Asianet Suvarna News Asianet Suvarna News

ಬಾರ್​ಗೆ ಭಾಗ್ಯಳ ಎಂಟ್ರಿ! ಈ ಜನ್ಮದಲ್ಲಿ ಸತ್ಯ ಗೊತ್ತಾಗಲ್ಲ, ಪೆಗ್​ ಹಾಕ್ಕೊಂಡು ಹೋಗು ಅನ್ನೋದಾ ತರ್ಲೆಗಳು?

ಗಂಡನ ಬಗ್ಗೆ ಸತ್ಯ ತಿಳಿಯುವ ತವಕದಲ್ಲಿರೋ ಭಾಗ್ಯ ಈಗ ನೇರ ಬಾರ್​ಗೆ ಎಂಟ್ರಿ ಕೊಟ್ಟಿದ್ದಾಳೆ. ಅಲ್ಲಿ ಆಗಿದ್ದೇನು? ನೆಟ್ಟಿಗರು ಹೇಳ್ತಿರೋದೇನು?
 

Bhagyalakshmi has entered the bar in anticipation of knowing the truth about tandav suc
Author
First Published Oct 14, 2024, 4:32 PM IST | Last Updated Oct 14, 2024, 4:32 PM IST

ಭಾಗ್ಯಳಿಗೆ ಇನ್ನೂ ಸತ್ಯ ತಿಳಿದಿಲ್ಲ. ಸತ್ಯ ತಿಳಿದುಕೊಳ್ಳಲೇಬೇಕು ಎಂದು ಪಣ ತೊಟ್ಟಿದ್ದಾಳೆ.  ಸತ್ಯದ ಹುಡುಕಾಟದಲ್ಲಿರುವ ಭಾಗ್ಯ ಈಗ ಬಾರ್​ಗೆ ಎಂಟ್ರಿ ಕೊಟ್ಟಿದ್ದಾಳೆ! ಅಷ್ಟಕ್ಕೂ ಕುಡುಕರು ಕುಡಿದಾಗ ಸತ್ಯ ಹೇಳುತ್ತಾರೆ ಎನ್ನುವ ಕಾರಣಕ್ಕೆ ಶ್ರೇಷ್ಠಾಳ ನಕಲಿ  ಅಪ್ಪನಂತೆ ಆ್ಯಕ್ಟ್​ ಮಾಡಿದ್ದ ಸುಂದ್ರಿಯ ಗಂಡ ಮಹೇಶನನ್ನು ಹುಡುಕಿ ಬಾರ್​ಗೆ ಬಂದಿದ್ದಾಳೆ ಭಾಗ್ಯ. ಅಲ್ಲಿ ಮಹೇಶ್​ ಭಾಗ್ಯಳನ್ನು ಕಂಡು ಅಚ್ಚರಿಗೊಂಡು ಏನು ವಿಷಯ ಎಂದು ಕೇಳಿದ್ದಾನೆ. ಕೊನೆಗೆ ಭಾಗ್ಯ ತನ್ನ ಚಿನ್ನದ ಬಳೆಗಳನ್ನು ಅವನ ಎದುರಿಗೆ ಇಟ್ಟು, ಇದನ್ನು ತೆಗೆದುಕೋ. ಶ್ರೇಷ್ಠಾಳ ನಕಲಿ ಅಪ್ಪನಾಗಿ ಹೋಗಿದ್ದು ಯಾಕೆ, ಆ ಮದುಮಗ ಯಾರು ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾಳೆ. ಇದಕ್ಕೆ ಉತ್ತರಿಸಲಾಗದೇ ಮಹೇಶ್​ ಅರೆ ಕ್ಷಣ ಶಾಕ್​ ಆಗಿದ್ದಾನೆ. ಆದರೆ ಭಾಗ್ಯಳ ಹಠಕ್ಕೆ ಬಿದ್ದು ಇನ್ನೇನು ಬಾಯಿ ತೆಗೆಯುತ್ತಿದ್ದಾನೆ ಅಷ್ಟೇ. ಅವನು ಉತ್ತರ ಕೊಟ್ಟನೋ, ಇಲ್ವೋ ಎನ್ನುವುದು ಈಗ ಬಿಡುಗಡೆಗೊಂಡಿರುವ ಪ್ರೊಮೋದಲ್ಲಿ ಸ್ಪಷ್ಟವಾಗಿಲ್ಲ.

