09:31 PM (IST) May 13

Karnataka News Live 13 May 2026ಭೂಮಿಯ ಮೇಲಿನ ಮೊದಲ ಗಿಡ ಇದು.. ಇಡೀ ಗ್ರಹವನ್ನೇ ಬದಲಿಸಿದ ಆ ಕಥೆ ಗೊತ್ತಾ?

ಭೂಮಿಯ ಮೇಲಿನ ಮೊದಲ ಸಸ್ಯ ಯಾವುದು ಅಂತ ಒಂದೇ ಮಾತಲ್ಲಿ ಹೇಳೋಕೆ ಆಗಲ್ಲ. ಇದು ಕೋಟ್ಯಂತರ ವರ್ಷಗಳ ವಿಕಾಸದ ಕಥೆ. ಪ್ರಾಚೀನ ಸಮುದ್ರಗಳಲ್ಲಿ ಶುರುವಾಗಿ, ಇಡೀ ಭೂಮಿಯನ್ನೇ ಬದಲಿಸಿದ ಒಂದು ಪುಟ್ಟ ಸಸ್ಯದ ರೋಚಕ ಜರ್ನಿ ಇದು.. ಯಾವುದು, ಏನ್ ಕತೆ ನೋಡಿ.. 

Read Full Story
08:02 PM (IST) May 13

Karnataka News Live 13 May 2026ಸೂರ್ಯನ ನಿಜವಾದ ಬಣ್ಣ ಯಾವುದು? ನಮಗೆ ಯಾಕೆ ಹಳದಿ/ಕೇಸರಿ ಬಣ್ಣದಲ್ಲಿ ಕಾಣ್ತಾನೆ?

ಸೂರ್ಯ ಯಾವ ಬಣ್ಣದಲ್ಲಿ ಇರುತ್ತಾನೆ ಎಂದು ಕೇಳಿದ ತಕ್ಷಣ ನಾವೆಲ್ಲ ಹಳದಿ ಅಥವಾ ಕೇಸರಿ ಬಣ್ಣ ಎನ್ನುತ್ತೇವೆ. ಆದರೆ ಸೂರ್ಯನ ನಿಜವಾದ ಬಣ್ಣ ಬಿಳಿ ಎಂಬುದು ನಿಮಗೆ ಗೊತ್ತೇ? ಬಾಹ್ಯಾಕಾಶದಿಂದ ನೋಡಿದರೆ ಸೂರ್ಯ ಹಾಲು ಬಿಳುಪಿನಂತೆ ಕಾಣುತ್ತಾನೆ. ಹಾಗಾದರೆ ಸೂರ್ಯನ ಬಣ್ಣದ ಹಿಂದಿರುವ ಈ ಮ್ಯಾಜಿಕ್ ಏನು?

Read Full Story
07:38 PM (IST) May 13

Karnataka News Live 13 May 2026ಬೇರೆ ಎಲ್ಲಾನೂ ಬಿಟ್ಟಾಕ್ರೀ.. ಮತ್ತೆ ಹಿಮಯುಗ ಶುರುವಾಗುತ್ತಾ? ವಿಜ್ಞಾನಿಗಳೇ ಶಾಕ್ ಆಗಿದಾರೆ, ಮುಂದೇನು?

ಭೂಮಿಯ ಹವಾಮಾನವನ್ನು ನಿಯಂತ್ರಿಸುವಲ್ಲಿ ಸಮುದ್ರದ ಪಾತ್ರವೇನು? ಸಮುದ್ರದೊಳಗಿನ ಪೋಷಕಾಂಶಗಳ ಒಂದು ಸೈಕಲ್ ಮತ್ತು ಸಮುದ್ರ ತಳದಲ್ಲಿ ಕಾರ್ಬನ್ ಸಂಗ್ರಹವಾಗುವ ಪ್ರಕ್ರಿಯೆಯು, ಹಿಂದೆ ಸಂಭವಿಸಿದ್ದ 'ಹಿಮಯುಗ'ಗಳಿಗೆ ಹೇಗೆ ಕಾರಣವಾಗಿರಬಹುದು? ಹೊಸ ಸತ್ಯ ಇಲ್ಲಿದೆ ನೋಡಿ...

