯಲ್ಲಿ ಜನರೇಟರ್​, ಯುಪಿಎಸ್​ ಇಲ್ವಾ ಅಂತ ಪ್ರಶ್ನಿಸಿದ್ದರು. ಇದೀಗ ಮೊಟ್ಟೆ ವಿಷಯದಲ್ಲಿಯೂ ಹಾಗೆಯೇ ಹೇಳುತ್ತಿದ್ದಾರೆ. ಆದರೆ ಪತಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಭೂಮಿಕಾ ಮೊಟ್ಟೆ ಮಾಡಿದ್ದನ್ನು ನೋಡಿರುವ ಕೆಲವರು, ಬಿಡಿ ಪತಿಗಾಗಿ ಚಿಕನ್​, ಮಟನ್​ ಅನ್ನೂ ಕಲಿಯುತ್ತಾಳೆ ಎಂದಿರುವ ನೆಟ್ಟಿಗರು ಮಾಂಸಾಹಾರಿ-ಸಸ್ಯಾಹಾರಿಗಳು ಮದ್ವೆಯಾದ್ರೆ ಹೀಗೆಯೇ ಆಗುವುದು ಎಂದು ತಮಾಷೆ ಮಾಡುತ್ತಿದ್ದಾರೆ. ಇನ್ನು ಕೆಲವರು ಈಗಲಾದ್ರೂ ಗೌತಮ್​ಗೆ ಪ್ರೀತಿ ಹುಟ್ಟಲಪ್ಪಾ ಅಂತಿದ್ದಾರೆ ಸೀರಿಯಲ್​ ಪ್ರೇಮಿಗಳು. 

ರಜನೀಕಾಂತ್‌ ‘ಸಂಘಿ‘ ವಿವಾದ: ಅಪ್ಪ-ಅಮ್ಮಗಳ ಮಾತಿನ ಮಧ್ಯೆ ಬಂದ ನಟ ಅಹಿಂಸಾ ಚೇತನ್‌!

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios