09:37 PM (IST) Mar 12

Karnataka News Live 12 March 2026ಅರಣ್ಯ ಇಲಾಖೆ ಅನುಮತಿ ದೊರೆಯದ ಕಾರಣ ವಿದ್ಯುತ್ ಘಟಕ ಲೋಕಾರ್ಪಣೆ ವಿಳಂಬ - ಕೆ.ಜೆ.ಜಾರ್ಜ್

2026 ಮಾ.16 ರೊಳಗೆ 2025 ಮಾ. 17 ರ ಕಾರ್ಯಾದೇಶದಂತೆ ಲೋಕಾರ್ಪಣೆ ಮಾಡಬೇಕಾಗಿದ್ದು ಅರಣ್ಯ ಇಲಾಖೆಯ ಅನುಮತಿ ದೊರೆಯದ ಕಾರಣ ವಿಳಂಬವಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

Read Full Story
09:23 PM (IST) Mar 12

Karnataka News Live 12 March 2026ತಂತ್ರಜ್ಞಾನದ ಬದಲಾವಣೆಗೆ ತಕ್ಕಂತೆ ‘ಸುಸ್ಥಿರ ಡೇಟಾ ಸೆಂಟರ್‌’ - ಸಚಿವ ಪ್ರಿಯಾಂಕ್‌ ಖರ್ಗೆ

ತಂತ್ರಜ್ಞಾನ ಕ್ಷೇತ್ರದಲ್ಲಿನ ಬದಲಾವಣೆಗಳಿಗೆ ತಕ್ಕಂತೆ ರಾಜ್ಯದಲ್ಲಿ ‘ಸುಸ್ಥಿರ ಡೇಟಾ ಸೆಂಟರ್‌ ಪಾಲಿಸಿ’ ರೂಪಿಸುವುದಾಗಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

Read Full Story
08:13 PM (IST) Mar 12

Karnataka News Live 12 March 2026ರಸ್ತೆಯಲ್ಲಿ ಹಾಕಿದ ರಾಗಿಗೆ ಬಲಿಯಾದ್ರು ಅಜ್ಜ ಮೊಮ್ಮಗಳು - ಬೈಕ್‌ನಿಂದ ಬಿದ್ದವರ ಮೇಲೆ ಹರಿದ ಲಾರಿ

ಕೂಡ್ಲಿಗಿ ತಾಲ್ಲೂಕಿನ ಕ್ಯಾಸನಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಲಾರಿ ಹರಿದು ಅಜ್ಜ ಮೊಮ್ಮಗಳು ಮೃತಪಟ್ಟಿದ್ದಾರೆ. ಪರೀಕ್ಷೆ ಮುಗಿಸಿ ಮೊಮ್ಮಗಳನ್ನು ಬೈಕಿನಲ್ಲಿ ಕರೆದೊಯ್ಯುತ್ತಿದ್ದಾಗ, ರಸ್ತೆಯಲ್ಲಿದ್ದ ರಾಗಿಯ ಮೇಲೆ ಬೈಕ್ ಜಾರಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

Read Full Story
07:53 PM (IST) Mar 12

Karnataka News Live 12 March 2026ಗುತ್ತಿಗೆ ಮೇಲೆ 400 ಪಶು ವೈದ್ಯರ ನೇಮಕಕ್ಕೆ ಪ್ರಸ್ತಾವ, ಅಂಗನವಾಡಿಗಳ ಹುದ್ದೆ ಖಾಲಿಯಾದ 90 ದಿನದೊಳಗೆ ಭರ್ತಿಗೆ ಸೂಚನೆ

ಕರ್ನಾಟಕದಲ್ಲಿ 400 ಪಶುವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ, ರಾಜ್ಯದ ಅಂಗನವಾಡಿಗಳಲ್ಲಿ ಖಾಲಿಯಾದ ಹುದ್ದೆಗಳನ್ನು 90 ದಿನಗಳೊಳಗೆ ಭರ್ತಿ ಮಾಡಲು ಸೂಚನೆ ನೀಡಲಾಗಿದ್ದು, ಉಡುಪಿ ಜಿಲ್ಲೆಯಲ್ಲಿ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
Read Full Story
07:52 PM (IST) Mar 12

