ಖ್ಯಾತ ನಿರೂಪಕಿ ಅನುಪಮಾ ಗೌಡ ಅವರು 'ಅಕ್ಕ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಬಿಗ್ ಬಾಸ್ನಲ್ಲಿ ಸ್ಪರ್ಧಿಸಿ, ಹಲವು ರಿಯಾಲಿಟಿ ಶೋಗಳನ್ನು ನಿರೂಪಿಸಿದ್ದಾರೆ. 1991ರಲ್ಲಿ ಜನಿಸಿದ ಇವರು, 'ಚಿ ಸೌ ಸಾವಿತ್ರಿ' ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ. ಪ್ರೀತಿಯಲ್ಲಿ ನೋವುಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯಕ್ಕೆ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, 'ಮಜಾ ಭಾರತ' ದಂತಹ ಕಾರ್ಯಕ್ರಮಗಳನ್ನು ನಿರೂಪಿಸುತ್ತಿದ್ದಾರೆ. 'ಆ ಕರಾಳ ರಾತ್ರಿ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ವೇದಿಕೆ ಮೇಲೇರಿದರೆ ಸಾಕು, ಒಂದೇ ಸಮನೆ ಚಟಪಟಾ ಎಂದು ಮಾತನಾಡುತ್ತಾ ವೀಕ್ಷಕರನ್ನು ತಮ್ಮಡೆಗೆ ಸೆಳೆಯುತ್ತಾ, ಹಾಸ್ಯದ ಮೂಲಕವೂ ಜನರನ್ನು ಮನರಂಜಿಸುತ್ತಾ ಇರುವ ಆ್ಯಂಕರ್ಗಳಲ್ಲಿ ಒಬ್ಬರು ಅನುಪಮಾ ಗೌಡ. ಅಕ್ಕ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಅನುಪಮಾ ಗೌಡ ಹಿರಿತೆರೆ, ಕಿರುತೆರೆ ಎರಡರಲ್ಲಿಯೂ ಸಕತ್ ಆ್ಯಕ್ಟೀವ್ ಆಗಿದ್ದಾರೆ. ನಟನೆಗೂ ಸೈ, ನಿರೂಪಣೆಗೂ ಸೈ ಎನ್ನುವುದನ್ನು ತೋರಿಸಿಕೊಡುತ್ತಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಎರಡು ಸಲ ಸ್ಪರ್ಧಿಸಿ ಆನಂತರ ಹಲವಾರು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿದ್ದಾರೆ. ಈ ಮೂಲಕ ನಟಿ ಕಮ್ ನಿರೂಪಕಿ ಎಂದೇ ಫೇಮಸ್ ಆಗಿದ್ದಾರೆ. ಇಂದು ಅನುಪಮಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ನಗುವಲ್ಲೇ ಎಲ್ಲರ ಮನಗೆಲ್ಲೋ ಮುದ್ದು ಗೊಂಬೆ ಅನುಪಮಾ ಗೌಡಗೆ ಹುಟ್ಟುಹಬ್ಬದ ಶುಭಾಶಯಗಳು ಎನ್ನುವ ಶೀರ್ಷಿಕೆಯೊಂದಿಗೆ ಕಲರ್ಸ್ ಕನ್ನಡ ಚಾನೆಲ್ ಇವರಿಗೆ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದೆ.
