9 ಇನ್ಸ್‌ಪೆಕ್ಟರ್ ವರ್ಗಾವಣೆ, ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರದ ಆದೇಶ ಹೊರಡಿಸಲಾಗಿದೆ. ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಯಾವ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ?

ಬೆಂಗಳೂರು (ಏ.23) ರಾಜ್ಯ ಸರ್ಕಾರದ ಪೊಲೀಸ್ ಇನ್ಸ್‌ಪೆಕ್ಟರ್ ವರ್ಗಾವಣೆ ವಿಚಾರದಲ್ಲಿ ಮಹತ್ವದ ಆದೇಶ ಹೊರಡಿಸಿದೆ. 9 ಮಂದಿ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇಷ್ಟೇ ಅಲ್ಲ ಈ ಪೊಲೀಸ್ (ಸಿವಿಲ್) ಇನ್ಸ್‌ಪೆಕ್ಟರ್ ತಕ್ಷಣದಿಂದ ಜಾರಿಗೆ ಬರುವಂತೆ ನಿಯುಕ್ತಿಗೊಳಿಸಿದ ಸ್ಥಳಗಳಿಗೆ ತೆರಳಿ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಯಾವೆಲ್ಲಾ ಇನ್ಸ್‌ಪೆಕ್ಟರ್ ವರ್ಗಾವಣೆ?

1.ಜಹೀರ್ ಅಹಮದ್ ಮೊಕಾಶಿ

ರಾಜ್ಯ ಗುಪ್ತವಾರ್ತೆ ಯಿಂದ ಪೊಲೀಸ್ ತರಬೇತಿ ಶಾಲೆ ಖಾನಾಪುರ

2.ರಾಜಕುಮಾರ್ ವೈ ಬೀಳಗಿ

ಸಿ ಐ ಡಿ ಯಿಂದ ಸಿ.ಎಸ್.ಪಿ

3.ನಿಶ್ಚಲಕುಮಾ‌ರ್ ಡಿ ಎಂ

ಸಿ.ಎಸ್.ಪಿ ಯಿಂದ ಸಿ ಐ ಡಿ

4.ಬಸವರಾಜ್ ಎ ಕಾಮನಬೈಲ್

ವಿವಿಐಪಿ ಭದ್ರತೆ, ಬೆಂಗಳೂರುನಗರ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವವರು ಕರ್ನಾಟಕ ಲೋಕಾಯುಕ್ತಕ್ಕೆ

5.ಶಶಿಕಲಾ ಎಸ್

ಚೆಸ್ಕಾಂ ಜಾಗೃತದಳ, ಚಾಮರಾಜನಗರ ಯಿಂದ ಕರ್ನಾಟಕ ಲೋಕಾಯುಕ್ತ.

6.ನಿಂಗನಗೌಡ ಎ ಪಾಟೀಲ

ಮಹಿಳಾ ಪೊ.ಠಾಣೆ-1 ಬಸವನಗುಡಿ, ಬೆಂಗಳೂರು ನಗರದಿಂದ ಕರ್ನಾಟಕ ಲೋಕಾಯುಕ್ತ.

7.ರೋಹಿಣಿ ರಾಜೇಂದ್ರ ಪಾಟೀಲ

ಸಿ ಐ ಡಿ ಯಿಂದ ಆಂತರಿಕ ಭದ್ರತಾ ವಿಭಾಗ

8.ಮುರಳಿ ಎಂ.ಎನ್

ಡಿ ಸಿ ಆರ್ ಇ ಯಿಂದ ಎ.ಎನ್.ಟಿ.ಎಫ್., ಪೊಲೀಸ್ ಪ್ರಧಾನ ಕಛೇರಿ

9.ನಾರಾಯಣ ಸ್ವಾಮಿ ಸಿ ಎ

ಕರ್ನಾಟಕ ಲೋಕಾಯುಕ್ತದಿಂದ ಆಂತರಿಕ ಭದ್ರತಾ ವಿಭಾಗ

ವರ್ಗಾವಣೆಗೊಂಡಿರುವ ಇನ್ಸ್‌ಪೆಕ್ಟರ್‌ಗಳನ್ನು ಹಾಲಿ ವಿಭಾಗಳಿಂದ ತಕ್ಷಣದಿಂದಲೇ ಮುಕ್ತಿಗೊಳಿಸಲು ಆದೇಶದಲ್ಲಿ ಸೂಚಿಸಲಾಗಿದೆ. ಇಷ್ಟೇ ಅಲ್ಲ ಈ 9 ಮಂದಿ ನಿಯುಕ್ತಿಗೊಳಿಸಿದ ಸ್ಥಾನಕ್ಕೆ ಯಾವುದೇ ಕಾಲಾವಕಾಶಕ್ಕೆ ಅಕಾಶವಿಲ್ಲದೆ ತಕ್ಷಣವೇ ಹಾಜರಾಗುವಂತೆ ಸೂಚಿಸಲಾಗಿದೆ.