ಭಾಗ್ಯಳಿಗೆ ಅಭಿನಂದನೆ ಸಲ್ಲಿಸಲು ಬರ್ತಿದ್ದಾರೆ ಸ್ಯಾಂಡಲ್ವುಡ್ ಪ್ರಣಯರಾಜ! ಅತ್ತೆ ಕೂಲ್ ಆಗ್ತಾಳಾ?
ಭಾಗ್ಯ ತನಗೆ ತಿಳಿಸದೇ ಕೆಲಸ ಮಾಡುತ್ತಿರುವ ವಿಷಯ ಕೇಳಿ ಕುಸುಮಾಗೆ ಸಿಟ್ಟುಬಂದಿದೆ. ಅವಳ ಸಿಟ್ಟನ್ನು ತಣಿಸಿ ಭಾಗ್ಯಳಿಗೆ ಪ್ರೋತ್ಸಾಹಿಸಲು ಸ್ಯಾಂಡಲ್ವುಡ್ ಪ್ರಣಯರಾಜನ ಎಂಟ್ರಿ ಆಗಲಿದೆ!
![Sandalwood Pranayaraja Shreenath entry in Bhagyalakshmi to congratulate Bhagya suc Sandalwood Pranayaraja Shreenath entry in Bhagyalakshmi to congratulate Bhagya suc](https://static-ai.asianetnews.com/images/01j1q3mbqxt1sycvt5km4xdnz9/bhagya-shreenath_363x203xt.jpg)
ಸದ್ಯ ಭಾಗ್ಯಳ ಮನೆಯಲ್ಲಿ ಮೌನದ ವಾತಾವರಣ. ಭಾಗ್ಯಳಿಗೆ ಸ್ಟಾರ್ ಹೋಟೆಲ್ನಲ್ಲಿ ಕೆಲಸ ಸಿಕ್ಕಿರುವ ಸುದ್ದಿ ಟಿ.ವಿಯಲ್ಲಿ ಬ್ರೇಕಿಂಗ್ ಬಂದಾಗ ಮನೆಯವರೆಲ್ಲಾ ಕುಣಿದು ಕುಪ್ಪಳಿಸಿದ್ದರೂ ಅತ್ತೆ ಕುಸುಮಾ ಸಿಟ್ಟಿನಿಂದ ಒಳಕ್ಕೆ ಹೋಗಿದ್ದಾಳೆ. ತಾಂಡವ್ ಮುಖ ಇಂಗು ತಿಂದ ಮಂಗನಂತಾಗಿದೆ. ಭಾಗ್ಯಳ ಅಮ್ಮ, ಮಕ್ಕಳು ಮತ್ತು ಮಾವಂದಿರು ಸಂಭ್ರವನ್ನೇನೋ ದ ಸಂಭ್ರಮದ ಆಚರಣೆ. ಎಲ್ಲರೂ ಕುಣಿದು ಕುಣಿದು ಕುಪ್ಪಳಿಸುತ್ತಿರುವ ಸಮಯದಲ್ಲಿಯೇ ಅತ್ತೆ ಕುಸುಮಾ ಎಂಟ್ರಿಯಾಗಿದೆ. ಟಿ.ವಿ. ನೋಡಿ ಅವಳಿಗೆ ಶಾಕ್ ಆಗಿಬಿಟ್ಟಿದೆ. ಖುಷಿಯನ್ನೂ ಪಡಲಾಗದೇ, ಸಿಟ್ಟನ್ನೂ ಹತ್ತಿಕ್ಕಲಾಗದೇ ಬಿಸಿತುಪ್ಪ ಆಗಿಬಿಟ್ಟಿದೆ ಈ ಸುದ್ದಿ. ಇನ್ನು ತಾಂಡವ್ನೋ ಇಂಗುತಿಂದ ಮಂಗನಂತಾಗಿ ಬ್ರೇಕಿಂಗ್ ಸುದ್ದಿ ಕೇಳಿ ಹಾರ್ಟೇ ಬ್ರೇಕ್ ಆಗಿ ಹೋಗಿದೆ! ಕುಸುಮಾ ಸಿಟ್ಟುಮಾಡಿಕೊಂಡಿರುವ ಕಾರಣ, ಇಡೀ ಮನೆಯಲ್ಲಿ ಈಗ ಮೌನದ ವಾತಾವರಣ. ಅಮ್ಮನ ಸಿಟ್ಟು ನೋಡಿ ತಾಂಡವ್ಗೆ ಖುಷಿಯೋ ಖುಷಿ. ಭಾಗ್ಯಳಿಗೆ ಹಬ್ಬ ಇದೆ ಎಂದೇ ಅಂದು ಅವನು ಅಂದುಕೊಂಡಿದ್ದಾನೆ.
