ಟಿವಿಯಲ್ಲಿ ಬಂದ ಬ್ರೇಕಿಂಗ್ ನ್ಯೂಸ್ಗೆ ಗಂಡ ತಾಂಡವ್ನ ಹಾರ್ಟ್ ಬ್ರೇಕ್- ಅತ್ತೆ ಕುಸುಮಾ ಶಾಕ್!
ಭಾಗ್ಯಳಿಗೆ ನೌಕರಿ ಸಿಕ್ಕ ವಿಷಯ ಟಿ.ವಿಯಲ್ಲಿ ಬರುತ್ತಿದ್ದಂತೆಯೇ ಮನೆಯಲ್ಲಿ ಆಗಿದ್ದೇನು? ಇದರ ಅರಿವೇ ಇಲ್ಲದ ಅತ್ತೆ ಮತ್ತು ಗಂಡನ ರಿಯಾಕ್ಷನ್ ಹೇಗಿದೆ?
ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ಬಂದಿದೆ. ಈ ಬ್ರೇಕಿಂಗ್ ನ್ಯೂಸ್ ನೋಡಿ ಭಾಗ್ಯಳ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಅಮ್ಮ, ಮಕ್ಕಳು ಮತ್ತು ಮಾವಂದಿರಿಂದ ಸಂಭ್ರಮದ ಆಚರಣೆ. ಎಲ್ಲರೂ ಕುಣಿದು ಕುಣಿದು ಕುಪ್ಪಳಿಸುತ್ತಿರುವ ಸಮಯದಲ್ಲಿಯೇ ಅತ್ತೆ ಕುಸುಮಾ ಎಂಟ್ರಿಯಾಗಿದೆ. ಟಿ.ವಿ. ನೋಡಿ ಅವಳಿಗೆ ಶಾಕ್ ಆಗಿಬಿಟ್ಟಿದೆ. ಖುಷಿಯನ್ನೂ ಪಡಲಾಗದೇ, ಸಿಟ್ಟನ್ನೂ ಹತ್ತಿಕ್ಕಲಾಗದೇ ಬಿಸಿತುಪ್ಪ ಆಗಿಬಿಟ್ಟಿದೆ ಈ ಸುದ್ದಿ. ಇನ್ನು ತಾಂಡವ್ನೋ ಇಂಗುತಿಂದ ಮಂಗನಂತಾಗಿ ಬ್ರೇಕಿಂಗ್ ಸುದ್ದಿ ಕೇಳಿ ಹಾರ್ಟೇ ಬ್ರೇಕ್ ಆಗಿ ಹೋಗಿದೆ! ಹೌದು. ಅಷ್ಟಕ್ಕೂ ಟಿ.ವಿಯಲ್ಲಿ ಬಂದಿರೋ ಬ್ರೇಕಿಂಗ್ ನ್ಯೂಸ್ ಏನೆಂದ್ರೆ ಭಾಗ್ಯಳಿಗೆ ಫೈವ್ ಸ್ಟಾರ್ ಹೋಟೆಲ್ನಲ್ಲಿ ಕೆಲಸ ಸಿಕ್ಕಿರೋ ಸುದ್ದಿ! ಈ ಮೊದಲು ಮಗಳ ಜೊತೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಟಿ.ವಿಯಲ್ಲಿ ಸುದ್ದಿಯಾಗಿದ್ದ ಭಾಗ್ಯಳ ಸುದ್ದಿ ಈಗ ನೌಕರಿ ಸಿಕ್ಕ ಮೇಲೆ ಬಂದಿದೆ.
