ಮರೆಯಲಾಗದ ಕಹಿ ಘಟನೆಗಳ ನೆನಪಿಸಿಕೊಂಡು ಬಿಕ್ಕಿ ಬಿಕ್ಕಿ ಅತ್ತ ಬಿಗ್ಬಾಸ್ ಸ್ಪರ್ಧಿಗಳು
ಬಿಗ್ಬಾಸ್ ಸ್ಪರ್ಧಿಗಳು ತಮ್ಮ ಜೀವನದ ಮರೆಯಲಾಗದ ಕಹಿ ಘಟನೆಗಳ ನೆನಪಿಸಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅವರು ನೆನಪಿಸಿಕೊಂಡ ಘಟನೆಗಳೇನು?
![Bigg Boss contestants sharing unforgettable bitter incidents of their life suc Bigg Boss contestants sharing unforgettable bitter incidents of their life suc](https://static-ai.asianetnews.com/images/01hhbqje40kgj9np75zxj54z99/bigg-boss-crying_363x203xt.jpg)
ಬಿಗ್ಬಾಸ್ ಎರಡನೆಯ ತಿಂಗಳಿಗೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಕಾಂಟ್ರವರ್ಸಿಗಳು ಹೆಚ್ಚಾಗುತ್ತಲೇ ಸಾಗಿವೆ. ಸ್ಪರ್ಧಿಗಳ ಹುಚ್ಚಾಟ ಒಂದೆಡೆ ಹೆಚ್ಚಾಗುತ್ತಿದ್ದರೆ, ಬಿಗ್ಬಾಸ್ ವಿರುದ್ಧ ಒಂದಲ್ಲ ಒಂದು ರೀತಿಯ ದೂರುಗಳು ದಾಖಲಾಗುತ್ತಿವೆ. ಹುಚ್ಚಾಟ ಹೆಚ್ಚಾದಷ್ಟೂ ಟಿಆರ್ಪಿ ರೇಟೂ ಏರುತ್ತಿದೆ. ಗದ್ದಲ, ಗಲಾಟೆ, ಅಶ್ಲೀಲತೆಯನ್ನು ನೋಡಿ ಬೈಯುತ್ತಲೇ ಖುಷಿ ಪಡುವ ದೊಡ್ಡ ವರ್ಗವೇ ಇದೆ ಎನ್ನುವುದು ಬಿಗ್ಬಾಸ್ನ ಎಲ್ಲಾ ಭಾಷೆಗಳ ಟಿಆರ್ಪಿ ರೇಟ್ ನೋಡಿದರೆ ತಿಳಿದುಬರುತ್ತಿದೆ. ಪ್ರತಿದಿನವೂ ಸೋಷಿಯಲ್ ಮೀಡಿಯಾದಲ್ಲಿ ಈ ಷೋಗೆ ಶಾಪ ಹಾಕುತ್ತಲೇ, ಇದರ ವಿರುದ್ಧ ಕಮೆಂಟ್ ಮಾಡುತ್ತಲೇ ಅದನ್ನು ಒಂದು ಕ್ಷಣವೂ ಬಿಡದೆ ನೋಡುವ ಅಸಂಖ್ಯ ಪ್ರೇಕ್ಷಕ ವರ್ಗವಿದೆ. ಪ್ರೇಕ್ಷಕರ ಸಂಖ್ಯೆ ಹೆಚ್ಚಿದ್ದಷ್ಟೂ ಬಿಗ್ಬಾಸ್ ಮನೆಯಲ್ಲಿ ಅಸಭ್ಯ ವರ್ತನೆಗಳು ಮಿತಿಮೀರುತ್ತಲೇ ಇರುತ್ತವೆ ಎಂದು ಇಂಥ ಷೋ ಇಷ್ಟಪಡದವರು ಹೇಳುತ್ತಲೇ ಇರುತ್ತಾರೆ.
ಟಾಸ್ಕ್ ಸಮಯದಲ್ಲಿ ಡ್ರೋನ್ ಪ್ರತಾಪ್ ಮತ್ತು ಸಂಗೀತಾ (Sangeetha Sringeri) ಅವರ ಕಣ್ಣಿಗೆ ಹಾನಿಯಾಗಿದ್ದು, ಇಬ್ಬರೂ ಕಪ್ಪು ಕನ್ನಡಕ ಹಾಕಿಕೊಂಡೇ ಸ್ಪರ್ಧೆ ಮುಂದುವರೆಸಿದ್ದಾರೆ. ಸೋಪ್ ನೀರನ್ನು ಪರಸ್ಪರ ಎರೆಚಿಕೊಳ್ಳುವ ಟಾಸ್ಕ್ನಲ್ಲಿ ಇವರಿಬ್ಬರ ಮುಖಕ್ಕೆ ರಾಸಾಯನಿಕ ನೀರು ಬಿದ್ದಿದೆ ಎನ್ನಲಾಗುತ್ತಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಪಡೆದು ಬಿಗ್ಬಾಸ್ ಮನೆಗೆ ಬಂದಿರುವ ಇವರಿಬ್ಬರಿಗೆ ಆದ ತೊಂದರೆಯಿಂದ ಭಾರಿ ಪ್ರಮಾಣದ ವಿವಾದ ಸೃಷ್ಟಿಯಾಗಿದ್ದು, ಬಿಗ್ಬಾಸ್ ಸ್ಪರ್ಧೆಯ ಬಗ್ಗೆ ಹಲವರು ಪ್ರಶ್ನೆ ಮಾಡುತ್ತಿದ್ದಾರೆ.
