Asianet Suvarna News Asianet Suvarna News

Bigg Boss 15: ನಿಜ ಜೀವನದ ಅರ್ಜುನ್ ರೆಡ್ಡಿ ಅಂದ್ರೆ ಬಿಗ್ ಬಾಸ್ ಕರಣ್ ಕುಂದ್ರಾ?

 ಚಾಕೋಲೇಟ್ ಬಾಯ್ ಆಗಿ ಗುರುತಿಸಿಕೊಂಡಿದ್ದ ಕರಣ್ ಕುಂದ್ರಾ, ನಿಜ ಜೀವನದಲ್ಲಿ ಅರ್ಜುನ್ ರೆಡ್ಡಿ ಆಗ್ಬಿಟ್ರಾ? ನೆಟ್ಟಿಗರ ಪ್ರಶ್ನೆಗೆ ಉತ್ತರ ಯಾರು ಕೊಡುತ್ತಾರೆ? 
 

Hindi Bigg boss Karan kundrra compared to Arjun reddy Kabir Singh for this anger  vcs
Author
Bangalore, First Published Nov 25, 2021, 3:53 PM IST

ಹಿಂದಿ ಜನಪ್ರಿಯ ನಿರೂಪಕ ಹಾಗೂ ನಟ ಕರಣ್ ಕುಂದ್ರಾ (Karan Kunddra) ಬಿಗ್ ಬಾಸ್ ಸೀಸನ್ 15ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹೊರ ಬರುತ್ತಿದ್ದಂತೆ, ಅದೆಷ್ಟೋ ಹೆಣ್ಣು ಮಕ್ಕಳು ಫಿದಾ ಆಗ್ಬಿಟ್ಟಿದ್ದಾರೆ. ಒಂದು ದಿನವೂ ಮಿಸ್ ಮಾಡದೇ ಸಂಚಿಕೆ ನೋಡಬೇಕು ಎಂದು ನಿರ್ಧಾರ ಮಾಡಿಕೊಂಡರು. ಆದರೆ ಕರಣ್ ಅಸಲಿ ಗುಣ ನೋಡುತ್ತಿದ್ದಂತೆ, ಎಲ್ಲ ಅಭಿಮಾನಿಗಳೂ ಶಾಕ್ ಆಗಿದ್ದಾರೆ. ನಿಜಕ್ಕೂ ನಾವು ಮೆಚ್ಚಿಕೊಳ್ಳುತ್ತಿದ್ದ ನಟ ಇವನೇನಾ ಎಂದು ಕೆಲವು ಪ್ರಶ್ನೆ ಮಾಡುಕೊಳ್ಳುತ್ತಿದ್ದಾರಂತೆ.  ಚಾಕೋಲೇಟ್ ಬಾಯ್ (Chocolate Boy) ಆಗಿದ್ದವರು ಅರ್ಜುನ್ ರೆಡ್ಡಿ (Arjun reddy)ಈ ರೀತಿ ಬದಲಾಗಲು ಕಾರಣವೇ? 

ಕಳೆದ ವರ್ಷ ನಿರೂಪಕಿ ಅನುಷಾ (Anchor Anusha) ಮತ್ತು ಕರಣ್ ಬ್ರೇಕಪ್ (Breakup) ಮಾಡಿಕೊಂಡ ನಂತರದ ದಿನಗಳಿಂದ ಇವರು ದಿನವೂ ಸುದ್ದಿಯಲ್ಲಿದ್ದರು. ಬಿಗ್ ಬಾಸ್ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಕರಣ್ ಮತ್ತು ತೇಜಸ್ವಿನಿ (Tejaswini) ತುಂಬಾ ಆತ್ಮೀಯತೆಯಿಂದ ಇದ್ದಾರೆ. ಇವರಿಬ್ಬರೂ ಪ್ರೀತಿಸುತ್ತಿದ್ದಾರೆ ಎನ್ನುವ ಅನುಮಾನವೂ ಶುರುವಾಗಿದೆ. ಹೀಗಾಗಿ ಅಭಿಮಾನಿಗಳು #TejRan ಎಂದು ಟ್ರೆಂಡ್ ಮಾಡುತ್ತಿದ್ದಾರೆ. ಕರಣ್ ಸಣ್ಣ ಪುಟ್ಟ ವಿಚಾರಕ್ಕೂ ಪೋಸೆಸಿವ್ (Possessive) ಆಗುತ್ತಿರುವ ಗುಣ ನೋಡಿ ಸ್ವತಃ ಅವರ ಸ್ನೇಹಿತರೇ ಶಾಕ್ ಆಗುತ್ತಿದ್ದಾರೆ. 

