ತಾಂಡವ್ನ ಈ ಅತಿಯಾದ ಆತ್ಮವಿಶ್ವಾಸದ ಹಿಂದೆ ಏನಿದೆ? ಶ್ರೇಷ್ಠಾಳನ್ನು ಕಿಡ್ನ್ಯಾಪ್ ಮಾಡಿಸಿದ್ದು ಯಾರು? ಭಾಗ್ಯ ಈ ಸಂಚನ್ನು ಹೇಗೆ ಮೆಟ್ಟಿ ನಿಲ್ಲುತ್ತಾಳೆ? ಎಂಬುದು ಈಗ ಕುತೂಹಲ ಮೂಡಿಸಿದೆ. ಶ್ರೇಷ್ಠಾ ಮದುವೆ ಮನೆಗೆ ಬಾರದಿದ್ದರೆ ಭಾಗ್ಯಳ ಮುಂದಿನ ನಡೆ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಬೇಕಾದರೆ ಸೀರಿಯಲ್ ನೋಡೋದೊಂದೇ ದಾರಿ.
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಏನಾಗಿದೆ?
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' (Bhagyalakshmi Serial) ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ದಿನಕ್ಕೊಂದು ತಿರುವು ಪಡೆಯುತ್ತಿರುವ ಈ ಸೀರಿಯಲ್ನಲ್ಲಿ ಈಗ ಹೈ-ವೋಲ್ಟೇಜ್ ಡ್ರಾಮಾ ಶುರುವಾಗಿದೆ. ಭಾಗ್ಯ ಅಂದ್ರೆ ಕೇವಲ ಮುಗ್ದೆ, ಅವಳಿಗೆ ಏನೂ ತಿಳಿಯಲ್ಲ ಅಂದುಕೊಂಡಿದ್ದ ತಾಂಡವ್ಗೆ ಈಗ ಸರಿಯಾದ ಶಾಕ್ ಸಿಕ್ಕಿದೆ. ಭಾಗ್ಯಳ ಬದಲಾದ ನಡವಳಿಕೆ ಕಂಡು ಇಡೀ ಕುಟುಂಬವೇ ದಂಗಾಗಿದೆ.
ಭಾಗ್ಯಳ ಸೈಲೆಂಟ್ ಆಟ, ಶಾಕ್ ಆದ ಕುಸುಮತ್ತೆ!
ಕಳೆದ ಕೆಲವು ದಿನಗಳಿಂದ ಭಾಗ್ಯ ತುಂಬಾ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದಳು. ಇದನ್ನು ನೋಡಿ ಮಗ ಗುಂಡು ಮತ್ತು ಅತ್ತೆ ಕುಸುಮಾ ಕಂಗಾಲಾಗಿದ್ದರು. ಭಾಗ್ಯ ಯಾಕೆ ಹೀಗೆ ಮಾಡುತ್ತಿದ್ದಾಳೆ? ತಾಂಡವ್ನನ್ನು ಮತ್ತೆ ಮದುವೆಯಾಗಲು ಯಾಕೆ ಒಪ್ಪಿಕೊಂಡಳು? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಆದರೆ ಈಗ ಭಾಗ್ಯ ತನ್ನ ಮೌನ ಮುರಿದಿದ್ದಾಳೆ. ತಾಂಡವ್ನ ಅಸಲಿ ಬಣ್ಣವನ್ನು ಬಯಲು ಮಾಡಲು ಅವಳು ಹೂಡಿದ್ದ ತಂತ್ರಗಳು ಒಂದೊಂದಾಗಿ ರಿವೀಲ್ ಆಗುತ್ತಿವೆ.
ಫ್ಲ್ಯಾಶ್ಬ್ಯಾಕ್ ಸ್ಟೋರಿ: ತಾಳಿ ಬದಲಿಸಿದ ಭಾಗ್ಯ!
