10:50 PM (IST) May 25

Karnataka News Live 25 May 2026ಡೀಮ್ಡ್ ಅರಣ್ಯ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಬದ್ಧ - ಸಚಿವ ಈಶ್ವರ್ ಖಂಡ್ರೆ ಭರವಸೆ

ಅರಣ್ಯ ಪ್ರದೇಶವು ಮೀಸಲು ಅರಣ್ಯ, ವನ್ಯಜೀವಿ ಧಾಮಗಳು, ರಾಷ್ಟ್ರೀಯ ಉದ್ಯಾನಗಳು ಮತ್ತು ನದಿ ಮೂಲಗಳ ಮೂಲಕ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

Read Full Story
09:33 PM (IST) May 25

Karnataka News Live 25 May 2026ರಾಜ್ಯ ಕೈಗಾರಿಕಾ ರಂಗದಲ್ಲಿ ಹೊಸ ಕ್ರಾಂತಿ - ‘ಕ್ವಿನ್ ಸಿಟಿ’ಗೆ ಎಂಟ್ರಿ ಕೊಟ್ಟ ಟೊಯೋಟಾದಿಂದ ₹1,200 ಕೋಟಿ ಬೂಸ್ಟರ್ ಡೋಸ್

ಟೊಯೋಟಾ ಕಿರ್ಲೋಸ್ಕರ್ ಮೋಟಾರ್, ಕರ್ನಾಟಕ ಸರ್ಕಾರದ 'ಕ್ವಿನ್ ಸಿಟಿ' ಯೋಜನೆಯಲ್ಲಿ ₹1,200 ಕೋಟಿ ಹೂಡಿಕೆ ಮಾಡಿ 'ಬಿಜ್‌ಇಂಟೆಲ್ ಹಬ್' ಸ್ಥಾಪಿಸಲಿದೆ. ಈ ಒಪ್ಪಂದದ ಅಡಿಯಲ್ಲಿ, ಮುಂದಿನ ಐದು ವರ್ಷಗಳಲ್ಲಿ ಸುಮಾರು 200 ಉದ್ಯೋಗಗಳು ಸೃಷ್ಟಿಯಾಗಲಿದ್ದು, ಯೋಜನೆಗೆ 300 ಎಕರೆ ಜಮೀನು ಹಂಚಿಕೆ ಮಾಡಲಾಗಿದೆ.
Read Full Story
08:39 PM (IST) May 25

Karnataka News Live 25 May 2026ಅಯ್ಯೋ ದುರ್ವಿಧಿಯೇ.. ಬೇಸಿಗೆ ರಜೆಗೆ ಬಂದಿದ್ದ ಇಬ್ಬರು ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಸಾವು!

ಬೇಸಿಗೆ ರಜೆಗೆಂದು ತಾತನ ಮನೆಗೆ ಬಂದಿದ್ದ ಇಬ್ಬರು ಪುಟ್ಟ ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಜಿಲ್ಲೆಯ ಮಾಲೂರು ತಾಲೂಕಿನ ಕೊತ್ತೂರು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.

Read Full Story
08:20 PM (IST) May 25

Karnataka News Live 25 May 2026Premanand Maharaj - ನಾನಿರಲಿ, ಇಲ್ಲದಿರಲಿ... ಅಂತ ಪ್ರೇಮಾನಂದ ಮಹಾರಾಜ್ ಹೇಳಿದ್ದೇಕೆ? ಭಾವುಕ ಸಂದೇಶ ವೈರಲ್

ವೃಂದಾವನದ ಪ್ರಸಿದ್ಧ ಸಂತ ಪ್ರೇಮಾನಂದ ಮಹಾರಾಜ್ ಅವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದರಲ್ಲಿ ಅವರು ತಮ್ಮ ಭಕ್ತರಿಗೆ ಭಾವುಕ ಮನವಿಯೊಂದನ್ನು ಮಾಡಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ.