Read Full Story
05:45 PM (IST) May 13

Karnataka News Live 13 May 2026ರೈತರ ಬದುಕು ಹಸನಾಗಿಸಲು ಹೇಮಾವತಿ ನೀರು ಹರಿಸಿಯೇ ತೀರುತ್ತೇವೆ - ಶಾಸಕ ಎಚ್.ಸಿ.ಬಾಲಕೃಷ್ಣ

ರೈತರ ಬದುಕು ಹಸನಾಗಿಸಲು ಹೇಮಾವತಿ ನದಿ ನೀರನ್ನು ಹರಿಸುವ ಕೆಲಸ ಮಾಡಿಯೇ ತೀರುತ್ತೇವೆ. ಇದು ನಮ್ಮ ಬಲವಾದ ಸಂಕಲ್ಪ ಈ ನಿಟ್ಟಿನಲ್ಲಿ ಶ್ರಮ ಹಾಕಿ ದುಡಿಯುತ್ತಿದ್ದೇವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

Read Full Story
05:35 PM (IST) May 13

Karnataka News Live 13 May 2026"ಅವನೇ ನಮ್ಮ ತಂಡದಲ್ಲಿ ಮೊದಲು ಹೀರೋ ಆಗಿದ್ದು'.. ಗೆಳೆಯ ದಿಲೀಪ್ ರಾಜ್ ಅಗಲಿಕೆಗೆ 'ಗೋಲ್ಡನ್ ಸ್ಟಾರ್' ಗಣೇಶ್ ಕಣ್ಣೀರು!

ಕೇವಲ 15-20 ದಿನಗಳ ಹಿಂದಷ್ಟೇ ದಿಲೀಪ್ ಅವರನ್ನು ಭೇಟಿಯಾಗಿದ್ದ ಗಣೇಶ್‌ಗೆ ಈ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲವಂತೆ. 'ಹೃದಯದ ತಪಾಸಣೆಗೆ ಹೋಗಬೇಕಿದ್ದ ವ್ಯಕ್ತಿ, ಅಲ್ಲಿಗೆ ತಲುಪುವ ಮೊದಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದು ವಿಧಿಯ ಕ್ರೂರ ಆಟ ಎನ್ನದೆ ವಿಧಿಯಿಲ್ಲ' ಎನ್ನಲೇಬೇಕು!

Read Full Story
05:25 PM (IST) May 13

Karnataka News Live 13 May 2026ಮಹಿಳೆಯರಿಗೆ ಸ್ವಾವಲಂಬನೆ ನೀಡುವುದೇ ದೊಡ್ಡ ಗ್ಯಾರಂಟಿ - ಸಂಸದ ಡಾ.ಕೆ.ಸುಧಾಕರ್

ಒಬ್ಬ ಮಹಿಳೆಗೆ ತನ್ನ ಸ್ವಂತ ಕಾಲ ಮೇಲೆ ನಿಲ್ಲುವ ಶಕ್ತಿ ನೀಡುವುದು ಮತ್ತು ಆಕೆಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವುದೇ ನಾವು ನೀಡಬಹುದಾದ ಅತ್ಯಂತ ದೊಡ್ಡ ಮತ್ತು ಶಾಶ್ವತವಾದ ಗ್ಯಾರಂಟಿ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.

Read Full Story
05:15 PM (IST) May 13

Karnataka News Live 13 May 20261000 ಕೋಟಿ ಸಿನಿಮಾಗಳಿಂದ ದೇಶ ಅಭಿವೃದ್ಧಿ ಸಾಧ್ಯವಿಲ್ಲ - ಚೇತನ್ ಅಹಿಂಸಾ

ಸಮಸಮಾಜದ ಕನಸು ಇನ್ನೂ ಪೂರ್ಣವಾಗಿ ನನಸಾಗಿಲ್ಲ. ಮಂಗಳ ಗ್ರಹಕ್ಕೆ ಹೋಗಿ ಬಂದರೆ, ₹100ರಿಂದ ₹1000 ಕೋಟಿ ಸಿನೆಮಾಗಳನ್ನು ಮಾಡಿದರೆ ಉತ್ತಮ ಸಮಾಜ(ದೇಶದ ಅಭಿವೃದ್ಧಿ) ಸಾಧ್ಯವಿಲ್ಲ ಎಂದು ಅಹಿಂಸಾ ಚೇತನ್‌ ಹೇಳಿದರು.

