ಕೊನೆಗೂ ಸತ್ಯ ಹೇಳಲು ಒಪ್ಕೊಂಡ ಕನ್ನಿಕಾ ಮಿಸ್ಸು: ಗಂಡನಿಗೆ ಚಳಿ ಬಿಡಿಸೋದು ಯಾವಾಗಮ್ಮಾ ಕೇಳಿದ ಫ್ಯಾನ್ಸ್
ಭಾಗ್ಯ ಮತ್ತು ಪೂಜಾ ಮಾಡಿದ ತಂತ್ರದಿಂದ ಕಳ್ಳಿ ಕನ್ನಿಕಾ ಮಿಸ್ಸು ಕೊನೆಗೂ ಸತ್ಯ ಹೇಳಲು ಒಪ್ಪಿಕೊಂಡಿದ್ದಾಳೆ. ಭಾಗ್ಯ ಮತ್ತು ತನ್ವಿಯ ಪರವಾಗಿ ಅವಳು ಸತ್ಯ ನುಡಿಯುತ್ತಾಳಾ?
ಕಳ್ಳಿ ಕನ್ನಿಕಾ ಮಿಸ್ಸು ಸಿಕ್ಕಿಬಿದ್ದಿದ್ದಾಳೆ. ಆದರೆ ಆಕೆ ಸಿಕ್ಕಿಬಿದ್ದಿರುವುದು ನೆಕ್ಲೆಸ್ ಕದಿಯುವ ಸಮಯದಲ್ಲಿ. ಇದಕ್ಕಿಂತಲೂ ಮುಖ್ಯವಾಗಿ ಸದ್ಯ ಬೇಕಾಗಿರುವುದು ಭಾಗ್ಯ ಮತ್ತು ತನ್ವಿ ನಿರಪರಾಧಿಗಳು ಎಂದು ಸಾಬೀತು ಮಾಡುವುದು. ಅಷ್ಟಕ್ಕೂ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಹೋಗಿದ್ದ ಭಾಗ್ಯ ಮತ್ತು ಮಗಳು ತನ್ವಿ ಇಬ್ಬರ ಡೆಸ್ಕ್, ಡಸ್ಟ್ಬಿನ್ ಮೇಲೆ ಗಣಿತದ ಫಾರ್ಮುಲಾ ಬರೆಯಲಾಗಿತ್ತು. ಇದನ್ನು ನೋಡಿದ ಟೀಚರ್ ಇಬ್ಬರನ್ನೂ ಪರೀಕ್ಷೆಯಿಂದ ಡಿಬಾರ್ ಮಾಡಿದ್ದಾರೆ. ತಾವು ಕಾಪಿ ಬರೆದಿಲ್ಲ, ತಾವು ಹೀಗೆಲ್ಲಾ ಮಾಡುವುದಿಲ್ಲ ಎಂದು ಹೇಳಿದರೂ ಕೇಳದೇ ಇಬ್ಬರನ್ನೂ ಡಿಬಾರ್ ಮಾಡಲಾಗಿದೆ. ಈ ಬಾರಿ ಪರೀಕ್ಷೆಯನ್ನು ಚೆನ್ನಾಗಿ ಬರೆಯಬೇಕು ಎಂದುಕೊಂಡ ತನ್ವಿ ಇದಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದಾಳೆ. ಇನ್ನು ಭಾಗ್ಯಳ ಮಾತಂತೂ ಹೇಳುವುದೇ ಬೇಡ... ಅವಳು ಚೆನ್ನಾಗಿ ತಯಾರಿ ನಡೆಸಿದ್ದಾಳೆ. ಆದರೆ ಕಾಪಿ ಬರೆದು ಇಟ್ಟಿದ್ದರಿಂದ ಇಬ್ಬರನ್ನೂ ಡಿಬಾರ್ ಮಾಡಲಾಗಿದ್ದು, ಪರೀಕ್ಷೆ ಬರೆಯುವುದರಿಂದ ತಡೆ ಹಿಡಿಯಲಾಗಿದೆ. ಇದಕ್ಕಾಗಿ ಭಾಗ್ಯ ಕನ್ನಿಕಾ ಮೇಲೆ ಕಿಡಿ ಕಾರುತ್ತಿದ್ದಾಳೆ. ಆದರೆ ಭಾಗ್ಯ ಏನೇ ಆರೋಪ ಮಾಡಿದರೂ ಇದ್ಯಾವುದಕ್ಕೂ ಕನ್ನಿಕಾ ಜಗ್ಗುತ್ತಿಲ್ಲ. ನಾನೇ ಮಾಡಿಸಿದ್ದು ಎಂದು ಹೇಗೆ ಹೇಳುತ್ತಿಯಾ ಎಂದು ಕೇಳಿದ್ದಾಳೆ.
