Asianet Suvarna News Asianet Suvarna News

ಭೂಮಿಕಾ ಅಪಹರಣ ಆಗಿರೋ ಹಿಂಟ್​ ಕೊಟ್ಟ ದೇವಸ್ಥಾನದ ಮೇಲೆ ಸೀರಿಯಲ್​ ಪ್ರಿಯರ ಕಣ್ಣು!

ಭೂಮಿಕಾ ಅಪಹರಣದ ಜಾಗದ ಕುರಿತು ಹಿಂಟ್​ ಕೊಟ್ಟ ದೇವಸ್ಥಾನದ ಕುರಿತು ನೆಟ್ಟಿಗರು ಚರ್ಚೆ ಶುರು ಮಾಡಿದ್ದಾರೆ.
 

netizens eye on temple that gave a hint about the place of Bhumikas abduction in Amrutadhare suc
Author
First Published May 24, 2024, 5:49 PM IST

ಭೂಮಿಕಾಳ ಅಪಹರಣವಾಗಿದೆ. ಚಿಕ್ಕಮಗಳೂರಿನಲ್ಲಿ ಹನಿಮೂನ್​ ಮೂಡ್​ನಲ್ಲಿದ್ದ ಗೌತಮ್​ ಮತ್ತು ಭೂಮಿಕಾರಿಗೆ ಬರಸಿಡಿಲು ಬಡಿಸಿದೆ. ಗೌತಮ್​ ಚಿಕ್ಕಮ್ಮ ಶಕುಂತಲಾ ದೇವಿ ಮತ್ತು ಮಗ ಜೈದೇವ್​ರ ಕುತಂತ್ರದಿಂದ ಭೂಮಿಕಾಳನ್ನು ಕಿಡ್ನ್ಯಾಪ್​ ಮಾಡಿಸಲಾಗಿದೆ. ಭೂಮಿಕಾಳನ್ನು ಹುಡುಕಿಕೊಂಡು   ಗೌತಮ್​ ಮತ್ತು ಆನಂದ್​ ಬಂದಿದ್ದಾರೆ. ದೇವಸ್ಥಾನದ ಸಮೀಪವೇ ಭೂಮಿಕಾಳ ಕಿವಿಯೋಲೆ ಗೌತಮ್​ಗೆ ಸಿಕ್ಕಿದೆ. ಸೀತಾಮಾತೆಯ ಅಪಹರಣದ ಸಮಯದಲ್ಲಿ ತನ್ನ ಕುರುಹನ್ನು ಸೀತೆ ಬಿಟ್ಟುಹೋದಂತೆ, ಭೂಮಿಕಾ ತನ್ನ ಕಿವಿಯೋಲೆ, ಬಳೆಗಳನ್ನು ದಾರಿಯುದ್ದಕ್ಕೂ ಹಾಕುತ್ತಾ ಬಂದಿದ್ದಳು. ಇದನ್ನು ನೋಡಿದ ಗೌತಮ್​ ಅದೇ ದಾರಿಯಲ್ಲಿ ಸಾಗಿದ್ದಾನೆ. ಹೇಗಾದರೂ ಮಾಡಿ ಭೂಮಿಕಾಳನ್ನು ರಕ್ಷಿಸುವುದು ಅವನ ಉದ್ದೇಶ. ಒಟ್ಟಿನಲ್ಲಿ ಭೂಮಿಕಾ ಸಂಕಷ್ಟದಲ್ಲಿದ್ದಾಳೆ. 

ಅತ್ತ, ಗೌತಮ್​ ಭೂಮಿಕಾಳನ್ನು ರಕ್ಷಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಇತ್ತ ಸೀರಿಯಲ್​ ಪ್ರೇಮಿಗಳ ಕಣ್ಣು ಭೂಮಿಕಾಳ ಹಿಂಟ್​ ಕೊಟ್ಟ ದೇವಸ್ಥಾನದತ್ತ ನೆಟ್ಟಿದೆ. ಕೆಂಚ ಹಣಕ್ಕಾಗಿ ಗೌತಮ್​ಗೆ ಕರೆ ಮಾಡಿದಾಗ, ಈ ದೇವಸ್ಥಾನದ ಗಂಟೆ ಮೊಳಗಿತ್ತು. ಅದರಿಂದಲೇ ಗೌತಮ್​ಗೆ ಸಮೀಪದಲ್ಲಿ ದೇವಸ್ಥಾನವಿದ್ದು, ಅಲ್ಲೇ ಭೂಮಿಕಾಳ ಅಪಹರಣ ಆಗಿದ್ದಿರಬಹುದು ಎಂದು ಹಿಂಟ್​ ಸಿಕ್ಕಿತ್ತು. ಅದನ್ನು ಹಿಂಬಾಲಿಸಿಕೊಂಡು ಹೋಗಿದ್ದ. ಅದು ನಿಜ ಕೂಡ ಆಯ್ತು. ಅದಕ್ಕಾಗಿಯೇ ಈಗ ಸುಂದರ, ಭವ್ಯ ದೇಗುಲದ ಮೇಲೆ ಸೀರಿಯಲ್​ ಪ್ರೇಮಿಗಳ ಕಣ್ಣು ನೆಟ್ಟಿದೆ.

ಭೂಮಿಕಾಳನ್ನು ಡ್ರಮ್​ನಲ್ಲಿ ಹೂತು ಹಾಕಿದ ರೌಡಿಗಳು! ಅತ್ತ ಮಲ್ಲಿಯ ಪ್ರಾಣಕ್ಕೂ ಸಂಚಕಾರ...

