ಬಹುತೇಕ ಸೀರಿಯಲ್​ಗಳಲ್ಲಿ ಚಿಕ್ಕಮ್ಮಂದಿರನ್ನು ವಿಲನ್​ಗಳನ್ನಾಗಿ ತೋರಿಸುತ್ತಿರುವ ಕುರಿತು ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ಏನಿದು ವಿಷಯ? 

ಆರಂಭದಲ್ಲಿ ಏನೋ ವಿಭಿನ್ನವಾಗಿ ತೋರಿಸುವ ಸೀರಿಯಲ್​ಗಳು ಬರಬರುತ್ತಾ ಹಳ್ಳ ಹಿಡಿಯುತ್ತವೆ ಎಂದು ಸೀರಿಯಲ್​ ಪ್ರೇಮಿಗಳು ಆಗಾಗ್ಗೆ ಬೇಸರ ವ್ಯಕ್ತಪಡಿಸುವುದು ನಡೆದೇ ಇದೆ. ಅದೇ ಅಕ್ರಮ ಸಂಬಂಧ, ಅತ್ತೆ-ಸೊಸೆ ಜಗಳ, ವಿಲನ್​ಗಳಾಗಿರೋ ಅತ್ತಿಗೆ, ನಾದಿನಿ, ಚಿಕ್ಕಮ್ಮ... ಹೀಗೆ ಬಹುತೇಕ ಎಲ್ಲಾ ಸೀರಿಯಲ್​ಗಳಿಗೂ ಅದೇ ಕಥೆ, ಅದೇ ಸಿದ್ಧ ಸೂತ್ರ ಎನಿಸಿಕೊಂಡು ಬಂದಿವೆ. ಅದರಲ್ಲಿಯೇ ಚೂರು ಪಾರು ವಿಭಿನ್ನ ಕಥೆಗಳನ್ನು ಹುಡುಕಿ ಅಂಥ ಸೀರಿಯಲ್​ಗಳನ್ನು ಇಷ್ಟಪಡುವವರೂ ಇದ್ದಾರೆ. ಅಂಥ ಸೀರಿಯಲ್​ಗಳಲ್ಲಿ ಒಂದೆನಿಸಿರುವುದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್​.

ಒಂದು ಮಗುವಿನ ತಾಯಿ ಸೀತಾಳನ್ನು ದೊಡ್ಡ ಬಿಜಿನೆಸ್​ಮೆನ್​ ರಾಮ್​ ಪ್ರೀತಿ ಮಾಡಿರುವ ವಿಭಿನ್ನ ಕಥೆಯನ್ನು ಈ ಸೀರಿಯಲ್​ ಹೊಂದಿದೆ. ಮಾಮೂಲಿಯಂತೆ ಇಲ್ಲೊಬ್ಬ ವಿಲನ್​ ಚಿಕ್ಕಮ್ಮ ಇದ್ದಾಳೆ. ಅವಳು ಶತ ಪ್ರಯತ್ನ ಪಟ್ಟರೂ ಸೀತಾ ಮತ್ತು ರಾಮ್​ ಅವರ ಮದುವೆಯನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಇದಾಗಲೇ ಒಮ್ಮೆ ರಾಮ್​ಗೆ ಆ್ಯಕ್ಸಿಡೆಂಟ್​ ಮಾಡಿಸಿ ಅವನನ್ನು ಆಸ್ಪತ್ರೆಗೆ ಸೇರಿಸಿದ್ದಳು. ಈಗ ಮತ್ತೊಮ್ಮೆ ಆ್ಯಕ್ಸಿಡೆಂಟ್​ ಆದಂತಿದೆ. ಸೀತಾ ಮತ್ತು ರಾಮ್​ ಮದುವೆ ಆಗುವುದನ್ನು ತಪ್ಪಿಸಲು ರಾಮ್​ನ ಕೊಲೆ ಸಂಚು ಹೂಡಿದ್ದಾಳೆ ಭಾರ್ಗವಿ. ಅವನನ್ನು ವಿದೇಶಕ್ಕೆ ಕಳುಹಿಸಿದ್ದಾಳೆ. ಇದೀಗ ಅಪಘಾತ ಆಗಿರೋ ಸುದ್ದಿ ಬಂದಿದ್ದು, ಅದು ರಾಮ್​ಗೇನಾ ಎಂದು ತಿಳಿಯಬೇಕಿದೆ.

ಅಮ್ಮನ ದಿನಕ್ಕೆ ಸಿಹಿ-ಸೀತಾ ಭರ್ಜರಿ ಆಫರ್​: ತಾಯಿಗೆ ಪ್ರಶ್ನೆ ಕೇಳಿ- ಟ್ಯಾಗ್​ ಮಾಡಿ- ಏನಿದು ವಿಶೇಷ?