Karnataka News Live 12 March 2026ಚಡ್ಡಿ ಹಾಕ್ಕೊಂಡ್​ ಹೋಗೋಳು ಬೇಡ ಅಂದಿದ್ದ Amrthadhaare ಜೈ - ಡ್ರೀಮ್​ ಗರ್ಲ್​ ಜೊತೆ ಎಂಜಾಯ್​

'ಅಮೃತಧಾರೆ' ಧಾರಾವಾಹಿಯ ಖಳನಾಯಕ ಜೆಡಿ ಅಲಿಯಾಸ್ ರಾಣವ್ ಗೌಡ, ಹಿಂದೆ ಮಲ್ಲಿ ಪಾತ್ರ ನಿರ್ವಹಿಸಿದ್ದ ರಾಧಾ ಭಗವತಿ ಜೊತೆ ನಿಜ ಜೀವನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ, ತಮಗೆ ತನ್ನ ಅಮ್ಮನಂತೆ ಸಂಪ್ರದಾಯಸ್ಥ ಹುಡುಗಿ ಬೇಕು ಎಂದು ರಾಣವ್ ಹೇಳಿಕೊಂಡಿದ್ದರು.

Read Full Story
07:33 PM (IST) Mar 12

Karnataka News Live 12 March 2026ಉಣಕಲ್‌ ದೇಗುಲ ಅಭಿವೃದ್ಧಿಗೆ ₹ 25 ಕೋಟಿ ಯೋಜನೆ ಸಿದ್ಧ - ಸಚಿವ ರಾಮಲಿಂಗಾರೆಡ್ಡಿ

ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಐತಿಹಾಸಿಕ ಶ್ರೀಚಂದ್ರಮೌಳೇಶ್ವರ ದೇವಸ್ಥಾನದ ಅಭಿವೃದ್ಧಿಗೆ ನಗರ ಪಾಲಿಕೆಯಿಂದ ₹ 25 ಕೋಟಿ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

Read Full Story
07:29 PM (IST) Mar 12

Karnataka News Live 12 March 2026ಬೆಂಗಳೂರು ಡಿವಿಜನ್ ರೈಲು ಮಾರ್ಗದಲ್ಲಿ ಅನಿರೀಕ್ಷಿತ ಬದಲಾವಣೆ, ಕಾಮಗಾರಿಯ ಹಿನ್ನೆಲೆ ರಾಜ್ಯದಲ್ಲಿ ಹಲವು ರೈಲು ರದ್ದು!

ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ ಮಲ್ಲಸಂದ್ರ ಮತ್ತು ಗುಬ್ಬಿ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಕಾಮಗಾರಿಯಿಂದಾಗಿ, ಹಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳಲ್ಲಿ ಕೆಲವು ರೈಲುಗಳ ಸಂಪೂರ್ಣ ರದ್ದು, ಭಾಗಶಃ ರದ್ದು, ಮಾರ್ಗ ಬದಲಾವಣೆ, ಮತ್ತು ಮರು-ವೇಳಾಪಟ್ಟಿ ಸೇರಿವೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸುವ ಮೊದಲು ಈ ವಿವರಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ.
Read Full Story
07:11 PM (IST) Mar 12

Karnataka News Live 12 March 2026ಪ್ರಯತ್ನ ಮಾಡಿದರೆ 3 ವರ್ಷದಲ್ಲಿ ರಾಜ್ಯ ಜಿಡಿಪಿಯಲ್ಲಿ ದ.ಕ. ಪಾಲು ಶೇ.2 ಹೆಚ್ಚಳ - ಸಚಿವ ಪ್ರಿಯಾಂಕ್‌ ಖರ್ಗೆ

ಬಂಡವಾಳ ಹೂಡಿಕೆಗೆ ನಾವೆಲ್ಲರೂ ಸೇರಿ ಉತ್ತಮ ವಾತಾವರಣ ಕೊಟ್ಟಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಇನ್ನೂ ಶೇ.2ರಷ್ಟು ಜಿಡಿಪಿ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

Read Full Story
07:03 PM (IST) Mar 12

Karnataka News Live 12 March 2026ಬ್ರಹ್ಮಾವರದಲ್ಲಿ ಕೃಷಿ ವಿಜ್ಞಾನ ಕಾಲೇಜು ಸ್ಥಾಪನೆ ಬಗ್ಗೆ ತಜ್ಞರ ವರದಿ ಪಡೆದು ಕ್ರಮ - ಸಚಿವ ಎನ್‌.ಚಲುವರಾಯಸ್ವಾಮಿ

ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ವಿಜ್ಞಾನ ಕಾಲೇಜು ಸ್ಥಾಪನೆ ಸಂಬಂಧ ತಜ್ಞರ ಸಮಿತಿ ವರದಿ ಪಡೆದು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದ್ದಾರೆ.