Hindi Bigg boss Karan kundrra compared to Arjun reddy Kabir Singh for this anger  vcs

ತೇಜಸ್ವಿನಿ ಅವರು ಸಹಸ್ಪರ್ಧಿ ಕೋಟ್ಯಾನ್‌ ಜೊತೆ ಹೆಚ್ಚಾಗಿ ಮಾತನಾಡುತ್ತಿರುವುದಕ್ಕೆ ಕರಣ್ ಕುಂದ್ರಾಗೆ ಸಿಟ್ಟು ತರಿಸಿದೆ. ತೇಜಸ್ವಿನಿ ಬಳಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ, ' ದಿನವಿಡೀ ಬೇರೆಯವರ ಬಗ್ಗೆ ಮಾತನಾಡುವ ವಿಶಾಲ್ (Vishal) ಕೋಟ್ಯಾನ್ ಜೊತೆ ನಿನ್ನದೆಂಥ ಗೆಳೆತನ?' ಎಂದು ಪ್ರಶ್ನೆ ಕೂಡ ಮಾಡಿದ್ದಾರೆ. 'ಬೇರೆ ಯಾರೋ ಹೇಳ್ತಿದ್ದಾರೆ ಅಂತ ನಾನು ಕೇಳಲ್ಲ. ಆರಂಭದಿಂದಲೂ ವಿಶಾಲ್ ನನಗೆ ಉತ್ತಮ ಗೆಳೆಯ (Friend). ನಿನಗೆ ಹೇಗೆ ಬೇಕೋ ಹಾಗೆ ಯೋಚನೆ ಮಾಡು, ನೀನು ದೂರ ಹೋದರೆ ನಾನೂ ದೂರು ಹೋಗುವೆ,' ಎಂದು ತೇಜಸ್ವಿನಿ ಕುಂದ್ರಾಗೆ ಉತ್ತರ ನೀಡಿದ್ದಾರೆ. 

ಸುಳ್ಳು ಹೇಳಿ ಮೋಸ ಮಾಡಿದ, ಕ್ಷಮೆ ಕೇಳಲಿಲ್ಲ; ಬ್ರೇಕಪ್‌ ಬಗ್ಗೆ ನಿರೂಪಕಿ ಅನುಷಾ ಸ್ಪಷ್ಟನೆ!

ಅರ್ಜುನ್ ರೆಡ್ಡಿ ಚಿತ್ರದಲ್ಲಿ ಗರ್ಲ್‌ಫ್ರೆಂಡ್‌ (Girl friend) ಬಗ್ಗೆ ಎಷ್ಟು ಪೊಸೆಸಿವ್‌ನೆಸ್ ತೋರಿಸಲಾಗಿದೆಯೋ, ಅದೇ ರೀತಿ ರಿಯಲ್ ಲೈಫ್‌ನಲ್ಲಿಯೂ ಕರಣ್ ಇರುವುದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಅನುಷಾ ಬ್ರೇಕಪ್ ಮಾಡಿಕೊಂಡ ಸಮಯದಲ್ಲಿ ಅನುಮಾನ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಕುಂದ್ರಾ ಪಾಪದ ಹುಡುಗ, ಹೀಗೆ ಮಾಡಿರಲು ಸಾಧ್ಯವೇ ಇಲ್ಲ ಎನ್ನುತ್ತಿದ್ದರು ಅಭಿಮಾನಿಗಳು. ಆದರೆ ಈಗ ಎಲ್ಲರೂ ಅನುಷಾ ಮಾತುಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. 

Rakhi Sawanth Birthday: ಅಭಿಮಾನಗಳಿ ಹೊಸ ಶಾಕ್ ನೀಡಿದ ರಾಖಿ

ತೆಲುಗು ಚಿತ್ರರಂಗದ ಸೂಪರ್ ಹಿಟ್ ಸಿನಿಮಾ ಅರ್ಜುನ್‌ ರೆಡ್ಡಿಯನ್ನು ಬಾಲಿವುಡ್‌ಗೆ ಕಬೀರ್ ಸಿಂಗ್ (Kabir Singh) ಎಂದು ರಿಮೇಕ್ ಮಾಡಲಾಗಿತ್ತು. ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ (Vijay Deverakonda) ಮತ್ತು ಶಿಲ್ಪಾ (Shilpa) ನಟಿಸಿದ್ದರು ಮತ್ತು ಕಬೀರ್ ಸಿಂಗ್ ಚಿತ್ರದಲ್ಲಿ ಶಾಹಿದ್ ಕಪೂರ್ (Shahid Kapoor) ಮತ್ತು ಕಿಯಾರ ಅದ್ವಾನಿ (Kirana Advani) ನಟಿಸಿದ್ದಾರೆ.

Follow Us:
Download App:
  • android
  • ios