Read Full Story
04:28 PM (IST) May 13

Karnataka News Live 13 May 2026'ಕನ್ನಡ ಮರೆತಿಲ್ಲ, ಟಚ್ ಬಿಟ್ಟುಹೋಗಿದೆ ಅಷ್ಟೇ' ಎಂದ ರಜನಿಕಾಂತ್; ರವಿಶಂಕರ್ ಗುರೂಜಿ ಸತ್ಸಂಗದಲ್ಲಿ 'ತಲೈವಾ' ಮತ್ತೇನು ಹೇಳಿದ್ರು?

ಭಾರತೀಯ ಚಿತ್ರರಂಗದ 'ಅಧಿಪತಿ', ಸ್ಟೈಲ್ ಎನ್ನುವ ಪದಕ್ಕೆ ಹೊಸ ವ್ಯಾಖ್ಯಾನ ಬರೆದ ಸೂಪರ್ ಸ್ಟಾರ್ ರಜನಿಕಾಂತ್ ಕಂಡ್ರೆ ಇಡೀ ವಿಶ್ವವೇ ಎದ್ದು ನಿಲ್ಲುತ್ತೆ. ಆದರೆ, ಈ ಬೆಳ್ಳಿಪರದೆಯ ದೈತ್ಯ ನಟನ ಒಳಗೆ ಒಬ್ಬ ಸಾಧಾರಣ ಬೆಂಗಳೂರಿನ ಹುಡುಗ ಸದಾ ಜೀವಂತವಾಗಿದ್ದಾನೆ ಎಂಬುದಕ್ಕೆ ಇತ್ತೀಚೆಗೆ ವೈರಲ್ ಆದ ವಿಡಿಯೋವೊಂದೇ ಸಾಕ್ಷಿ.

Read Full Story
04:28 PM (IST) May 13

Karnataka News Live 13 May 2026ಸ್ಮಾರ್ಟ್​ವಾಚ್​ ನಂಬಿ ಜೀವ ಕಳೆದುಕೊಂಡ್ರಾ ನಟ ದಿಲೀಪ್​ ರಾಜ್​? ಮಧ್ಯರಾತ್ರಿ ಆಗಿದ್ದೇನು

ಕಿರುತೆರೆ ಹಾಗೂ ಬೆಳ್ಳಿತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎದೆನೋವು ಕಾಣಿಸಿಕೊಂಡಾಗ ಸ್ಮಾರ್ಟ್‌ವಾಚ್‌ನಲ್ಲಿ ಪರೀಕ್ಷಿಸಿ ನಿರ್ಲಕ್ಷಿಸಿದ್ದರು ಎನ್ನಲಾಗಿದ್ದು, ಇದು ತಂತ್ರಜ್ಞಾನದ ಮೇಲಿನ ಅವಲಂಬನೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story
12:59 PM (IST) May 13

Karnataka News Live 13 May 2026ಕನ್ನಡ ಹೋರಾಟಗಾರನೋ? ಕಾಂಗ್ರೆಸ್ ಪಕ್ಷದ ಗುಪ್ತ ವಕ್ತಾರನೋ.? ಮೋದಿ-ಬಿಎಸ್‌ವೈ ವಿರುದ್ಧ ಹೇಳಿಕೆ, ವಾಟಾಳ್‌ಗೆ ಮಂಡ್ಯ ಬಿಜೆಪಿ ಎಚ್ಚರಿಕೆ!

ಪ್ರಧಾನಿ ಮೋದಿ ಮತ್ತು ಬಿ.ಎಸ್. ಯಡಿಯೂರಪ್ಪ ವಿರುದ್ಧ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನೀಡಿದ ಹೇಳಿಕೆಯಿಂದಾಗಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು. ವಾಟಾಳ್ ಅವರನ್ನು ಕಾಂಗ್ರೆಸ್ ಗುಪ್ತ ವಕ್ತಾರ ಎಂದು ಆರೋಪಿಸಿದರು.