ನನ್ನಮ್ಮ ಕಣ್ಣೀರು ಹಾಕಿದ್ಲು! ಕೀಳು ಮಟ್ಟದ ಪ್ರಚಾರ ಬೇಕಾ? ಪಾಪಿಗಳ ಸಂತೆಯಲ್ಲಿ ಪ್ರಾಣಕ್ಕೆ ಬೆಲೆಯೇ ಇಲ್ವಾ?
ಇದರ ನಡುವೆಯೇ, ಇದೀಗ ಹೊಸ ಪ್ರೊಮೋ ರಿಲೀಸ್ ಮಾಡಲಾಗಿದೆ. ಅದರಲ್ಲಿ, ಬಿಗ್ಬಾಸ್ ಸ್ಪರ್ಧಿಗಳು ಎಂದೂ ಮರೆಯದ ತಮ್ಮ ಕಹಿ ಘಟನೆಗಳನ್ನು ಹೇಳಿಕೊಂಡು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಬಿಗ್ಬಾಸ್ ನಿಮ್ಮ ಮನದಾಳದ ಮಾತುಗಳಿಗೆ ಕಿವಿಯಾಗುತ್ತಾರೆ ಎಂದು ಬಿಗ್ಬಾಸ್ ಹೇಳುತ್ತಿದ್ದಂತೆಯೇ ಸ್ಪರ್ಧಿಗಳು ಮರೆಯಲಾಗದ ವಿಷಯಗಳ ಬಗ್ಗೆ ಹೇಳಿಕೊಂಡಿದ್ದಾರೆ. ವಿನಯ್ ತಮ್ಮ ತಂಗಿಯ ಡೆಲವರಿಯ ಕುರಿತು ಮಾತನಾಡಿದ್ದಾರೆ. ತಂಗಿಯ ಡೆಲವರಿ ಡೇಟ್ ಇತ್ತು. ಆ ಒಂದು ವಿಷಯ... ಎನ್ನುತ್ತಲೇ ಕಣ್ಣೀರಾಗಿದ್ದಾರೆ.
ಇನ್ನು ನಮ್ರತಾ, ನನಗೆ ಒಂದೊಂದು ಸಲ ಒಬ್ಬಂಟಿ ಫೀಲ್ ಆಗುತ್ತದೆ ಎಂದು ಅತ್ತಿದ್ದಾರೆ. ನಾನು ಮಾತನಾಡಿದರೆ ಇಲ್ಲಿ ಯಾರಿಗೂಇಷ್ಟ ಆಗುವುದಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಡ್ರೋನ್ ಪ್ರತಾಪ್ ಕನ್ನಡಕ ಹಾಕಿಕೊಂಡು ಓಡಾಡುವುದನ್ನು ನೋಡಿದರೆ ಬೇಜಾರು ಆಗುತ್ತದೆ. ಇದಕ್ಕೆ ಒಂದು ರೀತಿಯಲ್ಲಿ ನಾನೇ ಕಾರಣನಾ ಎನಿಸುತ್ತದೆ ಎಂದು ವರ್ತೂರು ಸಂತೋಷ್ ಬೇಸರಿಸಿದ್ದಾರೆ. ಕಾಲೇಜಿನ ದಿನಗಳನ್ನು ನೆನಪಿಸಿಕೊಂಡು ಬಿಕ್ಕಿಬಿಕ್ಕಿ ಅತ್ತ ಸಂಗೀತಾ, ಸ್ಕೂಲ್-ಕಾಲೇಜಿನಲ್ಲಿ ನನ್ನನ್ನು ಯಾವಾಗಲೂ ಕಾರ್ನರ್ ಮಾಡುತ್ತಿದ್ದರು. ಇಲ್ಲಿಯೂ ಹಾಗೆಯೇ ಎನಿಸುತ್ತಿದೆ ಎಂದಿದ್ದಾರೆ.
ಸ್ವರ್ಗದಷ್ಟೇ ಬಿಗ್ಬಾಸ್ ಸುರಕ್ಷಿತ ಎಂದದ್ದು ಇದಕ್ಕೇನಾ? ಸಂಗೀತಾ ಸಹೋದರ ಕಿಡಿ- ಸುದೀಪ್ಗೆ ಪತ್ರ?