ನಟಿಯ ಕುರಿತು ಹೇಳುವುದಾದರೆ, ಗೂಗಲ್ ದಾಖಲೆ ಪ್ರಕಾರ ಇವರು ಹುಟ್ಟಿದ್ದು 1991ರಲ್ಲಿ. ಅಂದರೆ ನಟಿಗೆ ಈಗ 34 ವರ್ಷ ವಯಸ್ಸು. ಲೋಕೇಶ್ ಪತ್ರಿಕೆ ಸಿನಿಮಾದ ಮೂಲಕ ಬಾಲ ಕಲಾವಿದೆಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ನಟಿ, ಕೊನೆಗೆ ಮನೆ ಮನೆ ಮಾತಾಗಿದ್ದು, ಅಕ್ಕ ಸೀರಿಯಲ್ ಮೂಲಕ. ಈ ಸೀರಿಯಲ್ನಲ್ಲಿ ಎರಡು ಪಾತ್ರ ನಿರ್ವಹಿಸಿ, ನಾಯಕಿ, ವಿಲನ್ ಯಾವುದಕ್ಕೂ ಸೈ ಎನಿಸಿಕೊಂಡರು. ಭೂಮಿಕಾ ಹಾಗೂ ದೇವಿಕಾ ಎಂಬ ಎರಡು ಬಗೆಯ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿ ಜನರ ಮನಗೆದ್ದರು. ಇದಕ್ಕೂ ಮುನ್ನ ಅವರು ಚಿ ಸೌ ಸಾವಿತ್ರಿ ಎಂಬ ಧಾರಾವಾಹಿಯಲ್ಲಿ ನಟಿಸಿ ಸಾಕಷ್ಟು ಹೆಸರು ಮಾಡಿದ್ದಾರೆ. ನಂತರ ಸಕತ್ ಫೇಮಸ್ ಆಗಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಭಾಗವಹಿಸಿದ ನಂತರ. ಅಂದಹಾಗೆ, ನಟಿ, ಪ್ರೀತಿಯ ವಿಷಯದಲ್ಲಿ ತುಂಬಾ ನೋವನ್ನುಂಡವರು. ಸಾವಿನ ಹಾದಿ ಹಿಡಿದು ಕೊನೆಗೆ ಇದ್ದು ತೋರಿಸಿದವರು. ಅದು ಅವರ ಪ್ರೀತಿಯ ವಿಷಯದಲ್ಲಿ ಆಗಿರುವ ನೋವು. ಈ ಬಗ್ಗೆ ನಟಿಯೇ ಕೆಲವು ದಿನಗಳ ಹಿಂದೆ ಮಾತನಾಡಿದ್ದರು.
ಆ್ಯಂಕರ್ ಅನುಪಮಾ ಗೌಡ ಮದ್ವೆಯಾಗದಿರೋದಕ್ಕೆ ಉಪೇಂದ್ರ ಕಾರಣ ಅಂತೆ! ಪತ್ನಿ ಎದುರೇ ರಿವೀಲ್
ನನ್ನ ಲವ್ ಬ್ರೇಕಪ್ ಆಗಿದ್ದು ಬಹುತೇಕ ಎಲ್ಲರಿಗೂ ಗೊತ್ತು. ಅಷ್ಟು ವರುಷಗಳ ಕಾಲ ಪ್ರೀತಿಸಿ, ಇನ್ನು ಮದುವೆಯಾಗಿ ಲೈಫ್ನಲ್ಲಿ ಸೆಟ್ಲ್ ಆಗುತ್ತೇನೆ ಎನ್ನುವಾಗ ನನ್ನ ಲವ್ ಮುರಿದುಬಿತ್ತು ಎಂದು ಹಿಂದೊಮ್ಮೆ ಹೇಳುತ್ತಲೇ ಅದರ ಬಗ್ಗೆ ಮಾತನಾಡಿದ್ದರು. ಅದನ್ನು ಎದುರಿಸಲು ನನಗೆ ಯಾವುದೇ ಪೂರ್ವ ಸಿದ್ಧತೆ ಇರಲಿಲ್ಲ. ತಕ್ಷಣಕ್ಕೆ ನನಗೆ ತೋಚಿದ್ದು ಸಾವೇ ಇಲ್ಲದಕ್ಕೂ ಪರಿಹಾರ ಎಂದು ಮಾತ್ರ. ಅದಕ್ಕೇ ಆತ್ಮಹತ್ಯೆಗೆ ಪ್ರಯತ್ನಿಸಿ ಸೋತೆ. ಅದನ್ನು ಸೋಲು ಎನ್ನುವುದಕ್ಕಿಂತ ಗೆಲುವು ಎನ್ನಬೇಕು. ನಾನು ಸಾವನ್ನು ಗೆದ್ದೆ ಎಂದೇ ಹೇಳಲು ಇಷ್ಟಪಡುತ್ತೇನೆ. ಆ ಸಮಯದಲ್ಲಿ, ಅಂದರೆ ನಾನು ಅಕ್ಷರಶಃ ಖಿನ್ನತೆಗೆ ಜಾರಿದ್ದ ವೇಳೆಯಲ್ಲಿ ನನ್ನನ್ನು ಕಾಪಾಡಿದ್ದು ನನ್ನ ಆತ್ಮೀಯ ಸ್ನೇಹಿತೆ ಹಾಗೂ ನನ್ನ ಗ್ರೇಟ್ ಫ್ರೆಂಡ್ಸ್ ಸರ್ಕಲ್ ಮಾತ್ರ. ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಲವ್ ಮಾಡುತ್ತಿದ್ದೆ ನಾನು. ಆದರೆ ಕಷ್ಟದ ಸಮಸಯದಲ್ಲಿ ಕೈ ಹಿಡಿದಿದ್ದು ಲವರ್ ಅಲ್ಲ, ಬದಲಿಗೆ ಫ್ರೆಂಡ್ಸ್. 'ಪ್ರೇಮಕ್ಕಿಂತ ಸ್ನೇಹ ದೊಡ್ಡದು' ಎಂಬ ಸತ್ಯವನ್ನು ನಾನು ಜೀವನದಲ್ಲಿ ಮೊದಲ ಬಾರಿಗೆ ಕಂಡುಕೊಂಡೆ. 'ಪ್ರೀತಿ ಕೆಲವೊಮ್ಮೆ ಸಾವಿಗೆ ಕಾರಣವಾದರೆ ಸ್ನೇಹ ಬದುಕಿಸಲು ಬಯಸುತ್ತದೆ'. ಈ 'ಲೈಫ್ ಟ್ರುಥ್' ಅನ್ನು ನಾನೆಂದಿಗೂ ಮರೆಯಲಾರೆ' ಎಂದಿದ್ದರು ಅನುಪಮಾ.
ಅಂದಹಾಗೆ, ಅನುಪಮಾ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್. ಇದರಲ್ಲಿ ತಮ್ಮ ಪರ್ಸನಲ್ ಲೈಫ್, ಸಿನಿಮಾ, ಸೀರಿಯಲ್, ಶೂಟಿಂಗ್, ಸ್ಕಿನ್ ಕೇರ್, ಹೇರ್ ಕೇರ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜನರಿಗೆ ತಿಳಿಸುತ್ತಾರೆ. ನಿರೂಪಕಿಯಾಗಿಯೂ ಸಾಕಷ್ಟು ಹೆಸರು ಮಾಡಿದ್ದಾರೆ. ಮಜಾ ಭಾರತ, ರಾಜ-ರಾಣಿ, ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಗಮನ ಸೆಳೆದಿದ್ದಾರೆ. ನಟ ವಿಜಯ್ ರಾಘವೇಂದ್ರ ಅವರೊಂದಿಗೆ 8ನೇ ದಕ್ಷಿಣ ಭಾರತದ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದರು. ಸ್ಯಾಂಡಲ್ವುಡ್ನಲ್ಲಿಯೂ ಛಾಪು ಮೂಡಿಸಿರುವ ಅನುಪಮಾ ಅವರು, ಜಯರಾಮ್ ಕಾರ್ತಿಕ್ ಅಭಿನಯದ ಆ ಕರಾಳ ರಾತ್ರಿ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. 2019ರಲ್ಲಿ ಬಿಡುಗಡೆಗೊಂಡ, ರಾಘವೇಂದ್ರ ರಾಜ್ಕುಮಾರ್ ಮತ್ತು ಆರ್ಜೆ ರೋಹಿತ್ ಅಭಿನಯದ ತ್ರಯಂಬಕಂ ಚಿತ್ರದಲ್ಲಿ ಪತ್ರಕರ್ತೆಯಾಗಿ ನಟಿಸಿದ್ದರು.
ಇವನೇ ಸರ್ವಸ್ವ, ನನ್ನ ಜೀವದ ಗೆಳೆಯ ಎಂದು ಫ್ರೆಂಡ್ಷಿಪ್ ಡೇಗೆ ಸ್ನೇಹಿತನ ಹೀಗೆ ಪರಿಚಯಿಸಿದ ಅನುಪಮಾ ಗೌಡ
