Asianet Suvarna News Asianet Suvarna News

ಪಾಪು ಬಂದ್ಮೇಲೆ ಪ್ರಿಯಾನ್ನ ಬಿಟ್ಟು ಹೋಗ್ತೀರಾ? ಸಿಹಿ... ನಿನ್ನ ಮಾತು ಕೇಳಿ ಕಣ್ಣೀರಾದೆ ಕಂದಾ ಎಂದ ನೆಟ್ಟಿಗರು!

ಪ್ರಿಯಾ ಮತ್ತು ಅಶೋಕ್ ಮದುವೆ ಸೆಲಬ್ರೇಷನ್​ ಪೂರ್ವ ತಯಾರಿ ನಡುವೆಯೇ ಅಶೋಕ್​ಗೆ ಪುಟಾಣಿ ಸಿಹಿ ಕೇಳಿದ ಮಾತಿಗೆ ನೆಟ್ಟಿಗರು ಭಾವುಕರಾಗಿದ್ದಾರೆ. ಸಿಹಿ ಹೇಳಿದ್ದೇನು?
 

Netizens are emotional when Sihi asked a question to Ashok  in Seeta Rama serial suc
Author
First Published Apr 4, 2024, 12:45 PM IST

ಮಗುವಿನ ಮನಸ್ಸು ಅದೆಷ್ಟು ಸೂಕ್ಷ್ಮ! ಅಪ್ಪ- ಅಮ್ಮ ಇಬ್ಬರ ಪ್ರೀತಿಯೂ ಪ್ರತಿ ಮಗುವಿಗೂ ಬೇಕು. ಆದರೆ ಕೆಲವರಿಗೆ ಆ ಅದೃಷ್ಟ ಸಿಗುವುದೇ ಇಲ್ಲ. ಯಾವ್ಯಾವುದೋ ಕಾರಣಕ್ಕೆ ಮಗು ಚಿಕ್ಕವರಿರುವಾಗಲೇ ಅಪ್ಪ-ಅಮ್ಮ ಬೇರೆ ಬೇರೆಯಾಗಿ ಬಿಡುತ್ತಾರೆ. ಇದರಲ್ಲಿ ಹಲವು ಬಾರಿ ಅಹಂ ಕಾರಣವಾಗಿದ್ದರೆ, ಇನ್ನು ಕೆಲವು ಬಾರಿ ದೌರ್ಜನ್ಯ ಸಹಿಸಿಕೊಳ್ಳದ ಹೆಣ್ಣಿಗೆ ಗಂಡನನ್ನು ಬಿಡುವುದು ಅನಿವಾರ್ಯವೂ ಆಗಿಬಿಡುತ್ತದೆ. ಅದೇ ಇನ್ನೊಂದೆಡೆ ಮಗುವಿನ ಬುದ್ಧಿ ಬರುವ ಮೊದಲೇ, ತನ್ನ ಅಪ್ಪ ಯಾರು ಎಂದು ಅದಕ್ಕೆ ತಿಳಿಯುವ ಮೊದಲೇ ಆತ ಸಾವನ್ನಪ್ಪಿದರೂ ಪರಿಸ್ಥಿತಿ ಇನ್ನೂ ಹೆಚ್ಚು ಬಿಗಡಾಯಿಸುವತ್ತದೆ. ಕಾರಣ ಏನೇ ಇದ್ದಿರಬಹುದು. ಅದು ಮಗುವಿನ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಶಾಲೆಗಳಲ್ಲಿ ಎಲ್ಲರೂ ಅಪ್ಪ-ಅಮ್ಮನ ವಿಷಯ ಹೇಳಿದಾಗ ಇಲ್ಲವೇ ಮಕ್ಕಳು ಅಪ್ಪನ ಜೊತೆ ಶಾಲೆಗೆ ಬಂದಾಗ, ಅಪ್ಪನ ಪ್ರೀತಿಯೇ ಕಾರಣ ಮಗುವಿನ ಮನಸ್ಸಿನಲ್ಲಿ ನೂರೆಂಟು ಯೋಚನೆಗಳು ಹೊಳೆಯುವುದು ಸಹಜ. ಆದರೆ ಕೆಲವು ಮಕ್ಕಳಿಗೆ ತಮ್ಮ ಮನದಾಳದಲ್ಲಿ ಮೂಡಿರುವ ಪ್ರಶ್ನೆಗಳಿಗೆ ಉತ್ತರವೇ ಸಿಗುವುದಿಲ್ಲ.

