Asianet Suvarna News Asianet Suvarna News

Covid Crisis in Karnataka: ಫೆಬ್ರವರಿಗೆ ರಾಜ್ಯದಲ್ಲಿ ನಿತ್ಯ 1.2 ಲಕ್ಷ ಕೇಸ್‌!

  • ಫೆಬ್ರವರಿಗೆ ರಾಜ್ಯದಲ್ಲಿ ನಿತ್ಯ 1.2 ಲಕ್ಷ ಕೇಸ್‌!
  • ಐಐಎಸ್‌ಸಿಯ ಸಂಖ್ಯಾಶಾಸ್ತ್ರೀಯ ತಜ್ಞರ ತಂಡದ ಅಂದಾಜು
  • ಆಫ್ರಿಕಾದ ಸೋಂಕು, ಹಿಂದಿನ ಅಲೆ ಏರಿಳಿತ ಆಧರಿಸಿ ವರದಿ
     
3rd  Wave Of Covid In Karnataka Expected During  February snr
Author
Bengaluru, First Published Jan 5, 2022, 7:40 AM IST

 ಬೆಂಗಳೂರು (ಜ.05):  ರಾಜ್ಯದಲ್ಲಿ ಫೆಬ್ರವರಿ ಮೊದಲ ವಾರ ಕೊರೋನಾ (Corona)  ಮೂರನೇ ಅಲೆ ಉಚ್ಛ್ರಾಯ ಸ್ಥಿತಿ ತಲುಪಲಿದ್ದು, ಗರಿಷ್ಠ ದೈನಂದಿನ 1.2 ಲಕ್ಷ ಪ್ರಕರಣಗಳು ವರದಿಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಸಂಶೋಧನಾ ಸಂಸ್ಥೆ (ಐಐಎಸ್ಸಿ IISC ) ಅಂದಾಜಿಸಿದೆ.  ಐಐಎಸ್ಸಿಯ ಭಾರತೀಯ ಸಂಖ್ಯಾ ಶಾಸ್ತ್ರೀಯ ಸಂಸ್ಥೆ ತಜ್ಞರ ತಂಡವು ದಕ್ಷಿಣ ಆಫ್ರಿಕಾ (South Africa)  ಒಮಿಕ್ರೋನ್‌ ಸೋಂಕಿನ ಸ್ಥಿತಿ, ಈ ಹಿಂದಿನ ಅಲೆಗಳ ಸೋಂಕಿನ ಏರಿಳಿತ, ಜನರಲ್ಲಿನ ರೋಗ ನಿರೋಧಕ ಶಕ್ತಿ (immunity), ಲಸಿಕೆ ಪ್ರಮಾಣ, ಕಳೆದ ಐದು ದಿನಗಳಿಂದ ಒಮಿಕ್ರೋನ್‌ ಅಂಕಿ -ಅಂಶ ಅವಲೋಕಿಸಿ ವರದಿ ಸಿದ್ಧಪಡಿಸಿದೆ. 
ಈ ವರದಿಯಲ್ಲಿ ಸೋಂಕು ಗರಿಷ್ಠ (ಶೇ.100) ಕೆಟ್ಟ ಪರಿಸ್ಥಿತಿಗೆ ತಿರುಗಿದರೆ, ಮಧ್ಯಮ ಸ್ಥಿತಿಯಲ್ಲಿದ್ದರೆ ಹಾಗೂ ಕನಿಷ್ಠ ಮಟ್ಟದಲ್ಲಿದ್ದರೆ ಎಷ್ಟು ಮಂದಿಗೆ ಸೋಂಕು ತಗುಲಬಹುದು ಎಂದು ಅಂದಾಜಿಸಲಾಗಿದೆ. ಭಾರತದ ಮತ್ತು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದಲ್ಲಿ (karnataka)  ಜನವರಿ ಕೊನೆಯ ವಾರದಿಂದ ಕೊರೋನಾ (Corona) ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿ ಫೆಬ್ರವರಿ ಮೊದಲ ವಾರ ಉಚ್ಛ್ರಾಯ ಹಂತ ತಲುಪಲಿವೆ. ಈ ಅವಧಿಯಲ್ಲಿ ಸೋಂಕು ಕನಿಷ್ಠ ಮಟ್ಟದಲ್ಲಿದ್ದರೆ (ಉತ್ತಮ) ಗರಿಷ್ಠವೆಂದರೆ 40000 ಕೇಸು, ಮಧ್ಯಮ ಮಟ್ಟದಲ್ಲಿದ್ದರೆ 80000 ಕೇಸು, ಗರಿಷ್ಠ (ಕೆಟ್ಟಪರಿಸ್ಥಿತಿ) ಮಟ್ಟದಲ್ಲಿದ್ದರೆ 1.2 ಲಕ್ಷ ಹೊಸ ಪ್ರಕರಣಗಳು ನಿತ್ಯ ವರದಿಯಾಗುತ್ತವೆ ಎಂದು ಸಂಖ್ಯಾಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

ಭಾರತ (ಉಚ್ಛ್ರಾಯ ಸ್ಥಿತಿಯಲ್ಲಿ ನಿತ್ಯ ಕೇಸ್‌)

