ನಿನ್ನೆ ರಾತ್ರಿಯಿಂದ ತುರ್ತು ಸೇವೆಗಳ ಸಹಾಯವಾಣಿ ಸ್ಥಗಿತಗೊಂಡಿದೆ. ಆ್ಯಂಬುಲೆನ್ಸ್ (108), ಆರೋಗ್ಯ ಸಹಾಯವಾಣಿ (104) ಎರಡೂ ಸೇವೆಗಳು ವ್ಯತ್ಯಯವಾಗಿದೆ. ಆರೋಗ್ಯ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದು, ಸಾರ್ವಜನಿಕರಿಗೆ ಮಾಹಿತಿ ನೀಡಿದೆ.

ಬೆಂಗಳೂರು (ಜೂ.26) ರಾಜ್ಯದಲ್ಲಿ ಆರೋಗ್ಯ ಇಲಾಖೆಯ ಕೆಲ ತುರ್ತು ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಪ್ರಮುಖವಾಗಿ ಆ್ಯಂಬುಲೆನ್ಸ್ ಸೇವೆ (108), ಆರೋಗ್ಯ ಸಹಾಯವಾಣಿ (104) ಸೇವಾ ಕೇಂದ್ರಗಳ ಕಮಾಂಡ್ ಸೆಂಟರ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ನಿನ್ನೆ (ಜೂ.25) ರಾತ್ರಿಯಿಂದ ಸೇವೆಗಳಲ್ಲಿ ವ್ಯತ್ಯಯವಾಗಿದೆ. ಕರ್ನಾಟಕದ ಡೇಟಾ ಸೆಂಟರ್‌ನಲ್ಲಿ ವಿದ್ಯುತ್ ನಿರ್ವಹಣ ಕಾರ್ಯದ ಹಿನ್ನಲೆಯಲ್ಲಿ ಸೇವೆಗಳು ತಾತ್ಕಾಲಿಕವಿ ಸ್ಥಗಿತಗೊಂಡಿದೆ. ಪರಿಣಾಮ ಸರ್ವರ್ ಸಂಪರ್ಕ ಕಡಿತಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಡ್ಯಾಕ್ ಅಬಿವೃದ್ಧಿಪಡಿಸಿದ ತಂತ್ರಜ್ಞಾನ ಬಳಕೆ

ಕರ್ನಾಟಕದಲ್ಲಿನ ಆರೋಗ್ಯ ಇಲಾಖೆ ತುರ್ತು ಸೇವಾ ವಿಭಾಗದ ಡೇಟಾ ಹಾಗೂ ಸರ್ವರ್ ಕೇಂದ್ರಗಳಲ್ಲಿ ತಿರುವಂತಪುರಂ ಸಿಡ್ಯಾಕ್ ಅಭಿವೃದ್ಧಿಪಡಸಿದ ತಂತ್ರಜ್ಞಾನವನ್ನು ಬಳಸಲಾಗಿದೆ. ದುರಸ್ತಿ ಹಿನ್ನಲೆಯಲ್ಲಿ ಸರ್ವರ್ ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಾಗಿ ಸೇವೆಗಳು ಅಲಭ್ಯವಾಗಿದೆ. ಸರ್ವರ್ ಸಂಪರ್ಕ ಕಡಿತಗೊಂಡಿದ್ದು, ಶೀಘ್ರದಲ್ಲೇ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದ್ದು ಸೇವೆಗಳು ಲಭ್ಯವಾಗಲಿದೆ.

ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ

ಸರ್ವರ್ ದುರಸ್ತಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಆರೋಗ್ಯ ಇಲಾಖೆ‌ ಮುನ್ನೆಚ್ಚರಿಕೆ ವಹಿಸಿದೆ. ಕರೆ ಸ್ವೀಕರಿಸಲು ಪರ್ಯಾಯ ಕಂಟ್ರೋಲ್ ರೂಂ ತೆರೆಯಲಾಗಿದೆ. ಸಾರ್ವಜನಿಕರು ಎಂದಿನಂತೆ ತುರ್ತು ಸೇವೆಗೆ 108 ಉಚಿತ ಸಂಖ್ಯೆಗೆ ಕರೆ ಮಾಡಬಹುದು ಎಂದು ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ ನೀಡಿದೆ.

ಆರೋಗ್ಯ ಇಲಾಖೆ ಸಹಾಯವಾಣಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ರಾಜ್ಯದ ಮೂಲೆ ಮೂಲೆಗಳಿಂದ ಬರುವ ಕರೆಗೆ ಸ್ಪಂದಿಸಿ ರೋಗಿಗಳಿಗೆ ಸೇವೆ ನೀಡುತ್ತದೆ. ಈ ಮೂಲಕ ಕರ್ನಾಟಕದಲ್ಲಿ ತುರ್ತು ಸೇವೆಗಳು ಸೂಕ್ತ ಸಮಯಕ್ಕೆ ಲಭ್ಯವಾಗುವಂತೆ ಮಾಡುವಲ್ಲಿ ತುರ್ತು ಸೇವೆಗಳು ಯಶಸ್ವಿಯಾಗಿದೆ. ಇದೀಗ ತುರ್ತು ಸಹಾಯವಾಣಿ ಕರೆ ಹಾಗೂ ಕನೆಕ್ಟ್ ಮತ್ತಷ್ಟು ಸುಲಭವಾಗಿಸಲು ಹೊಸ ತಂತ್ರಜ್ಞಾನಗಳ ಅಭಿವೃದ್ಧಿಪಡಿಸಲಾಗಿದೆ.