* ಕನ್ನಡದ ಬಿಗ್ ಬಾಸ್ ಫಿನಾನೆ* ಮಂಜು ಪಾವಗಡ ವಿನ್ನರ್?*ಮನೆಯಿಂದ ಹೊರಬಂದ ದಿವ್ಯಾ ಉರುಡುಗ* ಮೂರನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡ ದಿವ್ಯಾ

ಬೆಂಗಳೂರು(ಆ. 08) ಬಿಗ್ ಬಾಸ್ ಮನೆ ಫಿನಾಲೆ ಹಂತದಲ್ಲಿ ಇದೆ. ಶನಿವಾರದ ಎಪಿಸೋಡ್ ನಲ್ಲಿ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಗೌಡ ಹೊರಗೆ ಬಂದಿದ್ದಾರೆ. ಭಾನುವಾರ ಮೊದಲೆಯವರಾಗಿ ದಿವ್ಯಾ ಯು ಹೊರಗೆ ಬಂದಿದ್ದಾರೆ.

Add Asianetnews Kannada as a Preferred SourcegooglePreferred

ಕಿರುತೆರೆ ಕಲಾವಿದೆ ದಿವ್ಯಾ ಯು ಮೊದಲಿನಿಂದಲೂ ಚುರುಕಿನ ಆಟ ಆಡಿಕೊಂಡು ಬಂದಿದ್ದರು. ಅರವಿಂದ್ ಜತೆ ತುಂಬಾ ಕ್ಲೋಸ್ ಆಗಿ ಇದ್ದರು. ಉಳಿದ ಸ್ಪರ್ಧಿಗಳ ಪ್ರಕಾರ ಅರವಿಂದ್ ಜತೆ ಇದ್ದಿದ್ದೆ ಅವರನ್ನು ಫಿನಾಲೆವರೆಗೆ ಕರೆದುಕೊಂಡು ಬಂದಿತು.

ಮಂಜು ಪಾವಗಡ ಬಿಗ್ ಬಾಸ್ ವಿನ್ನರ್..?

ಸುದೀಪ್ ಯೆಸ್ ಆರ್ ನೋ ಪ್ರಶ್ನೆಗಳನ್ನು ಕೇಳಿದರು. ಅಲ್ಲಲ್ಲಿ ಕಾಲೆಳೆದರು. ದಿವ್ಯಾ ಯುಗಿಂತ ವೈಷ್ಣವಿ ಒಂದು ಹೆಜ್ಜೆ ಮುಂದೆ ಇದ್ದರು ಎನ್ನುವುದು ಮಮನೆಯವರ ಅಭಿಪ್ರಾಯ. ಅರವಿಂದ್ ಮತ್ತು ಮಂಜು ಉಳಿದುಕೊಂಡಿದ್ದಾರೆ. ವೇದಿಕೆಯ ಮೇಲೆ ಕಿಚ್ಚ ಸುದೀಪ್ ಯಾರ ಕೈ ಮೇಲಕ್ಕೆ ಹಿಡಿದು ಎತ್ತಲಿದ್ದಾರೆ ಎನ್ನುವ ಕುತೂಹಲ ಮನೆ ಮಾಡಿದೆ.