Asianet Suvarna News Asianet Suvarna News

ಬೀದರ್ ಪೊಲೀಸ್ ಇಲಾಖೆಯಿಂದ 'ರನ್ ಫಾರ್ ರೋಡ್ ಸೇಫ್ಟಿ' ಅಭಿಯಾನ

ಟ್ರಾಫಿಕ್ ನಿಯಮಗಳ ಕುರಿತು ಅರಿವು ಮೂಡಿಸಲು ಬೀದರ್ ಪೊಲೀಸ್ ಇಲಾಖೆಯಿಂದ ರನ್ ಫಾರ್ ಸೇಫ್ಟಿ ಅಭಿಯಾನ ನಾಳೆ ನಡೆಯಲಿದೆ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾಹಿತಿ ನೀಡಿದ್ದಾರೆ.

Run for Road Safety campaign by Bidar Police Department tomorrow rav
Author
First Published Aug 26, 2023, 7:35 PM IST

ವರದಿ:- ಲಿಂಗೇಶ್ ಮರಕಲೆ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೀದರ್ (ಆ.26) : ಟ್ರಾಫಿಕ್ ನಿಯಮಗಳ ಕುರಿತು ಅರಿವು ಮೂಡಿಸಲು ಬೀದರ್ ಪೊಲೀಸ್ ಇಲಾಖೆಯಿಂದ ರನ್ ಫಾರ್ ಸೇಫ್ಟಿ ಅಭಿಯಾನ ನಾಳೆ ನಡೆಯಲಿದೆ. ನಗರದ ಕೋಟೆ ಆವರಣದಿಂದ ಪ್ರಾರಂಭ ಆಗಲಿರುವ ಓಟ ಸಿದ್ದಾರ್ಥ ಕಾಲೇಜ್, ಮಡಿವಾಳ ವೃತ್ತ, ಹೊಸ ಬಸ್ ನಿಲ್ದಾಣ, ಕ್ಲಾಸಿಕ ದಾಬಾ, ಹೆಣ್ಣು ಮಗು ವೃತ್ತ, ಕೆಇಬಿ ಕಚೇರಿ, ಗುದುಗೆ ಆಸ್ಪತ್ರೆ, ಹರಳಯ್ಯಾ ವೃತ್ತ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಚೌಬಾರ, ಗವಾನ ಚೌಕ್ ಮೂಲಕ ವಾಪಸ ಕೋಟೆಗೆ ಬಂದು ತಲುಪಲಿದೆ.

 2.5 ಕಿಮಿ, 5 ಕಿಮಿ ಮತ್ತು 10 ಕಿಮಿಗಳ ಓಟ ಪೊಲೀಸ್ ಇಲಾಖೆ(Bidar police department) ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಆ.27 ರಂದು  ಬೆಳಿಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಮ್ಯಾರಥಾನ್ (Run for sefty) ಕಾರ್ಯಕ್ರಮ ನಡೆಯಲಿದೆ. ಈ ಮ್ಯಾರಥಾನ್‍ದಲ್ಲಿ ಸುಮಾರು 5000 ಜನರು ಭಾಗವಹಿಸುವ ಸಂಭವ ಇರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾಹಿತಿ ನೀಡಿದ್ದಾರೆ.

 

ವ್ಹೀಲಿಂಗ್‌ ಹಾವಳಿಗೆ ಬ್ರೇಕ್‌ ಹಾಕಿ: ಅಲೋಕ್‌ ಕುಮಾರ್‌ ಸೂಚನೆ

 ಒಂದೇ ವರ್ಷದಲ್ಲಿ 332 ಸಾವು 

ಬೀದರ್ ಜಿಲ್ಲೆಯಾದ್ಯಂತ 2022ರ ವರ್ಷದಲ್ಲಿ ನಡೆದ ಅಪಘಾತಗಲ್ಲಿ ಹೆಲ್ಮೆಟ್ ಬೈಕ್ ಸವಾರಿ ಮಾಡಿದ 332 ಜನ ಸಾವನಪ್ಪಿದಾರೆಂದು ಎಸ್ಪಿ ಅವರು‌ ಮಾಹಿತಿ ನೀಡಿದ್ದಾರೆ. ಪ್ರಸಕ್ತ ವರ್ಷದಲ್ಲಿ 198ಕ್ಕೂ ಹೆಚ್ಚು ಮಂದಿ ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ಮಾಡಿ ಮೃತಪಟ್ಟಿದಾರೆಂದು ಮಾಹಿತಿ ನೀಡಿದಾರೆ. ಹೀಗಾಗಿ  ಬೀದರ್ ಜನರಿಗೆ ಹೆಲ್ಮೆಟ್ ಮತ್ತು ಟ್ರಾಫಿಕ್ ನಿಯಮದ ಮಹತ್ವ, ಅರಿವು ಮೂಡಿಸುವ ಸಲುವಾಗಿ  ರಸ್ತೆ ಸುರಕ್ಷತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ,. ಖಾಸಗಿ ಸಂಸ್ಥೆಗಳು ಈ ಅಭಿಯಾನದ ಜೊತೆ ಕೈಜೋಡಿಸಿದಾರೆಂದು ಬೀದರ್ ಎಸ್ಪಿ ಚೆನ್ನಬಸವಣ್ಣ ಲಂಗೋಟಿ ಹೇಳಿದರು.

ರಸ್ತೆ ಸುರಕ್ಷಾ ಅಭಿಯಾನ ಹಿನ್ನೆಲೆ ಮಾರ್ಗ ಬದಲಾವಣೆ

ರಸ್ತೆ ಸುರಕ್ಷಾ ಅಭಿಯಾನ 2023(Road Safety Campaign 2023)ರ ಅಂಗವಾಗಿ ಆಯೋಜಿಸಿದ ಈ ಓಟದಲ್ಲಿ ಯಾವುದೇ ಅಡಿಯಾಗದಂತೆ ಸಾರ್ವಜನಿಕ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಹೈದರಾಬಾದ್ ನಿಂದ ಬೀದರ್ ಬಸ್ ನಿಲ್ದಾಣಕ್ಕೆ ಬರುವ ಬಸ್ ಗಳು ಗುಂಪಾ ರಿಂಗ್ ರೋಡ್ ಮೂಲಕ ಹಳೆ ಆರ್ಟಿಒ ಕಚೇರಿಯಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ಮತ್ತು ಔರಾದ್ ನಿಂದ ಬೀದರ್ ಬಸ್ ನಿಲ್ದಾಣಕ್ಕೆ ಬರುವ ಬಸ್ ಗಳು ಗುರುದ್ವಾರ ಗೇಟ್ ಮೂಲಕ ಕೇಂದ್ರ ಬಸ್ ನಿಲ್ದಾಣಕ್ಕೆ ಬರಲು ಮಾರ್ಗ ಬದಲಾಯಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ರಸ್ತೆ ಸುರಕ್ಷತೆ ಕಾಯ್ದೆ ವ್ಯಾಪ್ತಿಗೆ ಬಿಬಿಎಂಪಿ: ಮಸೂದೆ ಮಂಡಿಸಿದ ಸಚಿವ ಪ್ರಿಯಾಂಕ್‌ ಖರ್ಗೆ

Follow Us:
Download App:
  • android
  • ios