Asianet Suvarna News Asianet Suvarna News

ಅತ್ತೆಯ ಪ್ಲ್ಯಾನ್​ ಸಕ್ಸಸ್​- ವಾರೆಗಿತ್ತಿಯರಾಗ್ತಿರೋ ಅಕ್ಕ-ತಂಗಿ: ಹಳ್ಳ ಹಿಡಿಯತ್ತಾ ಸೀರಿಯಲ್?

ಪಾರ್ಥ ಮತ್ತು ಅಪ್ಪಿಯ ಮದುವೆ ಸಾಧ್ಯವಿಲ್ಲ ಎಂದು ಭೂಮಿಕಾಳಿಂದ ಭಾಷೆ ಪಡೆದ ಶಕುಂತಲಾದೇವಿ ಇದೀಗ ಅವರ ಮದುವೆಗೆ ಪ್ಲ್ಯಾನ್​ ರೂಪಿಸಿದ್ದಾಳೆ. ಅಕ್ಕ-ತಂಗಿ ವಾರೆಗಿತ್ತಿಯರಾಗುತ್ತಿದ್ದಾರೆ. ಮುಂದೇನು?
 

Shakunthaladevi succeed in her plan against Bhoomika in Amrutadhare suc
Author
First Published Jul 31, 2024, 4:03 PM IST | Last Updated Jul 31, 2024, 4:03 PM IST

ಏನೇ ಮಾಡಿದರೂ ಅತ್ತೆ ಶಕುಂತಲಾದೇವಿಗೆ ಸೋಲೇ ಸೋಲಾಗಿತ್ತು. ಭೂಮಿಕಾ ಎದುರು ಈ ವಿಲನ್​ ಅತ್ತೆ ಹಂತ ಹಂತಕ್ಕೂ ಸೋಲನ್ನೇ ಅನುಭವಿಸುತ್ತಿದ್ದಾಳೆ. ಇದೇ ಕಾರಣಕ್ಕೆ ಎಲ್ಲಾ ಸೀರಿಯಲ್​ಗಳಿಗಿಂತಲೂ ಭಿನ್ನವಾಗಿ ನಿಂತಿದೆ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್​. ಈ ಸೀರಿಯಲ್​ ಇಲ್ಲಿಯವರೆಗೆ ದಿನದಿಂದ ದಿನಕ್ಕೆ ಕುತೂಹಲ ಪಡೆದುಕೊಳ್ಳುತ್ತಲೇ ಇದೆ. ಬಹುತೇಕ ಎಲ್ಲಾ ಸೀರಿಯಲ್​ಗಳಿಗಿಂತಲೂ ಸ್ವಲ್ಪ ಭಿನ್ನ ಎನಿಸಿರುವ ಸೀರಿಯಲ್​ ಅಮೃತಧಾರೆ. ಅಮೃತಧಾರೆ ಈ ಹೆಸರು ಕೇಳಿದರೆ ಸೀರಿಯಲ್​ ವೀಕ್ಷಕರಿಗೆ ಅದೇನೋ ಒಂಥರಾ ರೋಮಾಂಚನ ಆಗುವುದು ಇದೆ. ಕಾರಣ, ಮಧ್ಯ ವಯಸ್ಕರಾಗಿರುವ ಇಬ್ಬರ ನಡುವಿನ ಅಪರೂಪದ ಪ್ರೇಮ ಕಥೆ ಇದು. ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಈ ಸೀರಿಯಲ್​ ಹಲವು ಸೀರಿಯಲ್​ಗಳಿಗಿಂತಲೂ ಭಿನ್ನವಾಗಿರುವ ಕಾರಣ, ಇದನ್ನು ಪ್ರೇಕ್ಷಕರಿಗೆ ಅಚ್ಚುಮೆಚ್ಚಿನ ಸೀರಿಯಲ್​ ಆಗಿದೆ. ಸದ್ಯ ಸೀರಿಯಲ್​ ಪ್ರೇಮಿಗಳ ಮನಸ್ಸನ್ನು ಗೆಲ್ಲುತ್ತಿರುವ ಸೀರಿಯಲ್​ಗಳ ಪೈಕಿ ಜೀ ಕನ್ನಡದ ಅಮೃತಧಾರೆ ಅಗ್ರಸ್ಥಾನ ಪಡೆದಿದೆ. 

ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿಯೂ ಅಳುಮುಂಜಿ ಮಹಿಳೆಯರು, ವಿಲನ್​ಗಳೇ ಭರ್ಜರಿ ಗೆಲುವು ಸಾಧಿಸುತ್ತಿರುವುದನ್ನು ನೋಡಿ ನೋಡಿ ಬೇಸತ್ತ ವೀಕ್ಷಕರಿಗೆ ಅಮೃತಧಾರೆ ನಿಜಕ್ಕೂ ಅಮೃತವನ್ನೇ ಉಣಬಡಿಸುತ್ತಿದೆ. ಇದಕ್ಕೆ ಕಾರಣ, ಎಲ್ಲಾ ಸೀರಿಯಲ್​ಗಳಂತೆ ಇಲ್ಲಿ ಲೇಡಿ ವಿಲನ್​ ಇದ್ದರೂ ಸದಾ ಇಲ್ಲಿ ವಿಲನ್​ ಸೋಲುತ್ತಿದ್ದಾಳೆ. ವಿಲನ್​ ಆಗಿರೋ ಶಕುಂತಲಾ ದೇವಿ ಇನ್ನೇನು ಕೆಟ್ಟದ್ದು ಮಾಡುತ್ತಾಳೋ ಎನ್ನುವಷ್ಟರಲ್ಲಿಯೇ ನಾಯಕಿ ಭೂಮಿಕಾ ಅವಳ ಎಲ್ಲಾ ಪ್ಲ್ಯಾನ್​ಗಳನ್ನು ಠುಸ್ ಮಾಡುವ ಕಾರಣ, ವೀಕ್ಷಕರಿಗೆ ಈ ಸೀರಿಯಲ್​ ವಿಭಿನ್ನವಾಗಿ ಕಾಣಿಸುತ್ತಿದೆ. ಅದರ ಜೊತೆ ಮಧ್ಯ ವಯಸ್ಸಿನಲ್ಲಿ ಮದುವೆಯಾದ ಜೋಡಿಯ ನವೀರಾದ ಪ್ರೇಮ ಕಥೆಯೂ ಇಷ್ಟವಾಗುತ್ತಿದೆ. 

ಹುಸನ ತೆರಾ ತೌಬಾ ತೌಬಾ... ಪುಟ್ಟಕ್ಕನ ಮಗಳು ಸ್ನೇಹಾ ಭರ್ಜರಿ ಸ್ಟೆಪ್​- ಡಿಕೆಡಿಯಲ್ಲಿ ಯಾಕಿಲ್ಲಾ ಕೇಳ್ತಿದ್ದಾರೆ ಫ್ಯಾನ್ಸ್​

ಆದರೆ ಇದೀಗ ಸೀರಿಯಲ್​ ಬೇರೆ ರೂಪ ಪಡೆದುಕೊಳ್ಳುತ್ತಿದೆ. ಭೂಮಿಕಾ ತಂಗಿ ಅಪ್ಪಿ ಮತ್ತು ಗೌತಮ್​ ತಮ್ಮ ಪಾರ್ಥ ಪ್ರೀತಿ ಮಾಡುತ್ತಿರುವ ವಿಷಯ ತಿಳಿದ ಅತ್ತೆ ಶಕುಂತಲಾದೇವಿ, ಅವರ ಮದುವೆ ಮಾಡದಂತೆ ಭೂಮಿಕಾ ಬಳಿ ಭಾಷೆ ತೆಗೆದುಕೊಂಡಿದ್ದಾಳೆ. ಪಾರ್ಥನಿಗೆ ಬೇರೆ ಮದುವೆಗೆ ಹುಡುಗಿ ನೋಡಿದ್ದಾಳೆ ಶಕುಂತಲಾ. ಎಲ್ಲವೂ ಕುತಂತ್ರವೇ. ಅದೇ ಇನ್ನೊಂದೆಡೆ ಪಾರ್ಥ ಮತ್ತು ಅಪ್ಪಿ ಬೇರೆ ಬೇರೆಯಾಗಿ ಭೂಮಿಕಾ ಬಳಿ ಬಂದು ತಮ್ಮ ಪ್ರೀತಿಯನ್ನು ಹೇಳಿಕೊಂಡು ಮದುವೆ ಮಾಡಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ಅತ್ತೆಗೆ ಭಾಷೆ ಕೊಟ್ಟು ಸಿಕ್ಕಿಬಿದ್ದಿರೋ ಭೂಮಿಕಾ ಇಬ್ಬರ ಬಳಿಯೂ ನಿಷ್ಠೂರ ಆಗಿದ್ದಾಳೆ. ಇಬ್ಬರಿಗೂ ಈಗ ಭೂಮಿಕಾ ಬೇಡವಾಗಿದೆ. ಅಲ್ಲಿಗೆ ಅತ್ತೆ ಶಕುಂತಲಾ ದೇವಿ ಪ್ಲ್ಯಾನ್ಸ್​ ಸಕ್ಸಸ್​  ಆಗಿದೆ.

