ವಿನಯ್ ಗೌಡಗೆ ಬಿಗ್ಶಾಕ್ ನೀಡಿದ ನಮ್ರತಾ: ಬದುಕಿನ ಸತ್ಯ ಈಗ ಅರ್ಥ ಆಯ್ತು ಎಂದ ವಿನಯ್!
ಕ್ಯಾಪ್ಟನ್ಷಿಪ್ನಿಂದ ಹೊರಕ್ಕೆ ಯಾರನ್ನು ಇಡುತ್ತೀರಿ ಎನ್ನುವ ಪ್ರಶ್ನೆಗೆ ನಮ್ರತಾ ವಿನಯ್ ಹೆಸರು ಹೇಳಿದ್ದು, ಇದು ಹಲವರ ಅಚ್ಚರಿಗೆ ಕಾರಣವಾಗಿದೆ.
![Namrata took Vinays name when Bigg Boss asked Who do you keep out of captainship suc Namrata took Vinays name when Bigg Boss asked Who do you keep out of captainship suc](https://static-ai.asianetnews.com/images/01hgg04pyhvgp81j9mq2fnqxh4/bbk10-namrutha-and-vinay_363x203xt.jpg)
ಬಿಗ್ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಹೊಸಹೊಸ ವಿಷಯಗಳು ನಡೆಯುತ್ತಿವೆ. ವಿನಯ್ ಗೌಡ ಬಿಗ್ ಬಾಸ್ ಮನೆಗೆ ಬಂದ ಕೆಲವೇ ವಾರಗಳಲ್ಲಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು. ಇದು ಕೆಲವರ ಅಸಮಾಧಾನಕ್ಕೂ ಕಾರಣವಾಗಿತ್ತು. ಇದೀಗ ಕುತೂಹಲದ ಬೆಳವಣಿಗೆಯೊಂದರಲ್ಲಿ ನಮ್ರತಾ ಗೌಡ ವಿನಯ್ ಅವರಿಗೆ ಬಿಗ್ ಶಾಕ್ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಮಾಡೆಲ್ಗಳಾದ ಪವಿ ಪೂವಪ್ಪ ಹಾಗೂ ಅವಿನಾಶ್ ಶೆಟ್ಟಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಬಂದ ಮೇಲೆ ಬಿಗ್ಬಾಸ್ ಮನೆಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಹೊರಗೆ ನಡೆದ ಅನೇಕ ವಿಚಾರಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ನೀವು ಇನ್ನೂ ವಿನಯ್ ಅವರ ನೆರಳಲ್ಲೇ ಇದ್ದೀರಿ ಎಂದು ಪವಿ ನಮ್ರತಾಗೆ ಕಿವಿಮಾತು ಹೇಳಿದ್ದು, ಅದನ್ನು ನಮ್ರತಾ ಗಂಭೀರವಾಗಿ ಸ್ವೀಕರಿಸಿದಂತೆ ಇದೆ.
ಇದೀಗ ನಮ್ರತಾ ವಿನಯ್ ಅವರನ್ನು ಕ್ಯಾಪ್ಟನ್ಷಿಪ್ನಿಂದ ಹೊರಕ್ಕೆ ಇಡುವ ಮಾತನಾಡಿ ಅವರಿಗೆ ಶಾಕ್ ನೀಡಿದ್ದಾರೆ. ನಮ್ರತಾ, ವಿನಯ್, ಸ್ನೇಹಿತ್ ಈ ಮೂವರು ಒಬ್ಬರನ್ನ ಬಿಟ್ಟು ಒಬ್ಬರು ಇರ್ತಿರಲಿಲ್ಲ. ಏನೇ ಸವಾಲು ಬಂದರೂ ಒಟ್ಟಿಗೇ ಎದುರಿಸುತ್ತಿದ್ದರು. ಆದರೆ ಪ್ರತಾಪ್ ಎಂಟ್ರಿ ಆಗುತ್ತಿದ್ದಂತೆಯೇ ನಮ್ರತಾಗೆ ಇಲ್ಲಿ ಯಾರು ನಮ್ಮವರಲ್ಲ ಎಂಬುದು ಅರ್ಥವಾಗ್ತಿದೆ. ಇದೇ ಕಾರಣಕ್ಕೆ ವಿನಯ್ ಅವರನ್ನು ಕ್ಯಾಪ್ಟನ್ಷಿಪ್ನಿಂದ ಹೊರಕ್ಕೆ ಇಡುವ ಮಾತನಾಡಿದ್ದಾರೆ.