ಭಾಗ್ಯ ಮೌನ ಮುರಿದು ತನ್ನ ಪ್ಲ್ಯಾನ್ ಬಗ್ಗೆ ವಿವರಿಸಿದ್ದಾಳೆ. ತಾಂಡವ್ ಮತ್ತು ಶ್ರೇಷ್ಠಾ ಒಟ್ಟಾಗಿ ಸೇರಿ ಆಡುತ್ತಿದ್ದ ನಾಟಕವನ್ನು ಭಾಗ್ಯ ಕದ್ದು ಕೇಳಿಸಿಕೊಂಡಿದ್ದಳು. ತಾನು ಕೇವಲ ಒಳ್ಳೆಯವನಂತೆ ನಟಿಸುತ್ತಿದ್ದೇನೆ ಎಂದು ತಾಂಡವ್ ತನ್ನ ಪ್ರೇಯಸಿ ಶ್ರೇಷ್ಠಾ ಮುಂದೆ ಹೇಳಿಕೊಂಡಿದ್ದನ್ನು ಕೇಳಿಸಿಕೊಂಡ ಭಾಗ್ಯ ರೊಚ್ಚಿಗೆದ್ದಿದ್ದಾಳೆ. ಅದಕ್ಕೆಂದೇ ಅವಳು ತಾಂಡವ್ ಕೊಟ್ಟ ತಾಳಿಯನ್ನೇ ಬದಲಾಯಿಸಿದ್ದಾಳೆ! ಅಷ್ಟೇ ಅಲ್ಲ, ತಾಂಡವ್ ಪ್ರೀತಿಯಿಂದ ಕೊಟ್ಟಂತೆ ನಟಿಸಿದ ಬಳೆಗಳನ್ನು ಎಸೆದು, ಆದಿ ಕೊಟ್ಟ ಬಳೆಗಳನ್ನೇ ಧರಿಸಿ ತನ್ನ ನಿರ್ಧಾರವನ್ನು ದೃಢವಾಗಿ ತಿಳಿಸಿದ್ದಾಳೆ.
ಶ್ರೇಷ್ಠಾ ಕಿಡ್ನ್ಯಾಪ್: ತಾಂಡವ್ ಹಾಕಿದ ಹೊಸ ಸವಾಲು!
ಈಗ ಕಥೆಯಲ್ಲಿ ಮತ್ತೊಂದು ಕಿಚ್ಚು ಹತ್ತಿಕೊಂಡಿದೆ. ಶ್ರೇಷ್ಠಾ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ! ಮನೆಯಲ್ಲಿ ಮದುವೆ ಸಂಭ್ರಮ ನಡೆಯುತ್ತಿದ್ದರೆ, ಅತ್ತ ಶ್ರೇಷ್ಠಾ ಕಿಡ್ನ್ಯಾಪ್ ಆಗಿರುವುದು ಈಗ ದೊಡ್ಡ ತಲೆನೋವಾಗಿದೆ. ಕುಸುಮತ್ತೆ "ಶ್ರೇಷ್ಠಾ ಬಂದು ಈ ಮದುವೆಯನ್ನು ನಿಲ್ಲಿಸುತ್ತಾಳೆ, ತಾಂಡವ್ ಮುಖವಾಡ ಕಳಚಿ ಬೀಳುತ್ತೆ" ಎಂದು ನಂಬಿದ್ದರು. ಆದರೆ ಆದಿ ರೂಮ್ಗೆ ಹೋಗಿ ನೋಡಿದಾಗ ಅಲ್ಲಿ ಶ್ರೇಷ್ಠಾ ಇರಲಿಲ್ಲ. ಇದನ್ನೇ ಬಳಸಿಕೊಂಡ ತಾಂಡವ್, "ಶ್ರೇಷ್ಠಾ ಈ ಮದುವೆಗೆ ಬರೋದೇ ಇಲ್ಲ" ಎಂದು ಭಾಗ್ಯ ಮುಂದೆ ಅಹಂಕಾರದಿಂದ ಸವಾಲು ಹಾಕಿದ್ದಾನೆ.
ತಾಂಡವ್ನ ಈ ಅತಿಯಾದ ಆತ್ಮವಿಶ್ವಾಸದ ಹಿಂದೆ ಏನಿದೆ? ಶ್ರೇಷ್ಠಾಳನ್ನು ಕಿಡ್ನ್ಯಾಪ್ ಮಾಡಿಸಿದ್ದು ಯಾರು? ಭಾಗ್ಯ ಈ ಸಂಚನ್ನು ಹೇಗೆ ಮೆಟ್ಟಿ ನಿಲ್ಲುತ್ತಾಳೆ? ಎಂಬುದು ಈಗ ಕುತೂಹಲ ಮೂಡಿಸಿದೆ. ಶ್ರೇಷ್ಠಾ ಮದುವೆ ಮನೆಗೆ ಬಾರದಿದ್ದರೆ ಭಾಗ್ಯಳ ಮುಂದಿನ ನಡೆ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಬೇಕಾದರೆ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡದಲ್ಲಿ 'ಭಾಗ್ಯಲಕ್ಷ್ಮಿ' ನೋಡಲೇಬೇಕು. ಒಟ್ಟಿನಲ್ಲಿ ಭಾಗ್ಯ ಮತ್ತು ತಾಂಡವ್ ನಡುವಿನ ಈ 'ಮೈಂಡ್ ಗೇಮ್' ಈಗ ಮನೆಮಂದಿಯ ನಿದ್ದೆಗೆಡಿಸಿದೆ!