ಕೊನೆಗೆ ಪಾರ್ಥ   ಶಕುಂತಲಾ ದೇವಿ ಬಳಿ ಬಂದು ತನ್ನ ಪ್ರೀತಿಯ ವಿಷಯ ಹೇಳಿಕೊಂಡಿದ್ದಾನೆ. ಇದನ್ನೇ ಕಾಯುತ್ತಿದ್ದ ಅವಳು, ಮದುವೆಗೆ ಒಪ್ಪಿ ಅಪ್ಪಿಯ ಮನೆಗೆ ಹೋಗಿ ಮಾತನಾಡುವುದಾಗಿ ಹೇಳಿದ್ದಾಳೆ. ಅಲ್ಲಿಗೆ ಪಾರ್ಥ ಮತ್ತು ಅಪ್ಪಿಯ ಪಾಲಿಗೆ ಆಕೆ ದೇವತೆ ಎನಿಸಿಕೊಂಡಿದ್ದಾಳೆ. ಇತ್ತ ಭೂಮಿಕಾ ಇಬ್ಬರ ವಿರೋಧ ಕಟ್ಟಿಕೊಂಡಿದ್ದಾಳೆ. ಇದೀಗ ಅಕ್ಕ ಮತ್ತು ತಂಗಿಯಂದಿರನ್ನು ವಾರೆಗಿತ್ತಿ ಮಾಡಿ ತಂಗಿಯಿಂದಲೇ ಅಕ್ಕನ ವಿರುದ್ಧ ಸಂಚು ಹೂಡಿಸುವ ಪ್ಲ್ಯಾನ್​ ಶಕುಂತಲಾದ್ದು. ಇದಾಗಲೇ ಮದುವೆಗೆ ನಿರಾಕರಿಸಿದ್ದ ಅಕ್ಕನ ಮೇಲೆ ಅಪ್ಪಿಗೆ ಸಿಟ್ಟಿದೆ. ಶಕುಂತಲಾ ದೇವಿ ದೇವತೆಯಾಗಿ ಕಾಣುತ್ತಾಳೆ. ಅಕ್ಕ-ತಂಗಿಯರ ನಡುವೆ ತಂದಿಟ್ಟು ಮಜಾ ನೋಡುವ ಪ್ಲ್ಯಾನ್​ ಸಕ್ಸಸ್​ ಆಗತ್ತಾ? ಹೀಗಾದರೆ ಮಾಮೂಲಿ ಸೀರಿಯಲ್​ ರೀತಿಯಲ್ಲಿಯೇ ಈ ಧಾರಾವಾಹಿಯ ಕಥೆಯೂ ಹೋಗಿ ಸೀರಿಯಲ್ ಹಳ್ಳ ಹಿಡಿಯುತ್ತಾ ಎಂದು ಸೀರಿಯಲ್​ ಪ್ರೇಮಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. 

ತಿಂಗಳಿಗೆ 300 ರೂ. ಪಡೀತಿದ್ದ ಪ್ರಕಾಶ್​ ರಾಜ್​ಗೆ ವಿಲನ್ ತಂದ ಅದೃಷ್ಟ! ಮದ್ವೆ ವಿಷ್ಯ ಕೆದಕೋದಾ ನೆಟ್ಟಿಗರು?

Latest Videos
Follow Us:
Download App:
  • android
  • ios