Asianet Suvarna News Asianet Suvarna News

ಮನೆ ಮುಂದೆ ಆಟವಾಡ್ತಿದ್ದ ಏಳು ವರ್ಷದ ಮಗು ಮೇಲೆ ಚಿರತೆ ದಾಳಿ; ಕಾದಾಡಿ ಮಗುವನ್ನು ಉಳಿಸಿಕೊಂಡ ತಂದೆ!

ಮನೆಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಚಿರತೆ ದಾಳಿ ನಡೆಸಿ ಹೊತ್ತೊಯ್ಯಲು ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ನಡೆದಿದೆ. 

Leopard attack on a child: An incident in Chikkabellavi village at tumakuru rav
Author
First Published Nov 7, 2023, 9:55 PM IST

ತುಮಕೂರು (ನ.7): ಮನೆಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಚಿರತೆ ದಾಳಿ ನಡೆಸಿ ಹೊತ್ತೊಯ್ಯಲು ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ನಡೆದಿದೆ. 

ಲೇಖನ(7) ಚಿರತೆ ದಾಳಿಗೆ ತುತ್ತಾದ ಮಗು. ರಾಕೇಶ್, ಹರ್ಷಿತಾ ದಂಪತಿಯ ಮಗುವಾಗಿರುವ ಲೇಖನ. ಮನೆ ಮುಂದೆ ಆಟವಾಡುತ್ತಿದ್ದಾಗ ಏಕಾಏಕಿ ದಾಳಿ ನಡೆಸಿದ ಚಿರತೆ. ಚಿರತೆ ದಾಳಿ ನಡೆಸುತ್ತಿದ್ದಂತೆ ಕಿರುಚಿಕೊಂಡ ಮಗು. ಮಗು ಮೇಲೆ ದಾಳಿ ನಡೆಸುತ್ತಿದ್ದಂತೆ ಜೋರಾಗಿ ಕೂಗಿಕೊಂಡು ದೊಣ್ಣೆಯಿಂದ ಚಿರತೆಗೆ ಬೆದರಿಸಿದ ರಾಕೇಶ್.

Bengaluru ನಾಲ್ಕು ದಿನ ಆಹಾರವಿಲ್ಲದೇ ಬಳಲಿದ್ದ ಚಿರತೆ ಎದೆಗೆ ಗುಂಡಿಟ್ಟು ಕೊಂದ ಅರಣ್ಯ ಇಲಾಖೆ: ಈ ಸಾವು ನ್ಯಾಯವೇ?

ಎಳೆದೊಯ್ಯಲು ಯತ್ನಿಸಿದ ಚಿರತೆ ಈ ವೇಳೆ ಧೈರ್ಯ ಕಳೆದುಕೊಳ್ಳದೇ ಚಿರತೆ ಮೇಲೆ ದೊಣ್ಣೆಯಿಂದ ದಾಳಿಗೆ ಮುಂದಾದ ತಂದೆ. ಕೂಡಲೇ ಮಗುವನ್ನು ಬಿಟ್ಟು ಓಡಿಹೋದ ಚಿರತೆ. ಸ್ವಲ್ಪ ಧೈರ್ಯಕಳೆದುಕೊಂಡಿದ್ದರೂ ಮಗುವನ್ನು ಎಳೆದೊಯ್ಯುತ್ತಿದ್ದ ಚಿರತೆ. ತಂದೆಯ ಧೈರ್ಯ, ಸಮಯಪ್ರಜ್ಞೆಯಿಂದ ಮಗು ಚಿರತೆ ದಾಳಿಯಿದಾಗಿ ಪ್ರಾಣಾಪಾಯದಿಂದ ಪಾರಾಗಿದೆ. ಬಾಲಕಿಯ ಕಾಲನ್ನು ಪರಚಿರುವ ಚಿರತೆ.  ಬೆಳ್ಳಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

ಬೆಂಗಳೂರು ಸೈಟ್‌ ಮಾಲೀಕರೇ ಎಚ್ಚರ: ಪೊದೆ ಬೆಳೆಸಿಕೊಂಡ್ರೆ ದಂಡ ವಿಧಿಸುತ್ತೆ ಬಿಬಿಎಂಪಿ!.

Follow Us:
Download App:
  • android
  • ios