Read Full Story
08:11 PM (IST) May 25

Karnataka News Live 25 May 2026ಗಂಗೂಬಾಯಿ ಹಾನಗಲ್‌ ವಿಶ್ವವಿದ್ಯಾಲಯ ಸಂಗೀತ-ನೃತ್ಯ ಪರೀಕ್ಷೆ, ಕರಾವಳಿಯಲ್ಲಿ ದಾಖಲೆ ಮಂದಿ ಹಾಜರ್!

ಡಾ. ಗಂಗೂಬಾಯಿ ಹಾನಗಲ್‌ ವಿಶ್ವವಿದ್ಯಾಲಯವು ಕರಾವಳಿ ಜಿಲ್ಲೆಗಳಲ್ಲಿ ನಡೆಸಿದ ಸಂಗೀತ ಮತ್ತು ನೃತ್ಯ ಪರೀಕ್ಷೆಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ಈ ಬಾರಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ ಒಟ್ಟು 3,398 ವಿದ್ಯಾರ್ಥಿಗಳು ಹಾಜರಾಗಿದ್ದು, ಇದು ಕಳೆದ ಬಾರಿಗಿಂತ ದ್ವಿಗುಣವಾಗಿದೆ.
Read Full Story
08:04 PM (IST) May 25

Karnataka News Live 25 May 2026Shocking- Bigg Boss - ಅಯ್ಯೋ, ಬಿಗ್ ಬಾಸ್ ಸ್ಪರ್ಧಿ ಕಾವ್ಯಾ ಶೈವಗೆ ವೇದಿಕೆ ಮೇಲೆಯೇ ಭಾರೀ ಅವಮಾನ; ಅದ್ಯಾಕೆ ಹಾಗೆಲ್ಲಾ ಮಾಡಿದ್ದು?

ಒಬ್ಬ ಸೆಲೆಬ್ರಿಟಿ, ಅದೂ ಒಬ್ಬ ಹೆಣ್ಣುಮಗಳು ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲದೆ ಆ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದು ನೋಡಿ ಅಲ್ಲಿದ್ದವರು ಬೆಚ್ಚಿಬಿದ್ದರು. ಸಾವಿರಾರು ಜನರ ಮುಂದೆ ಈ ರೀತಿ ಮಾಡಿದ್ದಕ್ಕೆ ಕಾವ್ಯಾ ಕಣ್ಣೀರು ಹಾಕಿದರು..!

Read Full Story
07:53 PM (IST) May 25

Karnataka News Live 25 May 2026ಈ ಜಿಲ್ಲೆಯಲ್ಲಿ ಈ ವರ್ಷ 80ಕ್ಕೂ ಅಧಿಕ ಸರ್ಕಾರಿ ಶಾಲೆ ಬಂದ್‌? ಕಾರಣವೇನು?

ಜಿಲ್ಲೆಯಲ್ಲಿ ಎಷ್ಟು ಶಾಲೆಗಳನ್ನು ಕೆಪಿಎಸ್‌ ಶಾಲೆಗಳಾಗಿ ಪರಿವರ್ತನೆ ಮಾಡಬಹುದು. ಸಮೀಪದ ಎಷ್ಟು ಶಾಲೆಗಳನ್ನು ಕೆಪಿಎಸ್‌ ಶಾಲೆಗಳಿಗೆ ವಿಲೀನಗೊಳಿಸಬಹುದು ಎಂಬ ಬಗ್ಗೆ ಈಗಾಗಲೇ ನೀಲ ನಕ್ಷೆ ಸಿದ್ಧಪಡಿಸಿ ಕೊಳ್ಳಲಾಗಿದೆ.

Read Full Story
07:33 PM (IST) May 25

Karnataka News Live 25 May 2026ಕೆಆರ್‌ಎಸ್ ಟ್ರಯಲ್ ಬ್ಲಾಸ್ಟ್ ನಡೆಯದಿದ್ದರೂ 1.11 ಕೋಟಿ ರೂ. ಬಿಲ್, ಹಗರಣ ನಡೆದ ಬಗ್ಗೆ ದೊಡ್ಡ ಅನುಮಾನ!

