Asianet Suvarna News Asianet Suvarna News

ಏನಿದು ಖರ್ಜೂರ ರಹಸ್ಯ? ಮಹೇಶ್​ ಮಾತಿನಿಂದ ಶಾರ್ವರಿಯ ಹೃದಯವೇ ಕಿತ್ತು ಬಂತಲ್ಲ!

ಶಾರ್ವರಿಯ ಬಳಿ ಮಹೇಶ್​ ಹಿಂದಿನ ಘಟನೆಗಳನ್ನು ಕೆದಕಿದ್ದಾನೆ. ಇದನ್ನು ಕೇಳಿ ಶಾರ್ವರಿಯ ಉಸಿರೇ ನಿಂತು ಹೋದ ಅನುಭವವಾಗಿದೆ. ಮಹೇಶ್​ ಹೇಳಿದ್ದೇನು?
 

Mahesh digs past incidents with Sharwari who felt shock in Shreerastu Shubhamastu suc
Author
First Published Apr 3, 2024, 5:18 PM IST

ತುಳಸಿ, ಪೂರ್ಣಿ ಮತ್ತು ಮಾಧವ್​ ಮೇಲೆ ಸದಾ ಕಿಡಿ ಕಾರುತ್ತಾ, ಅವರನ್ನು ತುಳಿಯಲು ನೋಡುತ್ತಾ, ಇನ್ನಿಲ್ಲದ ಮಸಲತ್ತು ಮಾಡುತ್ತಿರುವ ಶಾರ್ವರಿಗೆ ಈಗ ಸಂಕಟ ಎದುರಾಗಿದೆ. ಅದೂ ಖುದ್ದು ಪತಿ ಮಹೇಶ್​ನಿಂದಲೇ. ಮಹೇಶ್​ನಿಗೆ ಶಾರ್ವರಿಯ ಎಲ್ಲಾ ಮಸಲತ್ತುಗಳ ಪರಿಚಯ ಚೆನ್ನಾಗಿಯೇ ಇದೆ. ಮಾಧವ್​ ತನ್ನ ಮೊದಲ ಪತ್ನಿಯ ಅಪಘಾತಕ್ಕೆ ತಾನೇ ಕಾರಣ ಎಂದುಕೊಂಡಿದ್ದಾನೆ. ಆದರೆ ಅಸಲಿಗೆ ಅದನ್ನು ಮಾಡಿಸಿದ್ದು, ಶಾರ್ವರಿ ಎನ್ನುವ ಸತ್ಯ ಶಾರ್ವರಿಗೆ ಬಿಟ್ಟರೆ ಗೊತ್ತಿರುವುದು ಮಹೇಶ್​ಗೆ ಮಾತ್ರ. ಅದೇ ಅಪಘಾತದಲ್ಲಿ ಮಹೇಶ್​ ನೆನಪು ಕಳೆದುಕೊಂಡು ಹಾಸಿಗೆ ಹಿಡಿದಿದ್ದ. ಆತ ಹುಷಾರಾಗಿ ಬಿಟ್ಟರೆ ತನ್ನ ಗುಟ್ಟೆಲ್ಲಿ ಬಯಲಾಗುವುದೋ ಎಂದುಕೊಂಡಿದ್ದ ಶಾರ್ವರಿ, ಆತನಿಗೆ ಹುಷಾರು ಆಗದ ರೀತಿಯಲ್ಲಿ ಏನೇನೋ ಮಾತ್ರೆಗಳನ್ನು ನೀಡುತ್ತಿದ್ದಳು.

ಆದರೆ ತುಳಸಿ ಯಾವಾಗ ಆ ಮನೆಗೆ ಕಾಲಿಟ್ಟಳೋ ಎಲ್ಲವೂ ಬದಲಾಯಿತು. ಶಾರ್ವರಿಯ ತಂತ್ರ, ಕುತಂತ್ರ ಏನೂ ಅರಿಯದ ಮುಗ್ಧ ತುಳಸಿ ಮಹೇಶ್​ನ ಸೇವೆ ಮಾಡುತ್ತಲೇ, ಆತ ಹುಷಾರಾಗಿದ್ದಾನೆ. ಆತ ಹಾಸಿಗೆ ಮೇಲೆ ಇರುವಾಗಲೂ ಸದಾ ಖರ್ಜೂರ ಖರ್ಜೂರ ಎನ್ನುತ್ತ ಏನೋ ನೆನಪು ಮಾಡಿಕೊಳ್ಳುತ್ತಿದ್ದ. ಈ ಶಬ್ದ ಕೇಳುತ್ತಿದ್ದಂತೆಯೇ ಶಾರ್ವರಿ ಗರ ಬಡಿದವಳಂತೆ ಆಗುತ್ತಿದ್ದಳು. ಅಪಘಾತಕ್ಕೂ ಮುನ್ನ ಖರ್ಜೂರ ತಿಂದದ್ದಕ್ಕೂ, ಪೂರ್ಣಿಯ ಗರ್ಭಪಾತವಾಗುವುದಕ್ಕೂ ಎಲ್ಲದಕ್ಕೂ ಲಿಂಕ್​ ಇದೆ ಎನ್ನುವುದು ಅವನ ಮಾತಿನಿಂದ ತಿಳಿದು ಬರುತ್ತಿತ್ತು. ಆದರೆ ಅರೆಬರೆ ನೆನಪಿನಲ್ಲಿದ್ದ ಮಹೇಶ್​.

