ಬಿಗ್ಬಾಸ್ ಮನೆಗೆ ಕಾಂತಾರ ಚೆಲುವೆ ಸಪ್ತಮಿ ಗೌಡ! ಮುಟ್ಟಿನ ಕಪ್ ಕುರಿತು ಜಾಗೃತಿ ಮೂಡಿಸಿದ ನಟಿ
ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಕಾಂತಾರ ಚೆಲುವೆ ಸಪ್ತಮಿ ಗೌಡ! ಸರ್ಕಾರದ ರಾಯಭಾರಿಯಾಗಿ ಬಂದ ನಟಿ ಹೇಳಿದ್ದೇನು?
![Kantara actress Sapthami Gowda has entered the Bigg Boss house suc Kantara actress Sapthami Gowda has entered the Bigg Boss house suc](https://static-ai.asianetnews.com/images/01hjxb95h6erxv5c7q005vynfc/sapthami-gowda_363x203xt.jpg)
ಬಿಗ್ಬಾಸ್ ಕನ್ನಡ ಸೀಸನ್ 10 ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಇದಾಗಲೇ ವೈಲ್ಡ್ಕಾರ್ಡ್ ಎಂಟ್ರಿಯೂ ಆಗಿದೆ, ಅತಿಥಿಗಳ ಆಗಮನವೂ ಆಗಿದೆ. ಇಷ್ಟೇ ಅಲ್ಲದೇ ಸ್ಪರ್ಧಿಗಳ ಅಪ್ಪ-ಅಮ್ಮನ ಎಂಟ್ರಿ ಕೂಡ ನಡೆದಿದೆ. ಕೆಲವೊಂದು ಹೈಡ್ರಾಮಾ ಸನ್ನಿವೇಶಗಳೂ ಆಗಿಹೋಗಿವೆ. ಒಟ್ಟೂ ಇದ್ದ 21 ಸ್ಪರ್ಧಿಗಳಲ್ಲಿ ಈಗ 10 ಮಂದಿ ಉಳಿದುಕೊಂಡಿದ್ದಾರೆ. ಈ ವಾರ ಯಾರು ಮನೆಯಿಂದ ಹೊರಗಡೆ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ. ಟಿಆರ್ಪಿ ರೇಟ್ ನೋಡಿ ಇನ್ನೂ ಎರಡು ವಾರ ಮುಂದಕ್ಕೆ ಹೋಗಲಿದೆ ಬಿಗ್ಬಾಸ್ ಎಪಿಸೋಡ್ ಎನ್ನಲಾಗುತ್ತಿದೆ. ಇದುಗಳ ಮಧ್ಯೆಯೇ ಇದೀಗ ಕಾಂತಾರ ಚೆಲುವೆ ಸ್ಯಾಂಡಲ್ವುಡ್ ನಟಿ ಸಪ್ತಮಿ ಗೌಡ ಎಂಟ್ರಿ ಕೊಟ್ಟಿದ್ದಾರೆ. ಹಾಗಿದ್ದರೆ ಅವರು ವೈಲ್ಡ್ಕಾರ್ಡ್ ಎಂಟ್ರಿ ಮೂಲಕ ಬಂದಿದ್ದಾರೆ ಅಂದುಕೊಂಡರೆ ಅದು ತಪ್ಪು. ಅವರು ಬಂದಿರುವುದು ಅತಿಥಿಯಾಗಿ. ಈ ಹಿಂದೆ ಅತಿಥಿಯಾಗಿ ಕೆಲವು ಸೆಲೆಬ್ರಿಟಿಗಳು ಬಂದಿದ್ದರು. ಆದರೆ ಇದೀಗ ಸಪ್ತಮಿ ಗೌಡ ಬಂದಿರುವುದು ಒಂದು ಕುತೂಹಲದ ಕಾರಣಕ್ಕೆ. ಅವರು ಇಲ್ಲಿಗೆ ಬಂದಿರುವುದು ಸರ್ಕಾರದ ರಾಯಭಾರಿಯಾಗಿ!