ವರದಿ:ಮಂಡ್ಯ ಮಂಜುನಾಥ

ಕೃಷ್ಣರಾಜಸಾಗರ ಜಲಾಶಯದ ಬಳಿ ಪರೀಕ್ಷಾರ್ಥ ಸ್ಫೋಟ ನಡೆಸದೆಯೇ,ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು 1.11ಕೋಟಿ ರೂ ಖರ್ಚು ಮಾಡಿರುವುದು ಆಡಿಟ್ ವರದಿಯಿಂದ ಬಹಿರಂಗವಾಗಿದೆ. ಮೂರು ಬಾರಿ ಸ್ಫೋಟಕ್ಕೆ ಯತ್ನ ವಿಫಲವಾದರೂ ಇಷ್ಟು ದೊಡ್ಡ ಮೊತ್ತದ ಖರ್ಚು,ತೆರಿಗೆ ವಂಚನೆ ಅನುಮಾನಗಳಿಗೆ ಕಾರಣ.

Read Full Story
06:50 PM (IST) May 25

Karnataka News Live 25 May 2026ಕಿಚ್ಚ ಸುದೀಪ್ ಅವರನ್ನು ಬೆಳೆಸಿದಂತೆ ನನ್ನನ್ನೂ ಬೆಳೆಸಿ - ಸಂಚಿತ್ ಸಂಜೀವ್ ಮನವಿ ಮಾಡಿದ್ದೇನು?

ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅಭಿನಯದ ಕನ್ನಡ ಚಲನಚಿತ್ರ "ಮ್ಯಾಂಗೋ ಪಚ್ಚ" ಇದೇ ಜೂನ್ 5ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈ ಹಿನ್ನೆಲೆ ಚಿತ್ರದ ನಾಯಕ ಸಂಚಿತ್ ಸಂಜೀವ್.. 

Read Full Story
06:34 PM (IST) May 25

Karnataka News Live 25 May 2026ಮಾಸಾಶನ ನೀಡಲೂ ಸರ್ಕಾರದ ಬಳಿ ಹಣ ಇಲ್ವಾ? - ಸಂಕಷ್ಟದಲ್ಲಿ ವೃದ್ಧರು, ಅಂಗವಿಕಲರ ಜೀವನ!

ಕಳೆದ ಎರಡು ಮೂರು ತಿಂಗಳಿಂದ ವೃದ್ದರು, ವಿಧವೆಯರು ಹಾಗೂ ಅಂಗವಿಕಲರಿಗೆ ಸರ್ಕಾರದಿಂದ ಮಾಸಾಶನ ಬಿಡುಗಡೆ ಆಗಿಲ್ಲ. ಈ ಹಿನ್ನಲೆ ಮಾಸಾಶನಕ್ಕಾಗಿ ದಿನನಿತ್ಯ ಕೂಡ ಪೋಸ್ಟ್ ಆಫೀಸ್, ಬ್ಯಾಂಕ್ ಗಳಿಗೆ ವೃದ್ದರು ಅಲೆದಾಡುವಂತಾಗಿದೆ.

Read Full Story
06:10 PM (IST) May 25

Karnataka News Live 25 May 2026ಮೈಸೂರಿನಿಂದ ಐತಿಹಾಸಿಕ ರೈಲು ಪಯಣ - ಒಡಿಶಾಗೆ ದೇಶೀಯ ಖನಿಜ ರವಾನೆಯ ಮೊದಲ ರೈಲು ಯಶಸ್ವಿ ಪ್ರಾಯೋಗಿಕ ಚಾಲನೆ!