Read Full Story
06:25 PM (IST) Mar 12

Karnataka News Live 12 March 2026ಒಣ ಮೇವು ತುಂಬಿಕೊಂಡು ಹೋಗುತ್ತಿದ್ದ ಟ್ರಾಕ್ಟರ್‌ಗೆ ವಿದ್ಯುತ್ ತಂತಿ ಸ್ಪರ್ಶಿಸಿ ಬೆಂಕಿ

Tractor catches fire after touching electric wire: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಒಣಮೇವು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

Read Full Story
06:15 PM (IST) Mar 12

Karnataka News Live 12 March 2026ಕಡಿಮೆ ಬೆಲೆಗೆ ಸಿಗ್ತಿದೆ ಕಲ್ಲಂಗಡಿ, ಕರಬೂಜ - ಬೆಂಗಳೂರಿನಲ್ಲಿ ಸೀಸನಲ್‌ ಹಣ್ಣುಗಳ ಬೆಲೆಯಲ್ಲಿ ಭಾರೀ ಕುಸಿತ!

ಬೆಂಗಳೂರಿನಲ್ಲಿ ಹಣ್ಣುಗಳ ಪೂರೈಕೆ ಹೆಚ್ಚಳ ಮತ್ತು ರಫ್ತು ಸ್ಥಗಿತದಿಂದಾಗಿ ಕಲ್ಲಂಗಡಿ, ಕರ್ಬೂಜದಂತಹ ಬೇಸಿಗೆ ಹಣ್ಣುಗಳ ಬೆಲೆಗಳು ತೀವ್ರವಾಗಿ ಕುಸಿದಿವೆ. ಇದರಿಂದ ರೈತರು ಭಾರಿ ನಷ್ಟ ಅನುಭವಿಸುತ್ತಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
Read Full Story
05:49 PM (IST) Mar 12

Karnataka News Live 12 March 2026ನಮ್ಮ ದೇಹ ಕತ್ತರಿಸಿ ವಿದ್ಯಾರ್ಥಿಗಳ ಮುಂದಿಡು - ಅಪ್ಪ-ಅಮ್ಮನ ಆಸೆ ಈಡೇರಿಸಿದ ಬೆಳಗಾವಿಯ ವೈದ್ಯ

ಬೆಳಗಾವಿಯ ಬೈಲಹೊಂಗಲದ ವೈದ್ಯರೊಬ್ಬರು ತಮ್ಮ ಪೋಷಕರ ಕೊನೆಯಾಸೆಯಂತೆ ಅವರ ದೇಹಗಳನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ದಾನ ಮಾಡಿದ್ದಾರೆ. ತಂದೆಯ ಬಳಿಕ ಇತ್ತೀಚೆಗೆ ನಿಧನರಾದ ತಾಯಿಯ ದೇಹವನ್ನೂ ಮಗ ಡಾ.ಮಹಾಂತೇಶ ರಾಮಣ್ಣನವರ್ ಅವರು ವಿದ್ಯಾರ್ಥಿಗಳ ಪಾಠಕ್ಕಾಗಿ ಬಳಸಿಕೊಂಡಿದ್ದಾರೆ.

Read Full Story
05:44 PM (IST) Mar 12

Karnataka News Live 12 March 2026ರಾಕಿ ಗಡ್ಡಕ್ಕಾಗಿ ತಲೆ ಕೆಡಿಸಿಕೊಂಡ ಪ್ರೊಡ್ಯೂಸರ್​! ಯಶ್‌​​ಗಿಲ್ಲ ಗಡ್ಡ, ನಿಂತೋಯ್ತು ರಾಮಾಯಣ..!

ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಸಿನಿಮಾಗಾಗಿ ಕ್ಲೀನ್ ಶೇವ್ ಮಾಡಿರುವುದರಿಂದ, ರಾವಣನ ಪಾತ್ರಕ್ಕಾಗಿ ಗಡ್ಡದ ಅಗತ್ಯವಿರುವ 'ರಾಮಾಯಣ ಪಾರ್ಟ್-2' ಚಿತ್ರದ ಶೂಟಿಂಗ್ ನಿಂತುಹೋಗಿದೆ. ಯಶ್ ಮತ್ತೆ ತಮ್ಮ ಹಳೆಯ ಗಡ್ಡದ ಲುಕ್‌ಗೆ ಮರಳಲು ಸುಮಾರು ನಾಲ್ಕು ತಿಂಗಳು ಬೇಕಾಗುವುದರಿಂದ, ಅಲ್ಲಿಯವರೆಗೆ ಚಿತ್ರೀಕರಣವನ್ನು ಮುಂದೂಡಲಾಗಿದೆ.
Read Full Story
05:33 PM (IST) Mar 12

Karnataka News Live 12 March 2026ಕರಾವಳಿಯ ಆರ್ಥಿಕ ಶಕ್ತಿ - 3 ವರ್ಷದಲ್ಲಿ ರಾಜ್ಯ ಜಿಡಿಪಿಯಲ್ಲಿ ದಕ್ಷಿಣ ಕನ್ನಡದ ಪಾಲು ಶೇ.2 ಹೆಚ್ಚಳ

ರಾಜ್ಯದ ಒಟ್ಟು ಜಿಡಿಪಿ ದಕ್ಷಿಣ ಕನ್ನಡ ಜಿಲ್ಲೆಯು ಶೇ.5.4ರಷ್ಟು ಪಾಲು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದೆ. ಉತ್ತಮ ಹೂಡಿಕೆ ವಾತಾವರಣ ಕಲ್ಪಿಸಿದರೆ ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯ ಜಿಡಿಪಿಯನ್ನು ಇನ್ನೂ ಶೇ.2ರಷ್ಟು ಹೆಚ್ಚಿಸಬಹುದು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

Read Full Story
05:21 PM (IST) Mar 12

Karnataka News Live 12 March 2026ಬೆಂಗಳೂರಿನಿಂದ ದುಬೈಗೆ ಬಸ್ ಸಂಚಾರ! ಹೋಗುವುದು ಹೇಗೆ? ಡ್ರೈವರ್​ ಕೊಟ್ಟ ಮಾಹಿತಿ ಸರಿಯಾಗಿ ಕೇಳಿ

ಬೆಂಗಳೂರಿನಿಂದ ದುಬೈಗೆ ಬಸ್ ಇದೆಯೇ ಎಂದು ಯುವಕ-ಯುವತಿಯರಿಬ್ಬರು ಬಿಎಂಟಿಸಿ ಚಾಲಕನಿಗೆ ಕೇಳುವ ವಿಡಿಯೋವೊಂದು ವೈರಲ್ ಆಗಿದೆ. ಚಾಲಕನು ಗಂಭೀರವಾಗಿಯೇ ಮೆಜೆಸ್ಟಿಕ್‌ನಿಂದ ದುಬೈಗೆ ಬಸ್ ಸಿಗುತ್ತದೆ ಎಂದು ಮಾರ್ಗದರ್ಶನ ನೀಡಿರುವುದು ನೆಟ್ಟಿಗರಲ್ಲಿ ನಗು ಉಕ್ಕಿಸಿದೆ.
Read Full Story
05:18 PM (IST) Mar 12

Karnataka News Live 12 March 2026ಕೊಪ್ಪಳ - ಕೌಟುಂಬಿಕ ಕಲಹ, ಇಬ್ಬರು ಮಕ್ಕಳ ಸಮೇತ ಕೆರೆಗೆ ಹಾರವಾದ ತಾಯಿ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಕೌಟುಂಬಿಕ ಕಲಹದಿಂದ ಮನನೊಂದ ತಾಯಿಯೊಬ್ಬರು, ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಕಿರುಕುಳವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

Read Full Story
05:14 PM (IST) Mar 12

Karnataka News Live 12 March 2026ಮತ್ತೊಂದು ಮೆಗಾ ಫೈಟ್‌​​​ಗೆ ರೆಡಿಯಾದ್ರಾ ಫ್ಯಾನ್ಸ್! ಅಪ್ಪು ಬರ್ತ್​ಡೇ ಟಾರ್ಗೆಟ್​ ಮಾಡುತ್ತಾರಾ ದರ್ಶನ್ ಅಭಿಮಾನಿಗಳು?

