Asianet Suvarna News Asianet Suvarna News

ಕಾವ್ಯಾ ಮೇಡಂ... ಲವ್​ ಯೂ... ಲವ್​ ಯೂ... ಅಂತಿದ್ದಾರೆ ಭಾಗ್ಯಲಕ್ಷ್ಮಿ ಅಭಿಮಾನಿಗಳು...

ತಾಂಡವ್​ ಮತ್ತು ಶ್ರೇಷ್ಠಾ ಎಂಗೇಜ್​ಮೆಂಟ್​ ನಡೆಯುತ್ತಿರುವ ಸಮಯದಲ್ಲಿಯೇ ಕುತೂಹಲವೊಂದು ನಡೆದಿದೆ. ಅಷ್ಟಕ್ಕೂ ಆಗಿದ್ದೇನು? 
 

Tandav and Shresthas engagement was going on and Kavya is entering suc
Author
First Published Jan 11, 2024, 2:50 PM IST

ಭಾಗ್ಯಲಕ್ಷ್ಮಿಯ ಗಂಡ ತಾಂಡವ್​ ಮತ್ತು ಪ್ರೇಯಸಿ ಶ್ರೇಷ್ಠಾ ಮದುವೆಗೆ ಸನ್ನದ್ಧರಾಗಿದ್ದು, ಎಂಗೇಜ್​ಮೆಂಟ್​ ನಡೆಯುತ್ತಿದೆ. ಈ ಪರಿಯ ಎಂಗೇಜ್​ಮೆಂಟ್​ ಸಿದ್ಧತೆ ಮಾಡಿಕೊಂಡಿದ್ದು ಖುದ್ದು ತಾಂಡವ್​ಗೂ ಗೊತ್ತಿಲ್ಲ. ನಕಲಿ ಅಪ್ಪ-ಅಮ್ಮನ ಜೊತೆ ಶ್ರೇಷ್ಠಾಳ ಮನೆಗೆ ಬಂದಾಗಲೇ ಅಲ್ಲಿ ನಿಶ್ಚಿತಾರ್ಥದ ಸಿದ್ಧತೆ ನಡೆದಿದೆ ಎಂದು ತಿಳಿಯುತ್ತದೆ. ಅದೇ ಇನ್ನೊಂದೆಡೆ ಶ್ರೇಷ್ಠಾಳ ಅಪ್ಪ-ಅಮ್ಮನಿಗೂ ತಮ್ಮ ಮಗಳು ಏನು ಮಾಡುತ್ತಿದ್ದಾಳೆ ಎನ್ನುವ ಅರಿವು ಇಲ್ಲ. ತಾಂಡವ್​ಗೆ ಇದಾಗಲೇ ಇನ್ನೊಂದು ಮದುವೆಯಾಗಿದೆ ಎನ್ನುವುದೂ ಗೊತ್ತಿಲ್ಲ. ಅಲ್ಲಿನ ಪರಿಸ್ಥಿತಿ ನೋಡಿ ತಾಂಡವ್​ಗೆ ಶಾಕ್​ ಆದ್ರೂ ಏನೂ ಮಾಡದ ಸ್ಥಿತಿ. ಏಕೆಂದರೆ ಅವನಿಗೆ ಈಗ ಬೇಕಿರುವುದು ಶ್ರೇಷ್ಠಾ ಮಾತ್ರ.

ಶ್ರೇಷ್ಠಾ ಎಂಗೇಜ್​ಮೆಂಟ್​ ರಿಂಗ್​ ಕೊಡುವಂತೆ ಹೇಳುವಾಗ, ತಾಂಡವ್​ಗೆ ಭಾಗ್ಯಲಕ್ಷ್ಮಿಯನ್ನು ಮದುವೆಯ ದಿನಕರೆದುಕೊಂಡು ಬಂದ ನೆನಪಾಗುತ್ತದೆ. ಆತನ ಒಳ ಮನಸ್ಸು ಈ ಎಂಗೇಜ್​ಮೆಂಟ್​ ಒಪ್ಪುತ್ತಿಲ್ಲ, ಆದರೆ ಬಿಡುವಂತಿಲ್ಲ. ಅತ್ತ ಮಗಳು ತನ್ವಿ ಸಾವು ಬದುಕಿನ ನಡುವೆ ಹೋರಾಟ ಮಾಡಿದ ವಿಷಯವೂ ತಾಂಡವ್​ಗೆ ಗೊತ್ತಿಲ್ಲ. ಅಪ್ಪನ ರಕ್ತ ನೀಡಿದರೆ ಮಾತ್ರ ಮಗಳು ಬದುಕುತ್ತಾಳೆ ಎಂದು ಭಾಗ್ಯಲಕ್ಷ್ಮಿ ಶ್ರೇಷ್ಠಾಳಿಗೆ ಹೇಳಿದ ವಿಷಯ ಆಕೆ ಆತನಿಗೆ ತಲುಪಿಸಲೇ ಇಲ್ಲ.  ಇದರ ನಡುವೆಯೇ ನಿಶ್ಚಿತಾರ್ಥ ಕಾರ್ಯ ನಡೆಯುತ್ತಿದೆ.