ಮೈಸೂರಿನ ಕಡಕೋಳ ಕೈಗಾರಿಕಾ ವಲಯದಿಂದ ಒಡಿಶಾಗೆ ಮೊದಲ ಬಾರಿಗೆ ಸರಕು ರೈಲಿನ ಮೂಲಕ 2,200 ಮೆಟ್ರಿಕ್ ಟನ್ 'ಡ್ಯೂನೈಟ್' ಖನಿಜವನ್ನು ಯಶಸ್ವಿಯಾಗಿ ಸಾಗಿಸಲಾಗಿದೆ. ಈ 1,750 ಕಿ.ಮೀ. ದೂರದ ಪ್ರಾಯೋಗಿಕ ಸಾಗಣೆಯು ಮೈಸೂರಿನ ಗಣಿಗಾರಿಕೆ ಮತ್ತು ಲಾಜಿಸ್ಟಿಕ್ಸ್ ವಲಯದಲ್ಲಿ ಹೊಸ ಮೈಲಿಗಲ್ಲಾಗಿದ್ದು, ಪರಿಸರಸ್ನೇಹಿ ಸಾರಿಗೆಗೆ ದಾರಿ ಮಾಡಿಕೊಟ್ಟಿದೆ.
Read Full Story
06:03 PM (IST) May 25

Karnataka News Live 25 May 2026BREAKING - ಬೆಂಗಳೂರು ಸೇರಿದಂತೆ ರಾಜ್ಯದ 6 ಜಿಲ್ಲೆಗಳಿಗೆ ಮುಂದಿನ 3 ಗಂಟೆ 'ಯಲ್ಲೋ ಅಲರ್ಟ್'; ಹಾಸನಕ್ಕೆ ಆರೆಂಜ್ ಅಲರ್ಟ್

ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮಹತ್ವದ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಲಿದ್ದು, ಹಾಸನಕ್ಕೆ 'ಆರೆಂಜ್ ಅಲರ್ಟ್' ಮತ್ತು ಇತರೆ 6 ಜಿಲ್ಲೆಗಳಿಗೆ 'ಯಲ್ಲೋ ಅಲರ್ಟ್' ಘೋಷಿಸಲಾಗಿದೆ.
Read Full Story
05:27 PM (IST) May 25

Karnataka News Live 25 May 2026ಭಟ್ಕಳದಲ್ಲಿ 11 ಮಂದಿಯ ಸಾವಿಗೆ ಕಾರಣವಾದ ಕಳಿನಡ ಹೆಕ್ಕುವ ಹವ್ಯಾಸ, ಇದರ ಖಾದ್ಯ ಸಖತ್‌ ಫೇಮಸ್‌!

ಭಟ್ಕಳದ ವೆಂಕಟಾಪುರ ನದಿಯಲ್ಲಿ 'ಕಳಿನಡ' ಚಿಪ್ಪು ಸಂಗ್ರಹಿಸಲು ಹೋದ ಒಂದೇ ಗ್ರಾಮದ 11 ಮಂದಿ, ನೀರಿನ ಮಟ್ಟ ದಿಢೀರ್ ಏರಿಕೆಯಾದ ಕಾರಣ ಮುಳುಗಿ ಸಾವನ್ನಪ್ಪಿದ್ದಾರೆ. ನಾಲಿಗೆಯ ರುಚಿಯ ಹವ್ಯಾಸವೇ ಈ ಮಹಾ ದುರಂತಕ್ಕೆ ಕಾರಣವಾಗಿ, ಇಡೀ ಜಿಲ್ಲೆಯನ್ನೇ ಶೋಕದಲ್ಲಿ ಮುಳುಗಿಸಿದೆ.
Read Full Story
05:24 PM (IST) May 25

Karnataka News Live 25 May 2026ರಕ್ಷಿಸಬೇಕಾದ ಎಪಿಎಂಸಿಗಳಲ್ಲಿಯೇ ರೈತರಿಗೆ ಅನ್ಯಾಯ - ಸಿ.ಟಿ.ರವಿ ಎಚ್ಚರಿಕೆ

ರೈತರನ್ನು ರಕ್ಷಿಸಬೇಕಾದ ಎಪಿಎಂಸಿಯಲ್ಲೇ ರೈತರಿಗೆ ಅನ್ಯಾಯವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ನಿರ್ದೇಶಿಸಬೇಕು ಇಲ್ಲವಾದರೆ, ಹೋರಾಟ ಅನಿವಾರ್ಯವಾಗಲಿದೆ ಎಂದು ಸಿ.ಟಿ.ರವಿ ಎಚ್ಚರಿಸಿದ್ದಾರೆ.