ಅದೇ ಸಮಯದಲ್ಲಿ ಪಾರ್ಟಿಯಲ್ಲಿ ಕನ್ನಿಕಾ ಮಿಸ್ಸು ನೆಕ್ಲೆಸ್ ಕದ್ದಿದ್ದಾಳೆ. ಪಾರ್ಟಿಯಲ್ಲಿ ನೆಕ್ಲೆಸ್ ಕದಿಯುವ ವಿಡಿಯೋ ಒಂದನ್ನು ಪೂಜಾ ರಿಕಾರ್ಡ್ ಮಾಡಿಕೊಳ್ಳುತ್ತಾಳೆ. ಬೇರೆ ನಂಬರ್ನಿಂದ ಕನ್ನಿಕಾ ಮೊಬೈಲ್ಗೆ ಫೋನ್ ಮಾಡಿ, ವಿಡಿಯೋ ಕಳಿಸುತ್ತಾರೆ. ಅದನ್ನು ನೋಡಿ ಕನ್ನಿಕಾ ಶಾಕ್ ಆಗುತ್ತಾಳೆ. ಅಷ್ಟೊತ್ತಿಗೆ ಅವಳಿಗೆ ಕಾಲ್ ಬರುತ್ತದೆ. ನಾನು ಹೇಳಿದ್ದಲ್ಲಿಗೆ ಬರುವಂತೆ ಅದರಲ್ಲಿ ಹೇಳಿ ಲೊಕೇಷನ್ ಕಳಿಸಲಾಗುತ್ತದೆ. ನಂತರ ಅಲ್ಲಿ ಭಾಗ್ಯ ಮತ್ತು ಪೂಜಾ ಕನ್ನಿಕಾ ಮಿಸ್ಸಿನ ಚಳಿ ಬಿಡಿಸುತ್ತಾರೆ. ಒಂದು ವೇಳೆ ಕಾಪಿ ಮಾಡಿರುವ ಸತ್ಯ ಒಪ್ಪಿಕೊಳ್ಳದೇ ಹೋದರೆ, ಈ ಕಳ್ಳತನದ ವಿಡಿಯೋ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಹೇಳುತ್ತಾಳೆ ಪೂಜಾ. ತನಗೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಫಾಲೋವರ್ಸ್ ಇದ್ದು, ಕ್ಷಣ ಮಾತ್ರದಲ್ಲಿ ವಿಡಿಯೋ ವೈರಲ್ ಆಗುತ್ತದೆ. ನಿಮ್ಮ ತಂದೆ ಕಟ್ಟಿ ಬೆಳೆಸಿದ ಶಾಲೆಗೆ ಮುಂದಿನ ವರ್ಷದಿಂದ ಮಕ್ಕಳೇ ಬರುವುದಿಲ್ಲ. ನೀನು ಕಳ್ಳಿ ಎನ್ನುವುದು ತಿಳಿಯುತ್ತದೆ ಎಂದೆಲ್ಲಾ ಹೇಳಿದಾಗ ಸತ್ಯ ಒಪ್ಪಿಕೊಳ್ಳಲು ಕನ್ನಿಕಾ ರೆಡಿಯಾಗುತ್ತಾಳೆ.
ರಾಹುಲ್, ಪ್ರಿಯಾಂಕಾರನ್ನು ಒಂದೇ ಶಬ್ದದಲ್ಲಿ ಬಣ್ಣಿಸಿ ಎಂದಾಗ ನಟಿ, ಬಿಜೆಪಿ ಅಭ್ಯರ್ಥಿ ಕಂಗನಾ ಹೇಳಿದ್ದೇನು?
