ಮಾಧವ್​ ಮತ್ತು ತುಳಸಿ ಹಳ್ಳಿಗೆ ಹೋಗಿದ್ದು, ಅಲ್ಲಿಯ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಹಳ್ಳಿಯ ಸೊಗಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. 

ಒರಳು ಕಲ್ಲು ಹೋಗಿ ಮಿಕ್ಸಿ ಬಂದಿದೆ. ಹೊಲಕ್ಕೆ ಬುತ್ತಿ ತೆಗೆದುಕೊಂಡು ಹೋಗುವುದು ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಜೀವಂತವಾಗಿದೆ. ಬಾವಿಗಳಿಗೆ ಪಂಪ್​ ಬಂದು ನೀರು ಸೇಯುವುದು ಬಹುತೇಕ ನಿಂತು ಹೋಗಿದೆ... ಕೆಲವೊಮ್ಮೆ ಮನೆ ಹೆಂಗಸರಿಗೆ ಇವೆಲ್ಲಾ ತೊಂದರೆ ಎನಿಸಿದ್ದರೂ, ಅದರಲ್ಲಿ ಇರುವ ಮಜವೇ ಬೇರೆ. ಗ್ರಾಮೀಣ ಭಾಗಗಳಲ್ಲಿ ಹುಟ್ಟಿ ಬೆಳೆದು ನಗರ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ, ಇಲ್ಲವೇ ಮದುವೆಯಾಗಿ ನಗರ ಸೇರಿರುವ ಎಷ್ಟೋ ಮಹಿಳೆಯರಿಗೆ ಆ ದಿನಗಳ ನೆನಪು ಬರುತ್ತಲೇ ಇರುತ್ತದೆ. ಅಷ್ಟಕ್ಕೂ ಒರಳು ಕಲ್ಲು ಈಗ ಮತ್ತೊಮ್ಮೆ ಫೇಮಸ್​ ಆಗುತ್ತಿದೆ. ಅದರಲ್ಲಿ ರುಬ್ಬಿ ಅಡುಗೆ ಮಾಡಿದರೆ ಅದರ ರುಚಿಯ ಮುಂದೆ ಯಾವ ಬ್ರ್ಯಾಂಡೆಡ್​ ಮಿಕ್ಸಿಗಳಿಗೂ ಇಲ್ಲ ಎನ್ನುವುದು ಅದರ ರುಚಿಯನ್ನು ತಿಂದವರೇ ಬಲ್ಲರು.

ಇದೀಗ ಅದೇ ಗ್ರಾಮೀಣ ಸೊಗಡನ್ನು ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ನೋಡಬಹುದಾಗಿದೆ. ತುಳಸಿ ಮತ್ತು ಮಾಧವ್​ ಟೂರ್​ಗೆ ಎಂದು ಹಳ್ಳಿಗೆ ಹೋಗಿದ್ದಾರೆ. ಅಲ್ಲಿ ಒರಳು ಕಲ್ಲಿನಿಂದ ಅಡುಗೆ ಮಾಡುತ್ತಿದ್ದಾಳೆ ತುಳಸಿ, ಬಾವಿಯಿಂದ ನೀರು ಸೇದುವುದು, ಬುತ್ತಿ ತೆಗೆದುಕೊಂಡು ಹೋಗುವುದು... ಇವೆಲ್ಲಾ ಹಲವು ಆಸೆಗಳನ್ನು ಹೊತ್ತಿರೋ ತುಳಸಿಯ ಆಸೆಗಳನ್ನು ಪೂರೈಸುತ್ತಿದ್ದಾನೆ ಮಾಧವ್​. ಇವರಿಬ್ಬರ ಲವ್​ಸ್ಟೋರಿ ನೋಡುವುದಕ್ಕೇ ಅಂದ. ಮಾಧವ್​ಗಾಗಿ ತುಳಸಿ, ತುಳಸಿಗಾಗಿ ಮಾಧವ್​ ಎಂಬಂತೆ ಹೇಳಿಮಾಡಿಸಿದ ಈ ಜೋಡಿ ಈಗ ಹಳ್ಳಿಯಲ್ಲಿ ಒಂದು ರೀತಿಯ ಹನಿಮೂನ್​ ಮೂಡ್​ನಲ್ಲಿದೆ.

ತುಂಬಾ ಪದಗಳಿವೆ, ಆದ್ರೆ ಮಾತಿಲ್ಲ... ಪ್ರಿಯಾಳಿಗೆ ಸೀತಾ ಕೇಳಿದ ಪ್ರಶ್ನೆಗೆ ಏನಪ್ಪಾ ಉತ್ತರ?