ಅಷ್ಟಕ್ಕೂ ಈ ದೇವಾಲಯ ಚಿಕ್ಕಮಗಳೂರಿನ ಮೂಡಿಗೆರೆಯ ಮಾಕೋನಹಳ್ಳಿಯಲ್ಲಿರುವ ದೇವಾಲಯ ಎನ್ನಲಾಗಿದೆ. ಇದರ ಮೇಲೆ ನೆಟ್ಟಿಗರ ಕಣ್ಣು ನೆಟ್ಟಿದೆ. ಈ ದೇವಾಲಯ ಕೊಟ್ಟ ಹಿಂಟ್​ನಿಂದಲೇ ಭೂಮಿಯತ್ತ ತಲುಪಲು ಗೌತಮ್​ಗೆ ಸಾಧ್ಯವಾಗಿತ್ತು. ಭೂಮಿಕಾಳ ಕಥೆ ಮುಗಿಸಿದರೆ ದುಡ್ಡು ನೀಡುವುದಾಗಿ ಜೈದೇವ್​ ಹೇಳಿರುತ್ತಾನೆ. ಅವನ ಬಳಿ ಹಣ ಪಡೆಯುವ ಬದಲು ನೇರವಾಗಿ ಗೌತಮ್​ಗೆ ಬ್ಲ್ಯಾಕ್​ಮೇಲ್​ ಮಾಡಿದ್ರೆ ಹೆಚ್ಚು ಹಣ ಸಿಗುತ್ತದೆ ಎಂದು ರೌಡಿ ಕೆಂಚ ಕರೆ  ಮಾಡುತ್ತಾನೆ. ಆ ಸಮಯದಲ್ಲಿ ದೇವಸ್ಥಾನದ ಗಂಟೆ ಕೇಳಿಸುತ್ತದೆ. ಭೂಮಿಕಾ ಬಿಟ್ಟ ಕುರುಹು ಮತ್ತು ಗಂಟೆಯ ನಾದ ಇವುಗಳ ಬೆನ್ನತ್ತಿ ಗೌತಮ್​ ಮತ್ತು ಆನಂದ್​ ಅದೇ ದಾರಿಯಲ್ಲಿ ಸಾಗುತ್ತಾರೆ. ಕೊನೆಗೂ ಕೆಂಚ ಸಿಗುತ್ತಾನೆ. ಬಂದೂಕಿನಿಂದ ಕೆಂಚನನ್ನು ಗೌತಮ್​ ಹೆದರಿಸುತ್ತಾನೆ. ಈ ಆಟದ ಗನ್​ ಬೇಡ ಎಂದು ಕೆಂಚ ತಮಾಷೆ ಮಾಡುತ್ತಾನೆ. ನಂತರ ಬಂದೂಕಿನಿಂದ ಕೆಂಚನ ಕಾಲಿಗೆ ಗುಂಡು ಹಾರಿಸುತ್ತಾನೆ ಗೌತಮ್​

ಅದೇ ವೇಳೆ ಹಣಕ್ಕಾಗಿ ರೌಡಿಗಳ ಕರೆ ಬರುತ್ತದೆ. ಭೂಮಿಕಾಳ ಕಥೆ ಮುಗಿಸಿದರೆ ದುಡ್ಡು ನೀಡುವುದಾಗಿ ಜೈದೇವ್​ ಹೇಳಿರುತ್ತಾನೆ. ಅವನ ಬಳಿ ಹಣ ಪಡೆಯುವ ಬದಲು ನೇರವಾಗಿ ಗೌತಮ್​ಗೆ ಬ್ಲ್ಯಾಕ್​ಮೇಲ್​ ಮಾಡಿದ್ರೆ ಹೆಚ್ಚು ಹಣ ಸಿಗುತ್ತದೆ ಎಂದು ರೌಡಿ ಕೆಂಚ ಕರೆ  ಮಾಡುತ್ತಾನೆ. ಆ ಸಮಯದಲ್ಲಿ ದೇವಸ್ಥಾನದ ಗಂಟೆ ಕೇಳಿಸುತ್ತದೆ. ಭೂಮಿಕಾ ಬಿಟ್ಟ ಕುರುಹು ಮತ್ತು ಗಂಟೆಯ ನಾದ ಇವುಗಳ ಬೆನ್ನತ್ತಿ ಗೌತಮ್​ ಮತ್ತು ಆನಂದ್​ ಅದೇ ದಾರಿಯಲ್ಲಿ ಸಾಗುತ್ತಾರೆ. ಕೊನೆಗೂ ಕೆಂಚ ಸಿಗುತ್ತಾನೆ. ಬಂದೂಕಿನಿಂದ ಕೆಂಚನನ್ನು ಗೌತಮ್​ ಹೆದರಿಸುತ್ತಾನೆ. ಈ ಆಟದ ಗನ್​ ಬೇಡ ಎಂದು ಕೆಂಚ ತಮಾಷೆ ಮಾಡುತ್ತಾನೆ. ನಂತರ ಬಂದೂಕಿನಿಂದ ಕೆಂಚನ ಕಾಲಿಗೆ ಗುಂಡು ಹಾರಿಸುತ್ತಾನೆ ಗೌತಮ್​.

ಪುಟ್ಟಕ್ಕನ ಮನೆಯಲ್ಲಿ ಶ್ರಾದ್ಧ ಮಾಡುವ ಹೊತ್ತಲ್ಲೇ ಸಹನಾ ಪ್ರತ್ಯಕ್ಷ! ಆದರೆ ಇವಳು ಅವಳಲ್ಲ?

Latest Videos
Follow Us:
Download App:
  • android
  • ios