- Home
- News
- State
- Karnataka News Live: ಮೈಸೂರಿನಿಂದ ವಿಶಾಖಪಟ್ಟಣಂಗೆ ನೇರ ರೈಲು ಸೇವೆ ಆರಂಭಕ್ಕೆ ಮನವಿ; ರೂಟ್ ಈ ರೀತಿಯಾಗಿರಲಿದೆ
LIVE NOW
Karnataka News Live: ಮೈಸೂರಿನಿಂದ ವಿಶಾಖಪಟ್ಟಣಂಗೆ ನೇರ ರೈಲು ಸೇವೆ ಆರಂಭಕ್ಕೆ ಮನವಿ; ರೂಟ್ ಈ ರೀತಿಯಾಗಿರಲಿದೆ

ಸಾರಾಂಶ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹಿರಿಯ ನಾಯಕರಾದ ಸತೀಶ್ ಜಾರಕಿಹೊಳಿ ಹಾಗೂ ಬಿ.ಕೆ. ಹರಿಪ್ರಸಾದ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎನ್ನಲಾಗಿದೆ. ಮೇಲ್ವರ್ಗಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಒಬಿಸಿ ವರ್ಗಕ್ಕೆ ನೀಡಲು ಕಾಂಗ್ರೆಸ್ ಬಯಸಿದೆ. ಹೀಗಾಗಿ ಆ ಹುದ್ದೆಯನ್ನು ಪಡೆಯಲು ಸತೀಶ್ ಜಾರಕಿಹೊಳಿ ಅವರು ತೀವ್ರ ಪೈಪೋಟಿ ನಡೆಸಿದ್ದಾರೆ. ಆದರೆ ಪಕ್ಷಕ್ಕೆ ದೀರ್ಘಕಾಲದಿಂದ ನಿಷ್ಠೆಯಿಂದ ಇರುವ ನಾಯಕನಿಗೆ ಪಟ್ಟ ಕಟ್ಟುವ ಇರಾದೆ ಕಾಂಗ್ರೆಸ್ ವರಿಷ್ಠರಲ್ಲಿದೆ. ಆದ ಕಾರಣ ಹರಿಪ್ರಸಾದ್ ಹೆಸರನ್ನು ಕೆಲ ವರಿಷ್ಠ ನಾಯಕರು ಸೂಚಿಸಿದ್ದಾರೆ. ಹೀಗಾಗಿ ಜಾರಕಿಹೊಳಿ ಹಾಗೂ ಹರಿಪ್ರಸಾದ್ ಪೈಕಿ ಇಬ್ಬರಲ್ಲಿ ಒಬ್ಬರಿಗೆ ಹುದ್ದೆ ಒಲಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
07:55 AM (IST) Jun 02
Karnataka News Live 2 June 2026ಮೈಸೂರಿನಿಂದ ವಿಶಾಖಪಟ್ಟಣಂಗೆ ನೇರ ರೈಲು ಸೇವೆ ಆರಂಭಕ್ಕೆ ಮನವಿ; ರೂಟ್ ಈ ರೀತಿಯಾಗಿರಲಿದೆ
ಮೈಸೂರಿನಿಂದ ವಿಶಾಖಪಟ್ಟಣಂಗೆ ನೇರ ರೈಲು ಸೇವೆ ಆರಂಭಿಸುವಂತೆ ದಾವಣಗೆರೆ ರೈಲ್ವೆ ಪ್ರಯಾಣಿಕರ ಸಂಘವು ನೈಋತ್ಯ ರೈಲ್ವೆಗೆ ಮನವಿ ಮಾಡಿದೆ. ಈ ಹೊಸ ಮಾರ್ಗವು ಮೈಸೂರು, ದಾವಣಗೆರೆ, ಹೊಸಪೇಟೆ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಹಂಪಿ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.
Read Full Story 07:40 AM (IST) Jun 02
Karnataka News Live 2 June 2026ಬೆಂಗಳೂರಿನಲ್ಲಿದ್ದ ಬಾಂಗ್ಲಾ ಪ್ರಜೆಗಳಿಗೆ ಆಧಾರ್ ಕಾರ್ಡ್ ಮಾಡಿಕೊಟ್ಟವಗೆ ಕೋರ್ಟ್ ಚಾಟಿ
ಬಾಂಗ್ಲಾ ಪ್ರಜೆಗಳಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಆರೋಪಿಯೊಬ್ಬನ ವಿರುದ್ಧದ ಫೋರ್ಜರಿ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಇದು ದೇಶದ ಹಿತಾಸಕ್ತಿಗೆ ವಿರುದ್ಧವಾದ ಕೆಲಸವಾಗಿದ್ದು, ದೇಶದ ವ್ಯವಸ್ಥೆಯನ್ನೇ ನಾಶಮಾಡುತ್ತಿದೆ ಎಂದು ನ್ಯಾಯಾಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
Read Full Story 07:30 AM (IST) Jun 02
Karnataka News Live 2 June 2026ಬಿಯರ್ ಬೆಲೆ ಕಡಿಮೆಯಾದ್ರೂ ಗ್ರಾಹಕರಿಗೆ ಯಾಕಿಷ್ಟು ಸಂಕಟ? ಮಾರುಕಟ್ಟೆ ಸಮಸ್ಯೆ ಏನು ?
ರಾಜ್ಯದಲ್ಲಿ ಹೊಸ ಆಲ್ಕೋಹಾಲ್ ಇನ್ ಬೇವರೇಜ್ (ಎಐಬಿ) ಪದ್ಧತಿಯಿಂದ ಬಿಯರ್ ಬೆಲೆ ಗಣನೀಯವಾಗಿ ಇಳಿದಿದೆ. ಆದರೆ, ಕೆಲವು ಅಂಗಡಿಗಳು ಹಳೆಯ ದರದಲ್ಲೇ ಮಾರಾಟ ಮಾಡುತ್ತಿದ್ದು, ಹೆಚ್ಚಿದ ಬೇಡಿಕೆಯಿಂದಾಗಿ ಜನಪ್ರಿಯ ಬ್ರ್ಯಾಂಡ್ಗಳ ಬಿಯರ್ ಸ್ಟಾಕ್ ಕೊರತೆ ಎದುರಾಗಿದೆ.
Read Full Story 07:19 AM (IST) Jun 02
Karnataka News Live 2 June 2026Bengaluru - 7 ತಿಂಗಳಿಂದ ಏಳು ಕೋಟಿ ರೂಪಾಯಿಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲೇ ಕಾವಲು!
ಎಟಿಎಂಗೆ ತುಂಬಬೇಕಿದ್ದ 7.11 ಕೋಟಿ ರು. ದರೋಡೆ ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ 7 ಕೋಟಿ ರು. ಹಣವು ಏಳು ತಿಂಗಳಿಂದ ಸಿದ್ದಾಪುರ ಠಾಣೆಯಲ್ಲೇ ಇದೆ. ಈ ಬೃಹತ್ ಮೊತ್ತದ ಹಣವನ್ನು ಕಾಯುವುದೇ ಪೊಲೀಸರಿಗೆ ಸವಾಲಾಗಿದ್ದು, ಹಣವನ್ನು ಸಿಎಂಎಸ್ ಏಜೆನ್ಸಿಗೆ ಹಿಂದಿರುಗಿಸುವ ಸಂಬಂಧ ಕೋರ್ಟ್ ಪ್ರಕ್ರಿಯೆ ಇನ್ನೂ ಮುಂದುವರಿದಿದೆ.
Read Full Story