ಇದು ಒಂದೆಡೆಯಾದರೆ ಅತ್ತ ಅಮೃತಧಾರೆ ಸೀರಿಯಲ್​ನಲ್ಲಿಯೂ ಚಿಕ್ಕಮ್ಮ ಶಕುಂತಲಾ ದೇವಿ ಮಗ ಗೌತಮ್​ ಮತ್ತು ಸೊಸೆ ಭೂಮಿಕಾಳನ್ನು ಹನಿಮೂನ್​ಗೆ ಕಳುಹಿಸಿದ್ದಾಳೆ. ಅಲ್ಲಿ ಕೊಲೆ ಸಂಚು ರೂಪಿಸಿದ್ದಾಳೆ. ಈ ಹಿಂದೆ ಈಕೆ ಕೂಡ ಆ್ಯಕ್ಸಿಡೆಂಟ್​ ಮಾಡಿಸುವ ಪ್ಲ್ಯಾನ್​ ಮಾಡಿ ಸೋತಿದ್ದಳು. ಎರಡೂ ಸೀರಿಯಲ್​ಗಳಲ್ಲಿನ ಕಥೆ ವಿಭಿನ್ನ ಕಥಾಹಂದರ ಹೊಂದಿದೆ ಎನ್ನುವ ಕಾರಣಕ್ಕೆ ಅಭಿಮಾನಿಗಳು ಇಷ್ಟಪಟ್ಟು ನೋಡುತ್ತಿದ್ದರೂ, ಇದೀಗ ಅದೇ ಸಿದ್ಧ ವಸ್ತುವನ್ನು ಇಟ್ಟುಕೊಂಡು ಚಿಕ್ಕಮ್ಮಂದಿರನ್ನು ಅತ್ಯಂತ ಕೆಟ್ಟದಾಗಿ ಬಿಂಬಿಸಿರುವುದರ ಬಗ್ಗೆ ಸೋಷಿಯಲ್​ ಮೀಡಿಯಾಗಳಲ್ಲಿ ಸೀರಿಯಲ್​ ಫ್ಯಾನ್ಸ್​ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅದೇ ರೀತಿ ಶ್ರೀಮಸ್ತು, ಶುಭಮಸ್ತು ಸೀರಿಯಲ್​ನಲ್ಲಿ ಕೂಡ ಚಿಕ್ಕಮ್ಮ ಶಾರ್ವರಿ ಕೊಲೆ ಪ್ರಯತ್ನ ಮಾಡಿ ಸೋತಿದ್ದಾಳೆ. ಆದರೂ ಕುಟುಂಬಸ್ಥರನ್ನು ಮುಗಿಸುವ ಸಂಚು ರೂಪಿಸುತ್ತಳೇ ಇದ್ದಾಳೆ. 

ಇನ್ನು ಸೀತಾರಾಮ ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಸೀತಾ ಅಂತೂ ರಾಮ್​ ಮನೆ ಸೇರಿದ್ದಾಳೆ. ಆಕೆಯನ್ನು ಎಲ್ಲರೂ ಒಪ್ಪಿಕೊಂಡು ಆಗಿದೆ. ಆದರೆ ಭಾರ್ಗವಿ ಮಾತ್ರ ಇದನ್ನು ಒಪ್ಪುತ್ತಿಲ್ಲ. ಹೇಗಾದರೂ ಮಾಡಿ ಈ ಮದುವೆ ತಪ್ಪಿಸಲು ತಂತ್ರ ರೂಪಿಸುತ್ತಲೇ ಇದ್ದಾಳೆ. ಮನೆಯಿಂದ ತಲೆತಲಾಂತರವಾಗಿ ಬಂದಿರುವ ಹಾರ ಸೀತಾಳಿಗೆ ಸೇರುವುದು ಅವಳಿಗೆ ಇಷ್ಟವಿರಲಿಲ್ಲ. ಆದರೂ ಅದು ಸೀತಾಳ ಕೊರಳನ್ನು ಸೇರಿದೆ. ಇದನ್ನು ನೋಡಿ ಹೊಟ್ಟೆ ಉರಿಸಿಕೊಂಡಿದ್ದಾಳೆ ಭಾರ್ಗವಿ. ಇದರ ನಡುವೆಯೇ ಸಿಹಿ ರಾಮ್​ ಮನೆಗೆ ಬಂದಿದ್ದಾಳೆ. ತನ್ನಿಂದಲೇ ರಾಮ್​ ಮತ್ತು ಸೀತಾಳ ಮದುವೆ ಆಗುತ್ತಿಲ್ಲ ಎನ್ನುವುದು ಅವಳ ಅನಿಸಿಕೆ. ಇನ್ನೇನು ಅವಳಿಗೂ ಸಮಾಧಾನ ಹೇಳುವಷ್ಟರಲ್ಲಿಯೇ ಅಪಘಾತದ ಸುದ್ದಿ ಮನೆಯವರಿಗೆ ಬರಸಿಡಿಲಿನಂತೆ ಬಡಿದಿದೆ. 

ಹುಟ್ಟುಹಬ್ಬ ಸಂಭ್ರಮದಲ್ಲಿ ನಿವೇದಿತಾ ಗೌಡ: ಗಂಡ ಸರಿ ಇದ್ರೆ ಹೀಗಾಗ್ತಿರಲಿಲ್ಲಾ ಅನ್ನೋದಾ ಫ್ಯಾನ್ಸ್​?