Read Full Story
12:25 PM (IST) May 13

Karnataka News Live 13 May 2026ಮದ್ಯಪ್ರಿಯರಿಗೆ ಬೆಲೆ ಏರಿಕೆ ಶಾಕ್ ಕೊಟ್ಟ ರಾಜ್ಯ ಸರ್ಕಾರ, ಇಂದಿನಿಂದ ದರ ಹೆಚ್ಚಳ, ಇಲ್ಲಿದೆ ಲಿಸ್ಟ್

ಚಿನ್ನದ ಬೆಲೆ ಏರಿಕೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆತಂಕದ ನಡುವೆ ಇದೀಗ ಮದ್ಯಪ್ರಿಯರಿಗೂ ದರ ಏರಿಕೆ ಶಾಕ್ ತಟ್ಟಿದೆ. ರಾಜ್ಯದಲ್ಲಿ ಇಂದಿನಿಂದ ಕೆಲ ಬ್ರ್ಯಾಂಡ್ ಮದ್ಯ ಬೆಲೆ ಏರಿಕೆಯಾಗಿದೆ.

Read Full Story
12:06 PM (IST) May 13

Karnataka News Live 13 May 2026ಮಹಾಕಾಳನ ಸನ್ನಿಧಿಗೆ ಬಂದ 'ಆವಂತಿಕಾ'.. 'ದೇವರ ಕರೆ ಬಂದಾಗ ಬಂದೆ' ಎಂದ ಬ್ಯೂಟಿ ಬೊಂಬೆ ತಮನ್ನಾ!

ಮಾಡರ್ನ್ ಆಗಿ ಕಾಣುವ ಈ ಸ್ಟಾರ್ ನಟಿ, ದೇವಾಲಯಕ್ಕೆ ಸಾಂಪ್ರದಾಯಿಕ ಕೆಂಪು ಬಣ್ಣದ ಸೀರೆಯನ್ನು ಉಟ್ಟು ಬಂದಿದ್ದರು. ಹೆಗಲಮೇಲೊಂದು ಹಳದಿ ಶಾಲು ಅವರೊಳಗಿದ್ದ ಭಕ್ತಿ ಭಾವಕ್ಕೆ ಸಾಕ್ಷಿ ನುಡಿಯುವಂತಿತ್ತು. ಈ ದೇಸಿ ಲುಕ್ ಕಂಡ ಅಭಿಮಾನಿಗಳು 'ಸೌಂದರ್ಯ ಅಡಗಿರುವುದೇ ಸಂಪ್ರದಾಯದಲ್ಲಿ" ಎನ್ನುತ್ತಿದ್ದಾರೆ.

Read Full Story
11:11 AM (IST) May 13

Karnataka News Live 13 May 2026ಸೈರನ್ ಬಂದ್.. ಸಿಸಿ ಕ್ಯಾಮೆರಾ ಕಟ್, ಮಧ್ಯರಾತ್ರಿ ಹುಬ್ಬಳ್ಳಿ ಜೈನ ಮಂದಿರ ನುಗ್ಗಿ 3 ಕೆಜಿ ಬೆಳ್ಳಿ ಚಿನ್ನಾಭರಣ ದೋಚಿದ ಖದೀಮರು!

ಹುಬ್ಬಳ್ಳಿಯ ಜೈನ ಮಂದಿರದಲ್ಲಿ ಭಾರೀ ಪ್ರಮಾಣದಲ್ಲಿ ಕಳ್ಳತನವಾಗಿದೆ, ಮಧ್ಯೆರಾತ್ರಿ ಮಂದಿರಕ್ಕೆ ನುಗ್ಗಿದ ಕಳ್ಳರು, ಬಾಗಿಲು ಮುರಿದು ಸಿಸಿಟಿವಿ ಸೈರನ್ ಕಟ್ ಮಾಡಿ ಮೂರು ಕೆಜಿ ಬೆಳ್ಳಿ ದೋಚಿದ್ದಾರೆ ಸದ್ಯ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Read Full Story
11:06 AM (IST) May 13