ಗರಿಷ್ಠ - 10 ಲಕ್ಷ

ಮಧ್ಯಮ - 6 ಲಕ್ಷ

ಕನಿಷ್ಠ - 3 ಲಕ್ಷ

ಮಹಾರಾಷ್ಟ್ರ (ಉಚ್ಛ್ರಾಯ ಸ್ಥಿತಿಯಲ್ಲಿ ನಿತ್ಯ ಕೇಸ್‌)

ಗರಿಷ್ಠ - 1.75 ಲಕ್ಷ

ಮಧ್ಯಮ - 1.25 ಲಕ್ಷ

ಕನಿಷ್ಠ - 60 ಸಾವಿರ

ಕರ್ನಾಟಕ/ಕೇರಳ (ಉಚ್ಛ್ರಾಯ ಸ್ಥಿತಿಯಲ್ಲಿ ನಿತ್ಯ ಕೇಸ್‌)

ಗರಿಷ್ಠ - 1.2 ಲಕ್ಷ

ಮಧ್ಯಮ - 80 ಸಾವಿರ

ಕನಿಷ್ಠ - 40 ಸಾವಿರ

ಬೆಂಗಳೂರಲ್ಲಿ  8 ವಲಯಗಳಲ್ಲಿ ಸಹಾಯವಾಣಿ : 

 ಎರಡು ಮೂರು ದಿನಗಳಿಂದ ಒಂದು ಸಾವಿರ ಆಸುಪಾಸಿನಲ್ಲಿದ್ದ ಕೊರೋನಾ (Coronavirus) ಕೇಸ್ ಗಳು ಇಂದು(ಮಂಗಳವಾರ) ಸುಮಾರು ಎರಡೂವರೆ ಸಾವಿರದ ಸನಿಹಕ್ಕೆ ಬಂದಿದೆ. ಪಾಸಿಟಿವಿಟಿ ದರ ಕೂಡ ಡಬಲ್ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಒಂದೇ ದಿನ ಎರಡು ಸಾವಿರ ಗಡಿದಾಟಿರುವುದು ಬೆಚ್ಚಿಬೀಳಿಸಿದೆ. 

 ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Benglauru) ಕೊರೋನಾ ಕೇಸ್ ಸಂಖ್ಯೆ ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದರಿಂದ ಎಚ್ಚೆತ್ತ ಸರ್ಕಾರ ಹಾಗೂ ಬಿಬಿಎಂಪಿ(BBMP) ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.

ಹೌದು...ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಬೆಂಗಳುರಿನ ವಿವಿಧ ವಲಯಗಳಿಗೆ ನೋಡಲ್ ಅಧಿಕಾರಿಗಳನ್ನ ನೇಮಿಸಿದೆ. ಇದರ ಬೆನ್ನಲ್ಲೇ ಇದೀಗ ಬಿಬಿಎಂಪಿ ಎಂಟು ವಲಗಳ ಕೊವಿಡ್ ಸಹಾಯವಾಣಿ ಆರಂಭಿಸಿದೆ.

Coronavirus ಕೊರೋನಾ ನಿಯಂತ್ರಣಕ್ಕೆ ನೋಡಲ್‌ ಅಧಿಕಾರಿಗಳನ್ನ ನೇಮಿಸಿದ ರಾಜ್ಯ ಸರ್ಕಾರ

ಎಂಟು ವಲಯಗಳಲ್ಲಿ ನಿಯಂತ್ರಣಾ ಕೊಠಡಿಗಳನ್ನು ತೆರೆಯಲಾಗಿದ್ದು, ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ಹೆಲ್ಪ್​ಲೈನ್ (Covid Helpline)​ ನಂಬರ್​ಗಳನ್ನ ತಿಳಿಸಿದೆ.  ದಿನದ 24 ಗಂಟೆಯೂ ಅಗತ್ಯ ಮಾಹಿತಿ ನೀಡಲಿದ್ದಾರೆ ಎಂದು ಬಿಬಿಎಂಪಿ ಹೇಳಿದೆ.

ನಗರದ ಎಲ್ಲಾ ನಾಗರೀಕರು ಕೊವಿಡ್​ಗೆ ಸಂಬಂಧಿಸಿದಂತೆ ಟ್ರಯಾಜಿಂಗ್, ಕೊವಿಡ್ ಪರೀಕ್ಷೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾಹಿತಿ, ಆಸ್ಪತ್ರೆಗೆ ದಾಖಲು, ಲಸಿಕೆ ಪಡೆಯುವುದು ಸೇರಿದಂತೆ ಇತರೆ ವಿಷಯಗಳ ಬಗ್ಗೆ ನಿಯಂತ್ರಣ ಕೊಠಡಿಯ ಸಿಬ್ಬಂದಿಯಿಂದ ಮಾಹಿತಿ ಪಡೆಯಬಹುದು.

ಎಂಟು ವಲಗಳ ಕೊವಿಡ್ ಸಹಾಯವಾಣಿ ಇಂತಿದೆ.
ಬೊಮ್ಮನಹಳ್ಳಿ- 8884666670
ದಾಸರಹಳ್ಳಿ- 94806 83132
ಪೂರ್ವ- 9480685163
ಮಹದೇವಪುರ- 08023010102
ಆರ್.ಆರ್.ನಗರ- 08028601050.
ದಕ್ಷಿಣ- 8431816718
ಪಶ್ಚಿಮ- 08068248454
ಯಲಹಂಕ- 9480685961

Follow Us:
Download App:
  • android
  • ios