- Home
- News
- State
- Karnataka Latest News Live: Karnataka Rains - ಮಲೆನಾಡು, ಕರಾವಳಿಯಲ್ಲಿ ಮಳೆ - ಅಣೆಕಟ್ಟೆಗಳಿಗೆ ಹೆಚ್ಚಾದ ಒಳಹರಿವು
Karnataka Latest News Live: Karnataka Rains - ಮಲೆನಾಡು, ಕರಾವಳಿಯಲ್ಲಿ ಮಳೆ - ಅಣೆಕಟ್ಟೆಗಳಿಗೆ ಹೆಚ್ಚಾದ ಒಳಹರಿವು

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿ ರಾಜ್ಯ ಸರ್ಕಾರ ರೈತರಿಂದ ಖರೀದಿಸಿದ್ದ ರಾಗಿ, ಜೋಳದ ಬಾಕಿಯಲ್ಲಿ ₹357.39 ಕೋಟಿಯನ್ನು ಗುರುವಾರ ಬಿಡುಗಡೆಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.
2025-26ನೇ ಸಾಲಿನಲ್ಲಿ ಎಂಎಸ್ಪಿ ಅಡಿ ರೈತರಿಂದ ಖರೀದಿಸಿದ್ದ ರಾಗಿ, ಜೋಳದ ಬಾಬ್ತು ₹1128.13 ಕೋಟಿ ಬಾಕಿ ಉಳಿಸಿಕೊಳ್ಳಲಾಗಿತ್ತು. ಇದರಲ್ಲಿ ₹357.39 ಕೋಟಿಯನ್ನು ಬಿಡುಗಡೆ ಮಾಡಲು ಆಹಾರ ಇಲಾಖೆಯು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ಬುಧವಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಹಿರಿತನದ ಆಧಾರದಲ್ಲಿ ರೈತರ ಖಾತೆಗಳಿಗೆ ನೇರವಾಗಿ ಹಣ ಸಂದಾಯವಾಗಲಿದೆ.
ಎಂಎಸ್ಪಿ ಅಡಿ ಪ್ರಸಕ್ತ ಸಾಲಿನಲ್ಲಿ ರಾಗಿ, ಜೋಳ, ಭತ್ತ ಖರೀದಿಸಿದ ರೈತರಿಗೆ ಈಗಾಗಲೇ ₹2487.69 ಕೋಟಿ ಪಾವತಿಸಲಾಗಿತ್ತು. ಭತ್ತ ಮಾರಾಟ ಮಾಡಿದ್ದ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಹಣ ಸಂದಾಯವಾಗಿದ್ದು ರಾಗಿ ಮತ್ತು ಜೋಳ ಮಾರಾಟ ಮಾಡಿದ್ದವರಿಗೆ ₹1,128.13 ಕೋಟಿ ಪಾವತಿಸಬೇಕಿತ್ತು. ಅದರಲ್ಲಿ ಈಗ ₹357.39 ಕೋಟಿ ಪಾವತಿಸಲಿದ್ದರೂ ಇನ್ನೂ ಸಹಸ್ರಾರು ರೈತರಿಗೆ ₹770.74 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ. ರೈತರಿಗೆ ಎಂಎಸ್ಪಿ ಹಣ ಬಾಕಿ ಉಳಿಸಿಕೊಂಡಿರುವ ಬಗ್ಗೆ ‘ಕನ್ನಡಪ್ರಭ’ ವಿಶೇಷ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.
Karnataka Latest News Live 6 August 2026Karnataka Rains - ಮಲೆನಾಡು, ಕರಾವಳಿಯಲ್ಲಿ ಮಳೆ - ಅಣೆಕಟ್ಟೆಗಳಿಗೆ ಹೆಚ್ಚಾದ ಒಳಹರಿವು
Karnataka Latest News Live 6 August 2026BRTS ಅವ್ಯವಸ್ಥೆ - ಧಾರವಾಡದಲ್ಲಿ ಮೊಳಗಿದ ಎಚ್ಚರಿಕೆ ಗಂಟೆ, ಜಾಣ ಕುರುಡರಂತೆ ವರ್ತನೆ!
Karnataka Latest News Live 6 August 2026ಅಪ್ಪಾ ದುಡ್ಡು ಬೇಡ, ಬಡವರ ಸೇವೆ ಮಾಡು - ತಂದೆ ವಿಜಯಾನಂದ ಕಾಶಪ್ಪನವರಿಗೆ ಮಗಳ ಮಾತು
Karnataka Latest News Live 6 August 2026Special voters list revision - ಮಂಡ್ಯ ಜಿಲ್ಲೆಯಲ್ಲಿ ಮತಪಟ್ಟಿಯಿಂದ 1.69 ಲಕ್ಷ ಮಂದಿ ಔಟ್
ಮಂಡ್ಯ ಜಿಲ್ಲೆಯಲ್ಲಿ ನಡೆದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ, ಸುಮಾರು 1.69 ಲಕ್ಷ ಜನರನ್ನು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲಾಗಿದೆ. ಇದಲ್ಲದೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಆಗಸ್ಟ್ 6 ರಂದು ಎಸ್ಎಸ್ಎಲ್ಸಿ, ಪಿಯುಸಿ, ಮತ್ತು ಪದವೀಧರರಿಗಾಗಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನವನ್ನು ಆಯೋಜಿಸಿದೆ.