ಅದೇ ಇನ್ನೊಂದೆಡೆ ಶ್ರೇಷ್ಠಾ ಕೂಡ ಟಿ.ವಿ ನೋಡಿ ಶಾಕ್ ಆಗಿದ್ದಾಳೆ. ಪೂಜಾ ಭಾವುಕಳಾಗಿ ಕಣ್ಣೀರು ಹಾಕಿದ್ದಾಳೆ. ತನ್ನ ಸುದ್ದಿ ಟಿ.ವಿಯಲ್ಲಿ ಬಂದಿರುವ ವಿಷಯ ನೋಡಿ ಖುದ್ದು ಭಾಗ್ಯಳಿಗೂ ಶಾಕ್ ಆಗಿದೆ. ಅತ್ತೆಗೆ ವಿಷಯ ಗೊತ್ತಾದರೆ ಏನು ಮಾಡುವುದು ಎಂದು ಟೆನ್ಷನ್ನಲ್ಲಿ ಇದ್ದಾಳೆ. ಈಗ ಅವಳ ಟೆನ್ಷನ್ ದೂರ ಮಾಡಲು ಸ್ಯಾಂಡಲ್ವುಡ್ ಪ್ರಣಯರಾಜನ ಎಂಟ್ರಿ ಆಗುತ್ತಿದೆ. ಭಾಗ್ಯಳನ್ನು ಅಭಿನಂದಿಸಿ, ಕುಸುಮಾಳನ್ನು ತಣ್ಣಗಾಗಿಸಲು ಶ್ರೀನಾಥ್ ಅವರು ಸಕ್ಸಸ್ ಆಗ್ತಾರಾ ಎನ್ನುವುದು ಈಗಿರುವ ಕುತೂಹಲ.
ಸಪ್ತಪದಿಯ ಜೊತೆಗೇ ಎಂಟನೇ ಹೆಜ್ಜೆ ಇಟ್ಟ ಸೀತಾ-ರಾಮ: ವನವಾಸಕ್ಕೆ ಕಳುಹಿಸಲು ಮಾಸ್ಟರ್ ಪ್ಲ್ಯಾನ್!
ಅಷ್ಟಕ್ಕೂ ತನಗೆ ಕೆಲಸ ಸಿಕ್ಕಿರುವ ವಿಷಯವನ್ನು ಭಾಗ್ಯ ಮಕ್ಕಳಿಗೆ ಹೇಳಿದ್ದಳು. ಆದರೆ ಅತ್ತೆಗೆ ತಾನು ಕೆಲಸಕ್ಕೆ ಹೋಗುವುದು ಇಷ್ಟವಿಲ್ಲ ಎನ್ನುವ ಕಾರಣಕ್ಕೆ ಹೇಳಿರಲಿಲ್ಲ. ಆದರೆ ಇದೀಗ ಕುಸುಮಾಳಿಗೂ ವಿಷಯ ಗೊತ್ತಾಗಿ ಶಾಕ್ ಆಗಿದೆ. ಸೊಸೆಯ ಮೇಲೆ ಕೋಪ ಪಡುವ ಹಾಗೂ ಇಲ್ಲ, ಅವಳನ್ನು ಹೊಗಳುವಂತೆಯೂ ಇಲ್ಲ ಎನ್ನುವ ಸ್ಥಿತಿ ಅವಳದ್ದು. ಮುಂದೆ ಹೇಗೆ ರಿಯಾಕ್ಟ್ ಮಾಡುತ್ತಾಳೋ ಕಾದು ನೋಡಬೇಕಿದೆ. ಪತ್ನಿಯನ್ನು ಟಿ.ವಿಯಲ್ಲಿ ನೋಡಿ ಹೊಟ್ಟೆಉರಿಯಿಂದಿರುವ ಗಂಡ ತಾಂಡವ್ ಅಲ್ಲಿಯೂ ತನ್ನ ನರಿಬುದ್ಧಿ ಬಿಟ್ಟಿಲ್ಲ. ಇವಳು ನಮ್ಮ ಮನೆಯ ಮರ್ಯಾದೆ ತೆಗೆಯುವುದಕ್ಕಾಗಿಯೇ ಹುಟ್ಟಿದ್ದಾಳೆ ಎಂದು ಮನೆಯವರ ಎದುರು ಹೇಳಿದ್ದಾನೆ.
ಅಮ್ಮನಿಗೆ ಈ ವಿಷಯ ಗೊತ್ತಿಲ್ಲ ಎನ್ನುವ ಕಾರಣಕ್ಕೆ ಭಾಗ್ಯಳ ವಿರುದ್ಧ ಅವಳನ್ನು ಎತ್ತಿಕಟ್ಟುವ ತಂತ್ರ ಇದಾಗಿದೆ. ಮುಂದೆ ಕುಸುಮಾ ಏನು ಅನ್ನುತ್ತಾಳೆ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಅವಳು ಕೂಡ ಸೊಸೆಗೆ ಸಪೋರ್ಟ್ ಮಾಡುತ್ತಾಳೆ ಎನ್ನುವುದು ಬಹುತೇಕ ಮಂದಿಯ ಅಭಿಪ್ರಾಯ. ಈಗ ಶ್ರೀನಾಥ್ ಅವರು ಭಾಗ್ಯಳನ್ನು ವಿಷ್ ಮಾಡಿದಾಗ ಕುಸುಮಾ ಕೂಡ ಸೊಸೆಗೆ ಭೇಷ್ ಎನ್ನುತ್ತಾಳೆ ಎಂದು ಹೇಳಲಾಗುತ್ತಿದೆ.
ಮೇಘನಾ ಫಿಲ್ಮ್ಗೆ ಎಂಟ್ರಿ ಕೊಟ್ಟಿದ್ದು ನಮಗೆ ಬೇಸರವಾಗಿತ್ತು, ಆದ್ರೆ... ಅಪ್ಪ ಸುಂದರರಾಜ್ ಮನದಾಳದ ಮಾತು