ಆದರೆ ಮಹೇಶ್​ ಸತ್ಯ ಹೇಳುವಷ್ಟರಲ್ಲಿಯೇ ಕುಸುಮಾ ಮತ್ತು ಪೂಜಾಳ ಎಂಟ್ರಿ ಆಗುತ್ತದೆ ಎನ್ನುವುದು ಸ್ಪಷ್ಟವಾಗಿದೆ. ಭಾಗ್ಯ ಹೋಗಿದ್ದನ್ನು ನೋಡಿರೋ ಪೂಜಾ ಮತ್ತು ಕುಸುಮಾ ಗಾಡಿಯಲ್ಲಿ ಅಲ್ಲಿಗೆ ಬಂದಿದ್ದಾರೆ. ಸದ್ಯ ಬಾರ್​ ಹೊರಗಡೆ ಇದ್ದಾರೆ. ಇನ್ನೇನು ಮಹೇಶ ಸತ್ಯ ಬಾಯಿ ಬಿಡುವ ಹೊತ್ತಲ್ಲೇ ಅವರು ಎಂಟ್ರಿಕೊಡೋದು ದಿಟ. ಇದಕ್ಕಾಗಿಯೇ ನೆಟ್ಟಿಗರು ಅಸಮಾಧಾನಗೊಳ್ಳುತ್ತಿದ್ದಾರೆ. ಇದು ಅಸಹ್ಯದ ಪರಮಾವಧಿ ಎನ್ನುತ್ತಿದ್ದಾರೆ. ಇದರಿಂದಾಗಿ  ಸೀರಿಯಲ್ ಪ್ರೇಮಿಗಳಿಗೆ ಅಹಸ್ಯ ಹುಟ್ಟಲು ಶುರುವಾದಂತಿದೆ. ಭಾಗ್ಯಳಿಗೆ ಅಲ್ಲಿರೋ ಮದುವೆ ಗಂಡು ತನ್ನ ಗಂಡನೇ ಎಂದು ತಿಳಿಯದಷ್ಟು ಪೆದ್ದಿನಾ? ಇದು ಮುಗ್ಧತೆಯ ಪರಮಾವಧಿಯೋ, ಮೂರ್ಖತನದ ಪರಮಾವಧಿಯೋ ಒಂದೂ ಗೊತ್ತಾಗ್ತಿಲ್ಲ ಎನ್ನುವುದು ನೆಟ್ಟಿಗರ ಮಾತು. ಇದೀಗ ಭಾಗ್ಯಳಿಗೆ ಗಂಡನ ಮೇಲೆ ಡೌಟ್​ ಬಂದಿದೆ. ಅಷ್ಟು ಮಾತ್ರಕ್ಕೆ ಅವಳಿಗೆ ತಲೆ ಇದೆ ಎನ್ನುವುದನ್ನು ತೋರಿಸಿದ್ದಾರೆ. 

ಗಂಡ ತಾಂಡವ್​ನನ್ನು ಸರಿಮಾಡೋಕೆ ಆಗ್ದೇ ತ್ರಿವೇಣಿ ಸಂಗಮದಲ್ಲಿ ಡುಮ್ಕಿ ಹೊಡೆದ ಭಾಗ್ಯ!

ಈಗಲೂ ಭಾಗ್ಯಳಿಗೆ ಸತ್ಯ ಗೊತ್ತಾಗುವುದಿಲ್ಲ ಎನ್ನುವುದನ್ನು ತಿಳಿದಿರುವ ನೆಟ್ಟಿಗರು, ಈ ಜನ್ಮದಲ್ಲಿ ನಿನಗೆ ಸತ್ಯ ಗೊತ್ತಾಗಲ್ಲ. ಬಂದಿದ್ದು ಬಂದಿದ್ಯಾ, ಒಂದು ಪೆಗ್​ ಹಾಕ್ಕೊಂಡು ನೆಮ್ಮದಿಯಿಂದ ವಾಪಸ್​ ಹೋಗು ಅಂತ ಹೇಳೋದಾ? ಒಟ್ಟಿನಲ್ಲಿ ಮದುಮಗ ತಾಂಡವ್​ ಎಂದು ಗೊತ್ತಿದ್ದರೂ ಅದನ್ನು ಒಪ್ಪದಂಥ ಹೆಣ್ಣು ಇನ್ನೂ ಈ ಭೂಮಿ ಮೇಲೆ ಇರೋದೇ ಗ್ರೇಟ್​ ಎಂದು ಹಲವರು ತಮಾಷೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಭಾಗ್ಯಳಿಗೆ ಸದ್ಯ ತಿಳಿದು ಮನೆಯಲ್ಲಿ ಹುಚ್ಚಿಯಂತೆ ಆಡುತ್ತಿದ್ದಾಳೆ. ಹೀಗ್ಯಾಕೆ ಮಾಡುತ್ತಿದ್ದಿಯಾ ಎಂದು ತಾಂಡವ್​ ಕೇಳಿದಾಗ ನನಗೆ ಸತ್ಯ ತಿಳಿಯಬೇಕಿದೆ ಎಂದಿದ್ದಾಳೆ. ಮದುವೆಯಾಗಲು ಹೊರಟಿರೋ ತಾಂಡವ್​ಗೂ ವಿಚಿತ್ರ ಎಂದರೆ ಸತ್ಯ ಹೇಳಲು ಭಯ! ಇದೊಳ್ಳೆ ಹಾಸ್ಯಾಸ್ಪದವಾಗಿದೆ ಎನ್ನುತ್ತಿದ್ದಾರೆ ಸೀರಿಯಲ್​ ಪ್ರೇಮಿಗಳು! 

