ರಾಮ್​ನನ್ನು ಕೊಲ್ಲಲು ಚಿಕ್ಕಮ್ಮ ತಂತ್ರ ರೂಪಿಸುತ್ತಿದ್ದಾಳೆ ಎನ್ನುವ ಸುದ್ದಿ ತಿಳಿಯುತ್ತಲೇ ಅಶೋಕ್​ ತಾನು ರಾಮ್​ ಜಾಗದಲ್ಲಿ ಇದ್ದು ಸಾವಿಗೆ ಎದೆಯೊಡ್ಡಿದ್ದಾನೆ. ಏನಿದು ಕಥೆ? 

ಸೀತಾರಾಮ ಸೀರಿಯಲ್​ ಕುತೂಹಲ ಘಟ್ಟಕ್ಕೆ ಬಂದು ತಲುಪಿದೆ. ಸೀತಾ ಮತ್ತು ರಾಮ್​ ಇನ್ನೇನು ಒಂದಾಗುತ್ತಾರೆ ಎನ್ನುವ ಕಾಲಕ್ಕೆ ರಾಮ್​ನನ್ನು ಕೊಲ್ಲಲು ಚಿಕ್ಕಮ್ಮ ಭಾರ್ಗವಿ ಸಂಚು ರೂಪಿಸಿದ್ದಳು. ಆತನ ಕಾರನ್ನು ಆ್ಯಕ್ಸಿಡೆಂಟ್​ ಮಾಡಿಸಿದ್ದಾಳೆ. ಸೀತಾಳನ್ನು ತಾತ ದೇಸಾಯಿ ಮನೆಗೆ ಕರೆಸಿ ಇನ್ನೇನು ಮದುವೆ ಮಾತುಕತೆ ಮುಂದುವರೆಸಬೇಕು ಎನ್ನುವಾಗಲೇ ಇದು ಸಾಧ್ಯವಾಗಬಾರದು ಎನ್ನುವ ಕಾರಣಕ್ಕೆ ಭಾರ್ಗವಿ ಈ ತಂತ್ರವನ್ನು ರೂಪಿಸಿದ್ದಳು. ಇದಕ್ಕಾಗಿ ಎಲ್ಲರ ಎದುರು ಒಳ್ಳೆಯತನದ ಸೋಗು ಹಾಕಿಕೊಂಡಿರೋ ಭಾರ್ಗವಿ, ಯಾರಿಗೂ ಅನುಮಾನ ಬಾರದಂತೆ ರಾಮ್​ನನ್ನು ವಿದೇಶಕ್ಕೆ ಕಳುಹಿಸುವ ಸಂಚು ರೂಪಿಸಿದಳು. ಅಲ್ಲಿ ತುರ್ತಾಗಿ ಯಾವುದೇ ಆಫೀಸ್​ ಕೆಲಸಕ್ಕೆ ಸಂಬಂಧಿಸಿದಂತೆ ಮೀಟಿಂಗ್​ ಇದೆ ಎಂದು ಅವನನ್ನು ಕಳುಹಿಸಿದಳು.

ಆದರೆ ಅದೇ ಇನ್ನೊಂದೆಡೆ ಭಾರ್ಗವಿಯ ಕುತಂತ್ರ ಗೆಳೆಯ ಅಶೋಕ್​ಗೆ ತಿಳಿದಿತ್ತು. ಸತ್ಯಜೀತ್​ ಎಲ್ಲಾ ಸತ್ಯವನ್ನೂ ಹೇಳಿದ್ದ. ಇದಕ್ಕೂ ಮುನ್ನವೇ ಭಾರ್ಗವಿಯ ಎಲ್ಲಾ ತಂತ್ರಗಳೂ ಅವನಿಗೆ ಗೊತ್ತಿದ್ದರೂ, ರಾಮ್​ ಅದನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ ಅವನು ತನ್ನ ಚಿಕ್ಕಮ್ಮ ಒಳ್ಳೆಯವಳು ಎಂದೇ ಅಂದುಕೊಂಡಿದ್ದಾನೆ. ತನ್ನ ತಾಯಿಯ ಸಾವಿಗೆ ಅವಳೇ ಕಾರಣ ಎನ್ನುವುದೂ ಅವನಿಗೆ ಗೊತ್ತಿಲ್ಲ. ಅದರೆ ಸೀತಾ ಮತ್ತು ರಾಮ್​ನನ್ನು ಬೇರೆ ಮಾಡಲು ಅವನನ್ನು ವಿದೇಶಕ್ಕೆ ಕಳುಹಿಸುವ ಪ್ಲ್ಯಾನ್​ ಮಾಡಿರುವುದು ಅಶೋಕ್​ಗೆ ಗೊತ್ತಾಗಿದೆ.

