09:46 PM (IST) Jun 01

Karnataka News Live 1 June 2026ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ ಮತ್ತೆ ಕೆಮಿಕಲ್ ತ್ಯಾಜ್ಯ ಕಳ್ಳಾಟ? ಗ್ರಾಮಸ್ಥರ ಆತಂಕವೇನು?

ಮಳೆಗಾಲ ಆರಂಭಿಸುತ್ತಿದ್ದಂತೆ ಮತ್ತೆ ತಮ್ಮ ಕಳ್ಳಾಟ ಆರಂಭಿಸಿರುವ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳು, ಕೆಮಿಕಲ್‌ ತ್ಯಾಜ್ಯ ನೀರನ್ನು ಚರಂಡಿ ಮಾರ್ಗದ ಮೂಲಕ ಹಳ್ಳಕ್ಕೆ ಬಿಡುತ್ತಿದ್ದು, ಇದು ಜೀವಸಂಕುಲಕ್ಕೆ..

Read Full Story
09:22 PM (IST) Jun 01

Karnataka News Live 1 June 2026ಮಂತ್ರಾಲಯದಲ್ಲಿ ಭೀಕರ ದುರಂತ - ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಐವರು ನೀರು ಪಾಲು

ಪಕ್ಕದ ಆಂಧ್ರಪ್ರದೇಶದ ರಾಜ್ಯದ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾದ ಘಟನೆ ನಡೆದಿದೆ. ತೆಲಂಗಾಣ ರಾಜ್ಯದ ಹೈದರಾಬಾದ್ ನಿವಾಸಿ ವಡ್ಲ ಸತೀಶ್..

Read Full Story
08:55 PM (IST) Jun 01

Karnataka News Live 1 June 2026ಜಮೀರ್ ಅಹಮದ್ ಆಡಿಯೋ ವಿವಾದಕ್ಕೆ ಬಿಗ್ ಟ್ವಿಸ್ಟ್ - ದಾವಣಗೆರೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಮೊಹಮ್ಮದ್ ಸಿರಾಜ್!

ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಅವರ ಆಪ್ತ ಮೊಹಮ್ಮದ್ ಸಿರಾಜ್ ನಡುವಿನ ಸಂಭಾಷಣೆ ಎನ್ನಲಾದ ಆಡಿಯೋ ವೈರಲ್ ಆದ ಬೆನ್ನಲ್ಲೇ, ಸಿರಾಜ್ ದಾವಣಗೆರೆಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಆಡಿಯೋ ನಕಲಿಯಾಗಿದ್ದು, ತಮ್ಮ ತೇಜೋವಧೆ ಮಾಡಲು ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ.

Read Full Story
08:51 PM (IST) Jun 01

Karnataka News Live 1 June 2026ವೀರಶೈವ- ಲಿಂಗಾಯತ ಸಮಾಜ ಒಡೆಯಲು ಯತ್ನ - ಸಂಸದ ಜಗದೀಶ ಶೆಟ್ಟರ್ ಆರೋಪ

ದೊಡ್ಡದಾಗಿ ಬೆಳೆದಿರುವ ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಚಿಂತನೆಯಾಗಬೇಕಿದೆ. ಸದ್ಯ ತಮ್ಮ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ವೀರಶೈವ ಮತ್ತು ಲಿಂಗಾಯತ ಒಂದೇ ಸಮಾಜ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

Read Full Story
08:17 PM (IST) Jun 01

Karnataka News Live 1 June 2026ಉತ್ತರ ಬೆಂಗಳೂರಿನಲ್ಲಿ ಪುರವಂಕರದಿಂದ ₹1,100 ಕೋಟಿ ವಸತಿ ಯೋಜನೆ, ವಾರ್ಷಿಕ ಮಾರಾಟ ದಾಖಲೆಯ ₹7,407 ಕೋಟಿ!

