Asianet Suvarna News Asianet Suvarna News

ಕೊರೋನಾ ವಿರುದ್ಧ ಹೋರಾಟ: ಸಿವಿಲ್ ಪೊಲೀಸ್ ವಾರ್ಡನ್ ಆದ ರಂಜನಿ ರಾಘವನ್

ಕನ್ನಡತಿ ಧಾರಾವಾಹಿಯ ಶಿಕ್ಷಕಿ ಭುವನೇಶ್ವರಿ ಅಲಿಯಾಸ್ ರಜನಿ ರಾಘವನ್ ಈಗ ಸಿವಿಲ್ ಪೊಲೀಸ್‌ ವಾರ್ಡನ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ!

Kannadathi fame ranjani raghavan volunteers for civil police warden to combat covid19
Author
Bangalore, First Published Jul 17, 2020, 4:18 PM IST

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಕನ್ನಡತಿ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ರಜನಿ ರಾಘವನ್ ಕೊರೋನಾ ವಿರುದ್ಧ ಹೊರಾಡಲು ಬೆಂಗಳೂರು ಪೊಲೀಸರ ಜೊತೆ ಸಿವಿಲ್ ವಾರ್ಡ್‌ ಆಗಿ ಕೈ ಜೋಡಿಸಿದ್ದಾರೆ.

ಮತ್ತೆ ಬ್ಯಾಕ್‌ ಟು ಪೆವಿಲಿಯನ್‌ಗೆ 'ಪುಟ್ಟಗೌರಿ'; ಕನ್ನಡತಿಯಾಗಿದ್ದಾರೆ ರಂಜನಿ ರಾಘವನ್!

ಸಿವಿಲ್ ವಾರ್ಡ್‌:
ಈ ಬಗ್ಗೆ ರಜನಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 'ಎಲ್ಲರಿಗೂ ನಮಸ್ಕಾರ. ನಿಮಗೆಲ್ಲಾ ತಿಳಿದಿರುವ ಹಾಗೆ ಬೆಂಗಳೂರಿನಲ್ಲಿ ಕೋವಿಡ್‌19 ಕೇಸ್‌ಗಳು ಹೆಚ್ಚಾಗುತ್ತಲೇ ಇದೆ. ಎಲ್ಲರಿಗೂ ಇದೊಂದು ಕಷ್ಟದ ಸಮಯವೇ ಹೌದು. ಅದರಲ್ಲೂ ಪೊಲೀಸರಿಗೆ ಇನ್ನು ಹೆಚ್ಚಿನ ಕಷ್ಟ. ಪೊಲೀಸರಿಗೆ ಸಹಾಯ ಮಾಡಲು ನಮಗೊಂದು ಅವಕಾಶ. ಕೆಲವು ದಿನಗಳ ಹಿಂದೆ ಬೆಂಗಳೂರು ಸಿವಿಲ್ ವಾರ್ಡನ್‌ ಆಗಿ ಸೇವೆ ಮಾಡುವುದಕ್ಕೆ ಕರೆ ನೀಡಿದ್ದರು. ನಾನು ಈಗ ವಾರ್ಡನ್‌ ಆಗಿ ಕಾರ್ಯವಹಿಸುತ್ತಿದ್ದೇನೆ. ಸ್ವಯಂಸೇವಕರಾಗಿ ನೀವು ಸೇರುವಂತೆ ಸೂಚಿಸುತ್ತೇನೆ. ಇದರಿಂದ ಒಟ್ಟಾಗಿ ಮಹಾಮಾರಿ ವಿರುದ್ಧ ಹೋರಾಡಲು ಸುಲಭವಾಗುತ್ತದೆ' ಎಂದಿದ್ದಾರೆ.