ಕಾಲಿಗೆ ಹಗ್ಗ ಕಟ್ಟಿಕೊಂಡು ಆಡುವ ಭರದಲ್ಲಿ ಕಾಲ್ತುಳಿತ, ಒಬ್ಬರ ಮೇಲೊಬ್ಬರು ಬಿದ್ದು ಒದ್ದಾಡಿದ ಸ್ಪರ್ಧಿಗಳು!
ಬಿಗ್ಬಾಸ್ ನಮ್ರತಾ ಅವರಿಗೆ ಈ ಪ್ರಶ್ನೆ ಕೇಳಿತ್ತು. ಈ ವಾರ ಕ್ಯಾಪ್ಟನ್ಷಿಪ್ನಿಂದ ಯಾರನ್ನು ಹೊರಕ್ಕೆ ಇಡಲು ಬಯಸುವಿರಿ ಎಂದು. ಅದಕ್ಕೆ ನಮ್ರತಾ ವಿನಯ್ ಹೆಸರು ಹೇಳಿದ್ದಾರೆ. ಇವರಿಗೆ ಕೋಪ ಬಂದಾಗ ಏನನ್ನೂ ನೋಡುವುದಿಲ್ಲ. ಕೋಪದಲ್ಲಿ ಯಾರಿಗೆ ಹರ್ಟ್ ಮಾಡುತ್ತೇನೆ ಎನ್ನುವುದೇ ಗೊತ್ತಾಗುವುದಿಲ್ಲ. ಆದ್ದರಿಂದ ಅವರನ್ನು ಕ್ಯಾಪ್ಟನ್ಷಿಪ್ನಿಂದ ಹೊರಕ್ಕೆ ಇಡಲು ಬಯಸುತ್ತೇನೆ ಎಂದರು. ಇದರಿಂದ ಸಹಜವಾಗಿ ವಿನಯ್ ಅವರಿಗೆ ಕೋಪ ಬಂದಿದೆ. ಈ ಒಂದು ಜರ್ನಿಯಲ್ಲಿ ಯಾರೂ ನಮ್ ಜೊತೆ ಯಾರೂ ಬರಲ್ಲ. ಈ ಒಂದು ಸತ್ಯ ಅರ್ಥ ಆಗಿದೆ ಈಗ ಎಂದರು. ಇದರ ಪ್ರೊಮೋ ಅನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.
ನಮ್ರತಾ ಮಾತು ವಿನಯ್ಗೆ ಮಾತ್ರವಲ್ಲದೇ ಹಲವರನ್ನು ಅಚ್ಚರಿಕೆ ತಳ್ಳಿದೆ. ಏಕೆಂದರೆ ವಿನಯ್ ಹೆಸರನ್ನು ನಮ್ರತಾ ತೆಗೆದುಕೊಳ್ಳಬಹುದು ಎಂದು ಯಾರೂ ಊಹಿಸಿದಂತೆ ಇರಲಿಲ್ಲ. ನಮ್ರತಾ ಅವರು ವಿನಯ್ ಹೆಸರನ್ನು ಬೇಸರದಿಂದಲೇ ಹೇಳಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ನಮ್ರತಾ ನಿರ್ಧಾರ ಸ್ನೇಹಿತ್ ಅವರಿಗೂ ಬೇಸರ ತರಿಸಿದ್ದನ್ನು ಪ್ರೊಮೋದಲ್ಲಿ ನೋಡಬಹುದು. ಇನ್ನು ಕಮೆಂಟ್ ಸೆಕ್ಷನ್ನಲ್ಲಿ ನಮ್ರತಾ ವಿರುದ್ಧವಾಗಿ ಹಲವರು ಮಾತನಾಡಿದ್ದಾರೆ.
ಆಟದ ಹೆಸರಲ್ಲಿ ಭಾರಿ ಹೊಡೆದಾಟ! ವೈಲ್ಡ್ ಕಾರ್ಡ್ ಎಂಟ್ರಿ ಆಗ್ತಿದ್ದಂತೆಯೇ ಬಿಗ್ಬಾಸ್ ಮನೆಯಲ್ಲಿ ಇದೇನಿದು?