ಅಷ್ಟಕ್ಕೂ ಈ ವಿಷಯವನ್ನು ಭಾಗ್ಯ ಮಕ್ಕಳಿಗೆ ಹೇಳಿದ್ದಳು. ಆದರೆ ಅತ್ತೆಗೆ ತಾನು ಕೆಲಸಕ್ಕೆ ಹೋಗುವುದು ಇಷ್ಟವಿಲ್ಲ ಎನ್ನುವ ಕಾರಣಕ್ಕೆ ಹೇಳಿರಲಿಲ್ಲ. ಆದರೆ ಇದೀಗ ಕುಸುಮಾಳಿಗೂ ವಿಷಯ ಗೊತ್ತಾಗಿ ಶಾಕ್ ಆಗಿದೆ. ಸೊಸೆಯ ಮೇಲೆ ಕೋಪ ಪಡುವ ಹಾಗೂ ಇಲ್ಲ, ಅವಳನ್ನು ಹೊಗಳುವಂತೆಯೂ ಇಲ್ಲ ಎನ್ನುವ ಸ್ಥಿತಿ ಅವಳದ್ದು. ಮುಂದೆ ಹೇಗೆ ರಿಯಾಕ್ಟ್ ಮಾಡುತ್ತಾಳೋ ಕಾದು ನೋಡಬೇಕಿದೆ. ಪತ್ನಿಯನ್ನು ಟಿ.ವಿಯಲ್ಲಿ ನೋಡಿ ಹೊಟ್ಟೆಉರಿಯಿಂದಿರುವ ಗಂಡ ತಾಂಡವ್ ಅಲ್ಲಿಯೂ ತನ್ನ ನರಿಬುದ್ಧಿ ಬಿಟ್ಟಿಲ್ಲ. ಇವಳು ನಮ್ಮ ಮನೆಯ ಮರ್ಯಾದೆ ತೆಗೆಯುವುದಕ್ಕಾಗಿಯೇ ಹುಟ್ಟಿದ್ದಾಳೆ ಎಂದು ಮನೆಯವರ ಎದುರು ಹೇಳಿದ್ದಾನೆ. ಅಮ್ಮನಿಗೆ ಈ ವಿಷಯ ಗೊತ್ತಿಲ್ಲ ಎನ್ನುವ ಕಾರಣಕ್ಕೆ ಭಾಗ್ಯಳ ವಿರುದ್ಧ ಅವಳನ್ನು ಎತ್ತಿಕಟ್ಟುವ ತಂತ್ರ ಇದಾಗಿದೆ. ಮುಂದೆ ಕುಸುಮಾ ಏನು ಅನ್ನುತ್ತಾಳೆ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಅವಳು ಕೂಡ ಸೊಸೆಗೆ ಸಪೋರ್ಟ್ ಮಾಡುತ್ತಾಳೆ ಎನ್ನುವುದು ಬಹುತೇಕ ಮಂದಿಯ ಅಭಿಪ್ರಾಯ.
ನಿವೇದಿತಾ ಡಿವೋರ್ಸ್ ಬೆನ್ನಲ್ಲೇ ಗಂಡನ ಹೊಗಳಿ ಅಮ್ಮನ ರೀಲ್ಸ್: ಚಂದನ್ ಶೆಟ್ಟಿಗೆ ಟಾಂಗ್ ಕೊಟ್ರಾ ಮಾಜಿ ಅತ್ತೆ?