Karnataka News Live 13 May 2026Dileep Raj Death - ದಿಲೀಪ್‌ ರಾಜ್‌ ಹೀಗೆ ಹೋದ್ರೆ, ನಿನ್ನನ್ನು ನಂಬಿಕೊಂಡೋರ್‌ ಕಥೆ ಏನೋ! - ಸುಷ್ಮಾ ಭಾರದ್ವಾಜ್

Kannada Actor Dileep Raj Death Reason: ನಟ ದಿಲೀಪ್‌ ರಾಜ್‌ ಅವರು ಹೃದಯಾಘಾತದಿಂದ ನಿಧನರಾಗಿದ್ದು, ಇವರ ಸಾವಿನ ಬಗ್ಗೆ ನಟಿ ಸುಷ್ಮಾ ಭಾರದ್ವಾಜ್‌ ಅವರು ಫೇಸ್‌ಬುಕ್‌ ಬರಹ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story
10:40 AM (IST) May 13

Karnataka News Live 13 May 2026Dileep Raj Death ಆದ್ಮೇಲೂ ನಗುಮುಖದಲ್ಲಿ ಮಲಗಿದಂತೆ ಕಾಣ್ತಿದೆ, ನನ್ನ ಮಗಳು ಹೇಗ್‌ ಇರ್ತಾಳೋ; ಮಾವನ ಕಣ್ಣೀರು

Actor Dileep Raj: ಹಿಟ್ಲರ್‌ ಕಲ್ಯಾಣ ಧಾರಾವಾಹಿ ನಟ ದಿಲೀಪ್‌ ರಾಜ್‌ ಅವರು ಇಂದು ನೆನಪು. ಸೀರಿಯಲ್‌, ಸಿನಿಮಾಗಳಲ್ಲಿ ನಟಿಸಿರುವ ದಿಲೀಪ್ ರಾಜ್‌ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರ ಬಗ್ಗೆ ದಿಲೀಪ್‌ ಪತ್ನಿ ಶ್ರೀವಿದ್ಯಾ ತಂದೆ ಮಾಧ್ಯಮದ ಜೊತೆ ಮಾತನಾಡಿದ್ದಾರೆ.

Read Full Story
10:25 AM (IST) May 13

Karnataka News Live 13 May 2026ಸಿಲಿಕಾನ್‌ ಸಿಟಿ ಬೆಂಗಳೂರಿಗಿಂತ ಚಿಕ್ಕಮಗಳೂರು ಕಸದ ಶುಲ್ಕವೇ ದುಬಾರಿ; ಯಾಕಿಷ್ಟು ಹೆಚ್ಚು?

ಸಿಲಿಕಾನ್ ಸಿಟಿ ಬೆಂಗಳೂರಿಗಿಂತ ಚಿಕ್ಕಮಗಳೂರಿನಲ್ಲಿ ಕಸ ವಿಲೇವಾರಿ ಶುಲ್ಕ ದುಬಾರಿಯಾಗಿದ್ದು, ನಗರ ಸಭೆಯು ದುಬಾರಿ ಶುಲ್ಕ ವಿಧಿಸುತ್ತಿದೆ. ಆದರೆ, ಹಳೆಯ ವಾಹನಗಳಿಂದಾಗಿ ಪ್ರತಿದಿನ ಕಸ ಸಂಗ್ರಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ, ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
Read Full Story
10:20 AM (IST) May 13

Karnataka News Live 13 May 2026Dileep Raj Death - ಹೊಸ ಮನೆಗೆ ಕಾಲಿಟ್ಟಿದ್ರು..ಬೇಡ ಎಂದ್ರೂ ದಿಲೀಪ್‌ ರಾಜ್‌ರನ್ನೇ ಮದುವೆಯಾಗಿದ್ದ ವಿದ್ಯಾ

Actor Dileep Raj Death: ಹಿಟ್ಲರ್‌ ಕಲ್ಯಾಣ ಧಾರಾವಾಹಿ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್‌ ರಾಜ್‌ ಅವರು ಹೃದಯಾಘಾತದಿಂದ ಇಂದು ( ಮೇ 13) 48ನೇ ವಯಸ್ಸಿಗೆ ನಿಧನರಾಗಿದ್ದಾರೆ. ಇವರ ಸಾವು ನೋಡಿ ಚಿತ್ರರಂಗ, ಜನತೆ ಎಲ್ಲರೂ ಶಾಕ್‌ ಆಗಿದ್ದಾರೆ. ಇವರ ಲವ್‌ಸ್ಟೋರಿ, ಮದುವೆ ಬಗ್ಗೆ ಮಾಹಿತಿ ಇಲ್ಲಿದೆ. 