ಇದೀಗ ಸೀತಾರಾಮ ಸೀರಿಯಲ್​ನಲ್ಲಿಯೂ ಇದೇ ರೀತಿ ಆಗಿದೆ. ಇದು ಧಾರಾವಾಹಿಯೇ ಆಗಿದ್ದರೂ ಒಂದರ್ಥದಲ್ಲಿ ಅಪ್ಪನ ಪ್ರೀತಿ ಕಳೆದುಕೊಂಡಿರುವ ಮಗುವಿನ ಪ್ರತೀಕವಾಗಿದ್ದಾಳೆ ಈ ಸಿಹಿ. ಅಪ್ಪನ ಪ್ರೀತಿ ಕಾಣದಿದ್ದ ಸಿಹಿಗೆ ತಾನು ಹುಟ್ಟಿದ ತಕ್ಷಣ ಅಪ್ಪ ಹೋಗಿರುವುದು ಮಾತ್ರ ತಿಳಿದಿದೆ. ಅದ್ಯಾಕೆ ಎನ್ನುವುದು ಆಕೆಗೆ ಗೊತ್ತಿಲ್ಲ. ಇಷ್ಟು ಚಿಕ್ಕ ಮಗುವಿಗೆ ಬಿಡಿಸಿ ಹೇಳುವುದು ಕೂಡ ಅಮ್ಮನಿಗೆ ಕಷ್ಟವೇ. ಆದರೆ ಸಿಹಿಯ ಮನಸ್ಸಿನಲ್ಲಿ ಇರುವುದು ಏನೆಂದರೆ, ಮಗು ಹುಟ್ಟಿದ ಬಳಿಕ, ಅಪ್ಪ ಬಿಟ್ಟು ಹೋಗುತ್ತಾನೆ ಎಂದು. ಇದನ್ನೇ ಆಕೆ ಅಶೋಕ್​ಗೂ ಕೇಳಿದ್ದಾಳೆ. ನಿಮಗೆ ಮಗು ಆಗುವುದು ಯಾವಾಗ ಎಂದು ಕೇಳಿದ್ದಾಳೆ. ಅದಕ್ಕೆ ಅಶೋಕ್​ ದೇವರು ಕೊಟ್ಟಾಗ ಎಂದಿದ್ದಾನೆ. ಹಾಗಿದ್ದರೆ ಮಗು ಆದ್ಮೇಲೆ ಪ್ರಿಯಾರನ್ನು ಬಿಟ್ಟು ಹೋಗ್ತೀರಾ ಎಂದು ಕೇಳಿದ್ದಾಳೆ. ಅಷ್ಟೇ... ಇದರ ಪ್ರೊಮೋ ಬಿಡುಗಡೆಯಾಗಿದೆ. ಸಿಹಿಯ ಈ ಮಾತಿಗೆ ಸೀತಾರಾಮ ಸೀರಿಯಲ್​ ಫ್ಯಾನ್ಸ್​ ಕಣ್ಣಿರಾಗಿದ್ದಾರೆ. ನಿಜ ಜೀವನಕ್ಕೆ ತುಂಬಾ ಹತ್ತಿರವಿದೆ ಈ ಮಗುವಿನ ಮನಸ್ಥಿತಿ ಎನ್ನುತ್ತಿದ್ದಾರೆ.

ಪೂರ್ಣಿಯನ್ನು ಅನಾಥಾಶ್ರಮಕ್ಕೆ ಸೇರಿಸಿದ್ದು ಮಾಧವನಾ? ತುಳಸಿಗೆ ಗೊತ್ತಾದ ಸತ್ಯವೇನು?

