ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಎಂ. ಪಾಟೀಲ ಅವರು ಶಾಲಾ ದಾಖಲಾತಿ ಹೆಚ್ಚಿಸಲು ವಿನೂತನ ಯೋಜನೆ ಆರಂಭಿಸಿದ್ದಾರೆ. ಒಂದನೇ ತರಗತಿಗೆ ದಾಖಲಾಗುವ ಪ್ರತಿ ಮಗುವಿನ ಹೆಸರಿನಲ್ಲಿ ₹1000 ಫಿಕ್ಸೆಡ್ ಡೆಪಾಸಿಟ್ ಇಡುವ ಮೂಲಕ ಅವರು ಮಾದರಿಯಾಗಿದ್ದಾರೆ.
- Home
- News
- State
- Karnataka News Live: ಸರ್ಕಾರಿ ಶಾಲೆಗೆ ಮಗು ದಾಖಲಿಸಿದರೆ ₹1000 ಎಫ್ಡಿ; ಮುಖ್ಯೋಪಾಧ್ಯಾಯರಿಂದ ಹೊಸ ಯೋಜನೆ
Karnataka News Live: ಸರ್ಕಾರಿ ಶಾಲೆಗೆ ಮಗು ದಾಖಲಿಸಿದರೆ ₹1000 ಎಫ್ಡಿ; ಮುಖ್ಯೋಪಾಧ್ಯಾಯರಿಂದ ಹೊಸ ಯೋಜನೆ

ಬಾಗಲಕೋಟೆ: ಮುಂಗಾರು ಮಳೆ ಆರಂಭವಾಗುವ ಮುನ್ಸೂಚನೆಗಳನ್ನು ಕಂಡ ಈ ಭಾಗದ ರೈತಾಪಿ ಜನತೆ ತಮ್ಮ ಸಂಭಾವ್ಯ ಬೆಳೆಗಳಿಗೆ ತಕ್ಕಂತೆ ಭೂಮಿಯನ್ನು ಹದ ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.

ಕಳೆದೆರಡು 3 ದಿನಗಳಿಂದ ರಬಕವಿ ಬನಹಟ್ಟಿ ತಾಲೂಕು ವ್ಯಾಪ್ತಿಯಲ್ಲಿ ಸಂಜೆ ಹಾಗೂ ರಾತ್ರಿ ಸಮಯ ಅಲ್ಪ ಪ್ರಮಾಣದಲ್ಲಿ ಆಗಾಗ ಮಳೆಯ ಸಿಂಚನಗಳು ಬೀಳುತ್ತಿವೆ. ಆದ್ದರಿಂದ ಈ ಭಾಗದ ರೈತರು ಮುಂಗಾರು ಬೆಳೆಗಳಾದ ಶೇಂಗಾ, ಮೆಕ್ಕೆಜೋಳ, ಅರಿಶಿಣ ಸೇರಿದಂತೆ ಇನ್ನಿತರ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಭೂಮಿಯನ್ನು ಹದ ಮಾಡುತ್ತಿದ್ದಾರೆ.
ತಾಲೂಕು ವ್ಯಾಪ್ತಿ ಸಂಪೂರ್ಣ ನೀರಾವರಿ ಜಮೀನುಗಳೇ ಹೆಚ್ಚಾಗಿರುರುವುದರಿಂದ ಈ ಭಾಗದಲ್ಲಿ ಪ್ರಮುಖ ಬೆಳೆಯಾಗಿ ಕಬ್ಬು ಬೆಳೆಯುತ್ತಿದ್ದು, ವರ್ಷವಿಡಿ ಭೂಮಿಗೆ ಬಿಸಿಲಿನ ಸ್ಪರ್ಶವಾಗುವುದಿಲ್ಲ ಮತ್ತು ವಿಪರೀತ ರಾಸಾಯನಿಕೆ ಗೊಬ್ಬರಗಳನ್ನು ಬಳಸುವುದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿದೆ. ಆದ್ದರಿಂದ ಕೆಲವೇ ಕೆಲವು ರೈತ ಬಾಂಧವರು ಮಾತ್ರ ಪ್ರತಿ ವರ್ಷ ಅಲ್ಪಪ್ರಮಾಣದಲ್ಲಿಯಾದರೂ ತಿಪ್ಪೆಗೊಬ್ಬರವನ್ನು ಭೂಮಿಗೆ ಬಳಸಿ ಹೆಚ್ಚಿನ ಪ್ರಮಾಣದಲ್ಲಿ ಇಳುವರಿ ಪಡೆಯುತ್ತಿದ್ದಾರೆ
Karnataka News Live 21 May 2026ಸರ್ಕಾರಿ ಶಾಲೆಗೆ ಮಗು ದಾಖಲಿಸಿದರೆ ₹1000 ಎಫ್ಡಿ; ಮುಖ್ಯೋಪಾಧ್ಯಾಯರಿಂದ ಹೊಸ ಯೋಜನೆ
Karnataka News Live 21 May 2026ಮುಸ್ಲಿಂ ಪ್ರೇಮಿಯೊಂದಿಗೆ ಇರುವೆ ಎಂದ ಸಿಖ್ ಮಗಳು, ಮಾನಸಿಕ ಆರೋಗ್ಯ ಪರೀಕ್ಷೆಗೆ ತಾಯಿ ಕೋರಿದ್ದ ಅರ್ಜಿ ವಜಾ
ಮುಸ್ಲಿಂ ಪ್ರೇಮಿಯೊಂದಿಗೆ ವಾಸಿಸಲು ಬಯಸಿದ 21 ವರ್ಷದ ಸಿಖ್ ಯುವತಿಯ ಮಾನಸಿಕ ಆರೋಗ್ಯ ಮೌಲ್ಯಮಾಪನಕ್ಕೆ ಕೋರಿ ತಾಯಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಏನಿದು ಪ್ರಕರಣ, ಹೈಕೋರ್ಟ್ ಹೇಳಿದ್ದೇನು ಪೂರ್ತಿ ಓದಿ.