ಅದೇ ಇನ್ನೊಂದೆಡೆ, ಶಾರ್ವರಿ ಇವರಿಬ್ಬರನ್ನೂ ಮುಗಿಸುವ ಪ್ಲ್ಯಾನ್​ ಮಾಡಿದ್ದಾಳೆ. ಮಾಧವ್​ ತಾನು ಮೈಸೂರಿಗೆ ಹೋಗುವುದಾಗಿ ಹೇಳಿದ್ದ. ಆದರೆ ಬಂದದ್ದು ಬೇರೆ ಕಡೆ. ಶಾರ್ವರಿ ಇವರನ್ನು ಮುಗಿಸಲು ಗೂಂಡಾಗಳನ್ನು ಬಿಟ್ಟಿದ್ದಾಳೆ. ಈ ವಿಷಯ ಮಹೇಶ್​ಗೆ ತಿಳಿದಿದೆ. ಅವರು ಕೂಡ ಮಾಧವ್​-ತುಳಸಿ ಮೈಸೂರಿಗೆ ಹೋಗಿದ್ದಾರೆ ಎಂದುಕೊಂಡಿದ್ದು, ಮನೆಯವರೆಲ್ಲರನ್ನೂ ಕರೆದುಕೊಂಡು ಮೈಸೂರಿಗೆ ಹೋಗುವ ಪ್ಲ್ಯಾನ್​ ಮಾಡಿದ್ದಾನೆ. ಏಕೆಂದರೆ ಮೊಬೈಲ್​ ಸ್ವಿಚ್​ ಆಫ್​ ಬಂದಿರುವುದಕ್ಕೆ.

ಮುಂದೆ ಏನು ಆಗುತ್ತದೆಯೋ ಗೊತ್ತಿಲ್ಲ. ಮಾಧವ್​ ಮತ್ತು ತುಳಸಿಯ ಜೀವಕ್ಕೆ ಯಾವುದೇ ಅಪಾಯ ಆಗದಿರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಅದೇ ಇನ್ನೊಂದೆಡೆ ಈ ಜೋಡಿ ಹಳ್ಳಿಯಲ್ಲಿ ಸಕತ್​ ಎಂಜಾಯ್​ ಮಾಡುತ್ತಿದೆ. ಅಷ್ಟಕ್ಕೂ, ಮಾಧವ ಮತ್ತು ತುಳಸಿಯ ಜೋಡಿಯೆಂದರೆ ಅದು ಎಲ್ಲರಿಗೂ ಏನೋ ಒಂದು ರೀತಿಯಲ್ಲಿ ಇಷ್ಟ. ಇವರಿಬ್ಬರ ನವೀರಾದ ಪ್ರೇಮಕಥೆಗೆ ಮನಸೋತವರೇ ಸೀರಿಯಲ್​ ಪ್ರೇಮಿಗಳು. ಮಕ್ಕಳ ಮದುವೆಯಾದ ಮೇಲೆ ತಾವು ಮದುವೆಯಾಗಿರುವ ಈ ಜೋಡಿಯ ಬಗ್ಗೆ ಆರಂಭದಲ್ಲಿ ಟೀಕಿಸಿದವರೂ ಇದೀಗ ಈ ಜೋಡಿಯನ್ನು ಒಪ್ಪಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ ಮದ್ವೆಯಾಕೆ ಎಂದು ಟೀಕಿಸಿದವರಿಗೂ ಜೋಡಿ ಎಂದರೆ ಅಚ್ಚುಮೆಚ್ಚು. ಇವರಿಬ್ಬರ ಪ್ರೇಮಕ್ಕೆ ಸಾಟಿ ಯಾವುದೂ ಇಲ್ಲ. ಪ್ರೀತಿ ಎಂಬುದು ಕೇವಲ ದೈಹಿಕ ಕಾಮನೆಯಲ್ಲ, ಅದು ಮನಸ್ಸಿನ ಭಾವನೆ ಎನ್ನುವುದನ್ನು ತೋರಿಸಿಕೊಡುತ್ತಿದೆ ಈ ಜೋಡಿ.

ಸೀತಾಳ ಮನೆಯಲ್ಲಿ ಕೊನೆಯ ದಿನದ ಶೂಟಿಂಗ್​ ಹೀಗಿತ್ತು ನೋಡಿ... ಸೀತಾರಾಮ ವೈಷ್ಣವಿ ಗೌಡ ಮಾಹಿತಿ