08:36 AM (IST) May 22

Karnataka News Live 22nd May: ನಿಮ್ಮ ಜಿಲ್ಲೆಯ ಬಸ್ ನಿಲ್ದಾಣದಲ್ಲಿ ಲೈಬ್ರರಿ ಇದೆಯೇ? ಬಳ್ಳಾರಿಯಲ್ಲಿ ನೋಡಿದರೆ ಅಚ್ಚರಿ ಆಗುತ್ತದೆ!

ಬಳ್ಳಾರಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಪ್ರಯಾಣಿಕರು, ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯ ಸ್ಥಾಪಿಸಿದೆ. ಬಸ್‌ಗಾಗಿ ಕಾಯುವ ಸಮಯವನ್ನು ಜ್ಞಾನಾರ್ಜನೆಗೆ ಬಳಸಿಕೊಳ್ಳಲು ಇದು ಸಹಕಾರಿಯಾಗಿದ್ದು, ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರಿಗೆ ವರದಾನವಾಗಿದೆ.

Read Full Story
07:28 AM (IST) May 22

Karnataka News Live 22nd May: ದರ್ಶನ್‌ ಜೊತೆ ಟೀ ಹೀರಿದ್ದ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹಿಂಡಲಗಾ ಜೈಲಿಂದ ಬಿಡುಗಡೆ!

ಸಿಗದನಪಾಳ್ಯ ಮಹೇಶ್ ಕೊಲೆ ಪ್ರಕರಣದ ಆರೋಪಿ, ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ನಟ ದರ್ಶನ್ ಜೊತೆಗಿನ ಫೋಟೋ ವೈರಲ್ ಆದ ಬಳಿಕ ಹಿಂಡಲಗಾ ಜೈಲಿಗೆ ಸ್ಥಳಾಂತರಗೊಂಡಿದ್ದ ಈತನಿಗೆ, ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿದ್ದಾಗಲೇ ಜಾಮೀನು ದೊರೆತು ಬಿಡುಗಡೆ ಮಾಡಲಾಗಿದೆ.

Read Full Story
07:27 AM (IST) May 22

Karnataka News Live 22nd May: 2nd PUC Exam 2 Result : ಶೇ.40.36 ಮಾತ್ರ ಉತ್ತೀರ್ಣ, ನಿಮ್ಮ ಫಲಿತಾಂಶ ಚೆಕ್ ಮಾಡಿ, ಇಲ್ಲಿದೆ ಸಂಪೂರ್ಣ ಅಪ್ಡೇಟ್!

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟಿಸಿದೆ. ಪರೀಕ್ಷೆ ಬರೆದ 1,20,410 ವಿದ್ಯಾರ್ಥಿಗಳಲ್ಲಿ ಶೇ.40.36ರಷ್ಟು ಮಂದಿ ಉತ್ತೀರ್ಣರಾಗಿದ್ದು, ಪರೀಕ್ಷೆ-1 ಮತ್ತು 2ರ ಒಟ್ಟು ಕ್ರೋಢೀಕೃತ ಫಲಿತಾಂಶ ಶೇ.86.72ಕ್ಕೆ ತಲುಪಿದೆ.

Read Full Story
07:27 AM (IST) May 22

Karnataka News Live 22nd May: ಬೆಂಗಳೂರಲ್ಲಿ ಅಂ.ರಾ. ಕ್ರಿಕೆಟ್ ಸ್ಟೇಡಿಯಂಗೆ ಸಿಎಂ ಚಾಲನೆ; ವಿಶ್ವದರ್ಜೆಯ ಕ್ರೀಡಾಂಗಣದ ವಿಶೇಷತೆಗಳೇನು?

ಆನೇಕಲ್‌ನ ಸೂರ್ಯನಗರ 4ನೇ ಹಂತದಲ್ಲಿ ಕರ್ನಾಟಕ ಗೃಹ ಮಂಡಳಿಯು 76,000 ಆಸನ ಸಾಮರ್ಥ್ಯದ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾಮಗಾರಿಗೆ ಚಾಲನೆ ನೀಡಲಿದ್ದು, ಇದು ಪೂರ್ಣಗೊಂಡರೆ ಭಾರತದ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಲಿದೆ.

