ವಿಜಯ್ ಹಜಾರೆ ಟ್ರೋಫಿ: ಜಾರ್ಖಂಡ್ ವಿರುದ್ಧ ಕರ್ನಾಟಕ ಜಯಭೇರಿ!
ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಗೆಲುವಿನ ಖಾತೆ ತೆರೆದಿದೆ. ಜಾರ್ಖಂಡ್ ವಿರುದ್ಧ ಕರ್ನಾಟಕ 123 ರನ್ಗಳ ಭರ್ಜರಿ ಜಯ ಸಾಧಿಸಿದೆ. ಬ್ಯಾಟಿಂಗ್ನಲ್ಲಿ ಪವನ್ ದೇಶ್ಪಾಂಡೆ ಮಿಂಚಿದರೆ, ಬೌಲಿಂಗ್ನಲ್ಲಿ ಕೆ. ಗೌತಮ್ ಎದುರಾಳಿ ತಂಡಕ್ಕೆ ಕಂಠಕವಾಗಿ ಪರಿಣಮಿಸಿದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಸೆ.27]: 2019ರ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಮೊದಲ ಜಯ ಕಂಡಿದೆ. ಗುರುವಾರ ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ, ಜಾರ್ಖಂಡ್ ವಿರುದ್ಧ 123 ರನ್ಗಳ ಅಮೋಘ ಗೆಲುವು ಸಾಧಿಸಿತು. ಹೈದರಾಬಾದ್ ವಿರುದ್ಧ ಮೊದಲ ಪಂದ್ಯ ರದ್ದಾಗಿತ್ತು. 2 ಪಂದ್ಯಗಳಿಂದ ಕರ್ನಾಟಕ, 6 ಅಂಕ ಸಂಪಾದಿಸಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಯೋ-ಯೋ ಟೆಸ್ಟ್ ಪಾಸಾದ್ರೂ ಆಯ್ಕೆ ಮಾಡಲಿಲ್ಲ; ವಿದಾಯದ ರಹಸ್ಯ ಬಿಚ್ಚಿಟ್ಟ ಯುವಿ!
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿತು. ಕಠಿಣ ಗುರಿ ಬೆನ್ನತ್ತಿದ ಜಾರ್ಖಂಡ್ 97 ರನ್ ಗಳಿಸುವಷ್ಟರಲ್ಲೇ 5 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಸ್ಪಿನ್ನರ್ಗಳಾದ ಕೆ.ಗೌತಮ್ ಹಾಗೂ ಶ್ರೇಯಸ್ ಗೋಪಾಲ್, ಮಧ್ಯಮ ಕ್ರಮಾಂಕಕ್ಕೆ ನೆಲೆಯೂರಲು ಅವಕಾಶ ನೀಡಲಿಲ್ಲ. 37.5 ಓವರ್ಗಳಲ್ಲಿ ಜಾರ್ಖಂಡ್ 162 ರನ್ಗಳಿಗೆ ಆಲೌಟ್ ಆಯಿತು. ಗೌತಮ್ 5 ವಿಕೆಟ್ ಕಬಳಿಸಿದರೆ, ಶ್ರೇಯಸ್ 2 ವಿಕೆಟ್ ಪಡೆದರು.
ಧೋನಿ ಅಲಭ್ಯತೆಗೆ ಕಾರಣ ಬಹಿರಂಗ; ಆತಂಕದಲ್ಲಿ ಫ್ಯಾನ್ಸ್!
ರಾಜ್ಯಕ್ಕೆ ಉತ್ತಮ ಆರಂಭ: ಮೊದಲ ವಿಕೆಟ್ಗೆ 75 ರನ್ ಜೊತೆಯಾಟ ಪಡೆಯಿತು. ಭಾರತ ಟೆಸ್ಟ್ ತಂಡದಿಂದ ಹೊರಬಿದ್ದಿರುವ ಕೆ.ಎಲ್.ರಾಹುಲ್ 51 ಎಸೆತಗಳಲ್ಲಿ 29 ರನ್ ಗಳಿಸಿದರು. ದೇವದತ್್ತ ಪಡಿಕ್ಕಲ್ ಆಕರ್ಷಕ 58 ರನ್ ಗಳಿಸಿ ಔಟಾದ ಬಳಿಕ, ನಾಯಕ ಮನೀಶ್ ಪಾಂಡೆ ಎದುರಾಳಿ ಬೌಲರ್ಗಳ ಮೇಲೆ ಪ್ರಹಾರ ನಡೆಸಿದರು. ಕೆ.ವಿ.ಸಿದ್ಧಾಥ್ರ್ 22 ರನ್ಗಳ ಕೊಡುಗೆ ನೀಡಿ ಪೆವಿಲಿಯನ್ ಸೇರಿದರು.
44 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ಗಳೊಂದಿಗೆ ಪಾಂಡೆ 52 ರನ್ ಸಿಡಿಸಿ, ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಪವನ್ ದೇಶಪಾಂಡೆ ಅಮೋಘ ಆಟಕ್ಕೆ ಜಾರ್ಖಂಡ್ ತಬ್ಬಿಬ್ಬಾಯಿತು. 59 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ನೊಂದಿಗೆ ಪವನ್ 70 ರನ್ ಗಳಿಸಿದರು. ಕೆಳ ಕ್ರಮಾಂಕ ಕುಸಿತ ಕಂಡ ಕಾರಣ, ಕರ್ನಾಟಕ 300 ರನ್ ತಲುಪಲು ಸಾಧ್ಯವಾಗಲಿಲ್ಲ. ಜಾರ್ಖಂಡ್ ಪರ ರಾಹುಲ್ ಶುಕ್ಲಾ ಹಾಗೂ ಆನಂದ್ ಸಿಂಗ್ ತಲಾ 4 ವಿಕೆಟ್ ಕಬಳಿಸಿದರು.
ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಶನಿವಾರ ಛತ್ತೀಸ್ಗಢ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ.
ಸ್ಕೋರ್: ಕರ್ನಾಟಕ 50 ಓವರಲ್ಲಿ 285/9
(ಪವನ್ 70, ದೇವದತ್್ತ 58, ಮನೀಶ್ 52, ರಾಹುಲ್ ಶುಕ್ಲಾ 4-43),
ಜಾರ್ಖಂಡ್ 37.5 ಓವರಲ್ಲಿ 162/10
(ಸೌರಭ್ 43, ಆನಂದ್ 32, ಗೌತಮ್ 5-43, ಶ್ರೇಯಸ್ 2-39)