ರಿಯಾಲ್ಟಿ ಡೆವಲಪರ್ ಪುರವಂಕರ, ಉತ್ತರ ಬೆಂಗಳೂರಿನ ದೊಡ್ಡಗುಬ್ಬಿಯಲ್ಲಿ ₹1,100 ಕೋಟಿ ಮೌಲ್ಯದ ವಸತಿ ಯೋಜನೆಗಾಗಿ ಜಂಟಿ ಅಭಿವೃದ್ಧಿ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಯೋಜನೆಯು 11.23 ಎಕರೆ ಭೂಮಿಯಲ್ಲಿ 0.74 ಮಿಲಿಯನ್ ಚದರ ಅಡಿ ವಿಸ್ತೀರ್ಣದ ಅಪಾರ್ಟ್ಮೆಂಟ್ ಗಳನ್ನು ಒಳಗೊಂಡಿದ್ದು, ಕಂಪನಿಯು ದಾಖಲೆಯ ವಾರ್ಷಿಕ ಮಾರಾಟ ಮತ್ತು ಲಾಭವನ್ನು ವರದಿ ಮಾಡಿದೆ.
Read Full Story
07:33 PM (IST) Jun 01

Karnataka News Live 1 June 2026ಯಾದಗಿರಿ ಹೊರಗುತ್ತಿಗೆ ಹಗರಣ - ಇಪಿಎಫ್, ಇಎಸ್‌ಐ ವಂಚನೆ ಬಯಲು, ₹8 ಕೋಟಿ ಬಾಕಿ!

ಯಾದಗಿರಿ ಜಿಲ್ಲೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ಒದಗಿಸುತ್ತಿದ್ದ ಮ್ಯಾನ್‌ ಪವರ್ ಏಜೆನ್ಸಿಗಳು ಎಸಗಿದ್ದ ಕೋಟ್ಯಂತರ ರೂಪಾಯಿ ಇಪಿಎಫ್ ಮತ್ತು ಇಎಸ್‌ಐ ವಂಚನೆ ಬಯಲಾಗಿದೆ. ಜಿ.ಪಂ. ಸಿಇಒ ಲವೀಶ್ ಒರಡಿಯಾ ಅವರು ಈ ಅಕ್ರಮದ ವಿರುದ್ಧ ಕಾನೂನು ಸಮರ ಸಾರಿದ್ದು, ತಪ್ಪಿತಸ್ಥ ಏಜೆನ್ಸಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಮತ್ತು ಬಡ್ಡಿ ಸಮೇತ ಹಣ ವಸೂಲಿ ಮಾಡಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
Read Full Story
06:53 PM (IST) Jun 01

Karnataka News Live 1 June 2026ಮಂಗಳೂರು - ಆಗಾಗ ಮನೆ ಬಿಟ್ಟು ಹೋಗ್ತಿದ್ದ ವ್ಯಕ್ತಿಯನ್ನು ಕಳ್ಳ ಅಂತಾ ಆರೋಪಿಸಿ ಥಳಿಸಿ ಹತ್ಯೆ‌!

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ, ಕಳ್ಳತನದ ಆರೋಪದ ಮೇಲೆ ಯತೀಶ್ ಗೌಡ ಎಂಬ ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿ ಹತ್ಯೆ ಮಾಡಲಾಗಿದೆ. ಎರಡು ತಿಂಗಳಿಂದ ನಾಪತ್ತೆಯಾಗಿದ್ದ ಯುವಕನ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
Read Full Story
06:07 PM (IST) Jun 01

Karnataka News Live 1 June 2026ಹಿರೇಬೆಣಕಲ್ ಮೋರೆರ್ ಶಿಲಾ ಸಮಾಧಿಗಳಿಗೆ ಕನ್ನಡಪ್ರಭ-ಸುವರ್ಣ ನ್ಯೂಸ್ ಬೆಳಕು - ಎಚ್.ಆರ್.ಶ್ರೀನಾಥ ಪ್ರಶಂಸೆ

ಕನ್ನಡಪ್ರಭ-ಏಷ್ಯಾನೆಟ್ ಸೂವರ್ಣ ನ್ಯೂಸ್ ವಾಹಿನಿಯಿಂದ ಹಿರೇಬೆಕಲ್ ಮೋರೆರ್ ಬೆಟ್ಟದ ಶಿಲಾ ಸಮಾಧಿಗಳು ಬೆಳಕಿಗೆ ಬಂದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಪ್ರಶಂಸಿದರು.