Karnataka News Live 21 May 2026ಗದಗನಲ್ಲಿ ನಡೆಯುವ ಹಿಂದೂ ಸಮಾವೇಶಕ್ಕೆ ಸಮಾನ ಮನಸ್ಕರು, ಬಸವಾದಿ ಶರಣರಿಂದ ತೀವ್ರ ವಿರೋದ
ಗದಗಿನಲ್ಲಿ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಹಿಂದೂ ಸಮಾವೇಶಕ್ಕೆ ಸಮಾನ ಮನಸ್ಕರು ಮತ್ತು ಬಸವಾದಿ ಶರಣರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಶರಣ ಪರಂಪರೆಯನ್ನು ನಾಶಮಾಡುವ ಮತ್ತು ಕೋಮುದ್ವೇಷ ಬಿತ್ತುವ RSS ಪ್ರೇರಿತ ಹುನ್ನಾರ ಎಂದು ಅವರು ಆರೋಪಿಸಿದ್ದಾರೆ.
Karnataka News Live 21 May 2026Vijayapur - ಅವೇಶದಿಂದ ತಂದೆಯ ಪೆಟ್ರೋಲ್ ಬಂಕ್ ನಾಶಗೊಳಿಸಿದ ಮಗ; ಎಲ್ಲಾ ಪೀಸ್ ಪೀಸ್
Karnataka News Live 21 May 2026ಶಾಲಾ ಮಕ್ಕಳಿಗೆ ಗುಡ್ನ್ಯೂಸ್ - ಶಾಲಾರಂಭಕ್ಕೂ ಮುನ್ನವೇ ಕೈ ಸೇರಲಿವೆ ಪಠ್ಯಪುಸ್ತಕಗಳು!
2026-27ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕಗಳ ಮುದ್ರಣ ಕಾರ್ಯವು ಅಂತಿಮ ಹಂತದಲ್ಲಿದ್ದು, ಶೇ. 85ಕ್ಕೂ ಹೆಚ್ಚು ಮುದ್ರಣ ಪೂರ್ಣಗೊಂಡಿದೆ. ಈಗಾಗಲೇ ಶಾಲೆಗಳಿಗೆ ಪುಸ್ತಕಗಳ ಸರಬರಾಜು ಪ್ರಕ್ರಿಯೆ ಆರಂಭವಾಗಿದ್ದು, ಈ ಬಾರಿ ಶಾಲಾರಂಭದ ವೇಳೆಗೆ ಮಕ್ಕಳಿಗೆ ಪುಸ್ತಕಗಳು ದೊರೆಯುವ ಭರವಸೆ ಮೂಡಿದೆ.
Karnataka News Live 21 May 2026ಹಂಪಿಯ ಉತ್ಖನನದಲ್ಲಿ ಭಗ್ನಗೊಂಡ 2 ಆಳ್ವರ್ ವಿಗ್ರಹ, ಮೂರು ಪ್ರತಿಷ್ಠಾನ ಪೀಠ ಪತ್ತೆ
ಹಂಪಿಯ ಹಜಾರರಾಮ ದೇಗುಲದ ಬಳಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ನಡೆಸಿದ ಉತ್ಖನನದಲ್ಲಿ, ಭಗ್ನಗೊಂಡ ಪುರಾತನ ಆಳ್ವರ್ ವಿಗ್ರಹಗಳು ಮತ್ತು ಪೀಠಗಳು ಪತ್ತೆಯಾಗಿವೆ. 1565ರ ತಾಳಿಕೋಟೆ ಕದನದ ನಂತರ ನಡೆದ ದಾಳಿಗೆ ಸಾಕ್ಷಿಯಾಗಿವೆ.