ಅಷ್ಟಕ್ಕೂ, ಈ ಮೊದಲೇ ಭಾಗ್ಯ ಡೆಸ್ಕ್ ಮೇಲೆ ಕಾಪಿ ಬರೆದಿರುವ ಹುಡುಗನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆತ ಬಾಯಿ ಬಿಟ್ಟರೆ ನಿನ್ನ ಬಂಡವಾಳ ಬಯಲಾಗುತ್ತದೆ ಎಂದು ಭಾಗ್ಯ ಕನ್ನಿಕಾ ಹೇಳಿರುತ್ತಾಳೆ. ಆದರೆ ಆ ಹುಡುಗ ಬಾಯಿಯೇ ಬಿಡದಿದ್ದರೆ ಎಂದು ಕನ್ನಿಕಾ ಕೇಳಿದ್ದಾಳೆ. ಅಲ್ಲಿಗೆ ಅವಳು ಏನೋ ಪ್ಲ್ಯಾನ್ ಮಾಡಿರುವುದು ಗೊತ್ತಾಗುತ್ತದೆ. ಅಷ್ಟೊತ್ತಿಗಾಗಲೇ ಭಾಗ್ಯಳಿಗೆ ಫೋನ್ ಬರುತ್ತದೆ. ಕನ್ನಿಕಾ ಕುಹಕದಿಂದ ನಗುತ್ತಾಳೆ. ಅಷ್ಟಕ್ಕೂ ಆ ಹುಡುಗ ಕನ್ನಿಕಾ ಹೆಸರು ಹೇಳಿರುವುದೇ ಇಲ್ಲ. ಪೊಲೀಸರು ಭಾಗ್ಯಳ ಬಳಿ, ನೀವು ದೂರು ಕೊಟ್ಟ ವ್ಯಕ್ತಿಯನ್ನು ನಾವು ವಿಚಾರಿಸಿದೆವು. ಆದರೆ ಆತ ಬಾಯಿ ಬಿಡುತ್ತಿಲ್ಲ. ನನಗೇನೂ ಗೊತ್ತಿಲ್ಲ ಎಂದೇ ಹೇಳುತ್ತಿದ್ದಾನೆ. ನಿಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಹೀಗೆ ಸುಳ್ಳು ಹೇಳುತ್ತಿಲ್ಲ ತಾನೇ ಎಂದು ಭಾಗ್ಯಳನ್ನೇ ಪ್ರಶ್ನಿಸುತ್ತಾರೆ. ಆಗ ಭಾಗ್ಯ, ಕನ್ನಿಕಾ, ಆ ವ್ಯಕ್ತಿಯ ಬಳಿ ಮಾತನಾಡಿದ್ದನ್ನು ನಾನೇ ಕೇಳಿಸಿಕೊಂಡಿದ್ದೇನೆ ಎಂದರೂ ಸಾಕ್ಷಿಯಿಲ್ಲದೇ ಆ್ಯಕ್ಷನ್ ಅಸಾಧ್ಯ ಎಂದುಬಿಡುತ್ತಾರೆ ಇನ್ಸ್ಪೆಕ್ಟರ್.
ಭಾಗ್ಯಾಗೆ ಏನು ಮಾಡುವುದು ತೋಚುವುದಿಲ್ಲ. ನನ್ನ ತಪ್ಪು ಯಾರಿಗೂ ತಿಳಿಯುವುದಿಲ್ಲ ಎಂಬ ಅಹಂಕಾರದಿಂದ ಕನ್ನಿಕಾ ಭಾಗ್ಯಾಳನ್ನು ಹೊರಗೆ ತಳ್ಳುತ್ತಾಳೆ. ಈ ವರ್ಷ ನಾನು ನನ್ನ ಮಗಳು ಪರೀಕ್ಷೆ ಬರೆಯುತ್ತೇವೆ. ಹಾಗೇ ನೀನು ಎಂದಿಗೂ ಪಾಸ್ ಆಗದ ಪರೀಕ್ಷೆ ಬರೆಸುತ್ತೇನೆ ಎಂದು ಭಾಗ್ಯಾ, ಕನ್ನಿಕಾಗೆ ಸವಾಲು ಹಾಕುತ್ತಾಳೆ. ಅದರ ನಡುವೆಯೇ ಪೂಜಾ ಈ ಪ್ಲ್ಯಾನ್ ಮಾಡಿದ್ದು, ಕನ್ನಿಕಾ ಬಾಯಿ ಬಿಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಮುಂದೇನಾಗುತ್ತೋ ಕಾದು ನೋಡಬೇಕಿದೆ. ಕನ್ನಿಕಾ ಮಿಸ್ಸಿಗೆ ಚಳಿ ಬಿಡಿಸಿದಂತೆ ಗಂಡನಿಗೂ ಚಳಿ ಬಿಡಿಸು ಎನ್ನುತ್ತಿದ್ದಾರೆ ಫ್ಯಾನ್ಸ್.
250 ಕೋಟಿ ಬಂಗಲೆಯ ಒಡತಿ ಈ ಪುಟಾಣಿ! ಕಿರಿಯ ಶ್ರೀಮಂತ ಸ್ಟಾರ್ ಕಿಡ್ ಇವಳ್ಯಾರು ಗೊತ್ತಾ?