Read Full Story
06:06 PM (IST) Jun 01

Karnataka News Live 1 June 2026ಕೊಪ್ಪಳ ತಳಕಲ್‌ನಲ್ಲಿ 13ನೇ ಶತಮಾನದ ಅಪರೂಪದ ಶಾಸನ ಪತ್ತೆ - ಇತಿಹಾಸದ ಪುಟಗಳಲ್ಲಿದ್ದ ಅಗ್ರಹಾರದ ರಹಸ್ಯ ಬಯಲು!

ಕೊಪ್ಪಳ ಜಿಲ್ಲೆಯ ತಳಕಲ್ ಗ್ರಾಮದಲ್ಲಿ 13ನೇ ಶತಮಾನದ ಅಪರೂಪದ ಶಿಲಾಶಾಸನ ಪತ್ತೆಯಾಗಿದೆ. ಮೈಲಾರಲಿಂಗೇಶ್ವರ ಪರಂಪರೆಗೆ ಸೇರಿದ ಈ ಶಾಸನವು, ಅಂದಿನ ಕಾಲದಲ್ಲಿ ಪಂಡಿತರು ಮತ್ತು ಸಂಗೀತಗಾರರಿಗೆ ನೀಡಲಾಗುತ್ತಿದ್ದ ಭೂದಾನ ಹಾಗೂ ಸಂಭಾವನೆಯ ಐತಿಹಾಸಿಕ ವಿವರಗಳನ್ನು ದಾಖಲಿಸಿದೆ.
Read Full Story
05:38 PM (IST) Jun 01

Karnataka News Live 1 June 2026ಬೆಂಗಳೂರು-ಫುಕೆಟ್ ನಡುವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೇರ ಸೇವೆ, ಸ್ವರ್ಗವೆಂಬ ದ್ವೀಪಕ್ಕೆ ಹೊಸ ಸೇತುವೆ!

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ಬೆಂಗಳೂರಿನಿಂದ ಥೈಲ್ಯಾಂಡ್‌ನ ಪ್ರಸಿದ್ಧ ಪ್ರವಾಸಿ ತಾಣವಾದ ಫುಕೆಟ್‌ಗೆ ಹೊಸ ನೇರ ವಿಮಾನಯಾನ ಸೇವೆಯನ್ನು ಆರಂಭಿಸಿದೆ. ವಾರದಲ್ಲಿ ನಾಲ್ಕು ದಿನಗಳು ಲಭ್ಯವಿರುವ ಈ ಸೇವೆಯು, ಪ್ರವಾಸಿಗರಿಗೆ ಫುಕೆಟ್‌ನ ಸುಂದರ ಕಡಲತೀರಗಳು ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸುಲಭವಾಗಿ ತಲುಪಲು ಅನುವು ಮಾಡಿಕೊಡುತ್ತದೆ.
Read Full Story
05:14 PM (IST) Jun 01

Karnataka News Live 1 June 2026ಜಮೀರ್ ಆಡಿಯೋ ವಿವಾದ ಬೆನ್ನಲ್ಲೇ ಮುಸ್ಲಿಂ ನಾಯಕರ ರಹಸ್ಯ ಸಭೆ! ದೆಹಲಿ ಪ್ರವಾಸಕ್ಕೂ ಸಿದ್ದರಾಮಯ್ಯ ಬ್ರೇಕ್!

ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಈ ವಿವಾದ ಹೈಕಮಾಂಡ್ ತಲುಪುವ ಹಂತದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆಯಂತೆ ದೆಹಲಿ ಪ್ರವಾಸ ರದ್ದುಗೊಳಿಸಿರುವ ಜಮೀರ್, ಬೆಂಗಳೂರಿನಲ್ಲಿ ಮುಸ್ಲಿಂ ನಾಯಕರೊಂದಿಗೆ ರಹಸ್ಯ ಸಭೆ ನಡೆಸುತ್ತಿದ್ದಾರೆ.

Read Full Story
04:23 PM (IST) Jun 01

Karnataka News Live 1 June 2026ಚೀನಾಕ್ಕೆ ಬೇಕಿರೋದು ಮಕ್ಕಳೇ ಹೊರತು ಕಾಂಡೋಮ್‌ಗಳಲ್ಲ! ವಿಶ್ವದ ನಂ.1 ಬ್ರ್ಯಾಂಡ್ 'ಡ್ಯುರೆಕ್ಸ್'ಗೆ ಸರ್ಕಾರದ ಬ್ರೇಕ್!

ಚೀನಾದಲ್ಲಿ ಕುಸಿಯುತ್ತಿರುವ ಜನನ ದರವನ್ನು ಹೆಚ್ಚಿಸಲು ಸರ್ಕಾರ ಕಠಿಣ ನೀತಿಗಳನ್ನು ಜಾರಿಗೆ ತಂದಿದೆ. ಈ ನೀತಿಗಳ ಭಾಗವಾಗಿ, ಕಾಂಡೋಮ್‌ಗಳ ಮೇಲಿನ ತೆರಿಗೆ ವಿನಾಯಿತಿ ರದ್ದು ಮತ್ತು ಜಾಹೀರಾತು ನಿರ್ಬಂಧಗಳಿಂದಾಗಿ, ವಿಶ್ವದ ಪ್ರಮುಖ ಬ್ರ್ಯಾಂಡ್ ಡ್ಯುರೆಕ್ಸ್ ಮಾರಾಟದಲ್ಲಿ ತೀವ್ರ ಕುಸಿತ ಕಂಡಿದೆ.
Read Full Story
03:11 PM (IST) Jun 01

Karnataka News Live 1 June 2026ಕಾಂಗ್ರೆಸ್‌ನಲ್ಲಿ ಆಡಿಯೋ ಕಿಚ್ಚು - ಜಮೀರ್ ಅಹಮದ್ ವಿರುದ್ಧ ಶಾಸಕ ಸಮರ್ಥ ಶಾಮನೂರು ಕೆಂಡ; ನಕಲಿ ಎಂದ ಮಾಜಿ ಸಚಿವ!

ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರದ್ದು ಎನ್ನಲಾದ ಆಡಿಯೋವೊಂದು ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಇದು ಎಐ ತಂತ್ರಜ್ಞಾನದಿಂದ ಸೃಷ್ಟಿಯಾದ ನಕಲಿ ಆಡಿಯೋ ಎಂದು ಜಮೀರ್ ಸ್ಪಷ್ಟನೆ ನೀಡಿದರೆ, ದಾವಣಗೆರೆ ಶಾಸಕ ಸಮರ್ಥ ಶಾಮನೂರು ಹೈಕಮಾಂಡ್ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

Read Full Story
01:31 PM (IST) Jun 01

Karnataka News Live 1 June 2026ದೇವೇಗೌಡ, ಖರ್ಗೆ ಸೇರಿ ನಾಲ್ವರ ರಾಜ್ಯಸಭಾ ಅವಧಿ ಮುಕ್ತಾಯ; ರಾಜ್ಯದ 4 ಸ್ಥಾನಗಳಿಗೆ ಜೂ.18ಕ್ಕೆ ಚುನಾವಣೆ ಘೋಷಣೆ!