Read Full Story
05:14 PM (IST) May 25

Karnataka News Live 25 May 2026ಗದಗದಲ್ಲಿ ಇಂಧನಕ್ಕೆ ಹಾಹಾಕಾರ, ಬಂಕ್‌ಗಳೇ ಖಾಲಿ, ರೈತರು ಮತ್ತು ಸವಾರರ ಕಿಲೋಮೀಟರ್ ಉದ್ದದ ಕ್ಯೂ!

ಗದಗ ಜಿಲ್ಲೆಯಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಅಭಾವ ತೀವ್ರಗೊಂಡಿದ್ದು, ಪ್ರಮುಖ ಬಂಕ್‌ಗಳು 'ನೋ ಸ್ಟಾಕ್' ಬೋರ್ಡ್ ಹಾಕಿವೆ. ಮುಂಗಾರು ಹಂಗಾಮಿನ ಹೊತ್ತಲ್ಲಿ ಡೀಸೆಲ್‌ಗಾಗಿ ರೈತರು ಪರದಾಡುತ್ತಿದ್ದು, ಹುಬ್ಬಳ್ಳಿ ಡಿಪೋದಿಂದ ಸರಬರಾಜು ಸ್ಥಗಿತಗೊಂಡಿರುವುದೇ ಈ ಬಿಕ್ಕಟ್ಟಿಗೆ ಕಾರಣ ಎನ್ನಲಾಗಿದೆ. ಈ ಸಮಸ್ಯೆಯು ನಗರದಿಂದ ಗ್ರಾಮೀಣ ಭಾಗಕ್ಕೂ ವ್ಯಾಪಿಸಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
Read Full Story
05:08 PM (IST) May 25

Karnataka News Live 25 May 2026ವೈಭವ್ ಸೂರ್ಯವಂಶಿ ಗುರಿ ಕೇಳಿ ಬೆಚ್ಚಿಬಿದ್ದ ಪೀಟರ್ಸನ್; ಒಂದು ಚಾನ್ಸ್ ಸಿಕ್ಕರೆ ಟಿ-20ಯಲ್ಲಿ 200 ರನ್ ಹೊಡಿತೇನೆ!

ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ, ಟಿ20 ಪಂದ್ಯವೊಂದರಲ್ಲಿ 200 ರನ್ ಗಳಿಸುವ ಮೂಲಕ ಕ್ರಿಸ್ ಗೇಲ್ ಅವರ 175 ರನ್‌ಗಳ ದಾಖಲೆಯನ್ನು ಮುರಿಯುವ ಮಹತ್ವಾಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಕೆವಿನ್ ಪೀಟರ್ಸನ್ ಅವರೊಂದಿಗಿನ ಸಂದರ್ಶನದಲ್ಲಿ ತಮ್ಮ ಮತ್ತಷ್ಟು ಗುರಿ ರಿವೀಲ್ ಮಾಡಿದ್ದಾರೆ.

Read Full Story
05:05 PM (IST) May 25

Karnataka News Live 25 May 2026ಭಟ್ಕಳದಲ್ಲಿ ಮತ್ತೆ ಉದ್ವಿಗ್ನತೆ - ಮೂರಿನ ಕಟ್ಟೆ ವಿವಾದ ತೀವ್ರ, ಮೂರು ದಿನ ನಿಷೇಧಾಜ್ಞೆ, ಮುಂದೇನು?