ಅತ್ತೆ ಕುಸುಮಾ ಮತ್ತು ಪೂಜಾ ಇನ್ನೂ ಸತ್ಯ ಮುಚ್ಚಿಡಲು ನೋಡ್ತಿದ್ದಾರೆ. ಮದುವೆ ಮನೆಗೆ ಭಾಗ್ಯ ಹೋದರೂ ಡೌಟೇ ಬರಲಿಲ್ಲ! ಅಲ್ಲಿ ದ್ವಾರದಲ್ಲಿಯೇ ತಾಂಡವ್ ಫೋಟೋ ಇದ್ದದ್ದೂ ನೋಡಲಿಲ್ಲ! ಸಾಲದು ಎಂಬುದಕ್ಕೆ ಗಂಡಿನ ಕಡೆಯವರು ಮದುವೆ ನಿಲ್ಲಿಸಿದ್ದು ಹಾಗೂ ಕುಸುಮಾ ಮತ್ತು ಪೂಜಾ ಬಂದು ಮದುವೆ ನಿಲ್ಲಿಸಿದ್ದು ಎನ್ನುವ ಮಾತಿಗೆ ತಾಳೆ ಹಾಕಿರುವ ಭಾಗ್ಯಳಿಗೆ ತಾಂಡವ್​ ಮೇಲೆ ಸಂದೇಹ ಬಂದಿದೆ ಅಷ್ಟೇ. ಆದರೆ ಇದುವರೆಗೂ ಅದು ಗಂಡನೇ ಎನ್ನುವುದು ಮಾತ್ರ ಗೊತ್ತಾಗಲಿಲ್ಲ! ಇದಕ್ಕೆ ಏನೆನ್ನಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. ಮದುವೆ ಗಂಡು ಯಾರು ಎಂದು ಅತ್ತೆ ಮತ್ತು ತಂಗಿಯನ್ನು ಪೂಜಾ ಪ್ರಶ್ನಿಸುತ್ತಿದ್ದಾಳೆ. ಅತ್ತ ಅತ್ತೆ ಕೂಡ ಭಾಗ್ಯಳಿಗೆ ವಿಷಯ ಗೊತ್ತಾಗಬಾರದು ಎಂದು ಏನೇನೋ ಕಸರತ್ತು ಮಾಡುತ್ತಿದ್ದಾಳೆ. ಅದೇ ಇನ್ನೊಂದೆಡೆ ಸೊಸೆಯನ್ನು ಒಂದು ತಿಂಗಳಿನಲ್ಲಿ ಬದಲಿಸ್ತೇನೆ ಎಂದಿದ್ದಾಳೆ ಕುಸುಮಾ. ಅವಳು ಸಕ್ಸಸ್​ ಆಗ್ತಾಳಾ ನೋಡಬೇಕಿದೆ. ಗಂಡನ ಸಲುವಾಗಿ ಹೆಣ್ಣಾದವರ ತನ್ನ ಅಸ್ತಿತ್ವವನ್ನೇ ಬದಲಿಸಬೇಕಾ ಎನ್ನುವ ಪ್ರಶ್ನೆಯೂ ಕಾಡುತ್ತಿದೆ. 

ನನ್ನ ಮದ್ವೆಯಾಗೋಕೆ ಯಾರೂ ಸಿದ್ಧನೇ ಇರ್ಲಿಲ್ಲ, ಜಿಗುಪ್ಸೆ ಹುಟ್ಟೋಗಿತ್ತು... ನಟ ರಾಜೇಶ್​ ರಿಯಲ್​ ಲೈಫ್​ ಸ್ಟೋರಿ ಕೇಳಿ...


Latest Videos
Follow Us:
Download App:
  • android
  • ios