Asianet Suvarna News Asianet Suvarna News

'ಕೊರೋನಾ ಸೋಂಕಿತರ ಮನೆಗೆ ಬ್ಯಾರಿಕೇಡ್‌, ಚೀಟಿ ಅಂಟಿಸೋದಿಲ್ಲ'

ಕೊರೋನಾ ಸೋಂಕು ದೃಢಪಟ್ಟವರ ಮನೆಯ ಮುಂದೆ ಬ್ಯಾರಿಕೇಡ್‌ ಹಾಕುವುದು ಹಾಗೂ ಭಿತ್ತಿಪತ್ರ ಅಂಟಿಸುವುದನ್ನು ನಿಲ್ಲಿಸಿದ ಮೇಲೆ ಸಾರ್ವಜನಿಕರು ಮುಜುಗರಕ್ಕೆ ಒಳಗಾಗುವುದು ತಪ್ಪಿದೆ| ಈ ಹಿಂದೆ ಇದ್ದ ಭಯದ ವಾತಾವರಣ ಕಂಟೈನ್ಮೆಂಟ್‌ ವಲಯದಲ್ಲಿ ಇಲ್ಲ|

BBMP Commissioner N Manjunath Prasad Talks Over Coronavirusgrg
Author
Bengaluru, First Published Sep 25, 2020, 1:23 PM IST

ಬೆಂಗಳೂರು(ಸೆ.25): ನಗರದಲ್ಲಿ ಕೊರೋನಾ ಸೋಂಕು ಪತ್ತೆಯಾದ ಮನೆ, ಫ್ಲ್ಯಾಟ್‌ಗಳಿಗೆ ಮತ್ತೆ ಬ್ಯಾರಿಕೇಡ್‌ ಹಾಕುವುದು, ಚೀಟಿ ಅಂಟಿಸುವುದನ್ನು ಮಾಡುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಹೆಚ್ಚು ಸೋಂಕು ಪ್ರಕರಣ ಕಂಡು ಬಂದ ಇಡೀ ಪ್ರದೇಶವನ್ನು ಮ್ಯಾಕ್ರೋ ಕಂಟೈನ್ಮೆಂಟ್‌ ವಲಯ ಎನ್ನಲಾಗುತ್ತದೆ. ಮೈಕ್ರೋ ಕಂಟೈನ್ಮೆಂಟ್‌ ವಲಯದ ಎಂದರೆ ಮೂರು ಹಾಗೂ ಮೂರಕ್ಕಿಂತ ಹೆಚ್ಚು ಕೊರೋನಾ ಸೋಂಕು ಪತ್ತೆಯಾದರೆ ಅದನ್ನು ಮೈಕ್ರೋ ಕಂಟೈನ್ಮೆಂಟ್‌ ವಲಯ ಎಂದು ಪರಿಗಣಿಸಲಾಗುತ್ತದೆ. ಕಂಟೈನ್ಮೆಂಟ್‌ ವಲಯದಲ್ಲಿ ಬ್ಯಾರಿಕೇಡ್‌ ಅಳವಡಿಕೆ, ಚೀಟಿ ಅಂಟಿಸುವ ಕೆಲಸ ನಿಲ್ಲಿಸಲಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಕಂಟೈನ್ಮೆಂಟ್‌ ಪ್ರದೇಶದಲ್ಲಿ ಇರುವ ಹಿರಿಯ ನಾಗರಿಕರು, ಅನಾರೋಗ್ಯ ಸಮಸ್ಯೆ ಇರುವವರನ್ನು ಮಾತ್ರ ಆರೋಗ್ಯ ತಪಾಸಣೆ, ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಸೋಂಕಿತರಿಗೆ ಹಾಸಿಗೆ ಮೀಸಲಿಡದ 4 ಆಸ್ಪತ್ರೆ ವಿರುದ್ಧ FIRಗೆ ಆದೇಶ

‘ಮುಜುಗರ ಕಡಿಮೆಗಾಗಿ ಪರೀಕ್ಷೆ ಸಂಖ್ಯೆ ಹೆಚ್ಚಾಗಿದೆ’

ನಗರದಲ್ಲಿ ಕೊರೋನಾ ಸೋಂಕು ದೃಢಪಟ್ಟವರ ಮನೆಯ ಮುಂದೆ ಬ್ಯಾರಿಕೇಡ್‌ ಹಾಕುವುದು ಹಾಗೂ ಭಿತ್ತಿಪತ್ರ ಅಂಟಿಸುವುದನ್ನು ನಿಲ್ಲಿಸಿದ ಮೇಲೆ ಸಾರ್ವಜನಿಕರು ಮುಜುಗರಕ್ಕೆ ಒಳಗಾಗುವುದು ತಪ್ಪಿದೆ. ಈ ಹಿಂದೆ ಇದ್ದ ಭಯದ ವಾತಾವರಣ ಕಂಟೈನ್ಮೆಂಟ್‌ ವಲಯದಲ್ಲಿ ಇಲ್ಲ. ಕಂಟೈನ್ಮೆಂಟ್‌ ವ್ಯಾಪ್ತಿಯಲ್ಲಿ ಇರುವವರು ಕೊರೋನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.
 

Follow Us:
Download App:
  • android
  • ios