Asianet Suvarna News Asianet Suvarna News

ಸಿಎಂ ಬಿಎಸ್‌ವೈಗೆ 2ನೇ ಬಾರಿ ಕೋವಿಡ್ : ಸಂಪರ್ಕದಲ್ಲಿದ್ದವರಿಗೆ ತೀವ್ರ ಆತಂಕ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೊರೋನಾ ಪರೀಕ್ಷೆ ಎರಡನೇ ಬಾರಿ ಪಾಸಿಟಿವ್ ಬಂದಿದೆ. ಇದರಿಂದ ಸಿಎಂ ಸಂಪರ್ಕದಲ್ಲಿದ್ದವರಿಗೆ ತೀವ್ರ ಆತಂಕ ಎದುರಾಗಿದೆ. 

Karnataka CM BS Yediyurappa tests positive for covid second time snr
Author
Bengaluru, First Published Apr 17, 2021, 8:26 AM IST

ಬೆಳಗಾವಿ (ಏ.19): ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್‌ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಎಂ ಜೊತೆ ಪ್ರಚಾರ ಕಾರ್ಯದಲ್ಲಿ ತೊಡಗಿದ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ, ಸಚಿವರಾದ ಜಗದೀಶ್‌ ಶೆಟ್ಟರ್‌, ಉಮೇಶ್‌ ಕತ್ತಿ, ಪ್ರಹ್ಲಾದ ಜೋಶಿ ಸೇರಿದಂತೆ ಹಲವರು ಆತಂಕಕ್ಕೆ ಒಳಗಾಗಿದ್ದಾರೆ.

ಬೆಳಗಾವಿಯಲ್ಲಿ ಎರಡು ದಿನಗಳ ಕಾಲ ಸತತವಾಗಿ ಬಿಡುವಿಲ್ಲದೇ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಅವರ ಪರವಾಗಿ ಯಡಿಯೂರಪ್ಪ ಅವರು ಸಮಾವೇಶ, ಪ್ರಚಾರ ರಾರ‍ಯಲಿ ಸೇರಿದಂತೆ ಸಭೆಯ ನಡೆಸಿದ್ದರು. ಪ್ರಥಮಿಕ ಸಮಪರ್ಕದಲ್ಲಿ ಅಭ್ಯರ್ಥಿ, ಸಚಿವರು ಅಲ್ಲದೇ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ್‌, ಬಾಲಚಂದ್ರ ಜಾರಕಿಹೊಳಿ, ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ, ಮಾಜಿ ಶಾಸಕ ಸಂಜಯ ಪಾಟೀಲ್‌ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದಾರೆ. 

ಸಿಎಂ BSYಗೆ 2ನೇ ಸಾರಿ ಕೊರೋನಾ, ಮಣಿಪಾಲ್ ಆಸ್ಪತ್ರೆಗೆ ದಾಖಲು ...

ಸಿಎಂ ವಾಸ್ತವ್ಯ ಹೂಡಿದ್ದ ಹೋಟೆಲ್‌ನ 40 ಸಿಬ್ಬಂದಿಗೆ ಪರೀಕ್ಷೆಗೆ ಒಳಪಡಿಸಲಾಗಿದೆ. ಸಿಬ್ಬಂದಿಯ ಪೈಕಿ ಎಷ್ಟುಜನರಿಗೆ ಕೊರೋನಾ ಸೋಂಕು ಇದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಯಡಿಯೂರಪ್ಪ ಅವರು ಶ್ರೀನಗರದಲ್ಲಿರುವ ನಾಗನೂರ ರುದ್ರಾಕ್ಷಿಮಠಕ್ಕೆ ಭೇಟಿ ನೀಡಿದ್ದರು, ಬಳಿಕ ನಗರದ ಗಣೇಶಪುರ ಪ್ರದೇಶದಲ್ಲಿರುವ ಹುಕ್ಕೇರಿ ಮಠಕ್ಕೆ ಭೇಟಿ ನೀಡಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

Follow Us:
Download App:
  • android
  • ios