ಕರ್ನಾಟಕದಲ್ಲಿ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಘೋಷಣೆಯಾಗಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅವಧಿ ಮುಕ್ತಾಯಗೊಳ್ಳಲಿದೆ. ಜೂನ್ 18 ರಂದು ಮತದಾನ ನಡೆಯಲಿದೆ. ಚುನಾವಣಾ ವೇಳಾಪಟ್ಟಿ ಇಲ್ಲಿದೆ ನೋಡಿ.

Read Full Story
01:00 PM (IST) Jun 01

Karnataka News Live 1 June 2026ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಕಾಮಗಾರಿ ಹಿನ್ನೆಲೆ, ಬೆಂಗಳೂರಿಂದ ಹೊರಡುವ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ!

ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ, ಮೇ 30 ರಿಂದ ಜೂನ್ 8 ರವರೆಗೆ ಬೆಂಗಳೂರು-ಹುಬ್ಬಳ್ಳಿ ಮಾರ್ಗದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಸಿದ್ಧಗಂಗಾ ಇಂಟರ್‌ಸಿಟಿ ಮತ್ತು ವಾಸ್ಕೋ ಎಕ್ಸ್‌ಪ್ರೆಸ್ ಸೇರಿದಂತೆ ಪ್ರಮುಖ ರೈಲುಗಳು ತಡವಾಗಿ ಸಂಚರಿಸಲಿದ್ದು, ಹರಿಹರ-ಹೊಸಪೇಟೆ ಪ್ಯಾಸೆಂಜರ್ ರೈಲಿನ ಮಾರ್ಗವನ್ನು ಬದಲಾಯಿಸಲಾಗಿದೆ.
Read Full Story
12:41 PM (IST) Jun 01

Karnataka News Live 1 June 2026ರಾಜ್ಯಪಾಲರು ವಿಐಪಿ ಇರ್ಬೋದ್ರಿ, ನನ್​ ಹೆಂಡ್ತಿ ಗರ್ಭಿಣಿರೀ - ರಸ್ತೆ ಮಧ್ಯೆ ಪ್ರತಿಭಟನೆ- ಪೊಲೀಸರು ಸುಸ್ತು

ಬೆಂಗಳೂರಿನಲ್ಲಿ ರಾಜ್ಯಪಾಲರ ವಾಹನಕ್ಕಾಗಿ ಟ್ರಾಫಿಕ್ ತಡೆಹಿಡಿದಾಗ, ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸಿದ್ದಾರೆ. ವಿಐಪಿ ಸಂಸ್ಕೃತಿಯಿಂದ ಜನಸಾಮಾನ್ಯರು ಪಡುತ್ತಿರುವ ತೊಂದರೆಗೆ ಈ ಘಟನೆ ಕನ್ನಡಿ ಹಿಡಿದಿದ್ದು, ವ್ಯಕ್ತಿಯ ಆಕ್ರೋಶದ ವಿಡಿಯೋ ವೈರಲ್ ಆಗಿದೆ.
Read Full Story
11:56 AM (IST) Jun 01

Karnataka News Live 1 June 202640 ವರ್ಷವಾದ್ರೂ ಮಾಳವ್ವ ಹೋಟೆಲ್‌ನ ರುಚಿ ಕಡಿಮೆಯಾಗಿಲ್ಲ; ಇಲ್ಲಿ ಜನಕ್ಕೆ ಇವ್ರೇ ಅನ್ನಪೂರ್ಣೇಶ್ವರಿ