ಪ್ರಿಯಾ ಮತ್ತು ಅಶೋಕ್​ ಮದುವೆ ಸೆಲಬ್ರೇಷನ್​ ಶುರುವಾಗಿದೆ. ಇದಕ್ಕಾಗಿ ಬಟ್ಟೆ ಖರೀದಿಗೆ ಜೋಡಿ ಹೋಗಿದೆ. ಇವರ ಜೊತೆಗೆ ಸೀತಾ ಮತ್ತು ರಾಮ್​ ಹಾಗೂ ಸಿಹಿ ಹೋಗಿದ್ದಾರೆ. ಬಟ್ಟೆಯ ಖರೀದಿಯ ಸಮಯದಲ್ಲಿ ಸೀತಾ ಮತ್ತು ರಾಮ್​  ನಡುವೆ ಹುಳಿ ಹಿಂಡಲು ಚಾಂದನಿ ಬಂದಿದ್ದಾಳೆ. ರಾಮ್​ ಸೀತಾಗೆಂದು ಸೆಲೆಕ್ಟ್​ ಮಾಡಿರುವ ಸೀರೆಯನ್ನು ತಾನು ಕಸಿದುಕೊಂಡಿದ್ದಾಳೆ. ಇದನ್ನು ನೋಡಿ ಸಿಹಿಗೆ ಸಿಟ್ಟು ಬಂದು ಪ್ರಶ್ನೆ ಮಾಡಿದ್ದಾಳೆ. ಬಳಿಕ ನೀವ್ಯಾರು ಎಂದು ಕೇಳಿದಾಗ, ಅವಳು ರಾಮ್​ನ ಫ್ರೆಂಡ್​ ಎಂದಿದ್ದಾಳೆ. ಸಿಹಿಗೇನು ಗೊತ್ತು, ಇವಳ ಕುತಂತ್ರ? ಹಾಗಿದ್ರೆ ನನ್ನ ಫ್ರೆಂಡ್​ನ ಫ್ರೆಂಡ್​​ ಎಂದರೆ ಬೆಸ್ಟ್​ ಫ್ರೆಂಡ್​ ಎಂದಿದ್ದಾಳೆ. ಆಗ ಅಶೋಕ್​ ಹೂಂ ಇವಳು ಒಂಥರಾ ಹಳೆಯ ಲವರ್​ ಎಂದು ತಮಾಷೆ ಮಾಡಿದ್ದಾನೆ.


ಇನ್ನು ಸಿಹಿಯ ವಿಷಯಕ್ಕೆ ಬರುವುದಾದರೆ, ಈಕೆಯ ನಿಜವಾದ ಹೆಸರು  ರಿತು ಸಿಂಗ್​. ಈಕೆಯ ನಿಜ ಜೀವನದಲ್ಲಿಯೂ ಅಪ್ಪನ ಪ್ರೀತಿ ಕಾಣದಾಕೆ.  ರಿಯಲ್​ ಲೈಫ್​ನಲ್ಲಿಯೂ ಅಮ್ಮನೇ ಎಲ್ಲಾ. ಪತಿಯಿಂದ ದೂರವಾಗಿರುವ ರಿತು ಅಪ್ಪ, ಒಬ್ಬಂಟಿಯಾಗಿ ಮಗಳನ್ನು ಸಾಕುತ್ತಿದ್ದಾಳೆ. ರಿಯಾಲಿಟಿ ಷೋ ಒಂದರಲ್ಲಿ  ಈ ಬಗ್ಗೆ ಈಕೆಯ ಅಮ್ಮ ಪತಿ ಬಿಟ್ಟುಹೋದ ಬಗ್ಗೆ ತಿಳಿಸಿ ಕಣ್ಣೀರು ಸುರಿಸಿದ್ದರು. ಈ ಬಗ್ಗೆ ತೀರ್ಪುಗಾರರಾಗಿದ್ದ ರವಿಚಂದ್ರನ್ ಕೂಡ ಮಾತನಾಡಿದ್ದರು. ಹೋದವರು ಹೋಗಲಿ ಬಿಟ್ಟೋದವನು ಬಿಟ್ಟೋದ. ಗಂಡ ಇಲ್ಲ ಅಂತ ಅಳಬಾರದು. ಗಂಡ ಬಿಟ್ಟು ಹೋಗಿದ್ದಕ್ಕೆ ಇವತ್ತು ನಿಮ್ಮ ಮಗು ಇಷ್ಟೊಂದು ಪ್ರತಿಭಾವಂತೆ ಆಗಿರೋದು. ರಿತು ತುಂಬ ಪ್ರೌಢಿಮೆ ಇರುವ ಗೊಂಬೆ. ಯಾರೇ ಚಾಕಲೇಟ್ ಕೊಟ್ರೂ, ಎಷ್ಟೇ ಒತ್ತಾಯ ಮಾಡಿದ್ರೂ ಅವಳು ಚಾಕೋಲೇಟ್ ತಿನ್ನಲ್ಲ. ತುಂಬ ಒತ್ತಾಯ ಮಾಡಿದ್ರೆ ಮೊದಲು ನಮಗೆ ಚಾಕೋಲೇಟ್ ತಿನಿಸಿ ಆಮೇಲೆ ಅವಳು ತಿಂತಾಳೆ ಎಂದು ರವಿಚಂದ್ರನ್​ ಹೇಳಿದ್ದರು.

ಶ್ರೀದೇವಿ ಬಯೋಪಿಕ್​ಗೆ ಯಾವುದೇ ಕಾರಣಕ್ಕೂ ಅನುಮತಿ ಕೊಡಲ್ಲ ಎಂದ ಬೋನಿ ಕಪೂರ್​: ಏನಿದರ ಗುಟ್ಟು?

Follow Us:
Download App:
  • android
  • ios