ಚಿಕ್ಕಮ್ಮಂದಿರ ಮೇಲೆ ನಿರ್ದೇಶಕರಿಗೆ ಯಾಕಿಷ್ಟು ಕೋಪ? ಬೇರೆ ಕಥೆನೇ ಸಿಗಲ್ವಾ? ಫ್ಯಾನ್ಸ್​ ಬೇಸರ!

ಇದೇ ವೇಳೆ ರಾಮ್​ ಕಾರು ವಿಮಾನ ನಿಲ್ದಾಣದ ಬಳಿ ಆ್ಯಕ್ಸಿಡೆಂಟ್​ ಆಗಿರುವ ಸುದ್ದಿ ಬಂದಿದೆ. ಅದನ್ನು ಮಾಡಿಸಿದ್ದ ಭಾರ್ಗವಿಯೇ ಎಂದು ಬೇರೆ ಹೇಳಬೇಕಾಗಿಲ್ಲ. ಭಾರ್ಗವಿ ಎಲ್ಲರ ಎದುರು ಗಾಬರಿಯಿಂದ ರಾಮ್​ಗೆ ಅಪಘಾತವಾಗಿದೆ ಎಂದಿದ್ದಾಳೆ. ಎಲ್ಲರೂ ಹೌಹಾರಿ ಹೋಗಿದ್ದಾರೆ. ಅದೇ ಸಮಯದಲ್ಲಿ ಅಲ್ಲಿಯೇ ಇದ್ದ ಪ್ರಿಯಾ, ರಾಮ್​ ಬದಲು ಆಶೋಕ್​ ವಿದೇಶಕ್ಕೆ ಹೋಗಿದ್ದ, ಹಾಗಿದ್ದರೆ ಅಪಘಾತವಾಗಿದ್ದು ಅಶೋಕ್​ ಎಂದು ಜೋರಾಗಿ ಕೂಗಿಕೊಂಡಿದ್ದಾಳೆ. ಅಲ್ಲಿಗೆ ತನ್ನ ಸ್ನೇಹಿತನ ಪ್ರಾಣ ಕಾಪಾಡಲು ಅಶೋಕ್​ ಹೋಗಿದ್ದಾನೆ. ಅಪಘಾತವಾಗಿದೆ. ಮುಂದೇನು ಎನ್ನುವುದು ಈಗಿರುವ ಪ್ರಶ್ನೆ. 

ಒಂದೆಡೆ ಸೀತಾಗೂ ರಾಮ್​ ಕಾರು ಅಪಘಾತ ಆಗಿರುವ ಸುದ್ದಿ ಬಂದಿದ್ದು, ಅವಳಿಗೂ ಆಘಾತವಾಗಿ ಮನೆಯಿಂದ ಹೋಗಿದ್ದಾಳೆ. ಅತ್ತ ರಾಮ್​ ಮನೆಯವರಿಗೆ ಅದು ಅಶೋಕ್​ ಎಂದು ಗೊತ್ತಾಗಿದೆ. ಭಾರ್ಗವಿ ಮಾತ್ರ ರಾಮ್​ ಬದಲು ಅಶೋಕ್​ ಹೋಗಿದ್ದು ಎಂದು ಕೇಳಿ ಸಿಟ್ಟುಗೊಂಡಿದ್ದಾಳೆ. ರಾಮ್​ನನ್ನು ಮುಗಿಸುವ ಪ್ರಯತ್ನ ಮಾಡಿದರೆ ಅದು ಸಾಧ್ಯವಾಗಲಿಲ್ಲ ಎನ್ನುವ ಕೊರಗು ಅವಳದ್ದು. ಸೀತಾ ಅಂತೂ ರಾಮ್​ ಮನೆ ಸೇರಿರುವ ಹೊತ್ತಿನಲ್ಲಿ ಆಗಿರುವ ಈ ಘಟನೆಯಿಂದ ಮುಂದೇನು ಆಗುತ್ತದೆಯೋ ಎನ್ನುವುದು ಸೀರಿಯಲ್​ ಪ್ರೇಮಿಗಳ ಆತಂಕ. ಸ್ನೇಹಿತನಿಗಾಗಿ ತನ್ನ ಪ್ರಾಣವನ್ನೇ ಒತ್ತೆಯಿಟ್ಟಿರುವ ಅಶೋಕ್​ನನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಇದ್ದರೆ ಇಂಥ ಸ್ನೇಹಿತ ಇರಬೇಕು ಎನ್ನುತ್ತಿದ್ದಾರೆ. 

ಅಮ್ಮನ ದಿನಕ್ಕೆ ಸಿಹಿ-ಸೀತಾ ಭರ್ಜರಿ ಆಫರ್​: ತಾಯಿಗೆ ಪ್ರಶ್ನೆ ಕೇಳಿ- ಟ್ಯಾಗ್​ ಮಾಡಿ- ಏನಿದು ವಿಶೇಷ?