ತಾವೇ ಪೋಷಿಸಿದವರ ಬಗ್ಗೆ ನಾಯಕರೇಕೆ ಸೊಲ್ಲೆತ್ತುತ್ತಿಲ್ಲ : ವಿಜಯೇಂದ್ರ ಕಿಡಿ
ಬಿಜೆಪಿ ನಾಯಕ ಬಿ ವೈ ವಿಜಯೇಂದ್ರ ಕೆಂಡಾಮಂಡಲವಾಗಿದ್ದಾರೆ. ತಾವೇ ಪೋಷಿಸಿದ ಸಂಘಟನೆಗಳ ಬಗ್ಗೆ ನಾಯಕರೇಕೆಸೊಲ್ಲೆತ್ತುತ್ತಿಲ್ಲೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು(ಆ.13): ಅಂದು ತನ್ವೀರ್ ಸೇಠ್, ಇಂದು ಅಖಂಡ ಶ್ರೀನಿವಾಸ ಮೂರ್ತಿ. ಕಾಂಗ್ರೆಸ್ ತಾನೇ ಗೊಬ್ಬರ ಹಾಕಿ ಪೋಷಿಸಿ, ರಕ್ಷಿಸಿದ ಎಸ್ಡಿಪಿಐ, ಪಿಎಫ್ಐ ಎಂಬ ಒಂದೇ ಮುಖದ ವಿಧ್ವಂಸಕ ಸಂಘಟನೆಗಳು ಇಂದು ಕಾಂಗ್ರೆಸ್ ಶಾಸಕರುಗಳನ್ನೇ ಬಲಿ ತೆಗೆದುಕೊಳ್ಳಬೇಕೆಂಬಷ್ಟರ ಮಟ್ಟಿಗೆ ಭಯೋತ್ಪಾದನೆ ಸೃಷ್ಟಿಸುತ್ತಿದ್ದರೂ ಕಾಂಗ್ರೆಸ್ ಇನ್ನೂ ಈ ಸಂಘಟನೆಗಳ ವಿರುದ್ಧ ಸೊಲ್ಲೆತ್ತುತ್ತಿಲ್ಲವೇಕೆ? ಎಂದು ಪ್ರಶ್ನಿಸಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಗಲಭೆ ಹಿಂದೆ ಯಾರೇ ಇರಲಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು': ಎಚ್ಡಿಕೆ..
ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿಜಯೇಂದ್ರ ಅವರು, ಪೊಲೀಸ್ ಠಾಣೆ, ಶಾಸಕರ ಮನೆಗೆ ಬೆಂಕಿ ಹಚ್ಚಿದ ಗಲಭೆಕೋರರನ್ನು ಕಟುವಾಗಿ ಖಂಡಿಸುವ ಬದಲು ಕೆಪಿಸಿಸಿ ಅಧ್ಯಕ್ಷರು ಮುಖ್ಯ ವಿಷಯ ಕೈಬಿಟ್ಟು, ಒಬ್ಬ ವ್ಯಕ್ತಿಯ ರಾಜಕೀಯ ಬೆಂಬಲ ಯಾರಿಗಿದೆ ಎಂದು ಕೆದಕಲು ಹೊರಟಿರುವುದು ಏಕೆ ಎಂದರು.
ಬೆಂಗಳೂರು ಗಲಭೆ ಹಿಂದೆ ಎಸ್ಡಿಪಿಐ, ಪಿಎಫ್ಐ ಕೈವಾಡ : ಶಂಕೆ...
ಅಲ್ಲದೇ ಯಾರನ್ನು ರಕ್ಷಿಸಲು ಈ ರೀತಿಯ ಕೀಳು ಪ್ರಯತ್ನ? ಇಂಥ ಸೂಕ್ಷ್ಮ ವಿಷಯಗಳಲ್ಲಿ ತಿಳಿಗೇಡಿತನದ ಮಾತುಗಳು ಸೂಕ್ತವಲ್ಲ ಎಂದು ಕಿಡಿಕಾರಿದ್ದಾರೆ.
- ನೀವೇ ರಕ್ಷಿಸಿದ ಎಸ್ಡಿಪಿಐ, ಪಿಎಫ್ಐ ಎಂಬ ಒಂದೇ ಮುಖದ ವಿಧ್ವಂಸಕ ಸಂಘಟನೆಗಳು ಇಂದು ಕಾಂಗ್ರೆಸ್ ಶಾಸಕರುಗಳನ್ನೇ ಬಲಿ ತೆಗೆದುಕೊಳ್ಳಬೇಕೆಂಬಷ್ಟರ ಮಟ್ಟಿಗೆ ಭಯೋತ್ಪಾದನೆ ಸೃಷ್ಟಿ
- ಮುಖ್ಯ ವಿಷಯ ಕೈಬಿಟ್ಟು, ಒಬ್ಬ ವ್ಯಕ್ತಿಯ ರಾಜಕೀಯ ಬೆಂಬಲ ಯಾರಿಗಿದೆ ಎಂದು ಕೆದಕಲು ಹೊರಟಿರುವುದು ಏಕೆ? ಎಂದು ಪ್ರಶ್ನೆ ಮಾಡಿದ್ದಾರೆ.