ಹೌದು. ಅವರು ಗುಲಾಬಿ ಬಣ್ಣದ ಡ್ರೆಸ್ ಧರಿಸಿ ಬಂದಿದ್ದಾರೆ. ಅಷ್ಟಕ್ಕೂ ಈ ಡ್ರೆಸ್ ಧರಿಸುವುದಕ್ಕೂ ಅವರು ಬಂದಿರುವ ಹಿಂದಿರುವ ಕಾರಣಕ್ಕೂ ಹೋಲಿಕೆ ಇದೆ. ಅದೇನೆಂದರೆ, ಮೊದಲೇ ಹೇಳಿದಂತೆ ನಟಿ ಬಂದಿರುವುದು ಸರ್ಕಾರದ ರಾಯಭಾರಿಯಾಗಿ. ಸರ್ಕಾರದ ಯೋಜನೆಯೊಂದನ್ನು ತಿಳಿಸುವ ಉದ್ದೇಶದಿಂದ ಅವರು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅದೇನೆಂದರೆ, ಮೈತ್ರಿ ಮುಟ್ಟಿನ ಕಪ್ ಪ್ರಚಾರ ಮಾಡಲು ಅವರು ಬಂದಿದ್ದಾರೆ. ಹೆಣ್ಣು ಮಕ್ಕಳು ಋತುಸ್ರಾವವಾದಾಗ ಪ್ಯಾಡ್ ಬದಲು ಮುಟ್ಟಿನ ಕಪ್ ಬಳಸುವಂತೆ ಜಾಗೃತಿ ಮೂಡಿಸಿದ್ದಾರೆ ನಟಿ. ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಕಡೆಯಿಂದ ಅವರು ಈ ಮನೆಯ ಹೆಣ್ಣು ಮಕ್ಕಳಿಗೆ ಮುಟ್ಟಿನ ಕಪ್ ಬಗ್ಗೆ ಮಾಹಿತಿ ನೀಡಿದ್ದಾರೆ.
‘ಮೈತ್ರಿ ಮುಟ್ಟಿನ ಕಪ್’ ಯೋಜನೆಗೆ ಸಪ್ತಮಿ ಗೌಡ ರಾಯಭಾರಿ: ತಾಯಂದಿರು ಜಾಗೃತಿ ಮೂಡಿಸಬೇಕೆಂದ ನಟಿ
ನಾನು ಬಿಗ್ ಬಾಸ್ ಮನೆಗೆ ಬರಲು ಕಾರಣ ಇದೆ. ನಮ್ಮ ಸರ್ಕಾರ ಮೈತ್ರಿ ಮುಟ್ಟಿನ ಕಪ್ ಯೋಜನೆಗೆ ಆರಂಭಿಸಿದೆ. ನಾನು ಈ ಯೋಜನೆಯ ರಾಜಭಾರಿಯಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಹೆಣ್ಣಿನ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪ್ಯಾಡ್ಸ್ ನಿದ ಕಪ್ಸ್ ಗಳತ್ತ ಹೆಣ್ಣು ಮಕ್ಕಳು ಕರೆತರುವ ಅಭಿಯಾನ ಮಾಡಲಾಗ್ತಿದೆ. ಈಗಾಗಲೇ ಶೇಕಡಾ 80ರಷ್ಟು ಹೆಣ್ಣು ಮಕ್ಕಳು ಬಳಸುತ್ತಿದ್ದಾರೆ ಎಂದು ಸಪ್ತಮಿ ಗೌಡ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲೂ ಹೆಣ್ಣು ಮಕ್ಕಳಿರುವ ಕಾರಣ ತಾವು ಬಂದಿರುವುದಾಗಿ ಹೇಳಿದ ನಟಿ, ಈ ಕಾರ್ಯಕ್ರಮದ ಮೂಲಕ ಹೆಣ್ಣು ಮಕ್ಕಳಿಗೆ ಜಾಗೃತಿ ಮೂಡಿಸುವ ಉದ್ದೇಶ ಎಂದಿದ್ದಾರೆ.
ಮಾಮೂಲಿ ಬಳಸುವ ಪ್ಯಾಡ್ ಮತ್ತು ಮುಟ್ಟಿನ ಕಪ್ ಕುರಿತು ಮಾಹಿತಿ ನೀಡಿದ ನಟಿ, ಹೆಣ್ಣು ಮಗಳೊಬ್ಬಳು ತನ್ನ ಮುಟ್ಟಿನ ಜೀವನದಲ್ಲಿ ಸುಮಾರು 200 ಕೆಜಿಯಷ್ಟು ಸ್ಯಾನಿಟರಿ ಪ್ಯಾಡ್ ತ್ಯಾಜ್ಯವನ್ನು ಸೃಷ್ಟಿಸುತ್ತಾಳೆ. ಅದಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿಯಾಗಿ ಈ ಮೈತ್ರಿ ಕಪ್ ಬಳಕೆ ಮಾಡುವುದು ಉತ್ತಮ ಎಂದು ತಿಳಿಸಿದರು. ಸ್ಯಾನಿಟರಿ ನ್ಯಾಪ್ಕಿನ್ ಕೆಲವರಿಗೆ ಅಲರ್ಜಿಯಾಗುವ ಸಾಧ್ಯತೆ ಇದೆ. ಅದರ ಬದಲು ಕಪ್ ಬಳಸಿದರೆ ನಿರಾಯಾಸವಾಗಿ ಇರಬಹುದು ಎನ್ನುವ ಕಾರಣಕ್ಕೆ ಹಲವು ಹೆಣ್ಣುಮಕ್ಕಳು ಇದನ್ನು ಬಳಕೆ ಮಾಡುತ್ತಿದ್ದಾರೆ. ರಕ್ತಸ್ರಾವ ಹೆಚ್ಚಾದರೂ ಇದನ್ನು ಬಳಸಿದರೆ ಸಮಸ್ಯೆ ಇರುವುದಿಲ್ಲ.