Read Full Story
10:13 AM (IST) May 13

Karnataka News Live 13 May 2026ಶಿವಮೊಗ್ಗ ಜನತೆಯ ಬೇಡಿಕೆ ಈಡೇರಿಕೆ - ಯಶವಂತಪುರ-ತಾಳಗುಪ್ಪ ರೈಲು ಪ್ರಯಾಣಿಕರಿಗೆ ಹ್ಯಾಪಿ ನ್ಯೂಸ್

ಇದುವರೆಗೆ ವಿಶೇಷ ರೈಲಾಗಿದ್ದ ಯಶವಂತಪುರ-ತಾಳಗುಪ್ಪ ರೈಲು (16555/16556) ಈಗ ಕಾಯಂ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಾಗಿ ಸಂಚರಿಸಲಿದೆ. ಈ ಹೊಸ ಸೇವೆಯು ಮೇ 15 ರಿಂದ ಆರಂಭವಾಗಲಿದ್ದು, ಶಿವಮೊಗ್ಗ ಮತ್ತು ಮಲೆನಾಡು ಭಾಗದ ಪ್ರಯಾಣಿಕರಿಗೆ ಹಾಗೂ ಸ್ಥಳೀಯ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ.
Read Full Story
09:53 AM (IST) May 13

Karnataka News Live 13 May 2026ಸಚಿವ ಡಿ ಸುಧಾಕರ್ ಸಾವಿಗೆ ಬಿಗ್ ಟ್ವಿಸ್ಟ್, ಅನಾರೋಗ್ಯವಾ? ನಿಗೂಢ ಶಕ್ತಿಗಳ ಆಟವಾ? ನಿವಾಸದ ಬಳಿ ತಾಮ್ರದ ಪತ್ರ, ನಿಂಬೆಹಣ್ಣು, ಮಾಂಸದ ತುಂಡು ಪತ್ತೆ!

ಮಾಜಿ ಸಚಿವ ಸುಧಾಕರ್ ಅವರು ಅನಾರೋಗ್ಯದಿಂದ ನಿಧನರಾದರು. ಆದರೆ, ಅವರ ನಿವಾಸದ ಬಳಿ ತಾಮ್ರದ ಪತ್ರ, ನಿಂಬೆಹಣ್ಣುಗಳಂತಹ ವಾಮಾಚಾರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿದ್ದು, ಇದು ಅವರ ಸಾವಿನ ಕುರಿತು ವಾಮಾಚಾರದ ಶಂಕೆಗಳನ್ನು ಹುಟ್ಟುಹಾಕಿದೆ ಮತ್ತು ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
Read Full Story
09:51 AM (IST) May 13

Karnataka News Live 13 May 2026ಹೃದಯಾಘಾತಕ್ಕೆ ಬಲಿಯಾದ ಹಿಟ್ಲರ್ ಕಲ್ಯಾಣ ಖ್ಯಾತಿಯ ದಿಲೀಪ್ ರಾಜ್ ಕೊನೆಯ ಪೋಸ್ಟ್ ವೈರಲ್

ನಟನೆ, ನಿರ್ಮಾಣ ಸೇರಿದಂತೆ ಸಿನಿಮಾ, ಸೀರಿಯಲ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ನಟ ದಿಲೀಪ್ ರಾಜ್ ನಿಧನಕ್ಕೆ ಕನ್ನಡಿಗರು ಬೆಚ್ಚಿ ಬಿದ್ದಿದ್ದಾರೆ. ಹಿಟ್ಲರ್ ಕಲ್ಯಾಣ ಮೂಲಕ ಮನೆ ಮಾತಾಗಿದ್ದ ದಿಲೀಪ್ ಕೊನೆಯ ಪೋಸ್ಟ್ ವೈರಲ್ ಆಗಿದೆ.

Read Full Story