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು ಅವರ 'ಆಕಾಶ್' ಸಿನಿಮಾ ಮರು-ಬಿಡುಗಡೆಯಾಗುತ್ತಿದೆ. ಅದೇ ದಿನ, ನಟ ದರ್ಶನ್ ಅವರ 'ಡೆವಿಲ್' ಚಿತ್ರವೂ ಸಹ ರೀ-ರಿಲೀಸ್ ಆಗುತ್ತಿದ್ದು, ಇದು ಇಬ್ಬರು ನಟರ ಅಭಿಮಾನಿಗಳ ನಡುವಿನ ಬಾಕ್ಸಾಫೀಸ್ ಸಮರಕ್ಕೆ ಮತ್ತೊಮ್ಮೆ ಕಾರಣವಾಗಿದೆ.

Read Full Story
05:02 PM (IST) Mar 12

Karnataka News Live 12 March 2026ಬೆಂಗಳೂರು - ವೃದ್ಧ ದಂಪತಿಗೆ ನಂಬಿಕಸ್ಥ ಮನೆಕೆಲಸದಾಕೆ ಮಹಾಮೋಸ, ಮನೆಕೆಲಸದವರನ್ನು ಮಿತಿಯಲ್ಲಿರಿಸಿ!

ಬೆಂಗಳೂರಿನಲ್ಲಿ ವೃದ್ಧ ದಂಪತಿಯೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದ ಧನಲಕ್ಷ್ಮಿ ಎಂಬ ಮಹಿಳೆ, ಅವರ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು ಒಂದು ವರ್ಷದ ಅವಧಿಯಲ್ಲಿ 8 ಲಕ್ಷ ರೂಪಾಯಿ ನಗದು ಮತ್ತು 54 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾಳೆ. ದಂಪತಿಯ ಅಳಿಯನ ದೂರಿನ ಮೇರೆಗೆ ತನಿಖೆ ನಡೆಸಿದ ಪುಲಕೇಶಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ, ಕಳುವಾಗಿದ್ದ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
Read Full Story
04:45 PM (IST) Mar 12

Karnataka News Live 12 March 2026ಬ್ರೇಕಪ್‌ ಬಗ್ಗೆ ತಾಯಿ ಆಡಿಯೋ ವೈರಲ್;‌ ಕನ್ನಡದಲ್ಲೇ ಪ್ರತಿಕ್ರಿಯೆ ಕೊಟ್ಟ ನಟಿ ರಶ್ಮಿಕಾ ಮಂದಣ್ಣ

Actress Rashmika Mandanna: ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆ ಆಗಿದೆ. ಈಗ ರಶ್ಮಿಕಾ ಮಂದಣ್ಣ ತಾಯಿಯದ್ದು ಎನ್ನಲಾದ ಆಡಿಯೋವೊಂದು ವೈರಲ್‌ ಆಗಿತ್ತು. ಈಗ ಅದನೆಲ್ಲ ಡಿಲಿಟ್‌ ಮಾಡಿ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

Read Full Story
04:25 PM (IST) Mar 12

Karnataka News Live 12 March 2026ಸುಧಾರಾಣಿ ಬಂದ ಬಳಿಕ 60 ಕೋಟಿ ಲಾಭ ಮಾಡಿದ ಬೆಂಗಳೂರು ಸಹಕಾರಿ ಹಾಲು ಒಕ್ಕೂಟ - ರೈತರಿಗೆ ಭರ್ಜರಿ ಯುಗಾದಿ ಬೋನಸ್‌!

ಬೆಂಗಳೂರು ಸಹಕಾರಿ ಹಾಲು ಒಕ್ಕೂಟ ನಿಯಮಿತ (BAMUL) ಕಳೆದ ವರ್ಷದ 14.5 ಕೋಟಿ ರೂ. ನಷ್ಟದಿಂದ ಈ ವರ್ಷ 60 ಕೋಟಿ ರೂ.ಗಳ ಅಂದಾಜು ಲಾಭ ಗಳಿಸಿದೆ. ಆಡಳಿತಾತ್ಮಕ ಸುಧಾರಣೆಗಳು ಮತ್ತು ಹೆಚ್ಚಿದ ಹಾಲು ಸಂಗ್ರಹಣೆಯೇ ಈ ಯಶಸ್ಸಿಗೆ ಕಾರಣವಾಗಿದೆ.

Read Full Story