ಎಫ್​ಐಆರ್​ ಬೆನ್ನಲ್ಲೇ ಎಚ್ಚೆತ್ತುಕೊಂಡ ಅನ್ನಪೂರ್ಣಿ! ಕ್ಷಮೆ ಕೋರುವ ಜೊತೆಗೆ ಸ್ಟ್ರೀಮಿಂಗ್​ ಕೂಡ ರದ್ದು

ಇನ್ನೇನು ಎಂಗೇಜ್​ಮೆಂಟ್​ ಆದರೆ ಗತಿಯೇನು ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿರುವ ನಡುವೆಯೇ ಕಾವ್ಯಾಳ ಎಂಟ್ರಿ ಆಗುತ್ತದೆ. ಇದಾಗಲೇ ಈ ಮದುವೆಯನ್ನು ಆಕೆ ಒಪ್ಪುತ್ತಿಲ್ಲ. ಶ್ರೇಷ್ಠಾಳ ಗೆಳತಿಯಾಗಿದ್ದರೂ, ವಿವಾಹಿತನ ಬದುಕನ್ನು ಹಾಳು ಮಾಡಿ ಶ್ರೇಷ್ಠಾ ತಾಂಡವ್​ ಜೊತೆಮದುವೆಯಾಗುವುದು ಈಕೆಗೆ ಇಷ್ಟವಿಲ್ಲ. ಕಾವ್ಯಾ ಮೇಡಂ ಯಾಕಿಷ್ಟು ಮೌನವಾಗಿದ್ದೀರಿ, ವಿಷಯವನ್ನು ತಿಳಿಸಬಾರದೇ ಎಂದು ಪದೇ ಪದೇ ಭಾಗ್ಯಲಕ್ಷ್ಮಿ ಸೀರಿಯಲ್​ ಅಭಿಮಾನಿಗಳು ಕೇಳುತ್ತಲೇ ಇದ್ದರು. ಇದೀಗ ಅವರ ಆಸೆ ಈಡೇರಿದಂತೆ  ಕಾಣುತ್ತಿದೆ.

ಇನ್ನೇನು ಶ್ರೇಷ್ಠಾ ಎಂಗೇಜ್​ಮೆಂಟ್​ ರಿಂಗ್​ ಹಾಕಬೇಕು ಎನ್ನುವಷ್ಟರಲ್ಲಿ ಕಾವ್ಯಾಳ ಎಂಟ್ರಿ ಆಗಿದೆ. ನಿಲ್ಲಿಸಿ ಎಂದು ಕೂಗಿದ್ದಾಳೆ. ಅಷ್ಟೇ ಪ್ರೊಮೋ ಬಿಡುಗಡೆಯಾಗಿದೆ. ಇದು ಕನಸೋ, ನನಸೋ, ಮುಂದೇನಾಗುತ್ತದೆ ಎಂದು ಸೀರಿಯಲ್​ ನೋಡಿದ ಮೇಲೆ ತಿಳಿಯಬೇಕಷ್ಟೇ.  ಶ್ರೇಷ್ಠಾಳ ಅಪ್ಪ ಹಾರ್ಟ್​  ಪೇಷಂಟ್​ ಆಗಿರುವ ಕಾರಣ, ಮಗಳ ಈ ವಿಷಯವನ್ನು ಹೇಳುವುದು ಸರಿಯಲ್ಲ ಎಂದುಕೊಂಡಿದ್ದ ಕಾವ್ಯ ಇಲ್ಲಿಯವರೆಗೆ ಸುಮ್ಮನಿದ್ದಳು. ಇನ್ನು ಈ ವಿಷಯ ಅವಳು ಬಾಯಿ ಬಿಡುತ್ತಾಳಾ? ಮುಂದೇನಾಗತ್ತೆ? ವಿಷಯ ತಿಳಿದು ಶ್ರೇಷ್ಠಾಳ ಅಪ್ಪನ ಕಥೆ ಏನಾಗುತ್ತದೆ ಎನ್ನುವ ಕುತೂಹಲವನ್ನು ಜೀ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಬಿಟ್ಟಿದೆ. ಸದ್ಯ ಕಾವ್ಯಾಳ ಎಂಟ್ರಿ ಆಗಿರುವುದಕ್ಕೆ ಭಾಗ್ಯಲಕ್ಷ್ಮಿ ಫ್ಯಾನ್ಸ್​ ಕಾವ್ಯಾಳನ್ನು ಹೊಗಳುತ್ತಿದ್ದಾರೆ. 

ಐದು ವರ್ಷ ಹಿರಿಯ ಬಾರ್​ ಡ್ಯಾನ್ಸರ್​, ನೈಟ್​ ಗರ್ಲ್​ ಜೊತೆ ಆರ್ಯನ್​ ಡೇಟಿಂಗ್​? ಈಕೆ ಬಾಲಿವುಡ್​ ಹಾಟ್​ ನಟಿ!

Latest Videos
Follow Us:
Download App:
  • android
  • ios