Read Full Story
07:26 AM (IST) May 22

Karnataka News Live 22nd May: Gruha Lakshmi Scheme: 2 ತಿಂಗಳ ಕಂತು ಬಾಕಿ ಉಳಿಸಿಕೊಂಡ ಸರ್ಕಾರ; ಗೃಹಲಕ್ಷ್ಮಿ ಹಣ ಬಿಡುಗಡೆ ಕೋರಿ ಮಹಿಳೆಯರಿಬ್ಬರಿಂದ ಕೋರ್ಟ್‌ ಮೊರೆ!

ಗೃಹಲಕ್ಷ್ಮೀ ಯೋಜನೆಯ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಿಂಬಾಕಿ ಹಣ ಬಿಡುಗಡೆಗೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

Read Full Story
07:26 AM (IST) May 22

Karnataka News Live 22nd May: SC ST ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: 8ನೇ ಕ್ಲಾಸ್‌ ಅಲ್ಲ, ಈಗ SSLC ವರೆಗೂ ಫ್ರೀ ಎಜುಕೇಶನ್, ಇದು ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತಾ?

ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದೆ. ಈ ವಿದ್ಯಾರ್ಥಿಗಳು ಈವರೆಗೆ 8ನೇ ತರಗತಿವರೆಗೆ ಪಡೆಯುತ್ತಿದ್ದ ಉಚಿತ ಶಿಕ್ಷಣವನ್ನು ಇದೀಗ 10ನೇ ತರಗತಿಯವರೆಗೆ ವಿಸ್ತರಿಸಲಾಗಿದೆ.

Read Full Story
07:26 AM (IST) May 22

Karnataka News Live 22nd May: ರಾಜ್ಯ ಬಿಜೆಪಿಗೆ ಟಾನಿಕ್‌ ನೀಡಲು ದಿಲ್ಲಿ ನಾಯಕರ ಕಸರತ್ತು; ಮಾತುಕತೆ - ಹೇಳಿಕೆಗಷ್ಟೇ ಸೀಮಿತ ಆಗ್ತಿದ್ದೀರಿ, ನಿರ್ಣಾಯಕ ಹೋರಾಟ ಯಾಕಿಲ್ಲ?

ರಾಜ್ಯ ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯ ಮತ್ತು ಸಂಘಟನಾತ್ಮಕ ದೌರ್ಬಲ್ಯದ ಬಗ್ಗೆ ವರಿಷ್ಠರು ಕಳವಳ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರ ಭೇಟಿಗೂ ಮುನ್ನ, ದಿಲ್ಲಿ ನಾಯಕರು ರಾಜ್ಯ ನಾಯಕರೊಂದಿಗೆ ಸಭೆ ನಡೆಸಿ, ಕಾಂಗ್ರೆಸ್ ಸರ್ಕಾರದ ವೈಫಲ್ಯ ಬಳಸಿಕೊಳ್ಳುವಲ್ಲಿನ ವಿಫಲತೆ ಬಗ್ಗೆ ಅಭಿಪ್ರಾಯ ಸಂಗ್ರಹ

Read Full Story
07:25 AM (IST) May 22

Karnataka News Live 22nd May: ನಾನು ಯಾವಾಗ ಸಿಎಂ ಆಗುತ್ತೇನೆ ಗೊತ್ತಾ?: ಡಿ.ಕೆ.ಶಿವಕುಮಾರ್ ಉತ್ತರ ಕೇಳಿ ಎಲ್ಲರೂ ಶಾಕ್!

ಕಾಲ, ಸರಿಯಾದ ಸಮಯ ನಾನು ಯಾವಾಗ ಸಿಎಂ ಆಗಬೇಕು ಎಂಬುದನ್ನು ತೀರ್ಮಾನ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಮಧ್ಯರಂಗ ದೇಗುಲ ಉದ್ಘಾಟನೆ ನಿಮಿತ್ತ ಹೆಲಿಪ್ಯಾಡ್‌ಗೆ..

Read Full Story