 

 
 
 
 
 
 
 
 
 
 
 
 
 

Hello all! We all know that COVID cases are rapidly increasing in Bengaluru. It has been a very difficult phase for everyone including the police department. Bengaluru Police has invited residents to volunteer for Civil Police Warden to combat COVID. And I am also serving as a Civil Police Warden. I would suggest youths who are physically fit and willing to volunteer to apply for the same ASAP. log on to http://bcp.gov.in 😊 I’ll try to update more about this. Stay safe ❤️ ನಮಸ್ಕಾರ. ನಿಮಗೆಲ್ಲರಿಗೂ ತಿಳಿದಿರುವಂತೆ ರಾಜ್ಯದಲ್ಲಿ ಕೋವಿಡ್ ಕೇಸಸ್ ದಿನೇ ದಿನೇ ಹೆಚ್ಚಾಗುತ್ತಿದೆ. ಹಾಗಾಗಿ ಕರೋನಾ ನಿಯಂತ್ರಣ ಹಾಗೂ ಕರೋನಾ ನಿಯಮಗಳನ್ನು ಜಾರಿಗೊಳಿಸುವುದು ಸರಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೂ ಅತಿ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಸದ್ಯ ಪೊಲೀಸರಿಗೆ ಜನರ ಸೇವೆಯ ಅವಶ್ಯಕತೆ ಇದ್ದು, ಬೆಂಗಳೂರಿನ ನಿವಾಸಿಗಳನ್ನು ಸಿವಿಲ್ ಪೊಲೀಸ್ ವಾರ್ಡನ್ ಆಗಿ ಸೇವೆಮಾಡುವಂತೆ ಕರೆ ನೀಡಿದ್ದಾರೆ. ನಾನು ಕೂಡ ಸಿವಿಲ್ ಪೊಲೀಸ್ ವಾರ್ಡನ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಹಾಗೆ, ಸದೃಢ ಹಾಗೂ ಸೇವಾ ಮನಸ್ಸಿನ ಯುವಜನತೆಯನ್ನು ಸ್ವಯಂಸೇವಕರಾಗಿ ಈ ಕಾರ್ಯದಲ್ಲಿ ಸೇರುವಂತೆ ಸೂಚಿಸುತ್ತೇನೆ. 😊 @bhaskarrao @bengalurucitypolice #bangalorecitypolice #civilpolicewarden #covidwarriors

A post shared by ರಂಜನಿ ರಾಘವನ್ (@ranjani.raghavan) on Jul 16, 2020 at 12:11am PDT

ಸೂಪರ್ ಹಿಟ್ ಧಾರಾವಾಹಿ 'ಪುಟ್ಟಗೌರಿ ಮದುವೆ' ಭಾಗ 1ರ ನಂತರ 'ಇಷ್ಟದೇವತೆ' ಧಾರಾವಾಹಿ ನಿರ್ದೇಶನ ಮಾಡಿದ ರಂಜನಿ ಈಗ 'ಕನ್ನಡಿತಿ'ಯಲ್ಲಿ ಅಭಿನಯಿಸುತ್ತಿದ್ದಾರೆ. ಅಪ್ಪಟ ಕನ್ನಡ ಶಿಕ್ಷಕಿ ಪಾತ್ರ ಇದಾಗಿದ್ದು ನಡುವೆ ಕನ್ನಡ ಭಾಷೆ ಬಗ್ಗೆ ಜ್ಞಾನ ಹೆಚ್ಚಿಸ ಬೇಕೆಂದು ಒಂದು ಪದದ ಅರ್ಥ, ಅದರ ಸಮನಾರ್ಥ, ವಿರುದ್ಧ ಪದಗಳು ಮತ್ತು ಅದನ್ನು ಹೇಗೆ ಬಳಸ ಬೇಕು ಎಂಬುದನ್ನು ಹೇಳಿಕೊಡುತ್ತಾರೆ. ಜ್ಞಾನ ಹೆಚ್ಚಿಸುವ ಈ ಧಾರಾವಾಹಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ.

Follow Us:
Download App:
  • android
  • ios