ರಿಯಲ್​ ಪತಿ ಜೊತೆ ಪುಟ್ಟಕ್ಕನ ಮಕ್ಕಳ ರಾಜಿ ಭರ್ಜರಿ ಡ್ಯಾನ್ಸ್​: ರೀಲ್​ ಪತಿ ಎಲ್ಲಮ್ಮಾ ಕೇಳಿದ ಫ್ಯಾನ್ಸ್​

ಇದೀಗ ಸಂಪೂರ್ಣವಾಗಿ ಹುಷಾರಾದ ಮೇಲೂ ಆ ವಿಷಯವನ್ನು ಕೆದಕಿರಲಿಲ್ಲ. ಆದರೆ ಪತ್ನಿ ಶಾರ್ವರಿಯ ಕುತಂತ್ರ ಆತನಿಗೆ ಚೆನ್ನಾಗಿ ಗೊತ್ತು. ಇದೀಗ ಪತ್ನಿಯನ್ನು ಹೊಗಳುವಂತೆ ಮಾಡಿ, ಮತ್ತೆ ಖರ್ಜೂರದ ವಿಷಯ ತೆಗೆದಿದ್ದಾನೆ. ತುಳಸಿ, ಪೂರ್ಣಿಯನ್ನು ಯಾಕೆ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಮಹೇಶ್​ ಕೇಳಿದಾಗ, ಅವರಿಬ್ಬರೂ ಹೊರಗಿನವರಲ್ವಾ, ಅದಕ್ಕೆ ಹಾಗೆ ಅಂದಿದ್ದಾಳೆ ಶಾರ್ವರಿ. ಹಾಗಿದ್ದರೆ ದೀಪಿಕಾ ಕೂಡ ಹೊರಗಿನವಳಲ್ವಾ ಎಂದಿದ್ದಾನೆ ಮಹೇಶ್​. ಅದಕ್ಕೆ ಶಾರ್ವರಿ, ಹಾಗೇನು ಇಲ್ಲ, ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎನ್ನುವುದೇ ನನ್ನ ಆಸೆ ಎಂದಿದ್ದಾಳೆ.

ಆಗ ಕೂಡಲೇ ಮಹೇಶ್​, ಹಾಗಿದ್ದರೆ ಆ ದಿನ ಒಗ್ಗಟ್ಟು ಒಡೆಯುವುದೇ ನನ್ನ ಗುರಿ ಎಂದಿದ್ಯಲ್ಲಾ ಎಂದಿದ್ದಾನೆ. ಯಾವಾಗ ಎಂದು ಗಾಬರಿಯಿಂದ ಮಹೇಶ್​ ಕೇಳಿದಾಗ, ಖರ್ಜೂರದ ವಿಷಯ ಎತ್ತಿದ್ದಾನೆ. ಅಪಘಾತ ಆಗುವುದಕ್ಕಿಂತ ಮುಂಚೆ ಎಂದಿದ್ದಾನೆ. ಇದನ್ನು ಕೇಳಿ ಶಾರ್ವರಿಗೆ ಹೃದಯವೇ ಬಾಯಿಗೆ ಬಂದ ಅನುಭವವಾಯ್ತು. ಕೂಡಲೇ ನಾಟಕವಾಡಿದ ಮಹೇಶ್​, ನಾನು ಏನು ಹೇಳಿದೆ, ಏನೇನೋ ಹೇಳುತ್ತಿದ್ದೇನೆ ಎನಿಸುತ್ತಿದೆ ಎಂದಾಗ ಶಾರ್ವರಿ ಬೇರೆ ವಿಷಯ ಎತ್ತಿದ್ದಾಳೆ. ಆದರೆ ಮಹೇಶ್​ ಹೋಗುವ ಸಮಯದಲ್ಲಿ ಮತ್ತೆ ತಿರುಗಿ ಪತ್ನಿಯತ್ತ ನೋಡಿ ಅಪಘಾತದ ಘಟನೆಯನ್ನುನೆನಪು ಮಾಡಿಕೊಂಡಿದ್ದಾನೆ. ಏನಿದು ಖರ್ಜೂರ ರಹಸ್ಯ? ಪೂರ್ಣಿಗೂ, ಅಪಘಾತಕ್ಕೂ, ಖರ್ಜೂರಕ್ಕೂ ಇರುವ ನಂಟೇನು ಎನ್ನುವ ಕುತೂಹಲ ಸದ್ಯ ವೀಕ್ಷಕರದ್ದು. 

ಮಕ್ಕಳೆದುರು ತಾಂಡವ್​ ಶಾಕಿಂಗ್​ ಸತ್ಯ! ಹೆಣ್ಣಿನ ತಾಳ್ಮೆಗೆ ಬೆಲೆನೇ ಇಲ್ವಾ? ರೊಚ್ಚಿಗೆದ್ದ ಭಾಗ್ಯಲಕ್ಷ್ಮಿ ಫ್ಯಾನ್ಸ್​...

Follow Us:
Download App:
  • android
  • ios