ಕನಕಗಿರಿಯಲ್ಲಿ ಸುಮಾರು 40 ವರ್ಷಗಳಿಂದ ಮಾಳವ್ವ ಎಂಬ ಅಜ್ಜಿ ಹೋಟೆಲ್ ನಡೆಸುತ್ತಿದ್ದಾರೆ. ತಮ್ಮ ಕೈರುಚಿಯ ತಿಂಡಿ ಹಾಗೂ ಹಸಿದು ಬಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಆಹಾರ ನೀಡುವ ಮೂಲಕ ಇವರು ಜನರ ಪ್ರೀತಿ ಗಳಿಸಿದ್ದು, ಸದ್ಯ ಇವರ ವಿಡಿಯೋ ವೈರಲ್ ಆಗಿದೆ.
Read Full Story
11:11 AM (IST) Jun 01

Karnataka News Live 1 June 2026ಪುಟ್ಟ ತಮ್ಮನಿಗೆ ಬಂದ ದೊಡ್ಡ ಕಾಯಿಲೆ, ಛಲಬಿಡದ ಬೆಂಗಳೂರಿನ 17 ವರ್ಷದ ಅಕ್ಕ ಈಗ Forbes Under 30 Asia 2026 ಸಾಧಕಿ!

Forbes 30 Under 30 Asia 2026: ಫೋರ್ಬ್ಸ್ ಏಷ್ಯಾ 2025ರ ‘30 ಅಂಡರ್ 30’ ಪಟ್ಟಿಯ Social Impact ವಿಭಾಗದಲ್ಲಿ ಬೆಂಗಳೂರು ಮೂಲದ 17 ವರ್ಷದ ವಿದ್ಯಾರ್ಥಿನಿ ದಿವ್ಯಾ ಉತ್ಕರ್ಷ ಸ್ಥಾನ ಪಡೆದಿದ್ದಾರೆ. ಹೀಗೆ ದಿವ್ಯಾ ಅವರು ಅತ್ಯಂತ ಕಿರಿಯ ಸಾಧಕಿ ಎಂಬ ಪಟ್ಟ ಪಡೆದಿದ್ದಾರೆ.

Read Full Story
09:32 AM (IST) Jun 01

Karnataka News Live 1 June 2026ಆ ಹೂವಿನ ಹಾರ ಮಾತ್ರ ಬೇಡ; ಕಾರ್ಯಕರ್ತರಲ್ಲಿ ಡಿಕೆ ಶಿವಕುಮಾರ್ ವಿಶೇಷ ಮನವಿ

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್, ತಾವಲ್ಲ, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮುಖ್ಯಮಂತ್ರಿಯಾಗುತ್ತಿರುವುದಾಗಿ ಹೇಳಿದ್ದಾರೆ. ತಮಗೆ ಆ ಹೂವಿನಿಂದ ಅಲರ್ಜಿ ಇರುವುದರಿಂದ ಹಾರ ಹಾಕದಂತೆ ಮನವಿ ಮಾಡಿದ್ದು, ಅವರ ನಿವಾಸಕ್ಕೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ.

Read Full Story
08:51 AM (IST) Jun 01

Karnataka News Live 1 June 2026ಸ್ಕೂಟರ್ ಓಡಿಸಲು ಹೋದ ಒಂಬತ್ತನೇ ಕ್ಲಾಸ್ ವಿದ್ಯಾರ್ಥಿ ಟ್ರ್ಯಾಕ್ಟರ್‌ಗೆ ಸಿಲುಕಿ ಬಲಿ!

ಬೆಂಗಳೂರಿನ ಮೈಕೋ ಲೇಔಟ್‌ ಹಾಗೂ ಜೆ.ಬಿ.ನಗರದಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ವಿದ್ಯಾರ್ಥಿ ಸೇರಿದಂತೆ ಇಬ್ಬರು ಅಪ್ರಾಪ್ತ ಬಾಲಕರು ಮೃತಪಟ್ಟಿದ್ದಾರೆ. ಬೈಕ್‌ಗಳ ನಡುವಿನ ಡಿಕ್ಕಿ ಹಾಗೂ ಸ್ಕೂಟರ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆಗಳು ಸಂಭವಿಸಿವೆ.
Read Full Story