Asianet Suvarna News Asianet Suvarna News

ಪ್ರಸಿದ್ಧ 'ಮನಸಾರೆ' ಧಾರಾವಾಹಿಯಿಂದ ಹೊರ ಬಂದ ನಟ ಸಾಗರ್?

ಮನೆಸಾರೆ ಧಾರಾವಾಹಿಯಿಂದ ಹೊರ ಬಂದ ನಟ ಸಾಗರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರೀಕರಣದ ಸಮಯ ಹಾಗೂ ಸ್ನೇಹಿತರ ಬಗ್ಗೆ ಸವಿ ಸವಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. 

Udaya tv sagar walk out of serial manasare pens down emotional feelings vcs
Author
Bangalore, First Published Oct 5, 2020, 3:56 PM IST

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಜನ ಮೆಚ್ಚಿದ ಧಾರಾವಾಹಿ ಮನಸಾರೆಯ ಪ್ರಮುಖ ಪಾತ್ರಧಾರಿ ಸಾಗರ್‌ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ. ಅತಿ ಹೆಚ್ಚು ಟಿಆರ್‌ಪಿ ಪಡೆಯುತ್ತಿರುವ ಈ ಧಾರಾವಾಹಿಯಿಂದ ಹೊರ ಬರಲು ಕಾರಣವೇನು ಎಂದು ನೆಟ್ಟಿಗರು ಪ್ರಶ್ನಸಿದ್ದಾರೆ. ಈ ಕಾರಣಕ್ಕೆ ಫೋಟೋವೊಂದನ್ನು ಶೇರ್ ಮಾಡಿಕೊಂಡು ತಮ್ಮ ಸೆಟ್‌ ಅನುಭವ ಹಂಚಿಕೊಂಡಿದ್ದಾರೆ.

Udaya tv sagar walk out of serial manasare pens down emotional feelings vcs

ಸಾಗರ್ ಪೋಸ್ಟ್:
'ನನಗೆ ಜ್ಞಾಪಕ ಇರುವುದು ನಾವು ಚಿತ್ರೀಕರಣ ಹಾಗೂ ಡ್ಯಾನ್ಸ್‌ ರಿಹರ್ಸಲ್‌ ವೇಳೆ ಕಳೆದ ಒಳ್ಳೆಯ ಸಮಯ.  ನಾನು ಹೀಗೆ ಮುಂದೊಂದು ದಿನ ಸಮಯ ಕಳೆಯುತ್ತೇವೋ ಇಲ್ವೋ ಗೊತ್ತಿಲ್ಲ. ಆದರೆ ಈ ಕ್ಷಣ ಮಾತ್ರ ಫಾರ್‌ಎವರ್. ನಮ್ಮ ಧಾರಾವಾಹಿ ಸುಮಾರು 6.5 ಟಿಆರ್‌ಪಿ ಪಡೆದುಕೊಂಡು, ಉತ್ತಮ ಸ್ಥಾನ ಪಡೆದಿತ್ತು. ಸದಾ ಟಾಪ್‌ನಲ್ಲಿ ಇರುತ್ತಿದ್ದೆವು. ನನ್ನ ಬಿಲಿಯನ್ ಸುಮಧುರ ಕ್ಷಣಗಳಲ್ಲಿ ಈ ಇಬ್ಬರು ನನ್ನ ಜೊತೆಗಿದ್ದರು. ಈಗ ನಾವು ನಮ್ಮದೇ ದಾರಿ ಹುಡುಕಿಕೊಂಡು ಹೋಗಬೇಕಾಗಿದೆ,' ಎಂದು ಇನ್‌ಸ್ಟಾಗ್ರಾಂನಲ್ಲಿ ಸಾಗರ್ ಬರೆದದುಕೊಂಡಿದ್ದಾರೆ.

 

'ನೀವು ಧಾರಾವಾಹಿಯಿಂದ ಹೋದರೆ ನಗು ಇರುವುದಿಲ್ಲ. ನನಗೆ ತುಂಬಾ ನೋವಾಗಿದೆ.ಮನಸಾರೆ ನಿಮ್ಮ ಧಾರಾವಾಹಿಗೆ ನಾನು ಸೋತೆ. ನಾನು ನಿಮ್ಮ ಬಿಗ್ ಫ್ಯಾನ್ ಐ ಮಿಸ್ ಯು' ಎಂದು ಸುಪ್ಪಿ ಶೈವಾ ಕಾಮೆಂಟ್ ಮಾಡಿದ್ದಾರೆ.

ಇವರೇ ನೋಡಿ ಪೌರಾಣಿಕ ಪಾತ್ರದಲ್ಲಿ ಮಿಂಚುತ್ತಿರುವ ನಿಮ್ಮ ನೆಚ್ಚಿನ ನಟ-ನಟಿಯರು!

ಸಾಗರ್ ಧಾವಾಹಿಯಿಂದ ಹೊರ ನಡೆದ ಕಾರಣ ಏನೆಂದು ಬಹಿರಂಗ ಮಾಡಿಲ್ಲ. ಆದರೆ ಯಾವುದೋ ದೊಡ್ಡ ಪಾಜೆಕ್ಟ್‌ಗೆ ಕೈ ಹಾಕಿದ್ದಾರೆ, ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ.

Follow Us:
Download App:
  • android
  • ios