ಅದೇ ಇನ್ನೊಂದೆಡೆ ಟಿವಿಯಲ್ಲಿ ತನ್ನ ಸುದ್ದಿ ಬರುತ್ತಿರುವ ವಿಷಯ ಕೇಳಿ ಖುದ್ದು ಭಾಗ್ಯಳೂ ಶಾಕ್ ಆಗಿದ್ದಾಳೆ. ಮನೆಯಲ್ಲಿ ಎಲ್ಲರೂ ಏನಂದುಕೊಳ್ಳುತ್ತಾರೋ ಎನ್ನುವ ಗಾಬರಿಯಲ್ಲಿ ಅವಳು ಇದ್ದಾರೆ. ಆದರೆ, ಅಳುಮುಂಜಿ ಆಗಿದ್ದ ಭಾಗ್ಯ ಫೀನಿಕ್ಸ್ ಪಕ್ಷಿಯಂತೆ ಎದ್ದು ನಿಂತಿರೋದೇ ಅಭಿಮಾನಿಗಳಿಗೆ ಖುಷಿ. ಇದಾಗಲೇ ಭಾಗ್ಯ ಹೋಟೆಲ್ ಚಾರ್ಜ್ ವಹಿಸಿಕೊಂಡು ಗ್ರಾಹಕರು ಮೆಚ್ಚುವಂಥ ಅಡುಗೆ ಮಾಡಲು ಶುರು ಮಾಡಿದ್ದಾಳೆ. ಒಂದು ಲಕ್ಷ ರೂಪಾಯಿ ಮುಂಗಡ ಹಣ ಇದಾಗಲೇ ಅವಳ ಕೈ ಕೂಡ ಸೇರಿಯಾಗಿದೆ. ಒಂದು ಪೈಸೆ ದುಡಿಯುವ ತಾಕತ್ತು ಇಲ್ಲ ಎಂದು ಪದೇ ಪದೇ ಹೀಯಾಳಿಸುತ್ತಿದ್ದ ಪತಿ ತಾಂಡವ್ನ ಮಾತು ಪದೇ ಪದೇ ಅವಳ ಕಣ್ಣೆದುರು ಬಂದಿದೆ. ಆದರೆ ಒಂದೇ ಸಲಕ್ಕೆ ಒಂದು ಲಕ್ಷ ರೂಪಾಯಿ ದುಡಿದಿದ್ದಾಳೆ.
ನನಗೆ ನೀವೇ ಸ್ಫೂರ್ತಿ. ನನ್ನ ಕೈಯಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ರಲ್ಲ. ಅದನ್ನು ನಾನು ಮಾಡಿ ತೋರಿಸಿದೆ ಎಂದು ಭಾಗ್ಯ ತನ್ನಷ್ಟಕ್ಕೆ ತಾನು ಅಂದುಕೊಳ್ಳುತ್ತಿದ್ದಾಳೆ. ಈ ಮೂಲಕ ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಲು ಸಾಧ್ಯ ಎನ್ನುವುದನ್ನು ಭಾಗ್ಯ ತೋರಿಸಿದ್ದಾಳೆ. ಪತ್ನಿಯ ಬಳಿ ಇಎಂಐ ಕಟ್ಟಲು ಹಣವಿಲ್ಲ ಎಂದು ಹಂಗಿಸುತ್ತಲೇ ಆಕೆಗೆ ಅವಮಾನ ಮಾಡಲು ನೋಡುತ್ತಿದ್ದ ತಾಂಡವ್ ಮನೆಯ ಇಐಎಂ ದುಡ್ಡು ಕೇಳಿದ್ದಾನೆ. ಒಂದು ಲಕ್ಷ ಸಂಬಳ ಕೈಯಲ್ಲಿ ಇಟ್ಟುಕೊಂಡಿರೋ ಭಾಗ್ಯ ದುಡ್ಡನ್ನು ತಾಂಡವ್ ಕೈಯಲ್ಲಿ ಇತ್ತು ಎರಡು ತಿಂಗಳ ಇಐಎಂ ಎಂದು ಹೇಳಿದ್ದಾನೆ. ಇದನ್ನು ಕೇಳಿ ತಾಂಡವ್ ಪೇಚಿಗೆ ಸಿಲುಕಿದ್ದಾನೆ. ಇಂಗು ತಿಂದ ಮಂಗನಂತಾಗಿದೆ ಅವನ ಸ್ಥಿತಿ. ಇದೀಗ ಟಿ.ವಿಯಲ್ಲಿ ಪತ್ನಿಯನ್ನು ನೋಡಿ ಸಹಿಸಿಕೊಳ್ಳಲು ಅವನಿಂದ ಆಗುತ್ತಿಲ್ಲ.
ನುಡಿದಂತೇ ನಡೆದ ಭೂಮಿಕಾ- ಇರೋ ಬರೋ ಕಾರ್ಡ್ಗಳೆಲ್ಲವೂ ಬ್ಲಾಕ್: ವಿಲನ್ಗಳು ವಿಲವಿಲ!