ಜಿಲ್ಲೆಯ ಭಟ್ಕಳ ಮತ್ತೆ ಹಿಂದು ಮುಸ್ಲಿಂ‌ ಗದ್ದಲ ಗಲಾಟೆಗೆ ಸಾಕ್ಷಿ ಆಗಿದೆ. ಹಿಂದು ಧಾರ್ಮಿಕತೆಯ ಸಂಕೇತವಾದ ಮೂರಿನ ಕಟ್ಟೆ ಮರು ನಿರ್ಮಾಣ ಹಾಗೂ ಮುಸ್ಲಿಮರಿಂದ ಮೂರಿನ ಕಟ್ಟೆ ಧ್ವಂಸ ವಿಚಾರ ಈಗ ತಾರಕಕ್ಕೇರಿದೆ.

Read Full Story
04:42 PM (IST) May 25

Karnataka News Live 25 May 2026ಬೆಂಗಳೂರಿಗರಲ್ಲಿ ಹೆಚ್ಚುತ್ತಿದೆ ಪ್ರೋಟೀನ್ ಕ್ರೇಜ್‌! ಕೇವಲ 'ಪ್ರೋಟೀನ್ ಬಾರ್'ಗಾಗಿಯೇ ₹2 ಲಕ್ಷ ಖರ್ಚು ಮಾಡಿದ ಗ್ರಾಹಕ!

ಇನ್‌ಸ್ಟಾಮಾರ್ಟ್‌ ವರದಿ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಪ್ರೋಟೀನ್ ಉತ್ಪನ್ನಗಳ ಬೇಡಿಕೆ ಶೇ. 150ರಷ್ಟು ಹೆಚ್ಚಾಗಿದೆ. ಬೆಂಗಳೂರು ಮುಂಚೂಣಿಯಲ್ಲಿದ್ದರೂ, ಟಯರ್-2 ನಗರಗಳಲ್ಲಿ ಈ ಬೆಳವಣಿಗೆ ಇನ್ನೂ ವೇಗವಾಗಿದ್ದು, ಗ್ರಾಹಕರು ಲಕ್ಷಾಂತರ ರೂಪಾಯಿಗಳನ್ನು ಪ್ರೋಟೀನ್‌ಗಾಗಿ ಖರ್ಚು ಮಾಡುತ್ತಿದ್ದಾರೆ.
Read Full Story
04:36 PM (IST) May 25

Karnataka News Live 25 May 2026ಬೆಂಗಳೂರಿಗೆ ಆಲಿಕಲ್ಲು ಸಹಿತ ಮಳೆ ಮುನ್ಸೂಚನೆ; ಸಂಜೆ ವೇಳೆ ಬೇಗನೆ ಮನೆ ಸೇರಿಕೊಳ್ಳಿ ಎಂದ ಹವಾಮಾನ ಇಲಾಖೆ!

ನೈಋತ್ಯ ಮುಂಗಾರು ಕರ್ನಾಟಕದತ್ತ ವೇಗವಾಗಿ ಮುನ್ನುಗ್ಗುತ್ತಿದ್ದು, ರಾಜ್ಯಾದ್ಯಂತ ಮುಂದಿನ ವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಆಲಿಕಲ್ಲು ಮಳೆಯ ಎಚ್ಚರಿಕೆ ನೀಡಲಾಗಿದ್ದು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮೇ 27ರಂದು ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Read Full Story
04:20 PM (IST) May 25

Karnataka News Live 25 May 202660 ವರ್ಷದ ಇತಿಹಾಸ.. ಓಬೇರಾಯನ ಕಾಲದ ಪ್ರವಾಸಿಮಂದಿರ ಅಧೋಗತಿ - ಸಾರ್ವಜನಿಕರ ಆಕ್ರೋಶ

ನಗರದ ಮಧ್ಯಭಾಗದಲ್ಲಿರುವ ಓಬೇರಾಯನ ಕಾಲದ ಹಳೆ ಪ್ರವಾಸಿ ಮಂದಿರ ಅಧೋಗತಿಯತ್ತ ಸಾಗಿದೆ. ಸುಮಾರು 60 ವರ್ಷಗಳ ಹಳೆಯ ಪ್ರವಾಸಿ ಮಂದಿರಕ್ಕೆ ಮುಕ್ತಿ ಇಲ್ಲದಂತಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ..

Read Full Story